AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss OTT: ಬಿಗ್​​ ಬಾಸ್​ ಶೋ ಹಿಂದೆ ಸುದೀಪ್​ಗೆ ಹಲವು ಚಾಲೆಂಜ್​; ವೇದಿಕೆಯಲ್ಲಿ ಎಲ್ಲವನ್ನೂ ವಿವರಿಸಿದ ಕಿಚ್ಚ

Kichcha Sudeep | Bigg Boss Kannada: ಬಿಗ್​ ಬಾಸ್​ ನಿರೂಪಣೆ ಮಾಡುವಲ್ಲಿ ಸುದೀಪ್​ ಅವರ ಪರಿಶ್ರಮ ಸಾಕಷ್ಟು ಇರುತ್ತದೆ. ಅದು ವೀಕ್ಷಕರಿಗೆ ಕಾಣುವಂಥದ್ದಲ್ಲ. ಆ ಬಗ್ಗೆ ಕಿಚ್ಚ ವಿವರಣೆ ನೀಡಿದ್ದಾರೆ.

Bigg Boss OTT: ಬಿಗ್​​ ಬಾಸ್​ ಶೋ ಹಿಂದೆ ಸುದೀಪ್​ಗೆ ಹಲವು ಚಾಲೆಂಜ್​; ವೇದಿಕೆಯಲ್ಲಿ ಎಲ್ಲವನ್ನೂ ವಿವರಿಸಿದ ಕಿಚ್ಚ
ಕಿಚ್ಚ ಸುದೀಪ್​
TV9 Web
| Edited By: |

Updated on:Aug 02, 2022 | 11:11 AM

Share

ನಟ ಸುದೀಪ್ ಅವರು ಕಿರುತೆರೆ ಪ್ರೇಕ್ಷಕರಿಗೂ ಅಚ್ಚುಮೆಚ್ಚು. ಬಿಗ್​ ಬಾಸ್​ (Bigg Boss Kannada) ನಿರೂಪಣೆ ಮಾಡುವ ಮೂಲಕ ಟಿವಿ ವೀಕ್ಷಕರ ಜೊತೆ ಅವರೊಂದು ನಂಟು ಬೆಳೆಸಿಕೊಂಡಿದ್ದಾರೆ. ಕನ್ನಡದಲ್ಲಿ ಈವರೆಗೆ ಎಲ್ಲ ಸೀಸನ್​ಗಳನ್ನು ನಿರೂಪಣೆ ಮಾಡಿದ ಖ್ಯಾತಿ ಕಿಚ್ಚ ಸುದೀಪ್ (Kichcha Sudeep)​ ಅವರಿಗೆ ಸಲ್ಲುತ್ತದೆ. ಈ ಕಾರ್ಯಕ್ರಮವನ್ನು ನಡೆಸಿಕೊಡುವಾಗ ಅವರು ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಹಲವು ಸಿನಿಮಾ ಕೆಲಸಗಳ ನಡುವೆ ಡೇಟ್ಸ್​ ಹೊಂದಿಸಿಕೊಳ್ಳುವುದೇ ದೊಡ್ಡ ಸವಾಲು. ಅದನ್ನು ತುಂಬ ಯಶಸ್ವಿಯಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ ಸುದೀಪ್​. ಈಗ ‘ಬಿಗ್​ ಬಾಸ್​ ಒಟಿಟಿ’ (Bigg Boss OTT) ಮೊದಲ ಸೀಸನ್​ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಎಂದಿನ ಉತ್ಸಾಹದಲ್ಲಿ ಅವರು ಈ ಹೊಸ ಸ್ವರೂಪದ ಬಿಗ್​ ಬಾಸ್​ ನಡೆಸಿಕೊಡಲು ಸಜ್ಜಾಗಿದ್ದಾರೆ. ಅದರ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸುದೀಪ್​ ಮಾತನಾಡಿದ್ದಾರೆ.

‘ಇಷ್ಟು ಸೀಸನ್​ನಲ್ಲಿ ನಾನು ಯಾವುದೇ ದೇಶದಲ್ಲಿ ಇದ್ದರೂ ಬಿಗ್​ ಬಾಸ್​ ಎಪಿಸೋಡ್​ ಶೂಟಿಂಗ್​ ಮಿಸ್​ ಮಾಡಿಲ್ಲ. ಆನಾರೋಗ್ಯ ಇದ್ದಾಗಲೂ ಬರಲೇಬೇಕು. ಒಂದು ವೇಳೆ ಬರಲಿಲ್ಲ ಎಂದರೆ ಆ ವಾರದಲ್ಲಿ ಸ್ಪರ್ಧಿಗಳಿಗೆ ನ್ಯಾಯ ಸಲ್ಲಿಸೋಕೆ ಆಗಲ್ಲ. ಯಾವ ಯಾವ ಸಮಯದಲ್ಲಿ ಎಷ್ಟು ಜ್ವರ ಇಟ್ಟುಕೊಂಡು ನಾನು ಶೋ ನಡೆಸಿಕೊಟ್ಟಿದ್ದೇನೆ ಎಂಬುದು ಪರಮ್​ ಅವರಿಗೆ ಗೊತ್ತು. ಸೂಟ್​ ಒಳಗೆ ಐಸ್​ ಕ್ಯೂಬ್ ಇಟ್ಟುಕೊಂಡು ಶೂಟಿಂಗ್ ಮಾಡಿದ್ದುಂಟು’ ಎಂದು ಸುದೀಪ್​ ಹೇಳಿದ್ದಾರೆ.

‘ನನಗೆ ಕಳೆದ ಬಾರಿ ಕೊವಿಡ್​ ಪಾಸಿಟಿವ್​ ಆದಾಗ ಮಾತ್ರ ನಾನು ಶೂಟಿಂಗ್​ ಮಿಸ್​ ಮಾಡಿದ್ದು. ಶೋ ನಡೆಯುವಾಗಲೇ ನನ್ನ ಜ್ವರ ಜಾಸ್ತಿ ಆಗಲು ಶುರುವಾಯ್ತು. ಮಧ್ಯದಲ್ಲಿ ಬಂದು ಪರಮ್​ ನನ್ನನ್ನು ಮುಟ್ಟಿದಾಗ ಮೈ ಸುಡುತ್ತಿತ್ತು. ಆದರೂ ಮುಂದುವರಿಸಿದ್ದೆ. ಇಡೀ ವಾರದಲ್ಲಿ ನಾನು ಕೆಲವು ರಿಸ್ಕ್​ ತೆಗೆದುಕೊಳ್ಳೋಕೆ ಹೋಗಲ್ಲ. ಮಳೆ ಫೈಟ್​ ಇದ್ದಾಗ ಆದಷ್ಟು ಬಿಸಿನೀರು ತನ್ನಿ ಅಂತ ಹೇಳುತ್ತೇನೆ. ಜ್ವರ ಬಂದರೆ ಕಷ್ಟ ಆಗುತ್ತದೆ’ ಎಂದಿದ್ದಾರೆ ಸುದೀಪ್​.

ಇದನ್ನೂ ಓದಿ
Image
Kichcha Sudeep: ಕಿಚ್ಚನ ಹೃದಯವಂತಿಕೆ; ಹಾರ್ಟ್​ ಸಮಸ್ಯೆ ಹೊಂದಿರುವ ಪುಟ್ಟ ಬಾಲಕನನ್ನು ಭೇಟಿಯಾದ ಸುದೀಪ್​
Image
Vikrant Rona: ದೆಹಲಿಯಲ್ಲಿ ವೀರೇಂದ್ರ ಹೆಗ್ಗಡೆ ಭೇಟಿ ಮಾಡಿದ ಕಿಚ್ಚ ಸುದೀಪ್​; ಇಲ್ಲಿವೆ ಫೋಟೋಗಳು
Image
Coffee Nadu Chandu: ‘ಕಾಫಿ ನಾಡು ಚಂದು ಬಿಗ್​ ಬಾಸ್​ಗೆ ಬರಲಿ’: ಪರಮೇಶ್ವರ್​ ಗುಂಡ್ಕಲ್​ ಬಳಿ ಬೇಡಿಕೆ ಇಟ್ಟ ಫ್ಯಾನ್ಸ್​
Image
BBK 9: ಈ ಬಾರಿ ಕನ್ನಡ ಬಿಗ್​ ಬಾಸ್​ನಲ್ಲಿ ಯಾರೆಲ್ಲ ಇರಬೇಕು? ಈಗಲೇ ಶುರುವಾಗಿದೆ ಚರ್ಚೆ

‘ಸಿನಿಮಾ ಶೂಟಿಂಗ್​ ಸಲುವಾಗಿ ಬೇರೆ ಊರಿಗೆ ಹೋದರೆ ವಾಪಸ್​ ಬರಲು ಎರಡು-ಮೂರು ವಿಮಾನದ ಟಿಕೆಟ್​ ಬುಕ್​ ಮಾಡಿರುತ್ತೇವೆ. ಒಂದು ಮಿಸ್​ ಆದರೆ ಇನ್ನೊಂದು ಇರಬೇಕು. ನಾನು ವಾಪಸ್​ ಬರಲೇಬೇಕು. ಎಲ್ಲ ಎಪಿಸೋಡ್​ ನೋಡಿಕೊಂಡು ನಾನು ಶೋ ನಡೆಸಬೇಕು. ಇದು ತುಂಬ ಒತ್ತಡದ ಕೆಲಸ. ಆದರೆ ಅದು ನನ್ನನ್ನು ಉತ್ತಮ ಪ್ಲಾನರ್​ ಆಗಿಸುತ್ತದೆ’ ಎಂದು ಕಿಚ್ಚ ಹೇಳಿದ್ದಾರೆ.

Published On - 11:11 am, Tue, 2 August 22

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?