ಕನ್ನಡದ ನಿರ್ದೇಶಕನ ದೊಡ್ಡ ಕನಸಿಗೆ ಬೆಂಬಲವಾಗಿ ನಿಂತ ಕರಣ್ ಜೋಹರ್
ಸಚಿನ್ ಬಿ ರವಿ, ಶಿವರಾಜ್ ಕುಮಾರ್ ಜೊತೆಗೆ ಸಿನಿಮಾ ಮಾಡುವುದಾಗಿ ಘೋಷಿಸಿದರಾದರೂ ಆ ಸಿನಿಮಾ ಸೆಟ್ಟೇರಲಿಲ್ಲ. ಬಳಿಕ 2023ರಲ್ಲಿ ಸಚಿನ್ ಅವರು ಬಾಲಿವುಡ್ಗೆ ಹಾರಿದ್ದು, ಅಲ್ಲಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದವು. ಆದರೆ ಇದೀಗ ಸಚಿನ್ ಅವರು ತಮ್ಮ ಮೊದಲ ಹಿಂದಿ ಸಿನಿಮಾ ಬಹುತೇಕ ಮುಗಿಸಿದ್ದಾರೆ. ಮಾತ್ರವಲ್ಲದೆ ತಮ್ಮ ಎರಡನೇ ಬಾಲಿವುಡ್ ಸಿನಿಮಾದ ಕೆಲಸವನ್ನು ಈಗಾಗಲೇ ಪ್ರಾರಂಭ ಸಹ ಮಾಡಿದ್ದಾರೆ.

ಮುಖ್ಯಾಂಶಗಳು
- ಕನ್ನಡದ ನಿರ್ದೇಶಕನ ಹಿಂದಿ ಸಿನಿಮಾ
- ‘ಅವನೇ ಶ್ರೀಮನ್ನಾರಾಯಣ‘ ನಿರ್ದೇಶಕ ಸಚಿನ್ ರವಿ
- ಸಚಿನ್ ಎರಡನೇ ಹಿಂದಿ ಸಿನಿಮಾಕ್ಕೆ ಕರಣ್ ಜೋಹರ್ ಬಂಡವಾಳ
ಕನ್ನಡದ ಸಿನಿಮಾ ಕರ್ಮಿಗಳಿಗೆ ಪರಭಾಷೆಗಳಲ್ಲಿ ಅವಕಾಶ ಸಿಗುವುದು ತುಸು ಕಡಿಮೆ. ಸಿಕ್ಕವರು ಸಹ ಮಿಂಚುವುದು ಕಡಿಮೆಯೇ. ಈ ಹಿಂದೆ ಕನ್ನಡದ ಕೆಲ ನಿರ್ದೇಶಕರು ಪರಭಾಷೆಗಳಲ್ಲಿ ಅದೃಷ್ಟ ಪರೀಕ್ಷೆಗೆ ಹೋದವರಿಗೆ ಯಶಸ್ಸು ಸಿಕ್ಕಿರುವುದು ಬಹಳ ಕಡಿಮೆ. ಕೆಲ ತಿಂಗಳುಗಳ ಹಿಂದೆ ಕನ್ನಡದ ನಿರ್ದೇಶಕ ಎ ಹರ್ಷ ಅವರು ಬಾಲಿವುಡ್ಗೆ ಹೋಗಿ ಟೈಗರ್ ಶ್ರಾಫ್ ಜೊತೆಗೆ ‘ಭಾಗಿ 4’ ಸಿನಿಮಾ ಮಾಡಿದರು. ಸಿನಿಮಾ ದೊಡ್ಡ ಯಶಸ್ಸು ಗಳಿಸಲಿಲ್ಲ. ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ ನಿರ್ದೇಶಕ ಸಚಿನ್ ರವಿ ಅವರು ಬಾಲಿವುಡ್ ಬಾಗಿಲು ತಟ್ಟಿದ್ದಾಗಿ ಮೂರು ವರ್ಷಗಳ ಹಿಂದೆಯೇ ಸುದ್ದಿ ಹರಡಿತ್ತು. ಅವರೀಗ ತಮ್ಮ ಮೊದಲ ಹಿಂದಿ ಸಿನಿಮಾ ಮುಗಿಸಿದ್ದು, ಎರಡನೇ ಸಿನಿಮಾ ಅನ್ನು ಕರಣ್ ಜೋಹರ್ ಜೊತೆಗೆ ಮಾಡಲಿದ್ದಾರೆ.
‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಮೂಲಕ ಗಮನ ಸೆಳೆದಿದ್ದ ಸಚಿನ್ ಬಿ ರವಿ ಅದಾದ ಬಳಿಕ ಕನ್ನಡದಲ್ಲಿ ಯಾವ ಸಿನಿಮಾ ಅನ್ನೂ ಮಾಡಲಿಲ್ಲ. ಶಿವರಾಜ್ ಕುಮಾರ್ ಜೊತೆಗೆ ಸಿನಿಮಾ ಮಾಡುವುದಾಗಿ ಘೋಷಿಸಿದರಾದರೂ ಆ ಸಿನಿಮಾ ಸೆಟ್ಟೇರಲಿಲ್ಲ. ಬಳಿಕ 2023ರಲ್ಲಿ ಸಚಿನ್ ಅವರು ಬಾಲಿವುಡ್ಗೆ ಹಾರಿದ್ದು, ಅಲ್ಲಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದವು. ಆದರೆ ಇದೀಗ ಸಚಿನ್ ಅವರು ತಮ್ಮ ಮೊದಲ ಹಿಂದಿ ಸಿನಿಮಾ ಬಹುತೇಕ ಮುಗಿಸಿದ್ದಾರೆ. ಮಾತ್ರವಲ್ಲದೆ ತಮ್ಮ ಎರಡನೇ ಬಾಲಿವುಡ್ ಸಿನಿಮಾದ ಕೆಲಸವನ್ನು ಈಗಾಗಲೇ ಪ್ರಾರಂಭ ಸಹ ಮಾಡಿದ್ದಾರೆ.
ಟೈಗರ್ ಶ್ರಾಫ್ ಜೊತೆಗೆ ರೊಮ್ಯಾಂಟಿಕ್ ಆಕ್ಷನ್ ಕತೆಯೊಂದನ್ನು ನಿರ್ದೇಶನ ಮಾಡಿರುವ ಸಚಿನ್ ಬಿ ರವಿ ಆ ಸಿನಿಮಾ ಮುಗಿಸಿದ್ದಾರೆ. ಸಚಿನ್ ನಿರ್ದೇಶನ ಮಾಡಲಿರುವ ಎರಡನೇ ಸಿನಿಮಾಕ್ಕೆ ಕರಣ್ ಜೋಹರ್ ಬಂಡವಾಳ ಹೂಡಲಿದ್ದು, ಅದೊಂದು ಪೌರಾಣಿಕ ಹಿನ್ನೆಲೆಯುಳ್ಳ ಕತೆಯಾಗಿದೆ. ಕೃಷ್ಣ ಹಾಗೂ ರಾಧೆಯ ಕುರಿತಾದ ಕತೆಯನ್ನು ಸಚಿನ್ ಬಿ ರವಿ ಹೆಣೆದಿದ್ದು, ಭಾರಿ ಬಜೆಟ್ ಬೇಡುವ ಕತೆ ಇದಾಗಿದೆ. ಕತೆ, ನಿರ್ಮಾಪಕ ಕರಣ್ ಜೋಹರ್ ಅವರಿಗೆ ಬಹಳ ಇಷ್ಟವಾಗಿದ್ದು, ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ:ದಿನಕ್ಕೆ 20 ರೂಪಾಯಿ ಕೂಲಿ, ಈಗ ಪ್ರತಿ ಸಿನಿಮಾಕ್ಕೆ 25 ಕೋಟಿ ಸಂಭಾವನೆ, ಯಾರಿದು ಸೂರಿ?
ಸಚಿನ್ ಬಿ ರವಿ ಹೇಳಿರುವಂತೆ, ‘ಕೃಷ್ಣನ ಜನ್ಮದಿಂದ ಹಿಡಿದು ಆತ ಕಂಸನನ್ನು ಕೊಲ್ಲುವವರೆಗಿನ ಕತೆಯನ್ನು ಚಿತ್ರಕತೆ ಮಾಡಿಕೊಂಡಿದ್ದು, ಭಿನ್ನ ರೂಪದಲ್ಲಿ, ಸ್ವರೂಪದಲ್ಲಿ ಸಿನಿಮಾ ಕಟ್ಟುವ ಯೋಜನೆ ಇದೆ’ ಎಂದಿದ್ದಾರೆ. ಸಿನಿಮಾದ ಬಗ್ಗೆ ಈಗಲೇ ಹೆಚ್ಚಿನದ್ದು ಏನೂ ಹೇಳಲು ಸಾಧ್ಯವಿಲ್ಲ ಎಂದಿರುವ ಸಚಿನ್, ಇದೊಂದು ಬೃಹತ್ ಸಿನಿಮಾ ಆಗಲಿದೆ ಎಂದು ಮಾತ್ರ ಹೇಳಿದ್ದಾರೆ.
ಸಚಿನ್ ಅವರು ಕನ್ನಡದ ‘ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ’, ‘ಉಳಿದವರು ಕಂಡಂತೆ’, ‘ಕಿರಿಕ್ ಪಾರ್ಟಿ’ ಇನ್ನೂ ಕೆಲವು ಸಿನಿಮಾಗಳನ್ನು ಸಂಕಲನ ಮಾಡಿದ್ದರು. ಬಳಿಕ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ನಿರ್ದೇಶನ ಮಾಡಿದರು. ಬಳಿಕ ಸುಮಾರು ಏಳು ವರ್ಷಗಳ ಗ್ಯಾಪ್ ಬಳಿಕ ಈಗ ಟೈಗರ್ ಶ್ರಾಫ್ ಜೊತೆಗೆ ಸಿನಿಮಾ ಮಾಡಿದ್ದಾರೆ. ಕರಣ್ ಜೊತೆಗೆ ಹೊಸ ಸಿನಿಮಾ ಪ್ರಾರಂಭಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




