AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸ್ ಅಪಘಾತ ಕವರ್ ಮಾಡುತ್ತಿದ್ದ ಯುಎಸ್ ನ್ಯೂಸ್ ಹೆಲಿಕಾಪ್ಟರ್ ಪತನ: ಮೂವರ ದಾರುಣ ಸಾವು

ಲಾಸ್ ಏಂಜಲೀಸ್‌ನಲ್ಲಿ ಬಸ್ ಅಪಘಾತವನ್ನು ವರದಿ ಮಾಡುತ್ತಿದ್ದ ಎನ್‌ಬಿಸಿ ನ್ಯೂಸ್ ಹೆಲಿಕಾಪ್ಟರ್ ಪತನಗೊಂಡಿದೆ. ಈ ಭೀಕರ ದುರಂತದಲ್ಲಿ ಮೂವರು ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲೈವ್ ವರದಿ ವೇಳೆ ಹೆಲಿಕಾಪ್ಟರ್ ಇದ್ದಕ್ಕಿದ್ದಂತೆ ಕೆಳಗೆ ಅಪ್ಪಳಿಸಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ತಾಂತ್ರಿಕ ದೋಷ ಅಥವಾ ಹವಾಮಾನ ವೈಪರೀತ್ಯದ ಬಗ್ಗೆ NTSB ಮತ್ತು FAA ತನಿಖೆ ನಡೆಸುತ್ತಿವೆ.

ಬಸ್ ಅಪಘಾತ ಕವರ್ ಮಾಡುತ್ತಿದ್ದ ಯುಎಸ್ ನ್ಯೂಸ್ ಹೆಲಿಕಾಪ್ಟರ್ ಪತನ: ಮೂವರ ದಾರುಣ ಸಾವು
ಅಪಘಾತImage Credit source: NDTV
ನಯನಾ ರಾಜೀವ್
|

Updated on: Sep 16, 2026 | 11:18 AM

Share

ಲಾಸ್ ಏಂಜಲೀಸ್, ಸೆಪ್ಟೆಂಬರ್ 16: ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಮಂಗಳವಾರ ಸಂಜೆ ಭೀಕರ ಹೆಲಿಕಾಪ್ಟರ್  ದುರಂತ ಸಂಭವಿಸಿದೆ. ಪ್ರಮುಖ ಸುದ್ದಿ ವಾಹಿನಿ ‘ಎನ್‌ಬಿಸಿ ನ್ಯೂಸ್’ ಬಳಸುತ್ತಿದ್ದ ಸುದ್ದಿ ಪ್ರಸಾರ ಹೆಲಿಕಾಪ್ಟರ್, ಬಸ್ ಅಪಘಾತದ ಸ್ಥಳವನ್ನು ಲೈವ್ ವರದಿ ಮಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಪಾರ್ಕಿಂಗ್ ಸ್ಥಳಕ್ಕೆ ಅಪ್ಪಳಿಸಿದೆ. ಈ ಘೋರ ದುರಂತದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನೇರ ಪ್ರಸಾರದ ವೇಳೆ ದುರಂತ: ಸ್ಯಾನ್ ಫೆರ್ನಾಂಡೋ ಕಣಿವೆಯ ಚಾಟ್ಸ್‌ವರ್ತ್ ಪ್ರದೇಶದಲ್ಲಿ ಮುಂಜಾನೆ ನಡೆದಿದ್ದ ಮಾರಣಾಂತಿಕ ಬಸ್-ಎಸ್‌ಯುವಿ ಅಪಘಾತವನ್ನು ಆಕಾಶ ಮಾರ್ಗದಿಂದ ಚಿತ್ರೀಕರಿಸುತ್ತಿದ್ದಾಗ ಸಂಜೆ 7 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಎನ್‌ಬಿಸಿ ವಾಹಿನಿಯ ಲೈವ್ ಪ್ರಸಾರದ ವೇಳೆ ಈ ಸುದ್ದಿ ತಿಳಿದ ಸುದ್ದಿ ನಿರೂಪಕಿ ಕಾಲೀನ್ ವಿಲಿಯಮ್ಸ್ ಗದ್ಗದಿತ ಕಂಠದಿಂದ ಮಾಹಿತಿ ನೀಡಿ ಪ್ರಸಾರವನ್ನು ಸ್ಥಗಿತಗೊಳಿಸಿದರು.

ಹೆಲಿಕಾಪ್ಟರ್ ಒಳಗೆ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಪತನದ ದೃಶ್ಯಗಳು ದಾಖಲಾಗಿವೆ. ಅಪಘಾತ ಸ್ಥಳದ ಮೇಲೆ ಹಾರಾಟ ನಡೆಸುತ್ತಿದ್ದ ಹೆಲಿಕಾಪ್ಟರ್ ಇದ್ದಕ್ಕಿದ್ದಂತೆ ತೀವ್ರವಾಗಿ ಅಲುಗಾಡಿ ಕೆಳಗೆ ಅಪ್ಪಳಿಸುವುದು ವಿಡಿಯೋದಲ್ಲಿ ಕಂಡುಬಂದಿದೆ. ಬೃಹತ್ ಕಟ್ಟಡದ ಪಾರ್ಕಿಂಗ್ ಲಾಟ್‌ಗೆ ಅಪ್ಪಳಿಸಿದ ರಭಸಕ್ಕೆ ಹೆಲಿಕಾಪ್ಟರ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅಲ್ಲಿದ್ದ ನಾಲ್ಕು ಕಾರುಗಳು ಮತ್ತು ಎರಡು ಶೇಖರಣಾ ಕಂಟೈನರ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ.

ಮತ್ತಷ್ಟು ಓದಿ: Video: ಮಗನ ಜತೆಗೆ ಹೆತ್ತವರ ಮೊದಲ ವಿಮಾನ ಪ್ರಯಾಣ, ವೈರಲ್ ಆಯ್ತು ದೃಶ್ಯ

ಹೆಲಿಕಾಪ್ಟರ್‌ನಲ್ಲಿ ಎಷ್ಟು ಜನರಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೃತಪಟ್ಟವರಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಪಾರ್ಕಿಂಗ್ ಸ್ಥಳದಲ್ಲಿ ನಿಂತಿದ್ದ ನೆಲದ ಮೇಲಿನ ನಾಗರಿಕ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ಮಂಗಳವಾರ ಮುಂಜಾನೆ ಲಾಸ್ ಏಂಜಲೀಸ್ ನಗರ ಸಾರಿಗೆ (MTA) ಬಸ್‌ಗೆ ಎಸ್‌ಯುವಿ ಕಾರೊಂದು ಅತಿವೇಗವಾಗಿ ಬಂದು ಬಲವಾಗಿ ಡಿಕ್ಕಿ ಹೊಡೆದಿತ್ತು. ಆ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಆರು ಜನರು ಗಾಯಗೊಂಡಿದ್ದರು. ಇದೇ ಸ್ಥಳವನ್ನು ಹೆಲಿಕಾಪ್ಟರ್ ಮೇಲೆ ಹಾರಾಡುತ್ತಾ ಕವರ್ ಮಾಡುತ್ತಿತ್ತು.

ವಿಡಿಯೋ

ಉನ್ನತ ಮಟ್ಟದ ತನಿಖೆ: ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತೇ ಅಥವಾ ಹವಾಮಾನ ವೈಪರೀತ್ಯ ಕಾರಣವೇ ಎಂಬುದನ್ನು ಪತ್ತೆಹಚ್ಚಲು ಅಮೆರಿಕದ ‘ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ’ (NTSB) ಮತ್ತು ‘ಫೆಡರಲ್ ವಿಮಾನಯಾನ ಆಡಳಿತ’ (FAA) ತನಿಖೆ ಆರಂಭಿಸಿವೆ.

ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ: ಘಟನಾ ಸ್ಥಳಕ್ಕೆ 50ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದು, ಹೆಲಿಕಾಪ್ಟರ್‌ನ ಅವಶೇಷಗಳನ್ನು ತೆರವುಗೊಳಿಸಿ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಹೊಳೆಯಂತಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್, ಟ್ರಾಫಿಕ್ ಜಾಮ್
ಹೊಳೆಯಂತಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್, ಟ್ರಾಫಿಕ್ ಜಾಮ್
ಹುಳ ಇರುವ ಕುಡಿಯುವ ನೀರನ್ನು ಗ್ರಾಮಸಭೆಗೇ ತಂದ ರಾರಾವಿ ಗ್ರಾಮಸ್ಥರು!
ಹುಳ ಇರುವ ಕುಡಿಯುವ ನೀರನ್ನು ಗ್ರಾಮಸಭೆಗೇ ತಂದ ರಾರಾವಿ ಗ್ರಾಮಸ್ಥರು!
ಮಸೀದಿಯೊಳಗೆ ಗಣಪತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಯುವಕರು!
ಮಸೀದಿಯೊಳಗೆ ಗಣಪತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಯುವಕರು!
ಫುಟ್​ಪಾತ್​ನಲ್ಲಿ ಕಸ ಸುರಿದ ಕಟ್ಟಡ ಮಾಲೀಕನಿಗೆ 50,000 ರೂ. ದಂಡ!
ಫುಟ್​ಪಾತ್​ನಲ್ಲಿ ಕಸ ಸುರಿದ ಕಟ್ಟಡ ಮಾಲೀಕನಿಗೆ 50,000 ರೂ. ದಂಡ!
ಧಾರಾಕಾರ ಮಳೆಯಿಂದ ಬಾಗಲಕುಂಟೆಯಲ್ಲಿ ಮನೆಗಳಿಗೆ ನುಗ್ಗಿದ ನೀರು!
ಧಾರಾಕಾರ ಮಳೆಯಿಂದ ಬಾಗಲಕುಂಟೆಯಲ್ಲಿ ಮನೆಗಳಿಗೆ ನುಗ್ಗಿದ ನೀರು!
ನಾಮಿನೇಷನ್ ವಿಷಯದಲ್ಲಿ ಉರಿದುಬಿದ್ದ ಶಾಸ್ತ್ರಿ; ನಡೆಯಿತು ಮತ್ತೊಂದು ಜಗಳ
ನಾಮಿನೇಷನ್ ವಿಷಯದಲ್ಲಿ ಉರಿದುಬಿದ್ದ ಶಾಸ್ತ್ರಿ; ನಡೆಯಿತು ಮತ್ತೊಂದು ಜಗಳ
ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿತ್ತು 10 ಟನ್ ಕೆಮಿಕಲ್ ಮಿಶ್ರಿತ ಅಡಿಕೆ
ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿತ್ತು 10 ಟನ್ ಕೆಮಿಕಲ್ ಮಿಶ್ರಿತ ಅಡಿಕೆ
ರವಿ ಸಿಂಹ ರಾಶಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ರವಿ ಸಿಂಹ ರಾಶಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಮಲ್ಲತ್ತಹಳ್ಳಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಮರ
ಮಲ್ಲತ್ತಹಳ್ಳಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಮರ
ಚೆನ್ನೈನಲ್ಲಿ 12,000 ಶಂಖಗಳಿಂದ ಸಿದ್ಧವಾಯ್ತು ಗಣೇಶನ ಮೂರ್ತಿ!
ಚೆನ್ನೈನಲ್ಲಿ 12,000 ಶಂಖಗಳಿಂದ ಸಿದ್ಧವಾಯ್ತು ಗಣೇಶನ ಮೂರ್ತಿ!