AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Post office MIS: ಕೆಲವೇ ಲಕ್ಷ ಹೂಡಿಕೆ, ತಿಂಗಳಿಗೆ 9,250 ರೂವರೆಗೆ ಆದಾಯ; ಇದು ಪೋಸ್ಟ್ ಆಫೀಸ್ MIS ಸ್ಕೀಮ್

ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ ಸಣ್ಣ ಹೂಡಿಕೆದಾರರಿಗೆ ಸುರಕ್ಷಿತ ಮತ್ತು ಸ್ಥಿರವಾದ ಮಾಸಿಕ ವರಮಾನ ಒದಗಿಸುತ್ತದೆ. ಕೇಂದ್ರ ಸರ್ಕಾರ ಬೆಂಬಲಿತವಾದ ಈ ಯೋಜನೆಯಲ್ಲಿ 1,000 ರೂನಿಂದ 15 ಲಕ್ಷ ರೂವರೆಗೆ ಹೂಡಿಕೆ ಸಾಧ್ಯ. ಐದು ವರ್ಷದವರೆಗೆ ತಿಂಗಳಿಗೆ ನಿಗದಿತ ಮಾಸಿಕ ಆದಾಯ ನೀಡುತ್ತದೆ. ಈ ಮಾಸಿಕ ಆದಾಯ ಯೋಜನೆಯ ವಿವರ ಇಲ್ಲಿದೆ.

Post office MIS: ಕೆಲವೇ ಲಕ್ಷ ಹೂಡಿಕೆ, ತಿಂಗಳಿಗೆ 9,250 ರೂವರೆಗೆ ಆದಾಯ; ಇದು ಪೋಸ್ಟ್ ಆಫೀಸ್ MIS ಸ್ಕೀಮ್
ಅಂಚೆ ಕಚೇರಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 04, 2026 | 3:47 PM

Share

ಖಾಸಗಿ ಬ್ಯಾಂಕುಗಳ ಬಡ್ಡಿ ದರಗಳಲ್ಲಿ ಏರಿಳಿತ ಕಂಡುಬರುತ್ತಿರುವ ಈ ಸಮಯದಲ್ಲಿ, ಸುರಕ್ಷಿತ ಹಾಗೂ ಸ್ಥಿರ ಆದಾಯವನ್ನು ಬಯಸುವ ಮಧ್ಯಮ ವರ್ಗದ ಜನರಿಗೆ ಮತ್ತು ಹಿರಿಯ ನಾಗರಿಕರಿಗೆ ಅಂಚೆ ಕಚೇರಿಯ ‘ಮಾಸಿಕ ಆದಾಯ ಯೋಜನೆ’ (POMIS- Post Office Monthly Income Scheme) ಹೊಸ ಭರವಸೆಯಾಗಿದೆ.

ಕೇಂದ್ರ ಸರ್ಕಾರವು ಈ ಯೋಜನೆಗೆ ಪ್ರಸ್ತುತ ಶೇ. 7.4 ರಷ್ಟು ಆಕರ್ಷಕ ಬಡ್ಡಿ ದರವನ್ನು ನೀಡುತ್ತಿದ್ದು, ಹೂಡಿಕೆದಾರರು ತಮ್ಮ ಉಳಿತಾಯದ ಮೇಲೆ ಪ್ರತಿ ತಿಂಗಳು ಖಚಿತ ಆದಾಯ ಪಡೆಯಬಹುದಾಗಿದೆ. ಉದಾಹರಣೆಗೆ, ಜಂಟಿ ಖಾತೆಯಲ್ಲಿ ಗರಿಷ್ಠ ಮಿತಿಯಾದ ₹15 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ಸರಿಸುಮಾರು ₹9,250 ಗಳ ಮಾಸಿಕ ಬಡ್ಡಿಯನ್ನು ನಿಯಮಿತವಾಗಿ ಪಡೆಯಬಹುದು. 5 ವರ್ಷಗಳ ಪೂರ್ಣ ಅವಧಿಯ ನಂತರ ನಿಮ್ಮ ಮೂಲ ಹೂಡಿಕೆ ಮೊತ್ತ ಸುರಕ್ಷಿತವಾಗಿ ಹಿಂತಿರುಗುತ್ತದೆ.

ಸುರಕ್ಷಿತ ಹೂಡಿಕೆಯೊಂದಿಗೆ ಯಾವುದೇ ಮಾರುಕಟ್ಟೆ ಅಪಾಯವಿಲ್ಲದೆ (Market Risk) ಮಾಸಿಕ ಖರ್ಚುಗಳನ್ನು ನಿಭಾಯಿಸಲು ಬಯಸುವವರಿಗೆ ಈ ಯೋಜನೆ ಅತ್ಯಂತ ಸೂಕ್ತವಾಗಿದೆ. ಸಮೀಪದ ಅಂಚೆ ಕಚೇರಿಗೆ ಭೇಟಿ ನೀಡಿ ಆಧಾರ್, ಪಾನ್ ಕಾರ್ಡ್ ಹಾಗೂ ಭಾವಚಿತ್ರ ನೀಡಿ ಸುಲಭವಾಗಿ ಈ ಖಾತೆಯನ್ನು ತೆರೆಯಬಹುದು.

ಇದನ್ನೂ ಓದಿ: ಸಾಲಕ್ಕೆ ಶೂರಿಟಿ ನೀಡುವುದರಿಂದ ಏನು ಸಮಸ್ಯೆ? ಸಾಲ ತೀರಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚುತ್ತಾ?

ಪೋಸ್ಟ್ ಆಫೀಸ್ ಎಂಐಎಸ್ ಸ್ಕೀಮ್​ನ ಪ್ರಮುಖ ವಿವರಗಳು ಹಾಗೂ ಫೀಚರ್​ಗಳು

  • ಹೂಡಿಕೆ ಅವಧಿ: 5 ವರ್ಷಗಳು
  • ಬಡ್ಡಿ ದರ: ಶೇ. 7.4% (ವಾರ್ಷಿಕ ಬಡ್ಡಿ ದರ)
  • ಕನಿಷ್ಠ ಹೂಡಿಕೆ: ₹1,000 ಹಾಗೂ ಅದಕ್ಕೂ ಹೆಚ್ಚು
  • ಗರಿಷ್ಠ ಹೂಡಿಕೆ ಮಿತಿ: ವೈಯಕ್ತಿಕ ಖಾತೆಯಾದರೆ ಗರಿಷ್ಠ ₹9 ಲಕ್ಷ, ಜಂಟಿ ಖಾತೆಯಾದರೆ ಗರಿಷ್ಠ ₹15 ಲಕ್ಷ ಹೂಡಿಕೆಗೆ ಅವಕಾಶ
  • ಅರ್ಹತೆ: ಭಾರತೀಯ ಪ್ರಜೆಯಾಗಿರಬೇಕು. 10 ವರ್ಷ ಮೇಲ್ಪಟ್ಟ ಅಪ್ರಾಪ್ತರ ಹೆಸರಿನಲ್ಲಿಯೂ ಖಾತೆ ತೆರೆಯಬಹುದು.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಪ್ರಯೋಜನಗಳು

  • ಸಂಪೂರ್ಣ ಸುರಕ್ಷತೆ: ಇದು ಭಾರತ ಸರ್ಕಾರದಿಂದ ನಡೆಸಲ್ಪಡುವ ಯೋಜನೆಯಾಗಿರುವುದರಿಂದ ಹೂಡಿಕೆಗೆ 100% ಸುರಕ್ಷತೆ ಇರುತ್ತದೆ.
  • ಖಚಿತ ಮಾಸಿಕ ಆದಾಯ: ನಿಗದಿತ ಬಡ್ಡಿ ಹಣ ಪ್ರತಿ ತಿಂಗಳು ನೇರವಾಗಿ ನಿಮ್ಮ ಅಂಚೆ ಕಚೇರಿ ಉಳಿತಾಯ ಖಾತೆಗೆ ಜಮಾ ಆಗುತ್ತದೆ.
  • ಖಾತೆ ವರ್ಗಾವಣೆ ಸೌಲಭ್ಯ: ದೇಶದ ಯಾವುದೇ ಅಂಚೆ ಕಚೇರಿಗೆ ಖಾತೆಯನ್ನು ಸುಲಭವಾಗಿ ವರ್ಗಾಯಿಸಬಹುದು.

ಎಂಐಎಸ್ ಬಡ್ಡಿಹಣದ ಮರುಹೂಡಿಕೆ ಮಾಡಿ…

ಅಂಚೆ ಕಚೇರಿ ಎಂಐಎಸ್ ಯೋಜನೆಯಲ್ಲಿ ಸಿಗುವ ಮಾಸಿಕ ಬಡ್ಡಿ ಹಣದಲ್ಲಿ ಸ್ವಲ್ಪ ಭಾಗವನ್ನೋ ಅಥವಾ ಪೂರ್ತಿ ಭಾಗವನ್ನೋ ಅಂಚೆ ಕಚೇರಿಯ ಆರ್‌ಡಿ (RD – Recurring Deposit) ಖಾತೆಗೆ ಮರುಹೂಡಿಕೆ ಮಾಡಿ ಹೆಚ್ಚುವರಿ ಲಾಭ ಪಡೆಯಬಹುದು. ಇದರಿಂದ ಉಳಿತಾಯದಲ್ಲಿ ಉಳಿತಾಯ ಸಾಧನೆ ಮಾಡಬಹುದು. ಆ ಆರ್​ಡಿ ಅಕೌಂಟ್ ಮೆಚ್ಯೂರ್ ಆದಾಗ, ಅದರ ಹಣ ಹಾಗೂ ಎಂಐಎಸ್​ನ ಮೂಲ ಠೇವಣಿ ಹಣ ಎರಡನ್ನೂ ಸೇರಿಸಿ ಹೊಸದಾಗಿ ಎಂಐಎಸ್ ಸ್ಕೀಮ್​ನಲ್ಲಿ ಡೆಪಾಸಿಟ್ ಇಡಬಹುದು.

ಇದನ್ನೂ ಓದಿ:ಹತ್ತು ವರ್ಷದಲ್ಲಿ 5 ಕೋಟಿ ರೂ ಗುರಿ ಮುಟ್ಟಲು ತಿಂಗಳಿಗೆ ಎಷ್ಟು ಹೂಡಿಕೆ ಬೇಕು? ಇಲ್ಲಿದೆ ಲೆಕ್ಕಾಚಾರ

ಎಂಐಎಸ್ ಯೋಜನೆ: ಅವಧಿಗೂ ಮುನ್ನ ಖಾತೆ ಬಂದ್ ಮಾಡುವುದು

  • ಖಾತೆ ತೆರೆದ 1 ವರ್ಷದವರೆಗೆ ಹಣ ಹಿಂಪಡೆಯಲು ಅವಕಾಶವಿಲ್ಲ.
  • 1 ರಿಂದ 3 ವರ್ಷಗಳ ಒಳಗೆ ಖಾತೆ ಬಂದ್ ಮಾಡಿದರೆ, ಠೇವಣಿ ಮೊತ್ತದಿಂದ 2% ಕಡಿತಗೊಳಿಸಲಾಗುತ್ತದೆ.
  • 3 ರಿಂದ 5 ವರ್ಷಗಳ ಒಳಗೆ ಖಾತೆ ಬಂದ್ ಮಾಡಿದರೆ, ಠೇವಣಿ ಮೊತ್ತದಿಂದ 1% ಕಡಿತಗೊಳಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕೃಷ್ಣ ಜನ್ಮಾಷ್ಟಮಿ; ಗೋಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಕೃಷ್ಣ ಜನ್ಮಾಷ್ಟಮಿ; ಗೋಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಲಕ್ಷ್ಮೇಶ್ವರ ತಾಲೂಕು ಘೋಷಣೆಯಾಗಿ 9 ವರ್ಷ ಕಳೆದರೂ ಜನರಿಗೆ ತಪ್ಪದ ಪರದಾಟ!
ಲಕ್ಷ್ಮೇಶ್ವರ ತಾಲೂಕು ಘೋಷಣೆಯಾಗಿ 9 ವರ್ಷ ಕಳೆದರೂ ಜನರಿಗೆ ತಪ್ಪದ ಪರದಾಟ!
15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಆಕಾಂಕ್ಷಿಗಳ ಪರದಾಟ
15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಆಕಾಂಕ್ಷಿಗಳ ಪರದಾಟ
4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!
4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!
ಮೈಸೂರು ದಸರಾ 2026: ಶ್ರೀಕಂಠ ಪಟ್ಟದ ಆನೆ, ಏಕಲವ್ಯ ನಿಶಾನೆ ಆನೆಯಾಗಿ ಆಯ್ಕೆ
ಮೈಸೂರು ದಸರಾ 2026: ಶ್ರೀಕಂಠ ಪಟ್ಟದ ಆನೆ, ಏಕಲವ್ಯ ನಿಶಾನೆ ಆನೆಯಾಗಿ ಆಯ್ಕೆ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಹೇಗಿದೆ ನೋಡಿ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಹೇಗಿದೆ ನೋಡಿ
ರೈತರಿಗೆ ವಿದ್ಯುತ್ ಕೊಡಲು ಸೋಲಾರ್ ಪ್ಲಾಟ್ ಸ್ಥಾಪಿಸುತ್ತಿದೆ ಎಂಇಐಎಲ್ ಕಂಪನ
ರೈತರಿಗೆ ವಿದ್ಯುತ್ ಕೊಡಲು ಸೋಲಾರ್ ಪ್ಲಾಟ್ ಸ್ಥಾಪಿಸುತ್ತಿದೆ ಎಂಇಐಎಲ್ ಕಂಪನ
ಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ಕೇಂದ್ರಗಳಲ್ಲಿನ ಮಹೋತ್ಸವದ ವಿವರ
ಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ಕೇಂದ್ರಗಳಲ್ಲಿನ ಮಹೋತ್ಸವದ ವಿವರ
ರಾಜ್​ಕುಮಾರ್​ಗೆ ಪೌರಾಣಿಕ ಕಥೆ ಹೇಳಿದ್ದ ನಾಗತಿಹಳ್ಳಿ ಚಂದ್ರಶೇಖರ್
ರಾಜ್​ಕುಮಾರ್​ಗೆ ಪೌರಾಣಿಕ ಕಥೆ ಹೇಳಿದ್ದ ನಾಗತಿಹಳ್ಳಿ ಚಂದ್ರಶೇಖರ್
ರಾಜಾಜಿನಗರ ಇಸ್ಕಾನ್ ದೇಗುಲದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ
ರಾಜಾಜಿನಗರ ಇಸ್ಕಾನ್ ದೇಗುಲದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ