AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Travel Scams: ಆನ್​ಲೈನ್​ನಲ್ಲಿ ಟಿಕೆಟ್, ಹೋಟೆಲ್ ಬುಕ್ ಮಾಡುತ್ತೀರಾ? ಸ್ಕ್ಯಾಮ್​ಗಳಿಗೆ ಬಲಿಯಾಗದಿರಿ ಜೋಕೆ; ನೀವು ಎಚ್ಚರ ವಹಿಸಬೇಕಾದ ಸಂಗತಿಗಳನ್ನು ತಿಳಿದಿರಿ

Beware of Online Scams: ಅಧ್ಯಯನ ವರದಿಯೊಂದರ ಪ್ರಕಾರ ಪ್ರವಾಸಕ್ಕೆ ಬುಕ್ ಮಾಡುವ ಅರ್ಧದಷ್ಟು ಭಾರತೀಯರು ಹಣ ಉಳಿಸುವ ಆಸೆಯಲ್ಲಿ ಅನ್​ಲೈನ್ ಸ್ಕ್ಯಾಮ್​ಗಳಿಗೆ ಬಲಿಯಾಗುತ್ತಾರೆ ಎಂದು ಹೇಳುತ್ತದೆ. ಈ ಹಿನ್ನೆಲೆಯಲ್ಲಿ ನೀವು ಆನ್​ಲೈನ್​ನಲ್ಲಿ ಟ್ರಾವೆಲ್ ಬುಕಿಂಗ್ ಮಾಡುವಾಗ ಏನೇನು ಎಚ್ಚರ ವಹಿಸಬಹುದು, ಎಂಬ ವಿವರ ಇಲ್ಲಿದೆ.

Travel Scams: ಆನ್​ಲೈನ್​ನಲ್ಲಿ ಟಿಕೆಟ್, ಹೋಟೆಲ್ ಬುಕ್ ಮಾಡುತ್ತೀರಾ? ಸ್ಕ್ಯಾಮ್​ಗಳಿಗೆ ಬಲಿಯಾಗದಿರಿ ಜೋಕೆ; ನೀವು ಎಚ್ಚರ ವಹಿಸಬೇಕಾದ ಸಂಗತಿಗಳನ್ನು ತಿಳಿದಿರಿ
ಟ್ರಾವೆಲ್ ಬುಕಿಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 22, 2023 | 12:20 PM

Share

ಬೆಂಗಳೂರು: ಈಗ ಎಲ್ಲಾದರೂ ಪ್ರವಾಸ ಹೋಗಬೇಕಾದರೆ ಆನ್​ಲೈನ್​ನಲ್ಲೇ ಎಲ್ಲವನ್ನೂ ಮುಂಗಡವಾಗಿ ಬುಕ್ ಮಾಡುವ ಸೌಲಭ್ಯ ಇದೆ. ಬಹಳ ಮಂದಿ ಈ ಸೌಲಭ್ಯ ಬಳಸಿಕೊಳ್ಳುತ್ತಾರೆ. ಕೆಲವರು ಡಿಸ್ಕೌಂಟ್ ಆಸೆಯಲ್ಲಿ ಕೆಲ ವಿಚಾರಗಳನ್ನು ಮರೆಯುವುದುಂಟು. ವಿಶ್ವಾಸಾರ್ಹ ಆನ್​ಲೈನ್ ಪ್ಲಾಟ್​ಫಾರ್ಮ್​ಗಳಲ್ಲಿ ಟ್ರಿಪ್ ಬುಕಿಂಗ್ ಮಾಡಬಹುದಾದರೂ, ಸೋಷಿಯಲ್ ಮೀಡಿಯಾಗಳಲ್ಲಿ ಡಿಸ್ಕೌಂಟ್ ಆಫರ್ ಇರುವ ಜಾಹೀರಾತುಗಳನ್ನು ನೋಡಿ ಕ್ಲಿಕ್ ಮಾಡುತ್ತೇವೆ. ಅಥವಾ ವಾಟ್ಸಾಪ್​ನಲ್ಲಿ ಭರ್ಜರಿ ಡಿಸ್ಕೌಂಟ್ ಇರುವ ಟ್ರಿಪ್ ಇದೆ ಎಂದು ತಿಳಿಸಿ ಲಿಂಕ್ ಫಾರ್ವರ್ಡ್ ಆಗಿರುತ್ತದೆ. ಡಿಸ್ಕೌಂಟ್ ಆಸೆಯಲ್ಲಿ ಕ್ಲಿಕ್ ಮಾಡಿದರೆ ನೀವು ಯಾವುದಾದರೂ ವಂಚಕ ತಾಣಕ್ಕೆ ನೀವು ಸಿಕ್ಕಿಬಿಡಬಹುದು.

ಮೆಕ್ಯಾಫೀ ಕಾರ್ಪ್ ಎಂಬ ಸಂಸ್ಥೆಯ ಅಧ್ಯಯನ ವರದಿಯೊಂದರ ಪ್ರಕಾರ ಪ್ರವಾಸಕ್ಕೆ ಬುಕ್ ಮಾಡುವ ಅರ್ಧದಷ್ಟು ಭಾರತೀಯರು ಹಣ ಉಳಿಸುವ ಆಸೆಯಲ್ಲಿ ಅನ್​ಲೈನ್ ಸ್ಕ್ಯಾಮ್​ಗಳಿಗೆ ಬಲಿಯಾಗುತ್ತಾರೆ ಎಂದು ಹೇಳುತ್ತದೆ. ಈ ಹಿನ್ನೆಲೆಯಲ್ಲಿ ನೀವು ಆನ್​ಲೈನ್​ನಲ್ಲಿ ಟ್ರಾವೆಲ್ ಬುಕಿಂಗ್ ಮಾಡುವಾಗ ಏನೇನು ಎಚ್ಚರ ವಹಿಸಬಹುದು, ಎಂಬ ವಿವರ ಇಲ್ಲಿದೆ. ಆನ್​ಲೈನ್​ನಲ್ಲಿ ಬುಕಿಂಗ್ ಮಾಡುವವರಿಗೆ ಇದು ಪ್ರಯೋಜನ ಆಗಬಹುದು.

ನೈಜ ಯುಆರ್​ಎಲ್ ಮರೆಮಾಚುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮುನ್ನ ಎಚ್ಚರ

ನೀವು ಪ್ರವಾಸಕ್ಕೆ ಟಿಕೆಟ್ ಮತ್ತು ಹೋಟೆಲ್, ರೆಸಾರ್ಟ್ ಇತ್ಯಾದಿ ಬುಕ್ ಮಾಡುವಾಗ ಅಧಿಕೃತ ವೆಬ್​ಸೈಟ್​ಗೆ ಹೋಗಿದ್ದೀರಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಗೂಗಲ್​ನಲ್ಲಿ ನೀವೇ ಸರ್ಚ್ ಮಾಡಿದಾಗ ಹೆಚ್ಚಿನ ಪಾಲು ಅಧಿಕೃತ ಜಾಲತಾಣಗಳೇ ಟಾಪ್​ನಲ್ಲಿ ಸಿಗುತ್ತವೆ. ಇವನ್ನು ನೀವು ಬಳಸಲಡ್ಡಿ ಇಲ್ಲ. ಆದರೆ, ಕೆಲವೊಮ್ಮೆ ಸೋಷಿಯಲ್ ಮೀಡಿಯಾಗಳಲ್ಲಿ, ವಾಟ್ಸಾಪ್​ಗಳಲ್ಲಿ ನೈಜ ಯುಆರ್​ಎಲ್ ಮರೆಮಾಚುವ ಲಿಂಕ್​ಗಳು ಬಂದಿರುತ್ತವೆ. ತೀರಾ ಕಡಿಮೆ ಬೆಲೆಯಲ್ಲಿ ಪ್ರವಾಸಕ್ಕೆ ಹೋಗಬಹುದು ಎಂದು ನಿಮ್ಮನ್ನು ಆಕರ್ಷಿಸಬಹುದು. ಅದು ಯಾವುದೋ ವಂಚಕ ತಾಣವಿದ್ದಿರಬಹುದು ಹುಷಾರ್.

ಇದನ್ನೂ ಓದಿTCS: ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್: 7 ಲಕ್ಷ ರೂ ಮೇಲ್ಪಟ್ಟ ವೆಚ್ಚಕ್ಕೆ ಮಾತ್ರ ಶೇ. 20 ಟಿಸಿಎಸ್- ಸರ್ಕಾರ ಸ್ಪಷ್ಟನೆ

ಟ್ರಾವೆಲ್ ಬುಕಿಂಗ್ ಮಾಡುವಾಗ ವಿಪಿಎನ್ ಬಳಸಿ

ನೀವು ಪಬ್ಲಿಕ್ ವೈಫೈ ಕನೆಕ್ಷನ್ ಮೂಲಕ ಬುಕಿಂಗ್ ಮಾಡುತ್ತಿದ್ದರೆ ಆಗ ವಿಪಿಎನ್ ನೆಟ್ವರ್ಕ್ ಬಳಸುವುದು ಕ್ಷೇಮಕರ. ಸಾರ್ವಜನಿಕ ವೈಫೈ ಕನೆಕ್ಟ್ ಆಗಿದ್ದರೆ ಹ್ಯಾಕಿಂಗ್ ಸುಲಭವಾಗುತ್ತದೆ. ನಿಮ್ಮ ಮೊಬೈಲ್​ನಲ್ಲಿರುವ ಮಾಹಿತಿಯನ್ನು ಕದಿಯುವ ಸಾಧ್ಯತೆ ಇರುತ್ತದೆ.

ಟ್ರಾವೆಲ್ ಬುಕ್ ಮಾಡುವ ಮುನ್ನ ತುಸು ಸಂಶೋಧನೆ ಮಾಡಿ

ನೀವು ಪ್ರವಾಸ ವೆಬ್​ಸೈಟ್​ನಲ್ಲಿ ಯಾವುದಾದರೂ ಹೋಟೆಲ್ ಅಥವ ರೆಸಾರ್ಟ್ ಬುಕ್ ಮಾಡುವ ಮುನ್ನ ಒಂದಿಷ್ಟು ಸಂಶೋಧನೆ ಮಾಡುವುದು ಉತ್ತಮ. ಆ ಹೋಟೆಲ್ ಬೇರೆ ಬುಕಿಂಗ್ ಸೈಟ್​ಗಳಲ್ಲಿ ಅಸ್ತಿತ್ವದಲ್ಲಿದೆಯಾ ಎಂದು ಪರಿಶೀಲಿಸಿ. ಅದರಲ್ಲಿ ಕೊಟ್ಟಿರುವ ಕಾಂಟ್ಯಾಕ್ಟ್ ನಂಬರ್ ಮೂಲಕ ಸಂಪರ್ಕಿಸಿ ಆ ಹೋಟೆಲ್ ನಿಜವಾಗಿಯೂ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅವಕಾಶ ಇದ್ದರೆ ಪೇ ಲೇಟರ್ ಆಪ್ಷನ್ ಉಪಯೋಗಿಸಿ.

ಇದನ್ನೂ ಓದಿLIC: ಎಲ್​ಐಸಿ ಪಾಲಿಸಿ ಧಮಾಕ; ದಿನಕ್ಕೆ 45 ರೂ ಕಟ್ಟಿ, 25 ಲಕ್ಷ ಪಡೆಯಿರಿ; ನೋಡಿ ಈ ಪಾಲಿಸಿ ಡೀಟೇಲ್ಸ್

ರಿವೀವ್ಸ್, ರೀಫಂಡ್ ಪಾಲಿಸಿಗಳನ್ನು ಗಮನಿಸಿ

ನೀವು ಹೊಸ ಬುಕಿಂಗ್ ಸೈಟ್​ಗೆ ಹೋಗಿದ್ದರೆ ಅದರ ರೀಫಂಡ್ ಪಾಲಿಸಿ ಓದಿ. ಹಾಗೆಯೇ, ಗೂಗಲ್ ಇತ್ಯಾದಿ ಆನ್​ಲೈನ್ ಪ್ಲಾಟ್​ಫಾರ್ಮ್​ಗಳಲ್ಲಿ ಈ ವೆಬ್​ಸೈಟ್​ನ ಬಗ್ಗೆ ರಿವ್ಯೂಗಳಿವೆಯಾ ಪರಿಶೀಲಿಸಿ. ತೀರಾ ನಗಣ್ಯವೆನಿಸುವಷ್ಟು ರಿವ್ಯೂಗಳಿದ್ದರೆ ಅಲ್ಲಿಂದ ನಿರ್ಗಮಿಸುವುದು ಒಳ್ಳೆಯದು. ಹೆಚ್ಚು ರಿವ್ಯೂಗಳಿದ್ದರೆ ಅದರಲ್ಲಿ ನೆಗಟಿವ್ ಆಗಿ ಬರೆದಿರುವ ರಿವ್ಯೂಗಳನ್ನು ಹೆಚ್ಚು ಗಮನಿಸಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!