AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: 150 ಎಕರೆ ಪ್ರದೇಶಗಳಿಂದ ಮಳೆ ನೀರು ಹರಿದು ಬಂದು ಸಂಧಿಸುವ ಏಕೈಕ ಬಾವಿ; ಹೇಗಿದೆ ನೋಡಿ ಪ್ರಕೃತಿಯ ಸೊಬಗು

ಸಾಮಾನ್ಯವಾಗಿ ಮಳೆಗಾಲದಲ್ಲಿ ಮಳೆ ನೀರು ಹರಿದು ಹಳ್ಳ, ಕೊಳ, ನದಿಯನ್ನು ಸೇರುತ್ತವೆ. ಆದ್ರೆ ಇಲ್ಲೊಂದು ಊರಿನಲ್ಲಿ ಸುಮಾರು 150 ಎಕರೆ ಪ್ರದೇಶಗಳ ಮಳೆ ನೀರು ಹರಿದು ಬಂದು ವಿಶೇಷ ಬಾವಿಯೊಂದಕ್ಕೆ ಸೇರುತ್ತವೆಯಂತೆ. ಈ ಪ್ರಕೃತಿ ವಿಸ್ಮಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Video: 150 ಎಕರೆ ಪ್ರದೇಶಗಳಿಂದ ಮಳೆ ನೀರು ಹರಿದು ಬಂದು ಸಂಧಿಸುವ ಏಕೈಕ ಬಾವಿ; ಹೇಗಿದೆ ನೋಡಿ ಪ್ರಕೃತಿಯ ಸೊಬಗು
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 22, 2024 | 6:10 PM

Share

ಈ ಪ್ರಕೃತಿ ಅದೊಷ್ಟೋ ಅದ್ಭುತಗಳ ತಾಣ. ವಿಜ್ಞಾನಕ್ಕೆ ಸವಾಲೊಡ್ಡುವ ಹಲವು ವಿಸ್ಮಯಗಳನ್ನು ಜಗತ್ತಿಗೆ ಅನಾವರಣಗೊಳಿಸುವ ಮೂಲಕ ಪ್ರಕೃತಿ ನಮ್ಮಲ್ಲಿ ಅಚ್ಚರಿಯನ್ನು ಮೂಡಿಸುತ್ತವೆ. ಇಂತಹ ಹಲವಾರು ವಿಸ್ಮಯ ಸಂಗತಿಗಳ ಸುದ್ದಿಗಳು ಆಗಾಗ್ಗೆ ಬೆಳಕಿಗೆ ಬರುತ್ತಿರುತ್ತವೆ. ಇದೀಗ ಅಂತಹದೇ ವಿಸ್ಮಯ ಸಂಗತಿಯ ಕುರಿತ ವಿಡಿಯೋವೊಂದು ವೈರಲ್‌ ಆಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಮಳೆ ನೀರು ಹರಿದು ಹೋಗಿ ಹಳ್ಳ, ಕೊಳ, ನದಿಯನ್ನು ಸೇರುತ್ತವೆ. ಆದ್ರೆ ಈ ಸ್ಥಳದಲ್ಲಿ ಮಾತ್ರ ಸುಮಾರು 150 ಎಕರೆ ಪ್ರದೇಶಗಳ ಮಳೆ ನೀರು ಹರಿದು ಬಂದು ಬಾವಿಯೊಂದಕ್ಕೆ ಸೇರುತ್ತದೆಯಂತೆ.

ಈ ವಿಶೇಷ ಸ್ಥಳ ಇರುವಂತಹದ್ದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪದ ಅಜ್ಜಾವರ ಗ್ರಾಮದ ಮೇನಾಳ ಎಂಬ ಊರಿನಲ್ಲಿ. ಇಲ್ಲಿ ಸುಮಾರು 150 ಎಕರೆಗಳಿಗಿಂತಲೂ ಹೆಚ್ಚು ಪ್ರದೇಶಗಳಿಂದ ಹರಿದು ಬರುವಂತಹ ಮಳೆ ನೀರು ಸೇರುವ ಏಕೈಕ ಬಾವಿಯಿದೆ. ಮೇನಾಳದ ಆಸುಪಾಸಿನಲ್ಲಿರುವ ಕಾಡಿನಲ್ಲಿ ಈ ಅದ್ಭುತ ತಾಣವಿದ್ದು, ಈ ಭಾಗದಲ್ಲಿನ ಸುಮಾರು 150 ಎಕರೆಗಳಿಗಿಂತಲೂ ಹೆಚ್ಚು ಪ್ರದೇಶಗಳಿಂದ ಮಳೆಗಾಲದಲ್ಲಿ ಹರಿದು ಬರುವ ಮಳೆ ನೀರು ಇಲ್ಲಿನ ಬಾವಿಯೊಂದರಲ್ಲಿ ಸಂಧಿಸುತ್ತದೆ. ನಿಜಕ್ಕೂ ಇದು ಪ್ರಕೃತಿಯ ಅದ್ಭುತಗಳಲ್ಲಿ ಒಂದು ಎಂದು ಹೇಳಿದ್ರೂ ತಪ್ಪಾಗಲಾರದು.

ವೈರಲ್​ ವಿಡಿಯೋ:

ಈ ಕುರಿತ ಇಂಟರೆಸ್ಟಿಂಗ್‌ ಸ್ಟೋರಿಯನ್ನು ವಿ.ಜೆ. ವಿಖ್ಯಾತ್‌ (vj_vikhyath_official) ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದರೆ. ಈ ವಿಡಿಯೋದಲ್ಲಿ ದಟ್ಟ ಕಾಡಿನೊಳಗೆ ಸುಮಾರು 150 ಎಕರೆ ಪ್ರದೇಶಗಳಿಂದ ಹರಿದು ಬರುವ ಮಳೆ ನೀರು ಸೇರುವ ವಿಶೇಷ ಬಾವಿಯೊಂದನ್ನು ಕಾಣಬಹುದು. ಈ ಅದ್ಭುತ ತಾಣದ ಹೆಚ್ಚಿನ ಮಾಹಿತಿಯನ್ನು ವಿಖ್ಯಾತ್‌ ಯೂಟ್ಯೂಬ್‌ ಚಾನೆಲ್‌ ಅಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಹಣೆಯಲ್ಲಿ ಕುಂಕುಮ, ಕಣ್ಣಿಗೆ ಕೂಲಿಂಗ್‌ ಗ್ಲಾಸ್, AI ಫ್ಯಾಶನ್‌ ಶೋನಲ್ಲಿ ಮೋದಿ ರ‍್ಯಾಂಪ್ ವಾಕ್‌

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನಿಜಕ್ಕೂ ಈ ಜಾಗ ತುಂಬಾನೇ ಅದ್ಭುತವಾಗಿದೆ ಎಂದು ನೆಟ್ಟಿಗರು ಕಾಮೆಂಟ್ಸ್‌ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್