AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಹೊರ ವಲಯಗಳಲ್ಲೇ ಅಪಘಾತಗಳು ಜಾಸ್ತಿ: ವಿಶೇಷ ಸಂಚಾರ ಆಯುಕ್ತ ಡಾ. ಸಲೀಂ

ಬೆಂಗಳೂರಿಗೆ ಸ್ಮಾರ್ಟ್ ಸಿಟಿ ಬಂದ ಮೇಲೆ ಪಾದಚಾರಿಗಳಿಗೆ ಯಾವುದೇ ತೊಂದರೆ ಇಲ್ಲ. ಆದರೆ ಹೊರ ವಲಯಗಳಲ್ಲೇ ಅಪಘಾತಗಳು ಜಾಸ್ತಿ ಆಗುತ್ತಿವೆ ಎಂದು ಬೆಂಗಳೂರು ವಿಶೇಷ ಸಂಚಾರ ಆಯುಕ್ತ ಡಾ. ಸಲೀಂ ಟಿವಿ 9ಗೆ ಹೇಳಿದ್ದಾರೆ.

ಬೆಂಗಳೂರು ಹೊರ ವಲಯಗಳಲ್ಲೇ ಅಪಘಾತಗಳು ಜಾಸ್ತಿ: ವಿಶೇಷ ಸಂಚಾರ ಆಯುಕ್ತ ಡಾ. ಸಲೀಂ
ಬೆಂಗಳೂರು ವಿಶೇಷ ಸಂಚಾರ ಆಯುಕ್ತ ಡಾ ಸಲೀಂImage Credit source: www.vishwanews24.com
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Feb 16, 2023 | 6:14 PM

Share

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bengaluru) ಮಹಾ ನಗರದಲ್ಲಿ ಜನರಿಗಿಂತಾ ವಾಹನಗಳ ಸಂಖ್ಯೆಯೇ ಹೆಚ್ಚು. ಜೊತೆಗೆ ಅಪಘಾತಗಳ (accident) ಪ್ರಮಾಣವೂ ಮಿತಿಮೀರಿದೆ. 2021ಕ್ಕೆ ಹೋಲಿಸಿದರೆ 2022ರಲ್ಲಿ ಬೆಂಗಳೂರು ನಗರದಲ್ಲಿ ಅಪಘಾತಗಳ ಪ್ರಮಾಣ ಶೇ. 7.9ರಷ್ಟು ಏರಿಕೆ ಆಗಿದೆ. ನಗರದ ಹೊರ ವಲಯಗಳಲ್ಲೇ ಅಪಘಾತಗಳು ಜಾಸ್ತಿ ಆಗುತ್ತಿವೆ ಎಂದು ಬೆಂಗಳೂರು ವಿಶೇಷ ಸಂಚಾರ ಆಯುಕ್ತ ಡಾ. ಸಲೀಂ ಟಿವಿ 9ಗೆ ಹೇಳಿದ್ದಾರೆ. ಹೃದಯ ಭಾಗಗಳಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಇದ್ದು, ಅಪಘಾತಗಳು ಆಗುತ್ತಿಲ್ಲ. ಸ್ಮಾರ್ಟ್ ಸಿಟಿ ಬಂದ ಮೇಲೆ ಪಾದಚಾರಿಗಳಿಗೆ ಯಾವುದೇ ತೊಂದರೆ ಇಲ್ಲ. ಫುಟ್​ಪಾತ್​​ಗಳನ್ನು ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಹೊರ ಭಾಗಗಳಲ್ಲಿ ಅಪಘಾತಗಳು ಜಾಸ್ತಿ ಆಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಅದರಲ್ಲಿ ಕೆಂಗೇರಿ, ಕೆ ಆರ್ ಪುರಂ, ತುಮಕೂರು ರಸ್ತೆಗಳಲ್ಲಿ ಮತ್ತು ಜಂಕ್ಸನ್​ಗಳಲ್ಲಿ ಅಪಘಾತಗಳ ಮಟ್ಟ ಹೆಚ್ಚಾಗಿದೆ ಎಂದು ಹೇಳಿದರು.

ಸ್ಕೈ ವಾಕರ್ ನಿರ್ಮಿಸಲು ಬೇಡಿಕೆ

ಜಾಲಹಳ್ಳಿ ಕ್ರಾಸ್ ಗೋರುಗುಂಟೆ ಪಾಳ್ಯಾ, ಜಂಕ್ಷನ್​ಗಳಲ್ಲಿ ಜನರಿಗೆ ಸುರಕ್ಷಿತವಾಗಿ ರಸ್ತೆ ದಾಟಲು ವ್ಯವಸ್ಥೆ ಇಲ್ಲ. ಸಂಜೆ ಆಗ್ತಿದ್ದಂತೇ ಆ ಏರಿಯಾಗಳಲ್ಲಿ ಸಾವಿರಾರು ಜನರು ಓಡಾಡುತ್ತಾರೆ. ಇದರ ವಿಚಾರವಾಗಿ ಈಗಾಗಲೇ ಬಿಬಿಎಂಪಿ ಅವರಿಗೆ ಸ್ಕೈ ವಾಕರ್ ನಿರ್ಮಿಸಲು ನಾವು ಬೇಡಿಕೆ ಇಟ್ಟಿದ್ದೇವು. ಅದರಂತೆಯೇ ಕೆಲವು ಕಡೆ ಸ್ಕೈ ವಾಕರ್​ಗಳನ್ನು ಬಿಬಿಎಂಪಿನವರು ಮಾಡಿದ್ದಾರೆ.

ಇದನ್ನೂ ಓದಿ: ರಸ್ತೆ ಗುಂಡಿಗಳಿಗೆ ಸಂಬಂಧಿಸಿದ ಅಪಘಾತ ದೂರುಗಳಿಗೆ ಎಫ್​ಐಆರ್ ದಾಖಲಿಸುವಂತೆ ಹೈಕೋರ್ಟ್ ಆದೇಶ

ಪಾದಚಾರಿಗಳ ಸುರಕ್ಷತೆಗೆ ವ್ಯವಸ್ಥೆ

ಕೆಲವು ಏರಿಯಾಗಳಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ ಹೀಗಾಗಿ ಸ್ಕೈ ವಾಕರ್​ಗಳು ನಿರ್ಮಿಸಲು ಆಗಲ್ಲ. ಮುಂದಿನ ದಿನಗಳಲ್ಲಿ ಪಾದಚಾರಿಗಳಿಗೆ ಸುರಕ್ಷಿತ ಬಗ್ಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತದೆ. ಕೆಲವು ಭಾಗಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಕೆಲವರು ಫುಟ್​ಪಾತ್​ ಮೇಲೆ ವ್ಯಾಪಾರ ಮಾಡುತ್ತಿದ್ದು, ಇದರಿಂದಾಗಿ ಪಾದಚಾರಿಗಳಿಗೆ ಸುರಕ್ಷಿತ ಕಡಿಮೆ ಆಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: Road Accidents: ಬೆಂಗಳೂರಲ್ಲಿ ಅಪಘಾತಗಳ ಸಂಖ್ಯೆ 2022ರಲ್ಲಿ ಇಳಿಮಮುಖಗೊಂಡರೂ ಸಾವು-ನೋವುಗಳ ಸಂಖ್ಯೆ ಹೆಚ್ಚಿದೆ

ಪಾದಚಾರಿಗಳಿಗೆ ತೊಂದರೆ ಆಗಬಾರದೆಂದು ನಾವು ಸಿಗ್ನಲ್ ಬಳಿ ಜನರಿಗೆ ರಸ್ತೆ ದಾಟಲು ಟೈಮಿಂಗ್ ಕೊಡಲಾಯಿತು. ವಾಹನ ಸವಾರರು ಕೂಡ ಪಾದಚಾರಿಗಳ ಬಗ್ಗೆ ಗಮನ ಕೊಡಬೇಕು. ಈಗಾಗಲೇ ನಾವು ನಗರದಲ್ಲಿ ಹೆಚ್ಚು ಅಪಘಾತ ನಡೆಯುವ ಸ್ಥಳಗಳು ನೋಡಿ ಅಲ್ಲಿ ಸ್ಕೈ ವಾಕರ್ಸ್ ಅಥವಾ ಸಬ್ ವೇ ಮಾಡಲು ನಾನು ತಿಳಿಸಿದ್ದೇ ಎಂದು ಡಾ. ಸಲೀಂ ಮಾಹಿತಿ ನೀಡಿದರು.

ಕಳೆದ 5 ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ ನಡೆದ ರಸ್ತೆ ಅಪಘಾತಗಳ ವಿವರ ಹೀಗಿದೆ

2018: ಒಟ್ಟು ಅಪಘಾತಗಳು: 4,611-ಸಾವು 684, ಗಾಯಗೊಂಡವರು: 686

2019: ಒಟ್ಟು ಅಪಘಾತಗಳು: 4,684-ಸತ್ತವರು:766, ಗಾಯಗೊಂಡವರು: 4,250

2020: ಒಟ್ಟು ಅಪಘಾತಗಳು: 3,236-ಸತ್ತವರು: 647, ಗಾಯಗೊಂಡವರು: 2,760

2021: ಒಟ್ಟು ಅಪಘಾತಗಳು: 3,213-ಸತ್ತವರು: 651, ಗಾಯಗೊಂಡವರು: 2,820

2022: ಒಟ್ಟು ಅಪಘಾತಗಳು: 3,827-ಸತ್ತವರು: 777, ಗಾಯಗೊಂಡವರು: 3,235

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!