AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ind vs Eng: ಸಾಯಿ ಸುದರ್ಶನ್- ಬೆನ್ ಡಕೆಟ್ ನಡುವೆ ಗಲಾಟೆ: ಪೆವಿಲಿಯನ್‌ಗೆ ಹಿಂತಿರುಗುವಾಗ ವಾಗ್ವಾದ

Sai Sudharsan vs Ben Duckett: ಅಂಪೈರ್ ಔಟ್ ತೀರ್ಪು ನೀಡಿದ ಬಳಿಕ ಸುದರ್ಶನ್ ಪೆವಿಲಿಯನ್‌ಗೆ ಹಿಂತಿರುಗುತ್ತಿರುವಾಗ, ಬೆನ್ ಡಕೆಟ್ ಅವರಿಗೆ ಏನೋ ಹೇಳಿದರು, ಇದು ಸುದರ್ಶನ್ ಅವರಿಗೆ ಕೇಳಿಸಿದೆ. ಈ ಸಂದರ್ಭ ಸುದರ್ಶನ್ ತಕ್ಷಣ ಹಿಂತಿರುಗಿ ಡಕೆಟ್‌ಗೆ ಖಡಕ್ ತಿರುಗೇಟು ಕೊಟ್ಟರು, ನಂತರ ಅವರು ಪೆವಿಲಿಯನ್‌ಗೆ ಮರಳಿದರು.

Ind vs Eng: ಸಾಯಿ ಸುದರ್ಶನ್- ಬೆನ್ ಡಕೆಟ್ ನಡುವೆ ಗಲಾಟೆ: ಪೆವಿಲಿಯನ್‌ಗೆ ಹಿಂತಿರುಗುವಾಗ ವಾಗ್ವಾದ
Sai Sudharsan Vs Ben Duckett
ಮಾಲಾಶ್ರೀ ಅಂಚನ್​
| Edited By: |

Updated on: Aug 02, 2025 | 9:35 AM

Share

ಬೆಂಗಳೂರು (ಆ. 02): ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಸರಣಿಯ ಐದನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ, ಟೀಮ್ ಇಂಡಿಯಾ (Indian Cricket Team) ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 75 ರನ್ ಗಳಿಸಿದೆ. ಇದರಲ್ಲಿ ಭಾರತ ಒಟ್ಟು 52 ರನ್‌ಗಳ ಮುನ್ನಡೆ ಸಾಧಿಸಿದೆ. ಅದೇ ಸಮಯದಲ್ಲಿ, ಎರಡನೇ ದಿನದ ಕೊನೆಯ ಅವಧಿ ಮುಗಿಯುವ ಸ್ವಲ್ಪ ಮೊದಲು, ಸಾಯಿ ಸುದರ್ಶನ್ ವೈಯಕ್ತಿಕ ಸ್ಕೋರ್ 11 ರನ್‌ಗಳಿಗೆ ತಮ್ಮ ವಿಕೆಟ್ ಕಳೆದುಕೊಂಡರು, ಔಟಾದ ನಂತರ ಪೆವಿಲಿಯನ್ ಕಡೆಗೆ ಹೋಗುತ್ತಿರುವ ವೇಳೆ ಅವರ ಮತ್ತು ಬೆನ್ ಡಕೆಟ್ ನಡುವೆ ಬಿಸಿಯಾದ ವಾಗ್ವಾದ ಕಂಡುಬಂದಿತು.

ಡಕೆಟ್‌ಗೆ ಖಡಕ್ ತಿರುಗೇಟು ಕೊಟ್ಟ ಸುದರ್ಶನ್

ಓವಲ್ ಟೆಸ್ಟ್ ಪಂದ್ಯದ ಕೊನೆಯ ಅವಧಿಯಲ್ಲಿ, ಟೀಮ್ ಇಂಡಿಯಾದ ಎರಡನೇ ಇನ್ನಿಂಗ್ಸ್ ನಡೆಯುತ್ತಿರುವಾಗ, ಗಸ್ ಅಟ್ಕಿನ್ಸನ್ 18 ನೇ ಓವರ್‌ನ ಎರಡನೇ ಎಸೆತದಲ್ಲಿ ಚೆಂಡು ಸಾಯಿ ಅವರ ಕಾಲಿಗೆ ತಗುಲಿ ಅಂಪೈರ್ ಅವರನ್ನು ಎಲ್ಬಿಡಬ್ಲ್ಯೂ ಔಟ್ ಎಂದು ಘೋಷಿಸಿದರು. ಸಾಯಿ ಸುದರ್ಶನ್ ಡಿಆರ್​ಎಸ್ ತೆಗೆದುಕೊಳ್ಳಲು ನಿರ್ಧರಿಸಿದರು, ಆದರೆ ನಂತರ ಮೂರನೇ ಅಂಪೈರ್ ಕೂಡ ಅವರನ್ನು ಔಟ್ ಎಂದು ಘೋಷಿಸಿದರು.

ಇದನ್ನೂ ಓದಿ
Image
ಇಂಗ್ಲೆಂಡ್​ನಿಂದ ಎಡವಟ್ಟು: ಈ ಒಂದು ತಪ್ಪು ಆಂಗ್ಲರ ಸೋಲಿಗೆ ಕಾರಣವಾಗುತ್ತ?
Image
ಆ. 2 ರಂದು ಆಫ್ರಿಕಾ- ಪಾಕಿಸ್ತಾನ ನಡುವೆ ಡಬ್ಲ್ಯೂಸಿಎಲ್ ಫೈನಲ್ ಪಂದ್ಯ
Image
ಮೊದಲ ಇನ್ನಿಂಗ್ಸ್​ನಲ್ಲಿ 23 ರನ್​ಗಳ ಮುನ್ನಡೆ ಸಾಧಿಸಿದ ಇಂಗ್ಲೆಂಡ್‌
Image
ಓವಲ್ ಟೆಸ್ಟ್​ನಲ್ಲಿ ವಿಶೇಷ ದ್ವಿಶತಕ ಪೂರೈಸಿದ ಮೊಹಮ್ಮದ್ ಸಿರಾಜ್

ಅಂಪೈರ್ ಔಟ್ ತೀರ್ಪು ನೀಡಿದ ಬಳಿಕ ಸುದರ್ಶನ್ ಪೆವಿಲಿಯನ್‌ಗೆ ಹಿಂತಿರುಗುತ್ತಿರುವಾಗ, ಬೆನ್ ಡಕೆಟ್ ಅವರಿಗೆ ಏನೋ ಹೇಳಿದರು, ಇದು ಸುದರ್ಶನ್ ಅವರಿಗೆ ಕೇಳಿಸಿದೆ. ಈ ಸಂದರ್ಭ ಸುದರ್ಶನ್ ತಕ್ಷಣ ಹಿಂತಿರುಗಿ ಡಕೆಟ್‌ಗೆ ಖಡಕ್ ತಿರುಗೇಟು ಕೊಟ್ಟರು, ನಂತರ ಅವರು ಪೆವಿಲಿಯನ್‌ಗೆ ಮರಳಿದರು. ಸಾಯಿ ಹಾಗೂ ಡಕೆಟ್ ನಡುವಣ ಸಂಭಾಷಣೆ ಏನು ಎಂಬುದು ತಿಳಿದಿಲ್ಲ.. ಆದರೆ ಈ ಘಟನೆ ಪಂದ್ಯದ ವಾತಾವರಣವನ್ನು ಮತ್ತಷ್ಟು ಬಿಸಿ ಮಾಡಿತು. ಎರಡನೇ ದಿನದ ಆಟದಲ್ಲಿ, ಎರಡೂ ತಂಡಗಳ ಆಟಗಾರರ ನಡುವೆ ಸಾಕಷ್ಟು ವಾದಗಳು ಸಹ ಕಂಡುಬಂದವು.

IND vs ENG 5th Test: ಇಂಗ್ಲೆಂಡ್​ನಿಂದ ಮಹಾ ಎಡವಟ್ಟು: ಈ ಒಂದು ತಪ್ಪು ಆಂಗ್ಲರ ಸೋಲಿಗೆ ಕಾರಣವಾಗುತ್ತ?

ಸಾಯಿ ಸುದರ್ಶನ್-ಡಕೆಟ್ ಜಗಳದ ವಿಡಿಯೋ:

ಯಶಸ್ವಿ ಜೈಸ್ವಾಲ್ ಮೇಲೆ ದೊಡ್ಡ ಜವಾಬ್ದಾರಿ

ಪಂದ್ಯದ ಎರಡನೇ ದಿನದಂದು, ಭಾರತ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 224 ರನ್‌ಗಳಿಗೆ ಆಲೌಟ್ ಆಗಿದ್ದರೆ, ಇಂಗ್ಲೆಂಡ್ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 247 ರನ್‌ಗಳಿಗೆ ಆಲೌಟ್ ಆಗಿದ್ದು, 23 ರನ್‌ಗಳ ಮುನ್ನಡೆಯನ್ನು ನೀಡಿತು. ಟೀಮ್ ಇಂಡಿಯಾದ ಎರಡನೇ ಇನ್ನಿಂಗ್ಸ್‌ನಲ್ಲಿ, ಯಶಸ್ವಿ ಜೈಸ್ವಾಲ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ ಇದರಲ್ಲಿ ಅವರು ದಿನದ ಅಂತ್ಯದ ವೇಳೆಗೆ 49 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ಒಟ್ಟು 51 ರನ್ ಗಳಿಸಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಈಗ ಮೂರನೇ ದಿನದಂದು ಅವರ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಇದೆ. ಟೀಮ್ ಇಂಡಿಯಾ ಪರ ನೈಟ್ ವಾಚ್​ಮೆನ್ ಆಗಿ ಆಕಾಶ್ ದೀಪ್ ಇದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ