AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Infra Revolution: ಭಾರತದಲ್ಲಿ ಇನ್​ಫ್ರಾಸ್ಟ್ರಕ್ಚರ್ ಕ್ರಾಂತಿ; 11 ವರ್ಷಗಳಲ್ಲಿ ಆದ ಸಾಧನೆಗಳೇನು? ಇಲ್ಲಿದೆ ಪಟ್ಟಿ

Highlights of infrastructure revolution in India since 2014: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ 11 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸರ್ಕಾರ ಮೂಲಸೌಕರ್ಯಕ್ಕೆ ಸಾಕಷ್ಟು ಒತ್ತು ಕೊಟ್ಟಿದೆ. 2014ರಿಂದ ಭಾರತದಲ್ಲಿ ಇನ್​​ಫ್ರಾಸ್ಟ್ರಕ್ಚರ್ ಕ್ರಾಂತಿಯೇ ನಡೆದಿದೆ. ನೆಲ, ಜಲ ಮತ್ತು ವಾಯು ಮಾರ್ಗಗಳಲ್ಲಿ ಸಂಚಾರ ಜಾಲ ವಿಸ್ತರಿಸಿದೆ. ಇದರ ಮುಖ್ಯಾಂಶಗಳು ಈ ಲೇಖನದಲ್ಲಿವೆ...

Infra Revolution: ಭಾರತದಲ್ಲಿ ಇನ್​ಫ್ರಾಸ್ಟ್ರಕ್ಚರ್ ಕ್ರಾಂತಿ; 11 ವರ್ಷಗಳಲ್ಲಿ ಆದ ಸಾಧನೆಗಳೇನು? ಇಲ್ಲಿದೆ ಪಟ್ಟಿ
ಇನ್​​ಫ್ರಾಸ್ಟ್ರಕ್ಚರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 11, 2025 | 12:28 PM

ನವದೆಹಲಿ, ಜೂನ್ 11: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಳೆದ 11 ವರ್ಷಗಳಲ್ಲಿ ದೇಶದಲ್ಲಿ ಆಗಿರುವ ಇನ್​ಫ್ರಾಸ್ಟ್ರಕ್ಚರ್ ಆಭಿವೃದ್ಧಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರೈಲ್ವೇಸ್​​ನಿಂದ ಹಿಡಿದು ಹೈವೇಸ್​​ವರೆಗೆ, ಪೋರ್ಟ್​​ಗಳಿಂದ ಹಿಡಿದು ಏರ್​​ಪೋರ್ಟ್​​ಗಳವರೆಗೆ ಭಾರತದಲ್ಲಿ ಮೂಲಸೌಕರ್ಯ ಜಾಲ ಬಹಳ ವೇಗದಲ್ಲಿ ಬೆಳವಣಿಗೆ ಹೊಂದುತ್ತಿದ್ದು, ಇದರಿಂದ ಸಮೃದ್ಧಿ ಹೆಚ್ಚುತ್ತಿದೆ, ಸುಗಮ ಜೀವನವೂ ಹೆಚ್ಚುತ್ತಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಆಡಳಿತಕ್ಕೆ 11 ವರ್ಷವಾದ ಹಿನ್ನೆಲೆಯಲ್ಲಿ ಸರ್ಕಾರದ MyGovIndia ತನ್ನ ಎಕ್ಸ್ ಪೋಸ್ಟ್​​ನಲ್ಲಿ ಈ 11 ವರ್ಷಗಳಲ್ಲಿ ಆಗಿರುವ ಇನ್​ಫ್ರಾಸ್ಟ್ರಕ್ಚರ್ ಕ್ರಾಂತಿಯನ್ನು ಎತ್ತಿತೋರಿಸಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತದಲ್ಲಿ ಸ್ಮಾರ್ಟ್ ಸಿಟಿ, ಸುರಕ್ಷಿತ ರಸ್ತೆ, ಸುಗಮ ಸಂಚಾರ ಸಾಧ್ಯವಾಗಿದೆ ಎಂದು ಹೇಳಿದೆ. ಈ ಪೋಸ್ಟ್​​ಗೆ ನರೇಂದ್ರ ಮೋದಿ ಪ್ರತಿಕ್ರಿಯಿಸಿ, ದೇಶದಲ್ಲಾಗಿರುವ ಮೂಲಸೌಕರ್ಯ ಅಭಿವೃದ್ಧಿಯನ್ನು ಶ್ಲಾಘಿಸಿದ್ದಾರೆ.

ದೂರದೃಷ್ಟಿ ಮತ್ತು ಸುಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ತಲೆಮಾರಿನ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಭಾರತ ಒತ್ತುಕೊಡುತ್ತಿದೆ. ಇದು ಸ್ವಾವಲಂಬಿ ದೇಶ ನಿರ್​ಮಾಣಕ್ಕೆ ಗಟ್ಟಿ ಅಡಿಪಾಯ ಹಾಕಿದಂತೆ ಎಂದು ಪ್ರಧಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಶೇ. 27 ಇದ್ದ ಅತಿಬಡತನ 11 ವರ್ಷದಲ್ಲಿ ಶೇ. 5.3ಕ್ಕೆ ಇಳಿಕೆ; ವಿಶ್ವಬ್ಯಾಂಕ್ ದತ್ತಾಂಶದಿಂದ ಮಾಹಿತಿ

2014ರಿಂದ ಭಾರತದಲ್ಲಿ ಆದ ಇನ್​​ಫ್ರಾಸ್ಟ್ರಕ್ಚರ್ ಕ್ರಾಂತಿಗಳ ಮುಖ್ಯಾಂಶಗಳು

  1. ಪಿಎಂ ಗತಿಶಕ್ತಿ ಮಾಸ್ಟರ್ ಪ್ಲಾನ್: ಪ್ರಮುಖ ಇನ್​​ಫ್ರಾಸ್ಟ್ರಕ್ಚರ್ ಯೋಜನೆಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯವಾಗುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯಗಳ ಮಧ್ಯೆ ಸಮನ್ವಯತೆ ತರುವ ಪಿಎಂ ಗತಿಶಕ್ತಿ ಪ್ಲಾನ್ 2021ರಲ್ಲಿ ಆರಂಭವಾಗಿದೆ.
  2. ಕಳೆದ 11 ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿ 91,287 ಕಿಮೀ ಇದ್ದದ್ದು 1,46,204 ಕಿಮೀಗೆ ಏರಿದೆ. ಶೇ. 60ರಷ್ಟು ಹೆದ್ದಾರಿ ಹೆಚ್ಚಿದೆ.
  3. ಹೆದ್ಧಾರಿ ನಿರ್ಮಾಣದ ವೇಗ ಮೂರು ಪಟ್ಟು ಹೆಚ್ಚು. 2014ರಲ್ಲಿ ದಿನಕ್ಕೆ ಸರಾಸರಿಯಾಗಿ 11.6 ಕಿಮೀ ಹೆದ್ದಾರಿ ನಿರ್ಮಾಣ ಆಗುತ್ತಿತ್ತು. ಈಗ ದಿನಕ್ಕೆ 34 ಕಿಮೀ ಹೆದ್ದಾರಿ ನಿರ್ಮಾಣ ಆಗುತ್ತಿದೆ.
  4. ಭಾರತಮಾಲ ಯೋಜನೆ: 26,425 ಕಿಮೀಗೆ ಅನುಮೋದನೆ ಸಿಕ್ಕಿದೆ. ಇದರಲ್ಲಿ 20,378 ಕಿಮೀ ನಿರ್ಮಾಣ ಆಗಿದೆ.
  5. ವಂದೇ ಭಾರತ್: 333 ಜಿಲ್ಲೆಗಳಲ್ಲಿ 68 ವಂದೇ ಭಾರತ್ ಟ್ರೈನ್​​ಗಳು ಓಡುತ್ತಿವೆ.
  6. 2014ರಿಂದ 45,000 ಕಿಮೀಯಷ್ಟು ರೈಲು ವಿದ್ಯುದೀಕರಣ ಆಗಿದೆ.
  7. ರೈಲ್ವೆ ಸುರಕ್ಷತೆ ದೃಷ್ಟಿಯಿಂದ ಪ್ರಮುಖ ಮಾರ್ಗಗಳಲ್ಲಿ ಕವಚ್ ಅಳವಡಿಕೆ ಆಗಿದೆ.
  8. ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸುಲಭವಾಗಲು 1,790 ಲಿಫ್ಟ್ ಮತ್ತು 1,602 ಎಸ್ಕಲೇಟರ್​​ಗಳನ್ನು ಅಳವಡಿಸಲಾಗಿದೆ.
  9. ಕಳೆದ 11 ವರ್ಷದಲ್ಲಿ ಗ್ರಾಮೀಣ ಭಾಗದಲ್ಲಿ 7.8 ಲಕ್ಷ ಕಿಮೀ ರಸ್ತೆಗಳ ನಿರ್ಮಾಣ ಪೂರ್ಣವಾಗಿದೆ.
  10. ಉಡಾನ್ ಯೋಜನೆ ಅಡಿ ದೇಶಾದ್ಯಂತ 88 ಏರ್​​ಪೋರ್ಟ್​​ಗಳು ಕಾರ್ಯಾತ್ಮಕವಾಗಿವೆ.
  11. ಒಂದೂವರೆ ಕೋಟಿಗೂ ಅಧಿಕ ಜನರು ಪ್ರಾದೇಶಿಕ ಮಾರ್​ಗಗಳಲ್ಲಿ ವಿಮಾನ ಸಂಚಾರ ಮಾಡಿದ್ದಾರೆ.
  12. 24 ಏರ್​​ಪೋರ್ಟ್​​ಗಳಲ್ಲಿ ಡಿಜಿ ಯಾತ್ರಾ ಅಳವಡಿಕೆ ಆಗಿದೆ. 522 ಕೋಟಿ ಜನರು ಇದನ್ನು ಬಳಸಿದ್ದಾರೆ.
  13. ಬಂದರು ಸಾಮರ್ಥ್ಯ ದ್ವಿಗುಣಗೊಂಡು 2,762 ಎಂಎಂಟಿಪಿಎ ಮುಟ್ಟಿದೆ.
  14. ಹಡಗುಗಳ ಟರ್ನರೌಂಡ್ ಟೈಮ್ 93 ಗಂಟೆಯಿಂದ 49 ಗಂಟೆಗೆ ಇಳಿದಿದೆ. ಟರ್ನರೌಂಡ್ ಟೈಮ್ ಎಂದರೆ ಒಂದು ಹಡಗಿನಲ್ಲಿರುವ ಸರಕುಗಳನ್ನು ಇಳಿಸಿ, ಹೊಸ ಸರಕುಗಳನ್ನು ತುಂಬಿಸಿ ಸಂಚಾರಕ್ಕೆ ಸಿದ್ಧವಾಗುವವರೆಗಿನ ಸಮಯ.
  15. ಸಾಗರಮಾಲ ಯೋಜನೆ ಅಡಿ 277 ಪ್ರಾಜೆಕ್ಟ್ ಪೂರ್ಣಗೊಂಡಿದೆ. ಎರಡನೇ ಭಾಗದ ಸಾಗರಮಾಲ ಯೋಜನೆಯನ್ನು ಆರಂಭಿಸಲಾಗಿದೆ.
  16. ಒಳನಾಡು ಜಲಮಾರ್ಗಗಳಲ್ಲಿ ಸರಕು ಸಾಗಣೆಯು ಶೇ. 710ರಷ್ಟು ಹೆಚ್ಚಾಗಿದೆ. 18 ಎಂಎಂಟಿಯಷ್ಟು ಸರಕು ಸಾಗಣೆಯಾಗುತ್ತಿತ್ತು. ಈಗ 146 ಎಂಎಂಟಿ ಸರಕು ಸಾಗಣೆ ಆಗುತ್ತಿದೆ.
  17. ಮೂರು ಪ್ರಮುಖ ಬಂದರುಗಳಲ್ಲಿ ಗ್ರೀನ್ ಹೈಡ್ರೋಜನ್ ಹಬ್​​ಗಳನ್ನು ನಿರ್ಮಿಸಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ