AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೇರುಬಜಾರು ಕುಸಿತ; ಕೆಂಪು ಬಣ್ಣಕ್ಕೆ ತಿರುಗಿದ ಸೆನ್ಸೆಕ್ಸ್, ನಿಫ್ಟಿ ಸೇರಿ ಪ್ರಮುಖ ಸೂಚ್ಯಂಕಗಳು; ಏನು ಕಾರಣ?

Reasons for fall of Sensex, Nifty on Monday: ಭಾರತದ ಶೇರು ಮಾರುಕಟ್ಟೆ ಇವತ್ತು ಸೋಮವಾರ ಶೇ. 0.5ರಿಂದ 1.0ರಷ್ಟು ಕುಸಿತ ಕಂಡಿದೆ. ಸೆನ್ಸೆಕ್ಸ್ 700 ಅಂಕಗಳವರೆಗೆ, ನಿಫ್ಟಿ 180 ಅಂಕಗಳವರೆಗೆ ಇಳಿಕೆ ಕಂಡಿವೆ. ಇಂಧನ, ಯುಟಿಲಿಟಿ, ಕನ್ಸೂಮರ್ ಡುರಬಲ್ ಇತ್ಯಾದಿ ಕೆಲವನ್ನು ಹೊರತುಪಡಿಸಿ, ಹೆಚ್ಚಿನ ಸೂಚ್ಯಂಕಗಳು ಹಿನ್ನಡೆ ಕಂಡಿವೆ.

ಶೇರುಬಜಾರು ಕುಸಿತ; ಕೆಂಪು ಬಣ್ಣಕ್ಕೆ ತಿರುಗಿದ ಸೆನ್ಸೆಕ್ಸ್, ನಿಫ್ಟಿ ಸೇರಿ ಪ್ರಮುಖ ಸೂಚ್ಯಂಕಗಳು; ಏನು ಕಾರಣ?
ಶೇರು ಮಾರುಕಟ್ಟೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 20, 2026 | 12:16 PM

Share

ಮುಖ್ಯಾಂಶಗಳು

  • ಶೇರು ಮಾರುಕಟ್ಟೆ ಇವತ್ತು ಸೋಮವಾರ ಶೇ. 0.5ರಿಂದ 1.0ರಷ್ಟು ಕುಸಿತ ಕಂಡಿದೆ.
  • ಸೆನ್ಸೆಕ್ಸ್ 700 ಅಂಕಗಳವರೆಗೆ, ನಿಫ್ಟಿ 180 ಅಂಕಗಳವರೆಗೆ ಇಳಿಕೆ ಕಂಡಿವೆ.
  • ಇಂಧನ ಇತ್ಯಾದಿ ಕೆಲವನ್ನು ಹೊರತುಪಡಿಸಿ, ಹೆಚ್ಚಿನ ಸೂಚ್ಯಂಕಗಳು ಹಿನ್ನಡೆ ಕಂಡಿವೆ.

ನವದೆಹಲಿ, ಜುಲೈ 20: ಜಾಗತಿಕ ಮಾರುಕಟ್ಟೆಯ (Stock Market) ಮಂದಗತಿ ಮತ್ತು ಪ್ರಮುಖ ಬ್ಯಾಂಕಿಂಗ್ ಶೇರುಗಳಲ್ಲಿನ ಮಾರಾಟದ ಒತ್ತಡದಿಂದಾಗಿ ಭಾರತೀಯ ಶೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಭಾರಿ ಕುಸಿತ ಕಂಡಿವೆ. ಸೆನ್ಸೆಕ್ಸ್ ಸುಮಾರು 700 ಅಂಕಗಳವರೆಗೆ (ಗರಿಷ್ಠ 1%) ಇಳಿಕೆಯಾಗಿ 77,445 ಅಂಕಗಳ ಕನಿಷ್ಠ ಮಟ್ಟವನ್ನು ತಲುಪಿತು. ನಿಫ್ಟಿ 50 ಸೂಚ್ಯಂಕವು ಬೆಳಗಿನ ಒಂದು ಹಂತದಲ್ಲಿ 180ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡು 24,150 ಮಟ್ಟಕ್ಕೆ ಕುಸಿದಿತ್ತು. ಇಂಧನ, ಯುಟಿಲಿಟಿ, ಕನ್ಸೂಮರ್ ಡುರಬಲ್ ಕ್ಷೇತ್ರದ ಸೂಚ್ಯಂಕಗಳು ಪಾಲಿಸಿಟಿವ್ ಇವೆ. ಉಳಿದಂತೆ ಹೆಚ್ಚಿನ ಸೂಚ್ಯಂಕಗಳು ಕೆಂಪು ಬಣ್ಣಕ್ಕೆ ತಿರುಗಿವೆ.

ಜುಲೈ 20ರಂದು ಷೇರು ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣಗಳು

ಜಾಗತಿಕ ಮಾರುಕಟ್ಟೆಗಳ ಹಿನ್ನಡೆ

ಜಾಗತಿಕ ಶೇರು ಮಾರುಕಟ್ಟೆಗಳು (global markets) ಇಂದು ಕಳೆಗುಂದಿವೆ. ಇದು ಭಾರತದ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ.

ಬ್ಯಾಂಕಿಂಗ್ ಸೆಕ್ಟರ್ ಮೇಲೆ ಒತ್ತಡ

ಮೊದಲ ತ್ರೈಮಾಸಿಕ (Q1) ಆರ್ಥಿಕ ಫಲಿತಾಂಶಗಳ (Quarterly results) ಪ್ರಕಟಣೆಯ ನಂತರ ಪ್ರಮುಖ ಖಾಸಗಿ ಬ್ಯಾಂಕ್‌ಗಳ (ಎಚ್‌ಡಿಎಫ್‌ಸಿ, ಆಕ್ಸಿಸ್, ಕೊಟಕ್ ಬ್ಯಾಂಕ್) ಶೇರುಗಳ ಮೇಲೆ ಒತ್ತಡ ಬಿದ್ದಿದೆ. ಬಹಳಷ್ಟು ಹೂಡಿಕೆದಾರರು ಬ್ಯಾಂಕಿಂಗ್ ಶೇರುಗಳಿಂದ ಪ್ರಾಫಿಟ್ ಬುಕಿಂಗ್ ಮಾಡಿದ್ದಾರೆ.

ತೈಲ ಬೆಲೆ ಏರಿಕೆ

ಕಚ್ಚಾ ತೈಲ ಬೆಲೆ ಒಂದು ಬ್ಯಾರಲ್​ಗೆ 90 ಡಾಲರ್​ಗಿಂತ ಹೆಚ್ಚು ಬೆಲೆಗೆ ಏರಿದೆ. ಹಾರ್ಮುಜ್ ಜಲಸಂಧಿಯಲ್ಲಿ ಬಿಕ್ಕಟ್ಟು ಶಮನವಾಗದ ಹಿನ್ನೆಲೆಯಲ್ಲಿ ತೈಲ ಬೆಲೆ ಮತ್ತಷ್ಟು ಏರುವ ಸಾಧ್ಯತೆ ಇದೆ. ಇದು ಮಾರುಕಟ್ಟೆಯ ಉತ್ಸಾಹ ಕುಂದಿಸಿರಬಹುದು.

ರುಪಾಯಿ ಮೌಲ್ಯ ಕುಸಿತ

ಡಾಲರ್ ಎದುರು ರುಪಾಯಿ ದುರ್ಬಲ ಪ್ರದರ್ಶನ ಮುಂದುವರಿದಿದೆ. ಸೋಮವಾರ ರುಪಾಯಿ ಮೌಲ್ಯ ಪ್ರತೀ ಡಾಲರ್​ಗೆ 96.4575 ಮಟ್ಟಕ್ಕೆ ಕುಸಿದಿದೆ. ಇದು ರುಪಾಯಿಯ ಸಾರ್ವಕಾಲಿಕ ಕೆಳಮಟ್ಟವಾದ 96.9650ಗೆ ಬಹಳ ಸಮೀಪ ಇದೆ. ರುಪಾಯಿ ಈ ಕನಿಷ್ಠ ಮಟ್ಟವನ್ನೂ ದಾಟಿ ಬಿಡುವ ಸಾಧ್ಯತೆ ಇದೆ.

ಎಫ್​ಪಿಐಗಳಿಂದ ಮಾರಾಟ ಹೆಚ್ಚಳ

ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆದಾರರು ಷೇರುಗಳ ಮಾರಾಟ ಮಾಡುತ್ತಿರುವ ಟ್ರೆಂಡ್ ಮುಂದುವರಿದಿದೆ. ಕಳೆದ ವಾರ (ಜುಲೈ 13-17) ಕ್ಯಾಷ್ ಸೆಗ್ಮೆಂಟ್​ನಲ್ಲಿ 9,120 ಕೋಟಿ ರೂ ಮೌಲ್ಯದ ಷೇರುಗಳನ್ನು ಇವರು ಮಾರಿ ಕೈತೊಳೆದುಕೊಂಡಿದ್ದಾರೆ.

ನಿಫ್ಟಿ ತಾಂತ್ರಿಕ ಕಾರಣ

ಪರಿಣಿತರ ಪ್ರಕಾರ ನಿಫ್ಟಿ50 ಸೂಚ್ಯಂಕವು 24,200 ಅಂಕಗಳ ಮಟ್ಟಕ್ಕಿಂತ ಕೆಳಗೆ ಹೋದರೆ ಬಹಳ ಒತ್ತಡಕ್ಕೆ ಸಿಲುಕಬೇಕಾಗುತ್ತದೆ. 23,800 ಅಂಕಗಳವರೆಗೆ ಅದು ಕುಸಿಯುವ ಅಪಾಯ ಇರುತ್ತದೆ. ಸದ್ಯ ನಿಫ್ಟಿ 24,181 ಅಂಕಗಳ ಮಟ್ಟದಲ್ಲಿದೆ.

ಇದನ್ನೂ ಓದಿ: ಷೇರುಬಜಾರಿನಲ್ಲಿ ಈ ವಾರ ಕಲರವ; 7 ಹೊಸ ಐಪಿಒಗಳು ಶುರು; 5 ಷೇರುಗಳ ಲಿಸ್ಟಿಂಗ್

ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸ್ಥಿರತೆ: ಪ್ರಮುಖ ಸೂಚ್ಯಂಕಗಳು ಕುಸಿದರೂ, ಮಿಡ್‌ಕ್ಯಾಪ್ 100 ಸೂಚ್ಯಂಕ 0.20% ಹಾಗೂ ಸ್ಮಾಲ್‌ಕ್ಯಾಪ್ 100 ಸೂಚ್ಯಂಕ 0.30% ನಷ್ಟು ಏರಿಕೆ ಕಂಡು ಚೇತರಿಕೆ ಕಾಯ್ದುಕೊಂಡವು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:12 pm, Mon, 20 July 26

Follow Us
ಯುವ ಜನತೆಗೆ ಸಿಎಂ ಡಿ.ಕೆ.ಶಿವಕುಮಾರ್ ಬಂಪರ್ ಕೊಡುಗೆ
ಯುವ ಜನತೆಗೆ ಸಿಎಂ ಡಿ.ಕೆ.ಶಿವಕುಮಾರ್ ಬಂಪರ್ ಕೊಡುಗೆ
ಯುವಶಕ್ತಿ, ಬಾಹ್ಯಾಕಾಶ ಸಾಧನೆ, ದೇಶದ ಆರ್ಥಿಕ ಪ್ರಗತಿ ಶ್ಲಾಘಿಸಿದ ಪ್ರಧಾನಿ
ಯುವಶಕ್ತಿ, ಬಾಹ್ಯಾಕಾಶ ಸಾಧನೆ, ದೇಶದ ಆರ್ಥಿಕ ಪ್ರಗತಿ ಶ್ಲಾಘಿಸಿದ ಪ್ರಧಾನಿ
ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ
ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ
82 ಸಾವಿರ ಜನರ ಮಧ್ಯೆ ಕುಳಿತು ಫಿಫಾ ವರ್ಲ್ಡ್​​​ಕಪ್ ಫೈನಲ್ ವೀಕ್ಷಿಸಿದ ಮೋಹನ
82 ಸಾವಿರ ಜನರ ಮಧ್ಯೆ ಕುಳಿತು ಫಿಫಾ ವರ್ಲ್ಡ್​​​ಕಪ್ ಫೈನಲ್ ವೀಕ್ಷಿಸಿದ ಮೋಹನ
ರೇವಣ್ಣ ಮನೆ ಬಳಿ ಮಳೆಯ ಮಧ್ಯೆಯೂ ಚೆನ್ನಮ್ಮ ಅಂತಿಮ ದರ್ಶನಕ್ಕೆ ಬಂದ ಜನ!
ರೇವಣ್ಣ ಮನೆ ಬಳಿ ಮಳೆಯ ಮಧ್ಯೆಯೂ ಚೆನ್ನಮ್ಮ ಅಂತಿಮ ದರ್ಶನಕ್ಕೆ ಬಂದ ಜನ!
ಇಂದು ಮಧ್ಯಾಹ್ನ ಚೆನ್ನಮ್ಮ ಅಂತ್ಯಕ್ರಿಯೆ: ಪ್ರಮುಖ ಬಿಜೆಪಿ ನಾಯಕರು ಭಾಗಿ
ಇಂದು ಮಧ್ಯಾಹ್ನ ಚೆನ್ನಮ್ಮ ಅಂತ್ಯಕ್ರಿಯೆ: ಪ್ರಮುಖ ಬಿಜೆಪಿ ನಾಯಕರು ಭಾಗಿ
ಇಂದು ಸ್ಕಂದ ಷಷ್ಠಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಸ್ಕಂದ ಷಷ್ಠಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಕಾಕ್ರೋಚ್ ಜನತಾ ಪಕ್ಷದ 'ಚಲೋ ಸಂಸತ್' ಮೆರವಣಿಗೆಗೆ ದೆಹಲಿ ಪೊಲೀಸರ ನಿರ್ಬಂಧ!
ಕಾಕ್ರೋಚ್ ಜನತಾ ಪಕ್ಷದ 'ಚಲೋ ಸಂಸತ್' ಮೆರವಣಿಗೆಗೆ ದೆಹಲಿ ಪೊಲೀಸರ ನಿರ್ಬಂಧ!
ದೇವೇಗೌಡರ ಪತ್ನಿ ಚೆನ್ನಮ್ಮ ಅಂತಿಮ ದರ್ಶನ ಪಡೆದ ಡಾಲಿ, ದೊಡ್ಡಣ್ಣ: ವಿಡಿಯೋ
ದೇವೇಗೌಡರ ಪತ್ನಿ ಚೆನ್ನಮ್ಮ ಅಂತಿಮ ದರ್ಶನ ಪಡೆದ ಡಾಲಿ, ದೊಡ್ಡಣ್ಣ: ವಿಡಿಯೋ
ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಏಕೆ?
ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಏಕೆ?