AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol: ಪೆಟ್ರೋಲ್ ಬೆಲೆ ಇಳಿಸಬೇಕೆಂದಿದ್ದ ಕೇಂದ್ರ ಸರ್ಕಾರಕ್ಕೆ ಈಗ ಇಬ್ಬಂದಿ ಸಂಕಟ ತಂದಿಟ್ಟ ಈ ಉಗ್ರರು; ಭಾರತದಲ್ಲಿ ಬೆಲೆ ಏರಿಕೆ ಸಾಧ್ಯತೆ

Houthi Rebels Disrupt Global Supply Chain: ಆಫ್ರಿಕಾ, ಏಷ್ಯಾ ಕೊಂಡಿಯಂತಿರುವ ಸುಯೆಜ್ ಕಾಲುವೆ ಜಲಮಾರ್ಗದಲ್ಲಿ ಇರಾನ್ ಬೆಂಬಲಿತ ಹೌತಿ ಉಗ್ರರು ಹಡಗುಗಳ ಮೇಲೆ ಸತತವಾಗಿ ದಾಳಿ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆಗೆ ಧಕ್ಕೆ ಆಗಿದೆ. ಭಾರತದಂತಹ ಪ್ರಮುಖ ತೈಲ ಆಮದು ದೇಶಗಳಿಗೆ ಹೆಚ್ಚು ಬಾಧೆಯಾಗಿದ್ದು, ಪೆಟ್ರೋಲ್ ಬೆಲೆ ಹೆಚ್ಚುವ ನಿರೀಕ್ಷೆ ಇದೆ.

Petrol: ಪೆಟ್ರೋಲ್ ಬೆಲೆ ಇಳಿಸಬೇಕೆಂದಿದ್ದ ಕೇಂದ್ರ ಸರ್ಕಾರಕ್ಕೆ ಈಗ ಇಬ್ಬಂದಿ ಸಂಕಟ ತಂದಿಟ್ಟ ಈ ಉಗ್ರರು; ಭಾರತದಲ್ಲಿ ಬೆಲೆ ಏರಿಕೆ ಸಾಧ್ಯತೆ
ಸರಕು ಸಾಗಣೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 15, 2024 | 12:36 PM

Share

ನವದೆಹಲಿ, ಜನವರಿ 15: ಜಾಗತಿಕವಾಗಿ ಸತತವಾಗಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಪೆಟ್ರೋಲ್ ಬೆಲೆ ಇಳಿಸುವ ಮನಸು ಮಾಡಿದ್ದ ಕೇಂದ್ರ ಸರ್ಕಾರಕ್ಕೆ ಈಗ ಯೆಮೆನ್​ನ ಬಂಡುಕೋರರು (Houthi rebels) ತಲೆನೋವಾಗಿದ್ದಾರೆ. ಸಾಗರ ಮಾರ್ಗದಲ್ಲಿ ವರ್ತಕರ ಹಡಗುಗಳ ಮೇಲೆ ಹೌತಿ ಬಂಡುಕೋರರ ಸತತ ದಾಳಿಯಿಂದ ಜಾಗತಿಕ ಸರಬರಾಜು ಸರಪಳಿಗೆ (global supply chain) ಧಕ್ಕೆಯಾಗಿದೆ. ಅದರಲ್ಲೂ ತೈಲ ಸರಬರಾಜಿಗೆ ಹೊಡೆತ ಬಿದ್ದಿದೆ. ಭಾರತದಂತಹ ಪ್ರಮುಖ ತೈಲ ಆಮದು ದೇಶಗಳಿಗೆ ಹೆಚ್ಚು ಬಾಧೆಯಾಗಬಹುದು. ಭಾರತಕ್ಕೆ ತೈಲ ಬೆಲೆ ಒಂದು ಬ್ಯಾರಲ್​ಗೆ 10ರಿಂದ 20 ಡಾಲರ್​ನಷ್ಟು ಬೆಲೆ ಹೆಚ್ಚಳವಾಗಬಹುದು ಎಂದು ವರ್ಲ್ಡ್ ಎಕನಾಮಿಕ್ ಫೋರಂನ ಅಧ್ಯಕ್ಷ ಬೋರ್ಜ್​ ಬ್ರೆಂಡೆ (Borge Brende) ಅಂದಾಜು ಮಾಡಿದ್ದಾರೆ.

ಸ್ವಿಟ್ಜರ್​ಲ್ಯಾಂಡ್​ನ ಡಾವೋಸ್ ನಗರದಲ್ಲಿ 54ನೇ ವಾರ್ಷಿಕ ವರ್ಲ್ಡ್ ಎಕನಾಮಿಕ್ ಫೋರಂ ಸಭೆಯ ಹಿನ್ನೆಲೆಯಲ್ಲಿ ಇಂಡಿಯಾ ಟುಡೇ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಬೋರ್ಜ್ ಬ್ರೆಂಡೆ ಅವರು, ಸುಯೆಲ್ ಕಾಲುವೆಯ ಮಾರ್ಗ ನಿಲುಗಡೆ ಆಗುವುದರಿಂದ ವಿಶ್ವಾದ್ಯಂತ ಸರಬರಾಜು ವ್ಯವಸ್ಥೆಗೆ ಧಕ್ಕೆ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬ್ಯಾಂಕ್​​ಗಳು ಬಂದ್, ಲಕ್ಷಾಂತರ ಜನರು ಆಫ್​​ಲೈನ್; ಚೀನಾ ಆಕ್ರಮಣ ಎದುರಿಸಲು ಸಿದ್ಧತೆ ನಡೆಸುತ್ತಿದೆ ತೈವಾನ್

ಆಫ್ರಿಕಾ ಮತ್ತು ಏಷ್ಯಾ (ಅರೇಬಿಯಾ) ನಡುವೆ ಇರುವ ಕಿರಿದಾದ ಸಮುದ್ರ ರೆಡ್ ಸೀ. ಹಿಂದೂ ಮಹಾಸಾಗರದ ಭಾಗವಾಗಿರುವ ಈ ರೆಡ್ ಸೀ ಪ್ರಮುಖ ಸಾಗರ ಮಾರ್ಗವಾಗಿದೆ. ಏಷ್ಯಾ, ಯೂರೋಪ್ ಮತ್ತು ಆಫ್ರಿಕಾ ಮಧ್ಯೆ ಸರಕು ಸಾಗಾಣಿಕೆ ಮಾಡಲು ಇದು ಬಹಳ ಮಹತ್ವದ ಮಾರ್ಗವಾಗಿದೆ. ಸುಮಾರು 2,000 ಕಿಮೀಯಷ್ಟು ಉದ್ದದ ಈ ಸಾಗರ ಮಾರ್ಗದಲ್ಲಿ ಈಗ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಹಡಗುಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಅಮೆರಿಕ, ಬ್ರಿಟನ್ ದೇಶಗಳ ಮಿಲಿಟರಿ ದಾಳಿಗೂ ಜಗ್ಗದ ಇವರನ್ನು ತಡೆಯುವುದು ಬಹಳ ಕಷ್ಟಕರ ಕೆಲಸವಾಗಿದೆ.

ಸರಕು ಸಾಗಣೆಗೆ ಸುಯೆಜ್ ಕೆನಾಲ್​ಗೆ ಸೂಕ್ತ ಪರ್ಯಾಯ ಮಾರ್ಗ ಇಲ್ಲ. ಆಫ್ರಿಕಾದ ದಕ್ಷಿಣ ಭಾಗದ ಕಡೆಯಿಂದ ಹಡಗುಗಳು ಸಾಗಬೇಕಾಗುತ್ತದೆ. ಇದರಿಂದ ಸರಕು ಸಾಗಣೆ ಅವಧಿ 10ರಿಂದ 15 ದಿನಗಳಷ್ಟು ಹೆಚ್ಚಾಗುತ್ತದೆ. ಪರಿಣಾಮವಾಗಿ ಅಂತಾರಾಷ್ಟ್ರೀಯ ವಹಿವಾಟು ಕಷ್ಟಕರವಾಗುತ್ತದೆ. ಸರಕುಗಳ ಬೆಲೆ ಹೆಚ್ಚಾಗುತ್ತದೆ. ಅದರಲ್ಲೂ ತೈಲ ಬೆಲೆ ಹೆಚ್ಚಾಗುವುದು ನಿಶ್ಚಿತ.

ಇದನ್ನೂ ಓದಿ: Rich vs Poor: ಶ್ರೀಮಂತರಿಗೆ ಇನ್ನಷ್ಟು ಶ್ರೀಮಂತಿಕೆ; ಬಡವರಿಗೆ ಇನ್ನಷ್ಟು ಬಡತನ; ಬೆಚ್ಚಿಬೀಳಿಸುತ್ತದೆ ಆಕ್ಸ್​ಫ್ಯಾಮ್ ವರದಿ

ಭಾರತದ ತೈಲ ಮಾರುಕಟ್ಟೆ ಕಂಪನಿಗಳಿಗೆ ಹೆಚ್ಚಿನ ಹೊರೆಯಾಗುತ್ತದೆ. ಪರಿಣಾಮವಾಗಿ ಪೆಟ್ರೋಲ್ ಬೆಲೆ ಹೆಚ್ಚಿಸಲು ಈ ತೈಲ ಸಂಸ್ಥೆಗಳಿಗೆ ಸರ್ಕಾರ ಅನುಮತಿಸಬಹುದು. ಲೋಕಸಭೆ ಚುನಾವಣೆಯ ಹೊಸ್ತಿಲಲ್ಲೇ ಪೆಟ್ರೋಲ್ ಬೆಲೆ ಹೆಚ್ಚಳ ಸಾಧ್ಯತೆ ಇದೆ. ಆದರೆ, ಪೆಟ್ರೋಲ್ ಮೇಲಿನ ಸುಂಕಗಳನ್ನು ಸರ್ಕಾರ ಕಡಿಮೆ ಮಾಡುವುದು ಸದ್ಯಕ್ಕೆ ಇರುವ ಇನ್ನೊಂದು ಪರ್ಯಾಯ ಕ್ರಮವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು