AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kannada Bigg Boss Elimination: ಬಿಗ್ ಬಾಸ್ ಮನೆಯಿಂದ ಗಾಯಕ ವಿಶ್ವನಾಥ್ ಔಟ್? ಕಿರಿಯ ಸ್ಪರ್ಧಿಯ ಆಟ ಅಂತ್ಯ

Bigg Boss Kannada Elimination: ಕಳೆದ ವಾರ ಅದೃಷ್ಟದ ಬಲದಿಂದ ಬಚಾವ್ ಆಗಿದ್ದ ಶಮಂತ್ ಬ್ರೋ ಗೌಡ ಅವರು ಈ ವಾರ ಔಟ್ ಆಗುವ ಸಾಧ್ಯತೆ ದಟ್ಟವಾಗಿತ್ತು. ಆದರೆ ಅಂತಿಮವಾಗಿ ಧಾರವಾಡದ ಗಾಯಕ ವಿಶ್ವನಾಥ್ ಅವರ ಬಿಗ್ ಬಾಸ್ ಜರ್ನಿ ಅಂತ್ಯವಾಗಿದೆ.

Kannada Bigg Boss Elimination: ಬಿಗ್ ಬಾಸ್ ಮನೆಯಿಂದ ಗಾಯಕ ವಿಶ್ವನಾಥ್ ಔಟ್? ಕಿರಿಯ ಸ್ಪರ್ಧಿಯ ಆಟ ಅಂತ್ಯ
ಬಿಗ್​ ಬಾಸ್​ನಲ್ಲಿ ಗಾಯಕ ವಿಶ್ವನಾಥ್​
ಮದನ್​ ಕುಮಾರ್​
| Edited By: |

Updated on:Apr 18, 2021 | 2:52 PM

Share

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಸ್ಪರ್ಧಿಸುತ್ತಿರುವ ಅತಿ ಕಿರಿಯ ಸ್ಪರ್ಧಿ ಎಂಬ ಖ್ಯಾತಿಗೆ ವಿಶ್ವನಾಥ್​ ಪಾತ್ರರಾಗಿದ್ದರು. ಆದರೆ ಅವರಿಗೆ ಈಗ ಅದೃಷ್ಟ ಕೈಕೊಟ್ಟಿದೆ. ಏಳನೇ ವಾರದ ಎಲಿಮಿನೇಷನ್​ನಲ್ಲಿ ಅವರು ಮನೆಯಿಂದ ಹೊರಬರಬೇಕಾಗಿದೆ. ಕ್ಯಾಪ್ಟನ್​ ಆಗಿದ್ದ ಒಂದು ವಾರ ಹೊರತುಪಡಿಸಿ ಮತ್ತೆಲ್ಲ ವಾರದಲ್ಲೂ ವಿಶ್ವನಾಥ್​ ನಾಮಿನೇಟ್​ ಆಗಿದ್ದರು. ಆದರೂ ಏಳು ವಾರಗಳ ಕಾಲ ಎಲ್ಲರಿಗೂ ಪೈಪೋಟಿ ನೀಡಿದ ಅವರು ಈಗ ದೊಡ್ಮನೆಯಿಂದ ಹೊರಬಂದಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಈ ವಾರ ಶಮಂತ್​ ಬ್ರೊ ಗೌಡ ಕೂಡ ಮನೆಯಿಂದ ಹೊರಗೆ ಹೋಗಬಹುದು ಎಂದು ಊಹಿಸಲಾಗಿತ್ತು. ಯಾಕೆಂದರೆ, ಅವರು ಪ್ರತಿ ವಾರವೂ ಕಡಿಮೆ ಓಟ್​ ಪಡೆದುಕೊಳ್ಳುತ್ತಿದ್ದರು. ಕಳೆದ ವಾರ ಅದೃಷ್ಟದ ಬಲದಿಂದ ಬಚಾವ್​ ಆಗಿದ್ದರು. ಹಾಗಾಗಿ ಅವರು ಈ ವಾರ ಔಟ್​ ಆಗುವ ಸಾಧ್ಯತೆ ದಟ್ಟವಾಗಿತ್ತು. ಆದರೆ ಅಂತಿಮವಾಗಿ ಧಾರವಾಡದ ಗಾಯಕ ವಿಶ್ವನಾಥ್​ ಅವರ ಬಿಗ್​ ಬಾಸ್​ ಜರ್ನಿ ಅಂತ್ಯವಾಗಿದೆ.

ಇಷ್ಟು ದಿನಗಳ ಕಾಲ ಬಿಗ್​ ಬಾಸ್​ ಮನೆಯಲ್ಲಿ ಇದ್ದ ವಿಶ್ವ ಅವರು ಯಾರ ವಿರೋಧವನ್ನೂ ಕಟ್ಟಿಕೊಂಡಿರಲಿಲ್ಲ. ಎಲ್ಲರ ಜೊತೆಗೂ ಚೆನ್ನಾಗಿ ಬೆರೆಯುತ್ತಿದ್ದರು. ಅಣ್ಣ-ಅಕ್ಕ ಎಂದು ಮನೆಯ ಸದಸ್ಯರ ವಿಶ್ವಾಸ ಗಳಿಸಿಕೊಂಡಿದ್ದರು. ಟಾಸ್ಕ್​ನಲ್ಲಿಯೂ ಚೆನ್ನಾಗಿ ಪರ್ಫಾಮ್​ ಮಾಡುವ ಮೂಲಕ ಒಂದು ವಾರ ಕ್ಯಾಪ್ಟನ್​ ಕೂಡ ಆಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಕೊಂಚ ಡಲ್​ ಆದಂತೆ ಕಂಡರು. ಹೆಚ್ಚು ಉತ್ಸಾಹ ಅವರಲ್ಲಿ ಕಾಣಿಸಲಿಲ್ಲ. ಅದೇ ಅವರಿಗೆ ಮುಳುವಾಯಿತೇನೋ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಶ್ವನಾಥ್​ ಒರ್ವ ಒಳ್ಳೆಯ ಸಿಂಗರ್​. ಆದರೆ ಬಿಗ್​ ಬಾಸ್​ ಮನೆಯಲ್ಲಿ ಅವರು ತಮ್ಮ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡಿಲ್ಲ ಎನ್ನಬಹುದು. ಹಾಡುಗಾರಿಕೆಯ ಸಾಮರ್ಥ್ಯವನ್ನು ಅವರು ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳಬಹುದಿತ್ತು. ಆ ಮೂಲಕ ಮನೆಯ ಸದಸ್ಯರಿಗೆ ಮತ್ತು ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದಿದ್ದರೆ ಹೆಚ್ಚಿನ ವೋಟ್​ ಪಡೆಯಬಹುದಿತ್ತು. ಆದರೆ ಆ ಅವಕಾಶವನ್ನು ವಿಶ್ವನಾಥ್​ ಕೈ ಚೆಲ್ಲಿದ್ದಾರೆ.

ಧನುಶ್ರೀ, ನಿರ್ಮಲಾ ಚೆನ್ನಪ್ಪ, ಗೀತಾ ಭಾರತಿ ಭಟ್​, ಚಂದ್ರಕಲಾ ಮೋಹನ್​, ಶಂಕರ್​ ಅಶ್ವತ್ಥ್​ ಮತ್ತು ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ನೀಡಿದ್ದ ವೈಜಯಂತಿ ಅಡಿಗ ಬಳಿಕ 7ನೇ ಸ್ಪರ್ಧಿಯಾಗಿ ವಿಶ್ವನಾಥ್​ ಎಲಿಮಿನೇಟ್​ ಆಗಿದ್ದಾರೆ. ಇನ್ನುಳಿದ ಸದಸ್ಯರ ನಡುವೆ ಪೈಪೋಟಿ ಮುಂದುವರಿದಿದೆ.

ಇದನ್ನೂ ಓದಿ: Bigg Boss Kannada: ಶುಭಾ ಪೂಂಜಾ ಬಾಯ್​ಫ್ರೆಂಡ್​ ಧ್ವನಿ ಕೇಳಿ ಗಳಗಳನೆ ಅತ್ತ ವಿಶ್ವನಾಥ್​! ಇದೆಂಥಾ ಕನೆಕ್ಷನ್​?

Published On - 2:17 pm, Sun, 18 April 21

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್