AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bladder Dock Chukkaku: ಚುಕ್ಕಾಕು ಅಥವಾ ಹುಳಿ ಚಕೋತ ಇತ್ಯಾದಿ ಹೆಸರುಗಳಿಂದ ಜನಜನಿತವಾದ ತರಕಾರಿ ಸೊಪ್ಪಿನ ಮಹಿಮೆ ತಿಳಿದುಕೊಳ್ಳಿ!

ತೆಲುಗು ಭಾಷೆಯಲ್ಲಿ ಚುಕ್ಕಾಕು (Chukka Kura) ಎಂದು ಜನಜನಿತವಾಗಿರುವ ಹುಣಚಿಕ್ಕಿ ಪಲ್ಲೆ, ಚುಕ್ಕಿ ಸೊಪ್ಪು, ಹುಳಿ ಚಕೋತ ತರಕಾರಿಯ ಆರೋಗ್ಯ ಉಪಯೋಗಗಳನ್ನು ತಿಳಿದುಕೊಳ್ಳಿ.

Bladder Dock Chukkaku: ಚುಕ್ಕಾಕು ಅಥವಾ ಹುಳಿ ಚಕೋತ ಇತ್ಯಾದಿ ಹೆಸರುಗಳಿಂದ ಜನಜನಿತವಾದ ತರಕಾರಿ ಸೊಪ್ಪಿನ ಮಹಿಮೆ ತಿಳಿದುಕೊಳ್ಳಿ!
ಚುಕ್ಕಾಕು ಅಥವಾ ಹುಳಿ ಚಕೋತ ಇತ್ಯಾದಿ ಹೆಸರುಗಳಿಂದ ಜನಜನಿತವಾದ ತರಕಾರಿ ಸೊಪ್ಪಿನ ಮಹಿಮೆ ತಿಳಿದುಕೊಳ್ಳಿ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: May 28, 2022 | 6:06 AM

ಹುಣಚಿಕ್ಕಿ ಪಲ್ಲೆ, ಚುಕ್ಕಿ ಸೊಪ್ಪು, ಹುಳಿ ಚಕೋತ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಹಾಗೂ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಬಳಸಲ್ಪಡುವ ಸಿಹಿ ಹುಳಿ ರುಚಿಯ ಈ ಸೊಪ್ಪಿಗೆ ಆಂಗ್ಲ ಭಾಷೆಯಲ್ಲಿ Rumex Vesicarius, Ruby dock, Bladder Dock annual herb, ಸಂಸ್ಕೃತ ಭಾಷೆಯಲ್ಲಿ ಚುಕ್ರಿಕಾ , ಶತವೇಧಿ. ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಚುಕ್ಕಾ ಭಾಜಿ , ಖಠ್ಠಾ ಪಾಲಕ, ಚುಕೇಕಿ ಭಾಜಿ, ಖಠ್ಠಾ ಮೀಠಾ ಮತ್ತು ತೆಲುಗು ಭಾಷೆಯಲ್ಲಿ ಚುಕ್ಕಾಕು (Chukka Kura) ಎಂದು ಜನಜನಿತವಾಗಿದೆ.

ಚುಕ್ಕಾಕು ತವ್ವೆ ರುಚಿಕಟ್ಟಾಗಿರುತ್ತದೆ… ಪಾಲಕ್ ನಂತೆ ಹಸಿರಿನಿಂದ ಕಂಗೊಳಿಸುವ, ವಿಶೇಷವಾದ ಸಿಹಿ ಹುಳಿ ರುಚಿ ಹೊಂದಿರುವ ಈ ಚುಕ್ಕಾಕು ಅಥವಾ ಹುಣಚಿಕ್ಕಿ ಸೊಪ್ಪು ಬಿಳಿ ಹಾಗೂ ತಿಳಿ ಗುಲಾಬಿ ಬಣ್ಣದ ಹೂವುಗಳನ್ನು ಹೊಂದಿದ್ದು ಇದರಲ್ಲಿ ಬೇರೆ ಬೇರೆ ಪ್ರಭೇದಗಳಿವೆ. ಹುಣಚಿಕ್ಕಿ ಸೊಪ್ಪು ಹಾಕಿ ಮಾಡಿದ ಬೇಳೆ ಸಾರು ಉತ್ತಮ ರುಚಿ ನೀಡುತ್ತದೆ. ಚುಕ್ಕಾಕು ತವ್ವೆಯೂ ರುಚಿಕಟ್ಟಾಗಿರುತ್ತದೆ. ಮಾಂಸಾಹಾರ ಅಡುಗೆಗಳಲ್ಲಿ ಯಥೇಚ್ಛವಾಗಿ ಇದನ್ನು ಬಳಸುತ್ತಾರೆ. ಅತ್ಯಧಿಕ “ಎ” ಹಾಗೂ “ಸಿ” ವಿಟಮಿನ್ ಈ ಸೊಪ್ಪಿನಲ್ಲಿ ಇದೆ.

ಹುಳಿಚಿಕ್ಕಿಯ ಔಷಧೀಯ ಗುಣಗಳು:

  1. ತರಕಾರಿಯಾಗಿ ಬಳಸುವ ಈ ಹುಳಿ ಚಕೋತ ಔಷಧೀಯ ಗುಣಗಳನ್ನು ಹೊಂದಿದೆ. ಜೊತೆಗೆ ಹಿಂದಿನಿಂದಲೂ ಮನೆ ಮದ್ದಾಗಿ ಬಳಕೆಯಲ್ಲಿದೆ.
  2. ಸಂಧಿವಾತಕ್ಕೆ ಹುಣಚಿಕ್ಕಿ ಸೊಪ್ಪನ್ನು ಅರೆದು 30 ಎಂ ಎಲ್ ನಷ್ಟು ರಸವನ್ನು ಕಲ್ಲು ಸಕ್ಕರೆ ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿಯಬೇಕು.
  3. ಮೂಲವ್ಯಾಧಿ/ ರಕ್ತ ಮೂಲವ್ಯಾಧಿಗೆ ಈ ಸೊಪ್ಪಿನ ರಸಕ್ಕೆ ಮೊಸರು ಸೇರಿಸಿ ಸೇವಿಸಬೇಕು.
  4. ವಾಂತಿಯಾದಲ್ಲಿ 15 ಎಂ ಎಲ್ ನಷ್ಟು ಸೊಪ್ಪಿನ ರಸಕ್ಕೆ ಮಜ್ಜಿಗೆ ಬೆರೆಸಿ ಕುಡಿಯಬೇಕು.
  5. ರಕ್ತ ಭೇದಿಗೆ ಇದರ ಬೀಜಗಳನ್ನು ಹುರಿದು ಎರಡರಿಂದ ಮೂರು ಗ್ರಾಂ ನಷ್ಟು ಚೂರ್ಣವನ್ನು ಸೇವನೆ ಮಾಡಬಹುದು.
  6. ಕಾಮಾಲೆಗೆ ಹುಣಚಿಕ್ಕಿ ಪಲ್ಲೆ ರಸ ಉಪಯುಕ್ತವಾಗಿದೆ.
  7. ಇದರ ಸೊಪ್ಪಿನ ರಸ ಸೇವನೆಯಿಂದ ರಕ್ತ ಶುದ್ಧಿಯಾಗುತ್ತದೆ.
  8. ಚೇಳು ಕಚ್ಚಿದಾಗ ಇದರ ಬೀಜಗಳನ್ನು ಹುರಿದು ಅರೆದು ಲೇಪಿಸಬೇಕು. (ಸಂಗ್ರಹ ಮಾಹಿತಿ ಲೇಖನ: ಎಸ್​ ಹೆಚ್​ ನದಾಫ್)

Also Read:

KUWSDB: ದೂರ ಶಿಕ್ಷಣದ ಪದವಿ ಕಾರಣಕ್ಕೆ 5 ವರ್ಷ ಸೇವೆ ಸಲ್ಲಿಸಿದ ಬಳಿಕ, ಸರ್ಕಾರಿ ನೌಕರಿ ಕಳೆದುಕೊಂಡ ಎಂಜಿನಿಯರ್! ಮತ್ತೆ ಉದ್ಯೋಗ ಕೊಡಲು ಹೈಕೋರ್ಟ್ ಆದೇಶ

ಆರೋಗ್ಯ ಕುರಿತಾದ ಹೆಚ್ಚಿನ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ
ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ
ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ
ಕ್ರೆಡಿಟ್​​ ತೆಗೆದುಕೊಳ್ಳುವ ಚಟ ನಿಮಗೆ: ಡಿಕೆಶಿ​​ ವಿರುದ್ಧ ಜೋಶಿ ಕಿಡಿ
ಕ್ರೆಡಿಟ್​​ ತೆಗೆದುಕೊಳ್ಳುವ ಚಟ ನಿಮಗೆ: ಡಿಕೆಶಿ​​ ವಿರುದ್ಧ ಜೋಶಿ ಕಿಡಿ