AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಮೂಲದ ಅರವಿಂದ್ ಕೆ.ಸಿ. ಓಪನ್​ಎಐನ ನೂತನ ಸಿಪಿಒ; ಯಾವುದಿದು ಹುದ್ದೆ?

Indian origin Arvind KC appointed as Chief People Office at OpenAI: ಓಪನ್​ಎಐ ಕಂಪನಿಯ ನೂತನ ಚೀಫ್ ಪೀಪಲ್ ಆಫೀಸರ್ ಹುದ್ದೆಗೆ ಭಾರತ ಮೂಲದ ಅರವಿಂದ್ ಕೆಸಿ ಎಂಬುವವರನ್ನು ನೇಮಕ ಮಾಡಲಾಗಿದೆ. ಜೂಲಿಯಾ ವಿಲ್ಲಾಗ್ರ ಅವರು 2025ರ ಆಗಸ್ಟ್​ನಲ್ಲಿ ಕಂಪನಿ ತೊರೆದ ನಂತರ ಸಿಪಿಒ ಹುದ್ದೆ ಖಾಲಿ ಇತ್ತು. ಅರವಿಂದ್ ಅವರು ಓಪನ್​ಎಐನ ಚೀಫ್ ಸ್ಟ್ರಾಟಿಜಿ ಆಫೀಸರ್ ಅವರಿಗೆ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ.

ಭಾರತ ಮೂಲದ ಅರವಿಂದ್ ಕೆ.ಸಿ. ಓಪನ್​ಎಐನ ನೂತನ ಸಿಪಿಒ; ಯಾವುದಿದು ಹುದ್ದೆ?
ಓಪನ್​ಎಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 25, 2026 | 1:27 PM

Share

ಸ್ಯಾನ್ ಫ್ರಾನ್ಸಿಸ್ಕೋ, ಫೆಬ್ರುವರಿ 25: ವಿಶ್ವದ ನಂಬರ್ ಒನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಸ್ಥೆ ಎನಿಸಿರುವ ಓಪನ್​ಎಐನ ಚೀಫ್ ಪೀಪಲ್ ಆಫೀಸರ್ ಹುದ್ದೆಗೆ (OpenAI Chief People Officer) ಭಾರತ ಮೂಲದ ಅರವಿಂದ್ ಕೆ.ಸಿ. (Arvind KC) ನೇಮಕವಾಗಿದ್ದಾರೆ. ಓಪನ್​ಎಐನ ಚಟುವಟಿಕೆ ಮತ್ತು ಬ್ಯುಸಿನೆಸ್ ವಿಸ್ತರಣೆ ಬಹಳ ವೇಗದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅರವಿಂದ್ ಕೆ.ಸಿ. ಅವರಿಗೆ ಹೊಣೆಗಾರಿಕೆ ಬಹಳ ದೊಡ್ಡದಿದೆ.

ಚೀಫ್ ಪೀಟಲ್ ಆಫೀಸರ್ ಎಂಬುದು ಎಚ್​ಆರ್​ಗೆ ಸಂಬಂಧಿಸಿದ ಹುದ್ದೆ. ಮಾನವ ಸಂಪನ್ಮೂಲದ ಹಂಚಿಕೆಯ ಜವಾಬ್ದಾರಿ ಇರುವಂತಹ ಹುದ್ದೆ. ನೇಮಕಾತಿ, ಪ್ರತಿಭಾ ಬಳಕೆ, ಉದ್ಯೋಗಿ ಕ್ಷಮತೆ ಅಭಿವೃದ್ಧಿ ಇತ್ಯಾದಿ ಕಾರ್ಯಗಳನ್ನು ಗಮನಿಸುವುದು ಈ ಹುದ್ದೆಯಲ್ಲಿರುವವರ ಜವಾಬ್ದಾರಿ.

ಓಪನ್​ಎಐನಲ್ಲಿ ಈ ಮುಂಚೆ ಚೀಫ್ ಪೀಪಲ್ ಆಫೀಸರ್ ಆಗಿದ್ದ ಜೂಲಿಯಾ ವಿಲ್ಲಾಗ್ರ ಅವರು 2025ರ ಆಗಸ್ಟ್​ನಲ್ಲೇ ಕಂಪನಿ ತರೆದಿದ್ದರು. ಐದಾರು ತಿಂಗಳ ನಂತರ ಹೊಸ ನೇಮಕಾತಿ ಆಗಿದೆ. ಅರವಿಂದ್ ಕೆ.ಸಿ. ಅವರು ಮಹಾರಾಷ್ಟ್ರದ ಯೂನಿವರ್ಸಿಟಿ ಇನ್ಸ್​ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯಿಂದ ಕೆಮಿಕಲ್ ಎಂಜಿನಿಯರಿಂಗ್ ಮಾಡಿದ್ದಾರೆ. ಅಮೆರಿಕದ ಸಂಟಾ ಕ್ಲಾರಾ ಯೂನಿವರ್ಸಿಟಿಯಲ್ಲಿ ಎಂಬಿಎಂ ಮಾಡಿದ್ದಾರೆ. ರೋಬ್ಲೋಕ್ಸ್, ಗೂಗಲ್, ಪಲಂಟಿರ್ ಟೆಕ್ನಾಲಜೀಸ್, ಮೆಟಾ ಪ್ಲಾಟ್​ಫಾರ್ಮ್ಸ್ ಮೊದಲಾದ ಕಂಪನಿಗಳಲ್ಲಿ ಹಿರಿಯ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನಿರ್ವಹಣೆ, ಹೀಗೆ ಎರಡು ವಿಭಿನ್ನ ಜವಾಬ್ದಾರಿಗಳನ್ನು ನಿಭಾಯಿಸಿದ ಅನುಭವ ಅವರಿಗಿದೆ.

ಇದನ್ನೂ ಓದಿ: ನಮ್ಮನ್ನು ಕಿತ್ತು ತಿನ್ನುತ್ತಿದ್ದವರು ಇವತ್ತು ಟ್ಯಾರಿಫ್ ಕಟ್ತಿದಾರೆ, ಅವರೂ ಖುಷ್, ನಾವೂ ಖುಷ್: ಡೊನಾಲ್ಡ್ ಟ್ರಂಪ್

ಅರವಿಂದ್ ಕೆ.ಸಿ. ಅವರು ಓಪನ್​ಎಐನ ಚೀಫ್ ಸ್ಟ್ರಾಟಿಜಿ ಆಫೀಸರ್ ಆಗಿರುವ ಜೇಸನ್ ಕ್ವೋನ್ ಅವರಿಗೆ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ. ಜಾಗತಿಕವಾಗಿ ಎಐ ಬೂಮ್ ಹೆಚ್ಚುತ್ತಿದ್ದು, ಆ ಕ್ಷೇತ್ರದಲ್ಲಿ ಪರಿಣಿತರ ಅವಶ್ಯಕತೆ ಬಹಳ ಹೆಚ್ಚಿದೆ. ಎಐ ಪರಿಣಿತರಿಗೆ ಬೇಡಿಕೆ ಬಹಳ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಅರವಿಂದ್ ಕೆ.ಸಿ. ಅವರು ಚೀಫ್ ಪೀಪಲ್ ಆಫೀಸರ್ ಆಗಿ ಗುರುತರ ಹೊಣೆ ಹೊಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ