Deepika Das: ಬಿಗ್​ ಬಾಸ್​ನಿಂದ ದೀಪಿಕಾ ದಾಸ್​ ಎಲಿಮಿನೇಟ್​; 2ನೇ ಚಾನ್ಸ್​ನಲ್ಲೂ ಮುಗ್ಗರಿಸಿದ ಸೀರಿಯಲ್​ ನಟಿ

BBK9 | Bigg Boss Elimination: ದೀಪಿಕಾ ದಾಸ್​ ಎಲಿಮಿನೇಷನ್​ ಬಳಿಕ ಒಟ್ಟು 11 ಸ್ಪರ್ಧಿಗಳು ಈಗ ದೊಡ್ಮನೆಯಲ್ಲಿ ಇದ್ದಾರೆ. 9ನೇ ವಾರದಲ್ಲಿ ಬಿಗ್​ ಬಾಸ್​ ಆಟ ಮುಂದುವರಿದಿದೆ.

Deepika Das: ಬಿಗ್​ ಬಾಸ್​ನಿಂದ ದೀಪಿಕಾ ದಾಸ್​ ಎಲಿಮಿನೇಟ್​; 2ನೇ ಚಾನ್ಸ್​ನಲ್ಲೂ ಮುಗ್ಗರಿಸಿದ ಸೀರಿಯಲ್​ ನಟಿ
ದೀಪಿಕಾ ದಾಸ್
Follow us
| Updated By: ಮದನ್​ ಕುಮಾರ್​

Updated on:Nov 20, 2022 | 9:37 PM

ಕಿರುತೆರೆ ಧಾರಾವಾಹಿಗಳ ಮೂಲಕ ಕರುನಾಡಿನಲ್ಲಿ ಮನೆಮಾತಾಗಿರುವ ನಟಿ ದೀಪಿಕಾ ದಾಸ್​ (Deepika Das) ಅವರಿಗೆ ಬಿಗ್​ ಬಾಸ್​ ಮೂಲಕ ಇನ್ನಷ್ಟು ಜನಪ್ರಿಯತೆ ಸಿಕ್ಕಿದೆ. ಆದರೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ (Bigg Boss Kannada Season 9) ಅವರ ಆಟವೀಗ ಅಂತ್ಯವಾಗಿದೆ. 8ನೇ ವಾರದಲ್ಲಿ ದೀಪಿಕಾ ದಾಸ್​ ಎಲಿಮಿನೇಟ್​ ಆಗಿದ್ದಾರೆ. ‘ಸೂಪರ್​ ಸಂಡೇ ವಿಥ್​ ಸುದೀಪ’ ಸಂಚಿಕೆಯಲ್ಲಿ ಕಿಚ್ಚ ಸುದೀಪ್​ (Kichcha Sudeep) ಅವರು ಎಲಿಮಿನೇಷನ್​ ವಿಚಾರ ಘೋಷಿಸಿದರು. ಈ ಮೊದಲು ‘ಬಿಗ್​ ಬಾಸ್​ ಕನ್ನಡ ಸೀಸನ್​ 7’ರಲ್ಲೂ ದೀಪಿಕಾ ದಾಸ್​ ಸ್ಪರ್ಧಿಸಿದ್ದರು. ಆಗ ಕೂಡ ಅವರಿಗೆ ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈ ವರ್ಷದ ಹೊಸ ಸೀಸನ್​ನಲ್ಲಿ ಅವರಿಗೆ ಮತ್ತೆ ದೊಡ್ಮನೆಗೆ ಎಂಟ್ರಿ ನೀಡುವ ಚಾನ್ಸ್​ ಸಿಕ್ಕಿತು. ಆದರೆ 2ನೇ ಅವಕಾಶದಲ್ಲೂ ಅವರು ಮುಗ್ಗರಿಸಿದ್ದಾರೆ. ಟ್ರೋಫಿ ಗೆಲ್ಲುವ ಅವರ ಕನಸು ಭಗ್ನವಾಗಿದೆ.

ಕಿಚ್ಚ ಸುದೀಪ್​ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದಾರೆ. ಈ ಬಾರಿ ಪ್ರವೀಣರು (ಹಳಬರು) ಮತ್ತು ನವೀನರು (ಹೊಸಬರು) ಎಂಬ ಕಾನ್ಸೆಪ್ಟ್​ನಲ್ಲಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ದೀಪಿಕಾ ದಾಸ್​ ಅವರು ಪ್ರವೀಣರ ಗುಂಪಿನಿಂದ ಆಯ್ಕೆ ಆಗಿದ್ದರು. ಬಿಗ್​ ಬಾಸ್​ ಆಟದ ಬಗ್ಗೆ ಅವರಿಗೆ ಹೆಚ್ಚು ಅನುಭವ ಇತ್ತು. ಹಾಗಿದ್ದರೂ ಕೂಡ ಫಿನಾಲೆ ತಲುಪಲು ಅವರು ವಿಫಲರಾಗಿದ್ದಾರೆ.

9ನೇ ವಾರದಲ್ಲಿ ಬಿಗ್​ ಬಾಸ್​ ಆಟ ಮುಂದುವರಿದಿದೆ. ಒಟ್ಟು 11 ಸ್ಪರ್ಧಿಗಳು ಈಗ ದೊಡ್ಮನೆಯಲ್ಲಿ ಇದ್ದಾರೆ. ಪ್ರಶಾಂತ್​ ಸಂಬರ್ಗಿ, ರೂಪೇಶ್​ ರಾಜಣ್ಣ, ರೂಪೇಶ್​ ಶೆಟ್ಟಿ, ಅಮೂಲ್ಯಾ ಗೌಡ, ಕಾವ್ಯಶ್ರೀ ಗೌಡ, ವಿನೋದ್​ ಗೊಬ್ಬರಗಾಲ, ಅರುಣ್​ ಸಾಗರ್​, ರಾಕೇಶ್​ ಅಡಿಗ, ಅನುಪಮಾ ಗೌಡ, ದಿವ್ಯಾ ಉರುಡುಗ, ಆರ್ಯವರ್ಧನ್​ ಗುರೂಜಿ ನಡುವೆ ಹಣಾಹಣಿ ಮುಂದುವರಿದಿದೆ.

ಇದನ್ನೂ ಓದಿ
Image
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಪ್ರಸಾರ ಆಗುತ್ತಿದೆ. ಸ್ಪರ್ಧಿಗಳ ಸಂಖ್ಯೆ ಕಡಿಮೆ ಆದಂತೆಲ್ಲ ಪೈಪೋಟಿಯ ಕಾವು ಹೆಚ್ಚುತ್ತಿದೆ. 11 ಸ್ಪರ್ಧಿಗಳ ಪೈಕಿ ಮುಂದಿನ ವಾರ ಯಾರು ಎಲಿಮಿನೇಟ್​ ಆಗುತ್ತಾರೆ ಎಂಬ ಕೌತುಕ ಮೂಡಿದೆ. ಈ ಸೀಸನ್​ನಲ್ಲಿ 57 ದಿನಗಳು ಪೂರ್ಣ ಆಗಿವೆ. ರೂಪೇಶ್​ ರಾಜಣ್ಣ, ಪ್ರಶಾಂತ್​ ಸಂಬರ್ಗಿ ಅವರು ಅಬ್ಬರದ ಆಟ ಪ್ರದರ್ಶಿಸುತ್ತಿದ್ದಾರೆ. ಅರುಣ್​ ಸಾಗರ್​ ಹಾಗೂ ವಿನೋದ್​ ಗೊಬ್ಬರಗಾಲ ಅವರು ಹಾಸ್ಯದ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ರೂಪೇಶ್​ ರಾಜಣ್ಣ, ಆರ್ಯವರ್ಧನ್​ ಗುರೂಜಿ, ರಾಕೇಶ್​ ಅಡಿಗ ಅವರು ಬಿಗ್​ ಬಾಸ್​ ಒಟಿಟಿ ಶೋನಿಂದ ಈವರೆಗೂ ಆಟ ಮುಂದುವರಿಸಿಕೊಂಡು ಬಂದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:37 pm, Sun, 20 November 22

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್