AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಮಿನೇಷನ್​​ನಲ್ಲಿ ಅರವಿಂದ್ ಬಿಟ್ಟು ಶುಭಾ ಅವರನ್ನು ದಿವ್ಯಾ ಉರುಡುಗ ಸೇವ್​ ಮಾಡಿದ್ದೇಕೆ?

ದಿವ್ಯಾ ಉರುಡುಗ ಮನೆಯ ಕ್ಯಾಪ್ಟನ್​. ಅರವಿಂದ್ ಅವರು ನೇರವಾಗಿ ನಾಮಿನೇಟ್​ ಆಗಿದ್ದಾರೆ. ಈ ಇಬ್ಬರು ಸದಸ್ಯರನ್ನು ಬಿಟ್ಟು ಉಳಿದವರ ಹೆಸರನ್ನು ಆಯ್ಕೆ ಮಾಡಬೇಕಿತ್ತು.

ನಾಮಿನೇಷನ್​​ನಲ್ಲಿ ಅರವಿಂದ್ ಬಿಟ್ಟು ಶುಭಾ ಅವರನ್ನು ದಿವ್ಯಾ ಉರುಡುಗ ಸೇವ್​ ಮಾಡಿದ್ದೇಕೆ?
ಅರವಿಂದ್​ ಕೆಪಿ, ದಿವ್ಯಾ ಉರುಡುಗ
TV9 Web
| Updated By: ಮದನ್​ ಕುಮಾರ್​|

Updated on: Jul 06, 2021 | 7:05 AM

Share

ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಎರಡನೇ ಇನ್ನಿಂಗ್ಸ್​ನಲ್ಲಿ ಮೊದಲ ಎಲಿಮಿನೇಷನ್​​ ನಡೆದಿದೆ. ಇದಾದ ಮರುದಿನವೇ ಎರಡನೇ ಎಲಿಮಿನೇಷನ್​ಗೆ ನಾಮಿನೇಷನ್​​​ ನಡೆದಿದೆ. ಮನೆಯ ಬಹುತೇಕ ಸದಸ್ಯರು ಈ ವಾರ ಎಲಿಮಿನೇಷನ್​ಗೆ ನಾಮಿನೇಟ್​ ಆಗಿದ್ದಾರೆ. ಈ ಮೂಲಕ ಎಲ್ಲಾ ಸ್ಪರ್ಧಿಗಳು ಅತ್ಯುತ್ತಮವಾಗಿ ಪರ್ಫಾರ್ಮೆನ್ಸ್​ ಮಾಡೋದು ಅನಿವಾರ್ಯವಾಗಿದೆ.  

ದಿವ್ಯಾ ಉರುಡುಗ ಮನೆಯ ಕ್ಯಾಪ್ಟನ್​. ಅರವಿಂದ್ ಅವರು ನೇರವಾಗಿ ನಾಮಿನೇಟ್​ ಆಗಿದ್ದಾರೆ. ಈ ಇಬ್ಬರು ಸದಸ್ಯರನ್ನು ಬಿಟ್ಟು ಉಳಿದವರ ಹೆಸರನ್ನು ಆಯ್ಕೆ ಮಾಡಬೇಕಿತ್ತು. ನಾಮಿನೇಷನ್​ ವೇಳೆ ಚಕ್ರವರ್ತಿ ಚಂದ್ರಚೂಡ್​ಗೆ ಹೆಚ್ಚು ಮತಗಳು ಬಿದ್ದವು. ಚಕ್ರವರ್ತಿ ಮನೆಯ ವಾತಾವರಣ ಹಾಳು ಮಾಡುತ್ತಿದ್ದಾರೆ, ಅವರಲ್ಲಿ ಕೋಪ ಜಾಸ್ತಿ ಎಂಬಿತ್ಯಾದಿ ಆರೋಪಗಳು ಬಂದವು.

ಮನೆಯಲ್ಲಿ ಸ್ಟ್ರಾಂಗ್​ ಸ್ಪರ್ಧಿ ಎನಿಸಿಕೊಂಡಿರುವ ಮಂಜು ಪಾವಗಡ ನಂತರದ ಸ್ಥಾನ ಪಡೆದುಕೊಂಡರು. ಅವರು ತಮ್ಮದೇ ನಿಯಮ ಮಾಡಿಕೊಂಡು ಆಡುತ್ತಿದ್ದಾರೆ, ಗುಂಪುಗಾರಿಕೆ ಹುಟ್ಟು ಹಾಕುತ್ತಿದ್ದಾರೆ, ಸ್ಟ್ರಾಂಗ್​ ಪ್ಲೇಯರ್​ ಎಂಬಿತ್ಯಾದಿ ಆರೋಪಗಳು ಅವರ ವಿರುದ್ಧ ಕೇಳಿ ಬಂದವು.

ಪ್ರಿಯಾಂಕಾ ತಿಮ್ಮೇಶ್ ತುಂಬಾ ಅವಕಾಶವಾದಿ, ಅವರು ಚೆನ್ನಾಗಿ ಆಡಬಹುದಿತ್ತು ಎಂದು ಕೆಲವರು ನಾಮಿನೇಟ್​ ಮಾಡಿದರು. ಪ್ರಶಾಂತ್​ ಸಂಬರಗಿ, ಶುಭಾ ಪೂಂಜಾ, ರಘು, ಶಮಂತ್, ದಿವ್ಯಾ ಸುರೇಶ್​, ವೈಷ್ಣವಿ ಅವರ ಹೆಸರು ನಾಮಿನೇಷನ್​ ಪಟ್ಟಿ ಸೇರಿಕೊಂಡವು.

ಕ್ಯಾಪ್ಟನ್​ ಆದ ಕಾರಣ ದಿವ್ಯಾ ಉರುಡುಗ ಅವರಿಗೆ ಒಬ್ಬರನ್ನು ಸೇವ್​ ಮಾಡೋಕೆ ಅವಕಾಶ ನೀಡಲಾಯಿತು. ಈ ವೇಳೆ ದಿವ್ಯಾ, ‘ಶುಭಾ ಪೂಂಜಾ ಸೇವ್​ ಮಾಡ್ತೀನಿ. ಅವರು ನನಗೆ ವೈಯಕ್ತಿಕವಾಗಿ ಇಷ್ಟ. ಅವರು ಇನ್ನೂ ಮುಂದೆ ಹೋಗಬೇಕು ಅಂತ ನಂಗೆ ಇಷ್ಟ’ ಎಂದು ಸೇವ್​ ಮಾಡಿದರು. ಅರವಿಂದ್​ ನೇರವಾಗಿ ನಾಮಿನೇಟ್​ ಆದ್ದರಿಂದ ಅವರನ್ನು ಸೇವ್​ ಮಾಡುವ ಅವಕಾಶವನ್ನು ಬಿಗ್​ ಬಾಸ್ ನೀಡಿಲ್ಲ.

ಹೀಗಾಗಿ ಈ ವಾರ ಚಕ್ರವರ್ತಿ ಚಂದ್ರಚೂಡ್​, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್​, ದಿವ್ಯಾ ಸುರೇಶ್​, ಪ್ರಶಾಂತ್ ಸಂಬರಗಿ​, ರಘು ಗೌಡ, ಶಮಂತ್ ಬ್ರೋ ಗೌಡ,​ ವೈಷ್ಣವಿ, ಅರವಿಂದ್ ಕೆ.ಪಿ ಮೇಲೆ ಎಲಿಮಿನೇಷನ್​ ತೂಗುಗತ್ತಿ ತೂಗುತ್ತಿದೆ.

ಇದನ್ನೂ ಓದಿ:

‘ಮಂಜು ಬೆಂಬಲಿಗರ ವೋಟ್​ ನಂಗೆ ಸಿಗಲ್ಲ’; ದಿವ್ಯಾ ಸುರೇಶ್​ ಲೆಕ್ಕಾಚಾರ ಉಲ್ಟಾಪಲ್ಟಾ

Divya Uruduga: ಕನ್ನಡ ಬಿಗ್​ ಬಾಸ್​ ಸೀಸನ್​ 8ರಲ್ಲಿ ಹೊಸ ದಾಖಲೆ ಬರೆದ ದಿವ್ಯಾ ಉರುಡುಗ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ