Sign In

By signing in or creating an account, you agree with Associated Broadcasting Company's Terms & Conditions and Privacy Policy.

Big Layoffs: ಕ್ರೆಡಿಟ್ ಸ್ವೀಸ್ ಖರೀದಿಸಿದ ಯುಬಿಎಸ್ ಬ್ಯಾಂಕ್​ನಿಂದ 35,000 ಉದ್ಯೋಗಿಗಳ ಲೇ ಆಫ್ ಸಾಧ್ಯತೆ

UBS Plans To Cut 35,000 Jobs: ಸ್ವಿಟ್ಜರ್​ಲ್ಯಾಂಡ್​ನ ಕ್ರೆಡಿಟ್ ಸ್ವೀಸ್ ಅನ್ನು ಖರೀದಿಸಿದ ಬಳಿಕ ಯುಬಿಎಸ್ ಗ್ರೂಪ್ ಲೇ ಆಫ್ ಆಲೋಚನೆ ಮಾಡುತ್ತಿದ್ದು, ವರದಿಗಳ ಪ್ರಕಾರ 35,000 ಮಂದಿಗೆ ಕೆಲಸ ಹೋಗುವ ಸಾಧ್ಯತೆ ಇದೆ.

Big Layoffs: ಕ್ರೆಡಿಟ್ ಸ್ವೀಸ್ ಖರೀದಿಸಿದ ಯುಬಿಎಸ್ ಬ್ಯಾಂಕ್​ನಿಂದ 35,000 ಉದ್ಯೋಗಿಗಳ ಲೇ ಆಫ್ ಸಾಧ್ಯತೆ
ಕ್ರೆಡಿಟ್ ಸ್ವೀಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 28, 2023 | 1:47 PM

ಸ್ವಿಟ್ಜರ್​ಲ್ಯಾಂಡ್: ಅಮೇಜಾನ್, ಗೂಗಲ್ ಇತ್ಯಾದಿ ಕಂಪನಿಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಲೇ ಆಫ್ ಮಾಡುತ್ತಿದೆ ಸ್ವಿಟ್ಜರ್​ಲ್ಯಾಂಡ್​ನ ಯುಬಿಎಸ್ ಬ್ಯಾಂಕ್. ದಿವಾಳಿಯಾಗಿದ್ದ ಕ್ರೆಡಿಟ್ ಸ್ವೀಸ್ ಬ್ಯಾಂಕನ್ನು ಖರೀದಿಸಿರುವ ಯುಬಿಎಸ್​ಗೆ ಈಗ ಲೇ ಆಫ್ (Layoffs) ಕ್ರಮ ಅನಿವಾರ್ಯ ಎನ್ನಲಾಗುತ್ತಿದೆ. ಇವೆರಡು ಬೃಹತ್ ಬ್ಯಾಂಕುಗಳು ವಿಲೀನಗೊಳ್ಳುವಾಗಲೇ ಬಹಳಷ್ಟು ವಿಶ್ಲೇಷಕರು ದೊಡ್ಡ ಮಟ್ಟದಲ್ಲಿ ಉದ್ಯೋಗನಷ್ಟವಾಗುವ ಸಾಧ್ಯತೆಯನ್ನು ಅಂದಾಜಿಸಿದ್ದರು. ಬ್ಲೂಮ್​ಬರ್ಗ್ ನ್ಯೂಸ್ ವರದಿ ಪ್ರಕಾರ ಯುಬಿಎಸ್ ಗ್ರೂಪ್ (UBS Group) 35,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಬಹುದು ಎಂದಿದೆ.

ಈ ಎರಡು ಬ್ಯಾಂಕುಗಳ ಕಾರ್ಯವ್ಯಾಪ್ತಿ ಒಂದಕ್ಕೊಂದು ಜೋಡಿತಗೊಳ್ಳುವುದರಿಂದ ಉದ್ಯೋಗಕಡಿತ ಅನಿವಾರ್ಯ ಎಂಬುದು ವಿಶ್ಲೇಷಕರ ಅನಿಸಿಕೆ. ಕ್ರೆಡಿಟ್ ಸ್ವೀಸ್​ನಲ್ಲಿ 45,000 ಉದ್ಯೋಗಿಗಳಿದ್ದಾರೆ. ಯುಬಿಎಸ್ ಮತ್ತು ಕ್ರೆಡಿಟ್ ಸ್ವೀಸ್ ಎರಡೂ ಸೇರಿ 1,20,00 ಮಂದಿ ಉದ್ಯೋಗಿಗಳಾಗುತ್ತಾರೆ. ಇದರಲ್ಲಿ ಶೇ. 30ರಷ್ಟು ಉದ್ಯೋಗಕಡಿತ ಮಾಡುವುದು ಯುಬಿಎಸ್​ನ ಆಲೋಚನೆ. ಅದರ ಪ್ರಕಾರ ಒಟ್ಟು 35,000 ಮಂದಿಗೆ ಕೆಲಸ ಹೋಗುವ ಸಾಧ್ಯತೆ ಇದೆ. ವರದಿ ಪ್ರಕಾರ, ಕ್ರೆಡಿಟ್ ಸ್ವೀಸ್​ನ 45,000 ಮಂದಿ ಪೈಕಿ ಅರ್ಧದಷ್ಟು ಉದ್ಯೋಗಿಗಳಿಗೆ ಗೇಟ್​ಪಾಸ್ ಕೊಡುವ ಸಾಧ್ಯತೆ ಇದೆ.

ಇದನ್ನೂ ಓದಿ:

ಲಂಡನ್, ನ್ಯೂಯಾರ್ಕ್, ಹಾಗೂ ಏಷ್ಯಾದ ಕೆಲ ಭಾಗಗಳಲ್ಲಿ ಕ್ರೆಡಿಟ್ ಸ್ವೀಸ್​ನ ಬ್ಯಾಂಕ್ ಉದ್ಯೋಗಿಗಳು, ಟ್ರೇಡರ್​ಗಳು ಮತ್ತು ಸಪೋರ್ಟಿಂಗ್ ಸಿಬ್ಬಂದಿ ಅವರಿಗೆ ಹೆಚ್ಚು ಪರಿಣಾಮವಾಗುವ ಸಾಧ್ಯತೆ ಇದೆ ಎಂದು ಬ್ಲೂಂಬರ್ಗ್ ನ್ಯೂಸ್ ವರದಿಯಲ್ಲಿ ತಿಳಿಸಲಾಗಿದೆ.

ಕ್ರೆಡಿಟ್ ಸ್ವೀಸ್ ಸ್ವಾಧೀನದ ಬಳಿಕ ಉದ್ಯೋಗಕಡಿತದ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು ಎಂದು ಯುಬಿಎಸ್ ಮುಖ್ಯಸ್ಥ ಸೆರ್ಗಿಯೋ ಎರ್ಮೋಟ್ಟಿ ಅವರು ಜೂನ್ ಮೊದಲ ವಾರದಲ್ಲೇ ಸುಳಿವು ನೀಡಿದ್ದರು. ಆದರೆ, ಯಾವ್ಯಾವಾಗ, ಎಲ್ಲೆಲ್ಲಿ ಉದ್ಯೋಗಕಡಿತ ಎಂಬ ವಿವರ ಲಭ್ಯವಾಗಿಲ್ಲ. ಯುಬಿಎಸ್ ಅಥವಾ ಕ್ರೆಡಿಟ್ ಸ್ವೀಸ್ ವತಿಯಿಂದ ಈ ಬಗ್ಗೆ ಮತ್ತೆ ಸ್ಪಷ್ಟನೆ ಬಂದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ