AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 safety tips to follow in digital payment: ಡಿಜಿಟಲ್ ಪೇಮೆಂಟ್ ವೇಳೆ ಈ 5 ತಪ್ಪುಗಳನ್ನು ಮಾಡಬೇಡಿ

ಕೊರೊನಾ ನಂತರ ಡಿಜಿಟಲ್ ಪೇಮೆಂಟ್ ವ್ಯಾಪಕವಾಗಿದೆ. ಇದು ಸುರಕ್ಷಿತವೂ ಹೌದು. ಆದರೆ ಸಂಪೂರ್ಣವಾಗಿ ಸುರಕ್ಷಿತವೇ ಅಂದರೆ, ಅದಕ್ಕೆ ಉತ್ತರ 'ಇಲ್ಲ' ಅಂತಲೇ ನೀಡಬೇಕಾಗುತ್ತದೆ. ಡಿಜಿಟಲ್ ಪಾವತಿ ಮಾಡುವ ವೇಳೆ ಅನುಸರಿಸಬೇಕಾದ 5 ಕ್ರಮಗಳ ಬಗ್ಗೆ ಇಲ್ಲಿದೆ ವಿವರ.

5 safety tips to follow in digital payment: ಡಿಜಿಟಲ್ ಪೇಮೆಂಟ್ ವೇಳೆ ಈ 5 ತಪ್ಪುಗಳನ್ನು ಮಾಡಬೇಡಿ
ಸಾಂದರ್ಭಿಕ ಚಿತ್ರ
Srinivas Mata
|

Updated on: Mar 29, 2021 | 1:27 PM

Share

ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರ ಆಗುತ್ತಿರುವಂತೆಯೇ ನಾನಾ ವಲಯಗಳಲ್ಲಿ ಬದಲಾವಣೆ ಕೂಡ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಡಿಜಿಟಲ್ ಪೇಮೆಂಟ್ (ಪಾವತಿ) ಕೂಡ ಹೊರತಲ್ಲ. ಡಿಜಿಟಲ್ ಪಾವತಿ ಎಂಬುದು ಸಂಪೂರ್ಣವಾಗಿ ಹೊಸ ಚಿಂತನೆ ಅಂತೇನೂ ಅಲ್ಲ. ಆದರೆ ಕೋವಿಡ್- 19 ಎಂಬ ಜಾಗತಿಕ ಬಿಕ್ಕಟ್ಟು ಕಾಣಿಸಿಕೊಂಡ ಮೇಲೆ ಭಾರತದಲ್ಲಿ ಯುಪಿಐ, ಕ್ರೆಡಿಟ್/ಡೆಬಿಟ್ ಕಾರ್ಡ್​ಗಳು, ಮೊಬೈಲ್ ಬ್ಯಾಂಕಿಂಗ್ ಮುಂತಾದವುಗಳ ಮೂಲಕ ಪಾವತಿ ಮಾಡುವ ವಿಧಾನವನ್ನು ಅಳವಡಿಸಿಕೊಳ್ಳುವುದರ ವೇಗ ಹೆಚ್ಚಾಯಿತು. ಇದಕ್ಕೆ ಬಹಳ ಅನುಕೂಲಕರವಾದ ಮತ್ತು ದೊಡ್ಡ ಮಟ್ಟದಲ್ಲಿ ಸುರಕ್ಷಿತ ದಾರಿಯಿರುವ ಕಾರಣ ಇದನ್ನೇ ಆರಿಸಿಕೊಳ್ಳಬಹುದು. ಆದರೆ ಆನ್​ಲೈನ್ ಪಾವತಿ ವೇಳೆ ಸೈಬರ್ ಭದ್ರತೆ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. ಸುರಕ್ಷಿತವಾಗಿ ಡಿಜಿಟಲ್ ಪೇಮೆಂಟ್ ಮಾಡುವ 5 ಟಿಪ್ಸ್​ಗಳು ಇಲ್ಲಿವೆ.

ಕಾರ್ಡ್ ಮಾಹಿತಿ ಸಂಗ್ರಹಿಸುವುದನ್ನು ತಪ್ಪಿಸಿ ಇದು ಬಹಳ ಬೇಸಿಕ್ ವಿಷಯ ಅಂತ ನಿಮಗೆ ಅನ್ನಿಸಬಹುದು. ಆದರೆ ಆನ್​ಲೈನ್​ನಲ್ಲಿ ನೀವು ಖರೀದಿ ಮಾಡುವಾಗ ನಿಮ್ಮ ಡೆಬಿಟ್/ಕ್ರೆಡಿಟ್ ಮಾಹಿತಿಗಳು ಸೇವ್ (ಸಂಗ್ರಹ) ಆಗಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಬೇಗ ಪಾವತಿ ಆಗಿಬಿಡಲಿ, ಪದೇ ಪದೇ ಮಾಹಿತಿಯನ್ನು ಆರಂಭದಿಂದ ಭರ್ತಿ ಮಾಡುವ ಅಗತ್ಯ ಇಲ್ಲದಿರಲಿ ಎಂಬ ಕಾರಣಕ್ಕೆ ನಮ್ಮಲ್ಲಿ ಹಲವರು ಕಾರ್ಡ್​​ಗಳ ಮಾಹಿತಿಯನ್ನು ಸಂಗ್ರಹಿಸಲು ಬಯಸುತ್ತೇವೆ. ಆದರೆ ಆನ್​ಲೈನ್​​ನಲ್ಲಿ ಖರೀದಿ ಮಾಡಿದ ಮೇಲೆ ನಿಮ್ಮ ಕಾರ್ಡ್ ಮಾಹಿತಿಯನ್ನು ಅಳಿಸುವುದು ಉತ್ತಮ. ಆಗ ಮಾಹಿತಿ ಕಳುವಿನ ಸಾಧ್ಯತೆ ಕಡಿಮೆ ಇರುತ್ತದೆ.

ವಹಿವಾಟಿಗೆ ಖಾಸಗಿ ವಿಂಡೋ ಬಳಸಿ ಅನುಮಾನಾಸ್ಪದವಾದ ಅಪ್ಲಿಕೇಷನ್​ಗಳು ಮತ್ತು ವೆಬ್​ಸೈಟ್​ಗಳಿಂದ ಡಿಜಿಟಲ್ ಪಾವತಿ ಮಾಡಬಾರದು ಹಾಗೂ ಆ್ಯಪ್ ಸ್ಟೋರ್​ಗಳಲ್ಲಿ ಸಲಹೆ ನೀಡುವ ನಂಬಲರ್ಹವಾದ ಅಧಿಕೃತ ಅಪ್ಲಿಕೇಷನ್​ಗಳನ್ನೇ ಬಳಸಬೇಕು. ಖಾಸಗಿ ಅಥವಾ ವರ್ಚುವಲ್ ಬ್ರೌಸರ್ ಬಳಸುವುದು ಉತ್ತಮ. HTTPS:// ಹೀಗೆ ಆರಂಭವಾಗುವುದರೊಂದಿಗೆ ವಹಿವಾಟು ನಡೆಸುವುದರಿಂದ ಹಣಕಾಸು ವಹಿವಾಟಿನ ಸುರಕ್ಷತೆ ಹೆಚ್ಚಾಗುತ್ತದೆ. ಸುರಕ್ಷಿತ ಆನ್​ಲೈನ್ ಬ್ಯಾಂಕಿಂಗ್​ಗಾಗಿ ಮತ್ತು ಕುಕೀಸ್ ತಡೆಯುವುದಕ್ಕೆ ಹಾಗೂ ಕ್ರೆಡೆನ್ಷಿಯಲ್ ಸಂಗ್ರಹ ಆಗದಿರಲಿ ಎಂದೇ ಅವುಗಳನ್ನು ರೂಪಿಸಲಾಗಿದೆ. ಇನ್ನು ವಹಿವಾಟು ಮುಗಿಸಿದ ಮೇಲೆ ಕಡ್ಡಾಯವಾಗಿ ಲಾಗ್​ಔಟ್ ಆಗಬೇಕು.

ಪಾಸ್​ವರ್ಡ್ ಹಂಚಿಕೊಳ್ಳಬೇಡಿ ಇದು ಸಾಮಾನ್ಯವಾದ ಸಲಹೆ. ಆದರೆ ಆರ್ಥಿಕ ವಹಿವಾಟಿನ ಸುರಕ್ಷತೆಯ ಭಾಗದಲ್ಲಿ ಒಂದು. ಇಂಟರ್​ನೆಟ್ ಬ್ಯಾಂಕಿಂಗ್ ಖಾತೆಯ ಪಾಸ್​ವರ್ಡ್​ಗಳು ಹೆಚ್ಚು ಬಲಿಷ್ಠವಾಗಿರಬೇಕು. ಯಾರ ಜತೆಗೂ ಇದನ್ನೂ ಹಂಚಿಕೊಳ್ಳಬಾರದು. ನಿಯಮಿತವಾಗಿ ಪಾಸ್​ವರ್ಡ್ ಬದಲಾವಣೆ ಮಾಡಬೇಕು. ನಿಮ್ಮ ಎಟಿಎಂ PIN ಅಥವಾ ಪಾಸ್​ವರ್ಡ್ ಕೇಳಿಕೊಂಡು ಯಾರಾದರೂ ಫೋನ್ ಮಾಡಿದಲ್ಲಿ ಆ ಬಗ್ಗೆ ಬ್ಯಾಂಕ್​ಗೆ ಮಾಹಿತಿ ನೀಡಬೇಕು. ಒನ್ ಟೈನ್ ಪಾಸ್​ವರ್ಡ್ (ಒಟಿಪಿ) ಬಳಸಿಯೇ ವಹಿವಾಟು ಮಾಡುವುದು ಹೆಚ್ಚು ಸುರಕ್ಷಿತ. ವರ್ಚುವಲ್ ಕೀ ಬೋರ್ಡ್ ಬಳಸಿ ಮಾಹಿತಿ ಟೈಪ್ ಮಾಡುವುದು ಕೂಡ ಸುರಕ್ಷತಾ ವಿಧಾನ ಅನುಸರಿಸುವ ಮಾರ್ಗ.

ಸಾರ್ವಜನಿಕ ಕಂಪ್ಯೂಟರ್​​ಗಳು/ವೈ-ಫೈ ನೆಟ್​ವರ್ಕ್​ಗಳನ್ನು ಬಳಸಬೇಡಿ ಆನ್​ಲೈನ್ ವಹಿವಾಟುಗಳನ್ನು ಮಾಡುವಾಗ ಸಾರ್ವಜನಿಕ ಸಾಧನಗಳು ಅಥವಾ ವೈ- ಫೈ ನೆಟ್​ವರ್ಕ್​ಗಳನ್ನು ಬಳಸದಿರುವುದು ಉತ್ತಮ. ಏಕೆಂದರೆ ಅವುಗಳ ಮೇಲೆ ಸೈಬರ್ ದಾಳಿ, ಕಳುವು ಮತ್ತು ಇತರ ವಂಚನೆ ಚಟುವಟಿಕೆಗಳು ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರ ಜತೆಗೆ ದೃಢೀಕೃತವಾದ ಮತ್ತು ಗೌರವಾನ್ವಿತ ವೆಬ್​ಸೈಟ್​ಗಳನ್ನೇ ಬಳಸುವುದು ಸಹ ಅಷ್ಟೇ ಮುಖ್ಯ. ಆನ್​ಲೈನ್ ವಹಿವಾಟುಗಳಿಗೆ ನಂಬಿಕಸ್ತ ವೆಬ್​ಸೈಟ್​ಗಳು ಉನ್ನತ ಮಟ್ಟದ ಸುರಕ್ಷತೆಯನ್ನು ಒದಗಿಸುತ್ತವೆ.

ವಂಚಕ ಅಪ್ಲಿಕೇಷನ್​ಗಳಿಂದ ಎಚ್ಚರಿಕೆಯಿಂದ ಇರಬೇಕು ಪ್ಲೇಸ್ಟೋರ್ ಮತ್ತು ಆ್ಯಪ್ ಸ್ಟೋರ್​​ಗಳಲ್ಲಿ ನಂಬಿಕೆಗೆ ಅರ್ಹವಲ್ಲದ ಅಪ್ಲಿಕೇಕ್ಷನ್​ಗಳನ್ನು ಹಲವಾರು ಇರುತ್ತವೆ. ಅದೃಷ್ಟ ಏನೆಂದರೆ, ನೆಗೆಟಿವ್ ರಿವ್ಯೂವ್ ಮೂಲಕ ಅವುಗಳನ್ನು ಪತ್ತೆ ಹಚ್ಚಬಹುದು. ಕಡಿಮೆ ಸಂಖ್ಯೆಯ ಡೌನ್​ಲೋಡ್​ಗಳು ಮತ್ತು ವೆರಿಫೈಡ್ ಬ್ಯಾಡ್ಜ್ ಇಲ್ಲದಿರುವುದು ಸಹ ಅಂಥ ಆ್ಯಪ್​ಗಳಿಂದ ದೂರ ಇರುವುದಕ್ಕೆ ಎಚ್ಚರಿಕೆ ಎಂದು ಭಾವಿಸಬೇಕಾಗುತ್ತದೆ. ಮೊಬೈಲ್ ಬ್ಯಾಂಕಿಂಗ್ ಅಥವಾ ಮೊಬೈಲ್ ವ್ಯಾಲೆಟ್ ಅಪ್ಲಿಕೇಷನ್ ಆಗಿದ್ದರೂ ಅದು ನಂಬಿಕೆಗೆ ಅರ್ಹವಾಗಿಯೇ ಇರಬೇಕು. ಇನ್​ಸ್ಟಾಲ್ ಮಾಡಿಕೊಳ್ಳುವ ವೇಳೆ ಆ್ಯಪ್​​ನಿಂದ ಕ್ಯಾಮೆರಾ, ಫೋನ್ ಕಾಂಟ್ಯಾಕ್ಟ್​ಗಳು, ಎಸ್ಸೆಮ್ಮೆಸ್ ಓದುವುದಕ್ಕೆ ಸೇರಿ ಮುಂತಾದವುಕ್ಕೆ ಅನುಮತಿ ಕೇಳಿದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು ಅಥವಾ ಬಳಸುವುದಕ್ಕೆ ಅವಕಾಶ ನಿರಾಕರಿಸಬೇಕು.

ಇದನ್ನೂ ಓದಿ: Android Smart Phones: ಆಂಡ್ರಾಯಿಡ್ ಸ್ಮಾರ್ಟ್​ಫೋನ್ ಬಳಕೆದಾರರು ತಪ್ಪಿಸಬೇಕಾದ 15 ತಪ್ಪುಗಳಿವು

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ