Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ತಪ್ಪು ನಡೆದರೆ ಮಗಳ ಕೆನ್ನೆಗೆ ಹೊಡೆಯಲು ಹಿಂದೆಮುಂದೆ ನೋಡಲ್ಲ ಎಂದಿದ್ದ ಸಾರಾ ತಾಯಿ

ಅಮೃತಾಗಿಂತ ಮುಂಚೆ ಸೈಫ್‌ ಅನೇಕರ ಜೊತೆ ಸುತ್ತಾಟ ನಡೆಸಿದ್ದರು. ಅಮೃತಾ ಅವರನ್ನು ಭೇಟಿಯಾದ ನಂತರ ಅವರು ನೇರವಾಗಿ ಮದುವೆಯಾಗಲು ನಿರ್ಧರಿಸಿದರು. ಇಬ್ಬರೂ 1991ರಲ್ಲಿ ಗುಟ್ಟಾಗಿ ಮದುವೆಯಾದರು.

ಈ ತಪ್ಪು ನಡೆದರೆ ಮಗಳ ಕೆನ್ನೆಗೆ ಹೊಡೆಯಲು ಹಿಂದೆಮುಂದೆ ನೋಡಲ್ಲ ಎಂದಿದ್ದ ಸಾರಾ ತಾಯಿ
ಅಮೃತಾ-ಸಾರಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Nov 24, 2023 | 12:31 PM

ನಟಿ ಸಾರಾ ಅಲಿ ಖಾನ್ (Sara Ali Khan) ಅವರು ಅಮೃತಾ ಸಿಂಗ್ ಮತ್ತು ಸೈಫ್ ಅಲಿ ಖಾನ್ ಅವರ ಪುತ್ರಿ. ಸೈಫ್ ಜೊತೆಗಿನ ವಿಚ್ಛೇದನದ ನಂತರ ಅಮೃತಾ ಅವರು ಮಕ್ಕಳಾದ ಸಾರಾ ಮತ್ತು ಇಬ್ರಾಹಿಂ ಅವರನ್ನು ಬೆಳೆಸಿದರು. ಸಾರಾಗೆ ತಾಯಿ ಬಗ್ಗೆ ತುಂಬಾನೇ ಕಾಳಜಿ ಇದೆ. ಮಗಳು ನನ್ನಂತೆ ಮದುವೆ ಆದರೆ ಅವಳ ಕೆನ್ನೆಗೆ ಹೊಡೆಯುತ್ತೇನೆ ಎಂದು ಅಮೃತಾ ಸಿಂಗ್ (Amrita Singh) ಈ ಮೊದಲು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.

ಅಮೃತಾಗಿಂತ ಮುಂಚೆ ಸೈಫ್‌ ಅನೇಕರ ಜೊತೆ ಸುತ್ತಾಟ ನಡೆಸಿದ್ದರು. ಅಮೃತಾ ಅವರನ್ನು ಭೇಟಿಯಾದ ನಂತರ ಅವರು ನೇರವಾಗಿ ಮದುವೆಯಾಗಲು ನಿರ್ಧರಿಸಿದರು. ಇಬ್ಬರೂ 1991ರಲ್ಲಿ ಗುಟ್ಟಾಗಿ ಮದುವೆಯಾದರು. ಆ ಬಳಿಕ ಇವರ ಮದುವೆ ವಿಚಾರ ಹೊರಬಿತ್ತು. ಇಬ್ಬರ ಮಧ್ಯೆ 12 ವರ್ಷಗಳ ವಯಸ್ಸಿನ ಅಂತರವಿತ್ತು. ಆರಂಭದಲ್ಲಿ ಸೈಫ್-ಅಮೃತಾ ಚೆನ್ನಾಗಿಯೇ ಇದ್ದರು. ಮದುವೆಯಾಗಿ 13 ವರ್ಷಗಳ ನಂತರ ಸೈಫ್ ಮತ್ತು ಅಮೃತಾ ಬೇರ್ಪಟ್ಟರು. ಅಮೃತಾ ಸಿಂಗ್ ನಿರ್ಧಾರ ಅನೇಕರಿಗೆ ಅಚ್ಚರಿ ತಂದಿತ್ತು.

ಮಗಳ ಕೆನ್ನೆಗೆ ಬಾರಿಸುತ್ತೇನೆ..

ಸಂದರ್ಶನವೊಂದರಲ್ಲಿ ಅಮೃತಾ ಅವರು ಮಗಳು ಸಾರಾ ಮದುವೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ‘ನನ್ನಂತೆ ನನ್ನ ಮಗಳು ಗುಟ್ಟಾಗಿ, ಸಣ್ಣ ವಯಸ್ಸಿನಲ್ಲಿ ಮದುವೆಯಾಗುವ ತಪ್ಪು ಮಾಡಿದರೆ ನಾನು ಅವಳ ಕೆನ್ನೆಗೆ ಹೊಡೆಯುತ್ತೇನೆ. ನನ್ನ ಮಕ್ಕಳು ಅದೇ ತಪ್ಪನ್ನು ಪುನರಾವರ್ತಿಸುವುದು ನನಗೆ ಇಷ್ಟವಿಲ್ಲ’ ಎಂದು ಅಮೃತಾ ಹೇಳಿದ್ದರು. ವಿಚ್ಛೇದನದ ಬಳಿಕ ಅಮೃತಾ ಮರುಮದುವೆಯಾಗಲಿಲ್ಲ. ಆದರೆ ಸೈಫ್ ಅಲಿ ಖಾನ್ ಅವರು ನಟಿ ಕರೀನಾ ಕಪೂರ್ ಜೊತೆ ಮದುವೆ ಆದರು. ಕರೀನಾ ಮತ್ತು ಸೈಫ್‌ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ: ‘ಪ್ರತೀ ಬಾರಿ ಇದೇ ಡ್ರಾಮಾ’; ಹೊಡೆದಾಟದ ಹಂತಕ್ಕೆ ಹೋಯ್ತು ಬಿಗ್ ಬಾಸ್ ಟಾಸ್ಕ್​

ವಿಚ್ಛೇದನಕ್ಕೆ ಕಾರಣ ಏನು?

ಇಟಾಲಿಯನ್ ಮಾಡೆಲ್ ಮತ್ತು ನಟಿ ರೋಸಾ ಕ್ಯಾಟಲಾನೊ ಅವರೊಂದಿಗೆ ಸೈಫ್ ಅವರ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ಕಾರಣದಿಂದಲೇ ಸೈಫ್ ಹಾಗೂ ಅಮೃತಾ ವಿಚ್ಛೇದನ ಪಡೆದರು ಎನ್ನುವ ಮಾತಿದೆ. ಆದರೆ ಇದನ್ನು ಸೈಫ್ ಅಲ್ಲ ಗಳೆಯುತ್ತಾರೆ. ‘ಅಮೃತಾಳ ಸ್ವಭಾವ ಬದಲಾಯಿತು. ಹೀಗಾಗಿ ನಮ್ಮ ಸಂಬಂಧ ಮುರಿದುಬಿತ್ತು’ ಎಂದು ಸೈಫ್ ವಿವರಿಸಿದ್ದರು.

ಸಾರಾ ಹೇಳೋದೇನು?

‘ನನ್ನ ತಾಯಿ ನಗುವುದನ್ನು ಮರೆತಿದ್ದರು. ಅವರ ದಾಂಪತ್ಯದಲ್ಲಿ ಸಂತೋಷ ಇರಲಿಲ್ಲ. ಒಟ್ಟಿಗೆ ಅತೃಪ್ತರಾಗುವುದಕ್ಕಿಂತ ಬೇರ್ಪಡುವುದು ಉತ್ತಮ ಎಂದು ಅವರು ಭಾವಿಸಿದರು. ತಂದೆಗೆ ವಿಚ್ಛೇದನ ನೀಡಿದ್ದು ಅವರ ಅತ್ಯುತ್ತಮ ನಿರ್ಧಾರದಲ್ಲಿ ಒಂದು. ಬಹಳ ವರ್ಷಗಳ ನಂತರ ಇಬ್ಬರೂ ತಮ್ಮ ಜೀವನದಲ್ಲಿ ಸಂತೋಷವಾಗಿದ್ದೇವೆ’ ಎಂದಿದ್ದರು ಸಾರಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್