ನನಗೆ ಮಗು ಹೆರುವ ಶಕ್ತಿ ಇಲ್ಲ; ಶಾಕಿಂಗ್ ವಿಚಾರ ರಿವೀಲ್ ಮಾಡಿದ ಸ್ಟಾರ್ ಗಾಯಕಿ

Selena Gomez: ಸೆಲೆನಾ ಗೊಮೆಜ್ ಖ್ಯಾತ ಪಾಪ್ ತಾರೆ. ಭಾರಿ ನೆಟ್​ವರ್ತ್ ಹೊಂದಿರುವ ನಟಿ ಮತ್ತು ಗಾಯಕಿ. ಆದರೆ ತನಗೆ ತಾಯಿ ಆಗುವ ಶಕ್ತಿ ಇಲ್ಲವೆಂಬ ವಿಷಯವನ್ನು ಸೆಲೆನಾ ಗೊಮೆಜ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.

ನನಗೆ ಮಗು ಹೆರುವ ಶಕ್ತಿ ಇಲ್ಲ; ಶಾಕಿಂಗ್ ವಿಚಾರ ರಿವೀಲ್ ಮಾಡಿದ ಸ್ಟಾರ್ ಗಾಯಕಿ
Follow us
| Updated By: ಮಂಜುನಾಥ ಸಿ.

Updated on: Sep 10, 2024 | 6:38 PM

ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ವಿಚಾರ ಆಗಾಗ ಚರ್ಚೆ ಆಗುತ್ತಾ ಇರುತ್ತದೆ. ಸೆಲೆಬ್ರಿಟಿಗಳ ಪ್ರೀತಿ-ಪ್ರೇಮ ವಿಚಾರ, ಅವರ ಕುಟುಂಬದ ವಿಚಾರದ ಕುರಿತು ಚರ್ಚೆ ನಡೆಯುತ್ತದೆ. ಈಗ ಇಂಗ್ಲಿಷ್ ಗಾಯಕಿ ಸೆಲೆನಾ ಗೊಮೆಜ್ ಅವರ ವಿಚಾರ ಮುನ್ನೆಲೆಗೆ ಬಂದಿದೆ. ಅವರಿಗೆ ಮಗುವನ್ನು ಹೆರುವ ತಾಕತ್ತು ಇಲ್ಲವಂತೆ. ಇದಕ್ಕೆ ಅವರಿಗೆ ಇರೋ ಆರೋಗ್ಯ ತೊಂದರೆಗಳೇ ಕಾರಣ ಎಂದು ಹೇಳಿಕೊಂಡಿದ್ದಾರೆ.

ಸೆಲೆನಾ ಗೊಮೆಜ್ ಅವರಿಗೆ ಈಗ 32 ವರ್ಷ. ಈ ಮೊದಲು ಅವರು ಪಾಪ್ ಗಾಯಕ ಜಸ್ಟಿನ್ ಬೀಬರ್ ಜೊತೆ ಸುತ್ತಾಟ ನಡೆಸಿದ್ದರು. ಆದರೆ, ಇವರದ್ದು ಬ್ರೇಕಪ್ನಲ್ಲಿ ಕೊನೆ ಆಯಿತು. ಆ ಬಳಿಕ ಅವರು ಅನೇಕರ ಜೊತೆ ಸುತ್ತಾಟ ನಡೆಸಿದರು. ಈಗ ಅವರು ಒಂದು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ. ಅವರು ಈವರೆಗೆ ಮದುವೆ ಆಗದೆ ಇರಲು ಇದೇ ಕಾರಣವೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ:ಬಾಲಿವುಡ್, ಸೌಥ್ ಬಳಿಕ ಹಾಲಿವುಡ್​ಗೆ ಹಾರಲಿದ್ದಾರೆ ಜಾನ್ಹವಿ ಕಪೂರ್

‘ನಾನು ಇದನ್ನು ಯಾವಾಗಲೂ ಹೇಳಿಕೊಂಡಿಲ್ಲ. ನನ್ನ ಮಗುವನ್ನು ನಾನು ಹೆರಲು ಸಾಧ್ಯವಿಲ್ಲ. ನಾನು ಅನೇಕ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ಇದರಿಂದ ನನ್ನ ಹಾಗೂ ನನ್ನ ಮಗುವಿಗೆ ಅಪಾಯ. ನಾನು ಇದಕ್ಕಾಗಿ ದುಃಖಿಸುತ್ತೇನೆ’ ಎಂದು ಅವರು ಹೇಳಿಕೊಂಡಿದ್ದಾರೆ. ಈ ಮೊದಲು ಸೆಲೆನಾ ಅವರು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದರು. ಅವರು ಆಟೋಇಮ್ಯೂನ್ ಡಿಸೀಸ್ನಿಂದ ಬಳಲುತ್ತಿದ್ದಾರಂತೆ. ಅದು ಬಾಡಿಯ ಇಮ್ಯೂನ್ ಸಿಸ್ಟಮ್ ಮೇಲೆ ತಮ್ಮದೇ ಟಿಶ್ಯೂ ಮೇಲೆ ದಾಳಿ ಮಾಡುತ್ತದೆಯಂತೆ.

2017ರಲ್ಲಿ ಸೆಲೆನಾ ಗೊಮೆಜ್ ಅವರು ಕಿಡ್ನಿ ಟ್ರಾನ್ಸ್ಪ್ಲಾಂಟ್ ಮಾಡಿಸಿಕೊಂಡಿದ್ದರು. ಈ ಬಗ್ಗೆ ಅವರು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ‘ಮೈ ಮೈಂಡ್ ಆ್ಯಂಡ್ ಮೀ’ನಲ್ಲಿ ಈ ಬಗ್ಗೆ ಅವರು ಹೇಳಿಕೊಂಡಿದ್ದರು.

ಹಾಗಾದರೆ ಮಗು ಪಡೆಯಲು ಮುಂದಿನ ದಾರಿ ಏನು? ಬಾಡಿಗೆ ತಾಯ್ತನ ಅಥವಾ ದತ್ತು ಪಡೆಯುವ ಮೂಲಕ ಮಗು ಹೊಂದಬೇಕು’ ಎಂದು ಅವರು ಹೇಳಿದ್ದರು. ‘ಇದು ಎಲ್ಲರಿಗೂ ಆಗುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ ನಾನು ಈಗ ಉತ್ತಮ ಸ್ಥಾನದಲ್ಲಿದ್ದೇನೆ. ಬಾಡಿಗೆ ತಾಯ್ತನ ಮತ್ತು ದತ್ತು ಸ್ವೀಕಾರದಂತಹ ಆಯ್ಕೆಗಳಿವೆ’ ಎಂದು ಅವರು ಹೇಳಿಕೊಂಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ