AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಾಣಿಹತ್ಯೆ ಮಾಡದೆ ಮಾಂಸಾಹಾರ: ಲ್ಯಾಬ್​ನಲ್ಲಿ ಉತ್ಪಾದಿಸಿದ ಮಾಂಸ ಮಾರಾಟಕ್ಕೆ ಸಿಂಗಾಪುರ ಸರ್ಕಾರ ಅನುಮತಿ

ಪ್ರಾಣಿ ಹತ್ಯೆ ಮಾಡದೆ ಪ್ರಾಣಿಗಳ ದೇಹದಿಂದ ತೆಗೆದ ಕೋಶಗಳನ್ನು ಬಳಸಿ ಲ್ಯಾಬ್​ಗಳಲ್ಲಿ ಉತ್ಪಾದಿಸುವ ಈ ಮಾಂಸದ ಉತ್ಪಾದನಾ ವೆಚ್ಚ ದುಬಾರಿ ಆಗಿದೆ.

ಪ್ರಾಣಿಹತ್ಯೆ ಮಾಡದೆ ಮಾಂಸಾಹಾರ: ಲ್ಯಾಬ್​ನಲ್ಲಿ ಉತ್ಪಾದಿಸಿದ ಮಾಂಸ ಮಾರಾಟಕ್ಕೆ ಸಿಂಗಾಪುರ ಸರ್ಕಾರ ಅನುಮತಿ
(ಪ್ರಾತಿನಿಧಿಕ ಚಿತ್ರ)
Ghanashyam D M | ಡಿ.ಎಂ.ಘನಶ್ಯಾಮ
|

Updated on: Dec 03, 2020 | 5:43 PM

Share

ಸಿಂಗಾಪುರ: ಪ್ರಾಣಿಹತ್ಯೆ ಮಾಡದೆ ಮಾಂಸಾಹಾರ ಸೇವಿಸಬಹುದೇ? ಎಂಬ ಪ್ರಶ್ನೆಗೆ ಸಿಂಗಾಪುರ ಜನರು ಈಗ ಯೆಸ್ ಎಂದು ಉತ್ತರಿಸುತ್ತಾರೆ. ಅಮೆರಿಕ ಮೂಲದ ಈಟ್ ಜಸ್ಟ್ ಎಂಬ ಸ್ಟಾರ್ಟ್ ಅಪ್ ಲ್ಯಾಬ್​ನಲ್ಲಿ ಮಾಂಸ ಉತ್ಪಾದನೆ ಮಾಡಿದ್ದು, ಇದನ್ನು ಮಾರಾಟ ಮಾಡಲು ಸಿಂಗಾಪುರ ಸರ್ಕಾರ ಅನುಮತಿ ನೀಡಿದೆ.

ಆರೋಗ್ಯದ ಬಗ್ಗೆ ಇರುವ ಕಾಳಜಿ, ಪ್ರಾಣಿಗಳ ಮೇಲಿನ ಒಲವು ಮತ್ತು ಪರಿಸರ ಪ್ರೀತಿಯಿಂದ ಪ್ರಾಣಿ ಹತ್ಯೆ ಮಾಡಿ ತಿನ್ನುವ ಮಾಂಸಾಹಾರಕ್ಕೆ ಬೇಡಿಕೆ ಕಡಿಮೆಯಾಗುತ್ತಿದೆ. ಇಂತಿರುವಾಗ ಬಿಯಾಂಡ್ ಮೀಟ್ ಇಂಕ್, ಇಂಪಾಸಿಬಲ್ ಫುಡ್ಸ್ ಮೊದಲಾದ ಕಂಪನಿಗಳು ಸಸ್ಯಜನ್ಯ ಮಾಂಸವನ್ನು ಪ್ರಚುರಪಡಿಸಿವೆ.

ಪ್ರಾಣಿ ಹತ್ಯೆ ಮಾಡದೆ ಪ್ರಾಣಿಗಳ ದೇಹದಿಂದ ತೆಗೆದ ಕೋಶಗಳನ್ನು ಬಳಸಿ ಉತ್ಪಾದಿಸುವ ಈ ಮಾಂಸದ ಉತ್ಪಾದನಾ ವೆಚ್ಚ ದುಬಾರಿ.

ಲ್ಯಾಬ್​ಗಳಲ್ಲಿ ಉತ್ಪಾದಿಸುವ ಈ ಪ್ರಾಣಿ ಮಾಂಸವು ಸೇವನೆಗೆ ಯೋಗ್ಯವಾಗಿದೆ. ಈ ಮಾಂಸಗಳಿಂದ ನಗಟ್ಸ್ ತಯಾರಿಸಿ ₹50ಕ್ಕೆ ಮಾರಾಟ ಮಾಡಲಾಗುತ್ತಿದೆ ಈಟ್ ಜಸ್ಟ್ ಹೇಳಿದೆ.

ಜಗತ್ತಿನಾದ್ಯಂತ ಸುಮಾರು 24ಕ್ಕಿಂತಲೂ ಹೆಚ್ಚು ಕಂಪನಿಗಳ ಲ್ಯಾಬ್​ಗಳಲ್ಲಿ ಮೀನು, ಬೀಫ್ ಮತ್ತು ಕೋಳಿ ಮಾಂಸ ತಯಾರಿಸುವ ಪ್ರಯೋಗಗಳು ನಡೆಯುತ್ತಿವೆ. 2029ರ ವೇಳೆಗೆ ಜಗತ್ತಿನಲ್ಲಿ ₹140 ಶತಕೋಟಿ ವೆಚ್ಚದ ಪರ್ಯಾಯ ಮಾಂಸ ಮಾರುಕಟ್ಟೆ ತಲೆ ಎತ್ತಬಹುದು ಎಂದು ಬಾರ್ಕ್ಲೇಸ್ ಅಂದಾಜಿಸಿದೆ.

ಹೇಗಿರುತ್ತೆ ಲ್ಯಾಬ್​ನಲ್ಲಿ ಉತ್ಪಾದಿಸಿದ ಮಾಂಸ?

ಪ್ರಾಣಿಗಳನ್ನು ಹತ್ಯೆ ಮಾಡದೆ ಅವುಗಳ ಸ್ಟೆಮ್ ಸೆಲ್ ಬಳಸಿ ಮಾಂಸ ಉತ್ಪಾದನೆ ಮಾಡಲಾಗುತ್ತದೆ. ಜೀವಕೋಶ (ಸೆಲ್) ಹಾಗೂ ಟಿಶ್ಯೂಗಳ ನಡುವೆ ಜೀವ ತುಂಬುವ ಈ ಸ್ಟೆಮ್ ಸೆಲ್​ಗಳಿಗೆ ಅಮಿನೊ ಆ್ಯಸಿಡ್ ಮತ್ತು ಕಾರ್ಬೊಹೈಡ್ರೇಟ್ಸ್ ಒದಗಿಸಿ ಲ್ಯಾಬ್​ಗಳಲ್ಲಿ ಬೆಳೆಸಲಾಗುತ್ತದೆ. ನೋಡಲು ಈ ಮಾಂಸ ಪ್ರಾಣಿಗಳ ಮಾಂಸದಂತೆಯೇ ಇರುತ್ತದೆ. ರುಚಿಯಲ್ಲಿಯೂ ವ್ಯತ್ಯಾಸವೇನು ಇರುವುದಿಲ್ಲವಂತೆ.

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ