AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Locker Rules: ಲಾಕರ್ ವಸ್ತುಗಳಿಗೆ ಹಾನಿಯಾದರೆ ಬ್ಯಾಂಕ್​ಗಳು ನೀಡಬೇಕು ಭಾರೀ ಪರಿಹಾರ; ಹೊಸ ನಿಯಮದ ಪೂರ್ಣ ವಿವರ ಇಲ್ಲಿದೆ

ಲಾಕರ್​ಗಳಿಗೆ ಹಾನಿಯಾದಲ್ಲಿ, ವಸ್ತುಗಳು ಕಳೆದುಹೋದಲ್ಲಿ ಬ್ಯಾಂಕ್​ಗಳು ಭಾರೀ ಮೊತ್ತದ ಪರಿಹಾರ ನೀಡಬೇಕಾಗುತ್ತದೆ. ಬ್ಯಾಂಕ್​ ಲಾಕರ್​ಗೆ ಸಂಬಂಧಿಸಿ ಆರ್​​ಬಿಐ ಪ್ರಕಟಿಸಿರುವ ಹೊಸ ನಿಯಮಗಳ ಪೂರ್ಣ ವಿವರ ಇಲ್ಲಿದೆ.

Bank Locker Rules: ಲಾಕರ್ ವಸ್ತುಗಳಿಗೆ ಹಾನಿಯಾದರೆ ಬ್ಯಾಂಕ್​ಗಳು ನೀಡಬೇಕು ಭಾರೀ ಪರಿಹಾರ; ಹೊಸ ನಿಯಮದ ಪೂರ್ಣ ವಿವರ ಇಲ್ಲಿದೆ
ಬ್ಯಾಂಕ್ ಲಾಕರ್ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on: Jan 06, 2023 | 1:07 PM

Share

ಅನೇಕ ಕಾರಣಗಳಿಗಾಗಿ ಜನ ಬ್ಯಾಂಕ್​ ಲಾಕರ್​ಗಳನ್ನು (Bank Locker) ಬಳಸಿಕೊಳ್ಳುತ್ತಾರೆ. ಅತ್ಯಮೂಲ್ಯ ದಾಖಲೆಗಳನ್ನು ಕಾಪಿಡುವುದಕ್ಕೆ, ಆಭರಣ, ಸಾಲದ ದಾಖಲೆಗಳು, ಆಸ್ತಿ ದಾಖಲೆಗಳು ಇತ್ಯಾದಿಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿಡಲು ಗ್ರಾಹಕರು ಬ್ಯಾಂಕ್ ಲಾಕರ್​ಗಳ ಸೇವೆ ಪಡೆಯುವುದು ಸಾಮಾನ್ಯ. ಲಾಕರ್​ನ ಗಾತ್ರಕ್ಕೆ ಅನುಗುಣವಾಗಿ ಬ್ಯಾಂಕ್​ಗಳು ವಾರ್ಷಿಕ ಬಾಡಿಗೆ ವಿಧಿಸುತ್ತವೆ. ಈ ಲಾಕರ್​ಗಳಿಗೆ ಸಂಬಂಧಿಸಿದ ನಿಯಮದಲ್ಲಿ ಹೊಸ ವರ್ಷದಿಂದ ಜಾರಿಗೆ ಬರುವಂತೆ ಆರ್​ಬಿಐ (RBI) ಕೆಲವು ಬದಲಾವಣೆಗಳನ್ನು ಮಾಡಿದೆ. ಇದರಂತೆ, ಬ್ಯಾಂಕ್​ಗಳು ಲಾಕರ್ ವಿಚಾರದಲ್ಲಿ ಗ್ರಾಹಕರ ಮೇಲೆ ನಿರಂಕುಶವಾಗಿ ವರ್ತಿಸುವಂತಿಲ್ಲ. ಅಲ್ಲದೆ, ಲಾಕರ್​ಗಳಿಗೆ ಹಾನಿಯಾದಲ್ಲಿ, ವಸ್ತುಗಳು ಕಳೆದುಹೋದಲ್ಲಿ ಬ್ಯಾಂಕ್​ಗಳು ಭಾರೀ ಮೊತ್ತದ ಪರಿಹಾರ ನೀಡಬೇಕಾಗುತ್ತದೆ. ಬ್ಯಾಂಕ್​ ಲಾಕರ್​ಗೆ ಸಂಬಂಧಿಸಿ ಆರ್​​ಬಿಐ ಪ್ರಕಟಿಸಿರುವ ಹೊಸ ನಿಯಮಗಳ ಪೂರ್ಣ ವಿವರ ಇಲ್ಲಿದೆ.

ಹೊಸ ಬ್ಯಾಂಕ್ ಲಾಕರ್ ನಿಯಮದಲ್ಲೇನಿದೆ?

ಬ್ಯಾಂಕ್ ಲಾಕರ್​ನಲ್ಲಿಟ್ಟಿರುವ ಮಹತ್ವದ ವಸ್ತು ಕಳೆದು ಹೋದರೆ ಅಂಥ ಗ್ರಾಹಕರಿಗೆ ಸಂಬಂಧಪಟ್ಟ ಬ್ಯಾಂಕ್, ಲಾಕರ್​ ಬಾಡಿಗೆ ಶುಲ್ಕದ 100 ಪಟ್ಟು ಪರಿಹಾರ ನೀಡಬೇಕು ಎಂದು ಪರಿಷ್ಕೃತ ನಿಯಮದಲ್ಲಿ ಹೇಳಲಾಗಿದೆ. ಬ್ಯಾಂಕ್ ಲಾಕರ್ ಸೇವೆ ಹೆಸರಿನಲ್ಲಿ ಬ್ಯಾಂಕುಗಳು ಗ್ರಾಹಕರಿಂದ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುವಂತಿಲ್ಲ. ಖಾಲಿ ಲಾಕರ್​​ಗಳು, ವೈಟಿಂಗ್ ಲಿಸ್ಟ್​​ನಲ್ಲಿರುವ ಲಾಕರ್​​ಗಳ ವಿವರವನ್ನು ಬ್ಯಾಂಕುಗಳು ಪ್ರಕಟಿಸಬೇಕು ಎಂದು ಆರ್​ಬಿಐ ಹೊಸ ನಿಯಮ ಉಲ್ಲೇಖಿಸಿದೆ.

ಬ್ಯಾಂಕ್ ಲಾಕರ್ ಸಂಬಂಧಿತ ವಿವರ ಪಾರದರ್ಶಕವಾಗಿರಬೇಕು

ಲಾಕರ್ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಬೇಕು ಎಂದು ಪರಿಷ್ಕೃತ ನಿಯಮದಲ್ಲಿ ಹೇಳಲಾಗಿದೆ. ಗ್ರಾಹಕರ ಅಮೂಲ್ಯವಾದ ವಸ್ತುಗಳು ಕಳೆದುಹೋಗದಂತೆ ನೋಡಿಕೊಳ್ಳಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರ್​ಬಿಐ ಹೇಳಿದೆ. ಖಾಲಿ ಲಾಕರ್​ಗಳು, ವೈಟಿಂಗ್ ಲಿಸ್ಟ್​ನಲ್ಲಿರುವ ಲಾಕರ್​ಗಳ ವಿವರವನ್ನು ಬ್ಯಾಂಕ್​ಗಳು ಪ್ರಕಟಿಸಬೇಕು. ಬ್ಯಾಂಕ್​ ಕಡೆಯಿಂದ ಗ್ರಾಹಕರಿಗೆ ಸೂಕ್ತ ವಿವರ ದೊರೆಯದಂಥ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಆರ್​ಬಿಐ ಹೇಳಿದೆ. ಲಾಕರ್​ ಕೊಠಡಿಗೆ ಭೇಟಿ ನೀಡುವ, ಅಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಹಾಗೂ ಅಲ್ಲಿನ ಪ್ರತಿಯೊಂದು ಚಟುವಟಿಕೆ ಮೇಲೂ ಸಿಸಿಟಿವಿ ಕ್ಯಾಮರಾ ಮೂಲಕ ನಿಗಾ ಇರಿಸಬೇಕು ಎಂದು ಹೊಸ ನಿಯಮದಲ್ಲಿ ಉಲ್ಲೇಖಿಸಲಾಗಿದೆ.

ಬ್ಯಾಂಕ್ ಲಾಕರ್ ಸೌಲಭ್ಯ ಪಡೆಯುವುದು ಹೇಗೆ?

ಲಾಕರ್ ತೆರೆಯಲು ಬಯಸುವ ಬ್ಯಾಂಕ್ ಶಾಖೆಗೆ ಅರ್ಜಿ ಸಲ್ಲಿಸಬೇಕು. ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ಆಧಾರದ ಮೇಲೆ ಲಾಕರ್ ಸೌಲಭ್ಯವನ್ನು ಒದಗಿಸಲಾಗುತ್ತದೆ. ನಿಮ್ಮ ಹೆಸರು ವೈಟಿಂಗ್ ಲಿಸ್ಟ್​​ನಲ್ಲಿದ್ದರೆ, ಈಗಾಗಲೇ ಲಾಕರ್ ಹೊಂದಿರುವ ಬಳಕೆದಾರರು ತೆರವು ಮಾಡಿದ ನಂತರ ನೀವು ಅರ್ಹರಾಗುತ್ತೀರಿ. ಇದಕ್ಕಾಗಿ, ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಹೊಂದಿರುವುದು ಅಗತ್ಯ. ವಾರ್ಷಿಕ ಬಾಡಿಗೆಯನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ವಿಧಿಸಲಾಗುತ್ತದೆ.

ಲಾಕರ್​​ ಸೌಲಭ್ಯಕ್ಕೆ ಬ್ಯಾಂಕ್​ಗಳು ವಿಧಿಸುವ ಶುಲ್ಕವೆಷ್ಟು?

ಲಾಕರ್​ ಸೌಲಭ್ಯಕ್ಕೆ ವಿಧಿಸುವ ಬಾಡಿಗೆ ಅಥವಾ ಶುಲ್ಕ ವಿವಿಧ ಬ್ಯಾಂಕ್​​ಗಳಲ್ಲಿ ವ್ಯತ್ಯಸ್ತವಾಗಿರುತ್ತವೆ. ಎಸ್​​ಬಿಐಯಲ್ಲಿ 2,000 ರೂ.ನಿಂದ 12,000 ರೂ.ವರೆಗೆ ಬಾಡಿಗೆ ಇದೆ. ಪಂಜಾಬ್ ನ್ಯಾಷನಲ್​ ಬ್ಯಾಂಕ್​​ನಲ್ಲಿ 1,250 ರೂ.ನಿಂದ 10,000 ರೂ.ವರೆಗೆ ಶುಲ್ಕ ವಿಧಿಸಲಾಗುತ್ತಿದೆ. ಕೆನರಾ ಬ್ಯಾಂಕ್​ನಲ್ಲಿ 2,000 ರೂ.ನಿಂದ 10,000 ರೂ, ಎಚ್​​ಡಿಎಫ್​ಸಿ ಬ್ಯಾಂಕ್​ನಲ್ಲಿ 3,000 ರೂ.ನಿಂದ 20,000 ರೂ, ಐಸಿಐಸಿಐ ಬ್ಯಾಂಕ್​​ನಲ್ಲಿ 1,200ರಿಂದ 5,000 ರೂ.ವರೆಗೆ ಬಾಡಿಗೆ ವಿಧಿಸಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ