Coffee Pudi Sakamma: ಇವರೇ ನೋಡಿ ಬೆಂಗಳೂರಿಗೆ ಕಾಫಿ ಪರಿಚಯಿಸಿದ್ದು

ಕಾಫಿ ಬೀಜವನ್ನು ದೇಶಕ್ಕೆ ಪರಿಚಯಿಸಿದ್ದು ಸೂಫಿ ಸಂತ ಬಾಬಾ ಬುಡನ್ ಎಂಬುವುದು ನಿಮಗೆಲ್ಲಾ ಗೊತ್ತೇ ಇದೆ. 1670ನೇ ಇಸವಿಯಲ್ಲಿ ಚಿಕ್ಕಮಗಳೂರು ಸಮೀಪದ ಬಾಬಾ ಬುಡನ್ ಗಿರಿಯಲ್ಲಿ ದೇಶದಲ್ಲೇ ಮೊದಲ ಕಾಫಿ ಬೆಳೆ ಬೆಳೆಯಲಾಯಿತು. ಆದರೆ ಈ ಕಾಫಿಯನ್ನು ಬೆಂಗಳೂರಿಗೆ ಪರಿಚಯಿಸಿದ ಕೀರ್ತಿ ಓರ್ವ ಮಹಿಳೆಗೆ ಸಲ್ಲುತ್ತದೆ. ಕಾಫಿಯನ್ನು ಬೆಂಗಳೂರಿಗೆ ಪರಿಚಯಿಸಿ ಅಲ್ಲೇ ಹುರಿದು ಪುಡಿ ಮಾಡುವ ಮಿಲ್‌ ಅನ್ನು ಸ್ಥಾಪಿಸಿ ಮನೆ ಮನೆಗಳಿಗೂ ಕಾಫಿ ಮಾರಾಟ ಮಾಡಿದ ಮಹಿಳಾ ಉದ್ಯಮಿಯೇ ದೊಡ್ಡ ಮನೆ ಸಾಕಮ್ಮ.

Coffee Pudi Sakamma: ಇವರೇ ನೋಡಿ ಬೆಂಗಳೂರಿಗೆ ಕಾಫಿ ಪರಿಚಯಿಸಿದ್ದು
ಕಾಫಿ ಪುಡಿ ಸಾಕಮ್ಮ
Follow us
|

Updated on: May 18, 2024 | 1:10 PM

ಬೆಳಗೆದ್ದು ಯಾರ ಮುಖ ಯಾರು ನೋಡ್ತಾರೋ ಇಲ್ವೊ ಒಂದು ಕಪ್ ಕಾಫಿ ಮಾತ್ರ ಕೈಗೆ ಬಂದ್ಬಿಡಬೇಕು. ಎದ್ದ ತಕ್ಷಣ ಬೆಡ್ ಶೀಟ್ ಮಡಚಿ ಇಡೋಕೂ ಮುನ್ನ ಅಮ್ಮ ಬೆಡ್ ಕಾಫಿ ತಂದು ಕೊಡಬೇಕು. ಇಲ್ಲ ಅಂದ್ರೆ ಮೂಡ್ ಆಫ್ ಆಗಿಬಿಡುತ್ತೆ. ಒಂದು ಕಪ್‌ ಕಾಫಿಯಿಂದಲೇ ಬಹುತೇಕರ ದಿನಚರಿ ಆರಂಭವಾಗೋದು. ಅದೆಷ್ಟೋ ಮಂದಿ ಕಾಫಿ ಹೀರುತ್ತ ದಿನಪತ್ರಿಕೆ ಓದುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ತಲೆ ನೋವು ಬರಲಿ, ಮನಸ್ಸಿಗೆ ಬೇಜಾರಾಗಲಿ, ಸ್ನೇಹಿತರ ಜೊತೆ ಹರಟೆ, ಗರ್ಲ್ ಫ್ರೆಂಡ್ ಜೊತೆ ಔಟಿಂಗ್ ವೇಳೆಯೂ ಮೊದಲು ನೆನಪಾಗೋದು ಕಾಫಿ. ನಾವೇಕೆ ಕಾಫಿ ಬಗ್ಗೆ ಇಷ್ಟೊಂದು ಹೇಳ್ತಿದ್ದೀವಿ ಅಂದುಕೊಂಡ್ರಾ? ಕಾಫಿ ಉದ್ಯಮದ ರಾಯಭಾರಿಯಾಗಿರುವ ಬೆಂಗಳೂರಿಗೆ ಕಾಫಿ ಪರಿಚಯ ಮಾಡಿದ್ದು ಓರ್ವ ಮಹಿಳೆ. ಅವರು ಯಾರು? ಹೇಗೆ ಎಂಬ ಬಗ್ಗೆ ತಿಳಿಯೋಣ ಈ ಆರ್ಟಿಕಲ್​ನಲ್ಲಿ.

ಬೆಳಗೆದ್ದ ತಕ್ಷಣ ಕಾಫಿ ಕುಡಿಯುವ ಚಟ ದೇಶ, ಭಾಷೆ, ಪಂಥ ಮೀರಿ ಬೆಳೆದಿದೆ. ಪ್ರತಿ ನಿತ್ಯ ಒಂದು ಕಪ್ ಕಾಫಿ ಹೀರುವುದರಿಂದ ಮನಸ್ಸಿಗೆ ಉಲ್ಲಾಸ, ಶಕ್ತಿವರ್ಧಕ, ಆರೋಗ್ಯಕ್ಕೂ ಹಿತಕರ ಎಂದು ಹೇಳಲಾಗುತ್ತೆ. ಭಾರತದಲ್ಲಿ ಕಾಫಿ ಉತ್ಪಾದನೆ, ಬಳಕೆಯಲ್ಲಿ ಗಣನೀಯ ಪಾಲು ಹೊಂದಿರುವುದು ನಮ್ಮ ಕರ್ನಾಟಕ. ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲೇ ಶೇಕಡಾ 70ರಷ್ಟು ಪಾಲು ಇದ್ದರೆ, ಇದರಲ್ಲಿ ಪುಟ್ಟ ಜಿಲ್ಲೆ ಕೊಡಗು ದೇಶದ ಕಾಫಿ ಉತ್ಪಾದನೆಯಲ್ಲಿ ಶೇಕಡಾ 30ಕ್ಕೂ ಅಧಿಕ ಪಾಲು ಹೊಂದಿದೆ. ಕಾಫಿ ಬೀಜವನ್ನು ದೇಶಕ್ಕೆ ಪರಿಚಯಿಸಿದ್ದು ಸೂಫಿ ಸಂತ ಬಾಬಾ ಬುಡನ್ ಎಂಬುವುದು ನಿಮಗೆಲ್ಲಾ ಗೊತ್ತಿರುವ ವಿಚಾರ. ಆದರೆ ನಿಮಗೆ ಗೊತ್ತಾ ಈ ಕಾಫಿಯನ್ನು ಬೆಂಗಳೂರಿಗೆ ಪರಿಚಯಿಸಿದ್ದು ಓರ್ವ ಮಹಿಳೆ.

ತುಮಕೂರಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದು ಕೊಡಗಿನ ಸೊಸೆಯಾಗಿ ಕಾಫಿ ಬೀಜವನ್ನು ಬೆಂಗಳೂರಿಗೆ ತಂದು ಅಲ್ಲೇ ಹುರಿದು ಪುಡಿ ಮಾಡುವ ಮೊದಲ ಮಿಲ್‌ ಅನ್ನು ಸ್ಥಾಪಿಸಿ ಮನೆ ಮನೆಗಳಿಗೂ ಕಾಫಿ ಮಾರಾಟ ಮಾಡಿದ ಮಹಿಳಾ ಉದ್ಯಮಿಯೇ ದೊಡ್ಡ ಮನೆ ಸಾಕಮ್ಮ. ಇವರು ಬೆಂಗಳೂರಿನ ಬಸವನಗುಡಿಯ ಬುಲ್ ಟೆಂಪಲ್‌ ರಸ್ತೆಯಲ್ಲಿ 1920ನೇ ಇಸವಿಯಲ್ಲಿ ಮೊತ್ತ ಮೊದಲ ಕಾಫಿ ಕ್ಯೂರಿಂಗ್ ಹಾಗೂ ಪೌಡರಿಂಗ್ ಘಟಕವನ್ನು ಸ್ಥಾಪಿಸಿದರು. ಇವರನ್ನು ಕರ್ನಾಟಕದ ಪ್ರಥಮ ಮಹಿಳಾ ಉದ್ಯಮಿ ಎಂದೂ ಸಹ ಹೇಳಲಾಗುತ್ತೆ.

ಯಾರು ಈ ಸಾಕಮ್ಮ?

1880ರಲ್ಲಿ ತುಮಕೂರು ಜಿಲ್ಲೆಯ ಬಿದರೆ ಎಂಬ ಊರಿನಲ್ಲಿ ಜನಿಸಿದ ಸಾಕಮ್ಮ ಅವರು ಕೆಳಮದ್ಯಮ ವರ್ಗದ ನೇಕಾರರ ಕುಟುಂಬದವರು. ಸಾಕಮ್ಮನವರ ಕುಟುಂಬ ಉತ್ತಮ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಚಿಕ್ಕ ವಯಸ್ಸಿನಿಂದಲೇ ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದ ಸಾಕಮ್ಮ ಅವರ ಆಸೆಗೆ ಪೋಷಕರೂ ಸಕಾರಾತ್ಮಕವಾಗೇ ಸ್ಪಂದಿಸಿದರು. ಬಡತನವಿದ್ದರೂ ಸಾಕಮ್ಮನವರ ತಂದೆ ಅವರನ್ನು ಆಗಿನ ಮೆಟ್ರಿಕ್ಯುಲೇಷನ್ ವರೆಗೆ ಓದಿಸಿದ್ದರು. ಅಂದಿನ ಕಾಲದಲ್ಲೇ ಮಾಧ್ಯಮಿಕ ಶಿಕ್ಷಣ ಪಡೆದ ಕೆಲವೇ ಬಾಲಕಿಯರಲ್ಲಿ ಸಾಕಮ್ಮ ಕೂಡ ಒಬ್ಬರು.

ಆ ಕಾಲದಲ್ಲಿ ಅವರ ಜನಾಂಗದ ಹೆಣ್ಣು ಮಕ್ಕಳು ಕೆಲವು ಹಬ್ಬ-ಹರಿ ದಿನಗಳ ಸಂದರ್ಭದಲ್ಲಿ ತಮ್ಮ ಜಾತಿಯ ಬಂಧುಗಳ ಮನೆ‌ಗಳಿಗೆ ಹೋಗಿ ದೇವರನಾಮಗಳನ್ನು ಹಾಡುವ ಸಂಪ್ರದಾಯವಿತ್ತು. ಹೀಗೆ ಒಮ್ಮೆ ಸಾಕಮ್ಮ ತಮ್ಮ ಗೆಳತಿಯರೊಂದಿಗೆ ಹಾಡಲು ಹೋಗಿದ್ದಾಗ ಅವರನ್ನು ಅಂದಿನ ಆಗರ್ಭ ಶ್ರೀಮಂತ, ಕೊಡಗಿನ ಅತಿದೊಡ್ಡ ಕಾಫಿ ಪ್ಲಾಂಟರ್ ಆಗಿದ್ದ ದೊಡ್ಡ ಮನೆ ಚಿಕ್ಕಬಸಪ್ಪನವರು ನೋಡಿ ಇಷ್ಟಪಟ್ಟಿದ್ದರು. ಚಿಕ್ಕಬಸಪ್ಪನವರಿಗೆ ಆಗಾಗಲೇ ಎರಡು ಮದುವೆಯಾಗಿ ಮಕ್ಕಳಿರಲಿಲ್ಲ. ಅಲ್ಲದೆ ಕುಟುಂಬದ ಆರ್ಥಿಕ ಮುಗ್ಗಟ್ಟಿನ ಕಾರಣದಿಂದಾಗಿ ಸಾಕಮ್ಮನವರಿಗಿಂತ ತುಂಬಾ ಹಿರಿಯರಾಗಿದ್ದ ಸೋಮವಾರಪೇಟೆಯ ಸಾಹುಕಾರ ದೊಡ್ಡಮನೆ ಬಸಪ್ಪ ಅವರೊಂದಿಗೆ ಮಗಳ ಮದುವೆ ಮಾಡಲು ಕುಟುಂಬಸ್ಥರು ಒಪ್ಪಿದರು. ಸಾಕಮ್ಮ ಅವರು ತಮ್ಮ ಹದಿನಾರನೇ ವಯಸ್ಸಿನಲ್ಲೇ ಅನಿವಾರ್ಯವಾಗಿ ವರಿಸಬೇಕಾಯಿತು. ಸಾಕಮ್ಮ ಚಿಕ್ಕಬಸಪ್ಪನವರ ಮೂರನೆಯ ಪತ್ನಿಯಾಗಿ ಕೊಡಗಿಗೆ ಬಂದರು.

ಮದುವೆ ಆದ ಎರಡೇ ವರ್ಷಗಳಲ್ಲಿ ಚಿಕ್ಕ ಬಸಪ್ಪ ಅವರು ತೀರಿಕೊಂಡರು. ಬಸಪ್ಪನವರ ಮೊದಲ ಹಾಗೂ ಎರಡನೇ ಪತ್ನಿಯರು ಕೂಡ ಕೆಲವೇ ವರ್ಷಗಳಲ್ಲಿ ತೀರಿಕೊಂಡರು. ಕುಟುಂಬ, ಕೃಷಿ, ಆರ್ಥಿಕ ವಹಿವಾಟಿನ ಜವಾಬ್ದಾರಿ ಸಾಕಮ್ಮನವರ ಹೆಗಲ ಮೇಲೆ ಬಿತ್ತು. ಅಂದಿನ ಬ್ರಿಟಿಷ್‌ ಕಾಲದಲ್ಲೇ ಸಾಕಮ್ಮ ಕುಟುಂಬಕ್ಕೆ ನೂರಾರು ಎಕರೆ ಕಾಫಿ ತೋಟವಿತ್ತು. ಬುದ್ಧಿವಂತಳಾಗಿದ್ದ ಸಾಕಮ್ಮ ಜಾಣ್ಮೆಯಿಂದ ನೂರಾರು ಎಕರೆ ಕಾಫಿ ತೋಟದ ಉಸ್ತುವಾರಿ ವಹಿಸಿಕೊಂಡು ಕಾಫಿ ಇಳುವರಿ ಹೆಚ್ಚಾಗಲು ಕಾರಣರಾದರು. ನಂತರ ಉತ್ಪನ್ನದ ವಿಲೇವಾರಿಗೆ ಯೋಜನೆಗಳನ್ನು ಮಾಡಲಾರಂಭಿಸಿದರು.

ಬಸವನಗುಡಿಯಲ್ಲಿ ಮೊದಲ ಕಾಫಿ ಕ್ಯೂರಿಂಗ್

ಕಾಫಿ ಉದ್ಯಮದ ಏಳು-ಬೀಳುಗಳನ್ನು ಅರಿತ ಬಳಿಕ ಸಾಕಮ್ಮನವರು 1920ರಲ್ಲಿ ಬಸವನಗುಡಿಯ ಬುಲ್ ಟಂಪಲ್ ರಸ್ತೆಯಲ್ಲಿ ಮೊತ್ತ ಮೊದಲ ಕಾಫಿ ಕ್ಯೂರಿಂಗ್ ಹಾಗೂ ಪೌಡರಿಂಗ್ ಘಟಕವನ್ನು ಸ್ಥಾಪಿಸಿದರು. ಅಂದಿನ ಕಾಲದಲ್ಲಿ ಭಾರತದಲ್ಲಿ ಯಂತ್ರೋಪಕರಣಗಳು ಇಲ್ಲದಿದ್ದ ಕಾರಣದಿಂದಾಗಿ ಇಂಗ್ಲೆಂಡ್‌ ನಿಂದ ಯಂತ್ರಗಳನ್ನು ತರಿಸಲಾಯಿತು. ಸಾಕಮ್ಮಾಸ್ ಕಾಫಿ ವರ್ಕ್ಸ್ ಸ್ಥಾಪನೆಯಾಗಿ, ಸಾಕಮ್ಮ ಕರ್ನಾಟಕದ ಪ್ರಥಮ ಮಹಿಳಾ ಉದ್ಯಮಿ ಎಂಬ ಮನ್ನಣೆಗೆ ಪಾತ್ರರಾದರು.

ಸಾಕಮ್ಮ ಅವರ ಕಾಫಿ ಪುಡಿ ಬಹು ಬೇಗ ಬೆಂಗಳೂರಿಗರ ಮನಸ್ಸು ಗೆದ್ದು ಜನಪ್ರಿಯವಾಗಿ ಕಾಫಿ ಪುಡಿ ಸಾಕಮ್ಮ ಎಂಬ ಹೆಸರೂ ಅವರಿಗೆ ಬರಲು ಕಾರಣವಾಯಿತು. ಇವರ ಘಟಕದಿಂದ ಕಾಫಿ ಪುಡಿ ಖರೀದಿಸಿ ಅನೇಕರು ನಗರದ ವಿವಿಧೆಡೆಗಳಲ್ಲಿ ಕಾಫಿ ಮಾರಾಟ ಕೇಂದ್ರಗಳನ್ನು ತೆರೆದರು. ಕನ್ನಡದ ಜನಪ್ರಿಯ ಸಾಹಿತಿಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಮತ್ತು ಡಿ ವಿ ಗುಂಡಪ್ಪ ಅವರು ತಮ್ಮ ಸಾಹಿತ್ಯ ರಚನೆಗಳಲ್ಲಿ ಸಾಕಮ್ಮ ಅವರ ಕಾಫಿ ಬಗ್ಗೆ ಉಲ್ಲೇಖಿಸಿದ್ದು ವಿಶೇಷ.

Karnataka First Woman Entrepreneur kodagu Coffee Pudi Sakamma who introduced coffee to bengaluru

ಸಾಕಮ್ಮ ಉದ್ಯಮಿ ಮಾತ್ರವಲ್ಲದೆ ಸಮಾಜಸೇವೆಗೂ ಸೈ

ಸಾಕಮ್ಮ ಅವರು ಆಗಿನ ಕಾಲಕ್ಕೆ ಬ್ರಿಟಿಷರೊಡಗೂಡಿ ಕಾಫಿಯನ್ನು ಹಡಗಿನಲ್ಲಿ ರಪ್ತು ಮಾಡಿದರು. ಸಾಕಮ್ಮ ಅವರು ಯಶಸ್ವಿ ಉದ್ಯಮಿ ಮಾತ್ರವಲ್ಲ ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಆಗಿನ ಮೈಸೂರು ಸರ್ಕಾರ ಕೈಗಾರಿಕಾ ಅಭಿವೃದ್ಧಿ ಮಾಡಲು ಸಮಿತಿಯೊಂದನ್ನು ರಚಿಸಿ ಅದಕ್ಕೆ ಸಾಕಮ್ಮ ಅವರನ್ನು ಮುಖ್ಯಸ್ಥೆಯನ್ನಾಗಿ ನೇಮಕ ಮಾಡಿತು. ಈ ಮೂಲಕ ಹಲವು ಕೈಗಾರಿಕಾ ಮತ್ತು ನೀರಾವರಿ ಯೋಜನೆಗಳಿಗೆ ಸಹಾಯ ಮಾಡಿ ಬೆಂಬಲವಾಗಿ ನಿಂತು ಸಾಕಮ್ಮ ದೇಶಕ್ಕೆ ಕೊಡುಗೆ ನೀಡಿದ್ದಾರೆ.

ಮದುವೆಯಾದ ಎರಡೇ ವರ್ಷಕ್ಕೆ ಗಂಡ ಕಳೆದುಕೊಂಡ ಸಾಕಮ್ಮಗೆ ಮಕ್ಕಳಿರಲಿಲ್ಲ. ಆದರೆ ಆ ಕಾಲದಲ್ಲೇ ಸಾಕಮ್ಮ ಅವರು ನೂರಾರು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ವಿಶ್ವೇಶ್ವರಪುರಂನಲ್ಲಿ ಸಾಕಮ್ಮ ಹಾಸ್ಟೆಲ್ ನಿರ್ಮಿಸಿದ್ದರು. ಇದು ಈಗ ಕುರುಹಿನಶೆಟ್ಟಿ ಸಂಘದ ಕೇಂದ್ರ ಕಚೇರಿಯಾಗಿದೆ. ಇಲ್ಲೇ ಕಲ್ಯಾಣ ಮಂಟಪವೂ ಇದೆ. ಇದರ ಜೊತೆಗೆ ಹಲವಾರು ದಾನ ಧರ್ಮ ಕಾರ್ಯಗಳನ್ನೂ ಮಾಡಿ ಹೃದಯವಂತರೆನಿಸಿಕೊಂಡಿದ್ದಾರೆ. ಬಸವನಗುಡಿಯಲ್ಲಿ ಕಾಫಿ ಕ್ಯೂರಿಂಗ್ ಘಟಕವನ್ನು ನಡೆಸುತ್ತಿದ್ದ ಪ್ರದೇಶವನ್ನು ಈಗಲೂ ಸಾಕಮ್ಮ ಗಾರ್ಡನ್ ಎಂದು ಕರೆಯಲಾಗುತ್ತೆ.

Karnataka First Woman Entrepreneur kodagu Coffee Pudi Sakamma who introduced coffee to bengaluru ವ್ಯಾಪಾರ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಅವರು ಮಾಡಿದ ಸೇವೆಯನ್ನು ಗುರುತಿಸಿ, ಮೈಸೂರು ಮಹಾರಾಜರಾದ ಶ್ರೀ ಕೃಷ್ಣರಾಜ ಒಡೆಯರ್ ಅವರು ಸಾಕಮ್ಮ ಅವರಿಗೆ ‘ಲೋಕಸೇವಾ ಪಾರಾಯಣೆ’ ಎಂಬ ಪ್ರತಿಷ್ಠಿತ ಬಿರುದನ್ನು ನೀಡಿ ಗೌರವಿಸಿದರು. ಮಹಿಳೆಯರು ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಸೀಮಿತ ಅವಕಾಶಗಳನ್ನು ಹೊಂದಿದ್ದ ಆ ಕಾಲದಲ್ಲಿ ಬ್ರಿಟಿಷರು ಅವರಿಗೆ ‘ಕೈಸರ್-ಐ-ಹಿಂದ್’ (JEWEL OF INDIA) ಪದಕವನ್ನು ನೀಡಿತ್ತು.

ಉದ್ಯಮಿಯಾಗಿ ಕರ್ನಾಟಕದ ಕಾಫಿಗೆ ಅಂತರರಾಷ್ಟ್ರೀಯ ಮೌಲ್ಯ ತಂದುಕೊಟ್ಟ ಸಾಕಮ್ಮ ಅವರು 1928ರಲ್ಲಿ ಮೈಸೂರು ಪ್ರತಿನಿಧಿ ಸಭೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಮಹಾತ್ಮ ಗಾಂಧೀಜಿಯವರ ಆತಿಥ್ಯ ನಿರಾಕರಿಸಿದ್ದ ಸಾಕಮ್ಮ

ಮಹಾತ್ಮಾ ಗಾಂಧಿ ಅವರು 1934ರಲ್ಲಿ ಕೊಡಗಿಗೆ ಭೇಟಿ ನೀಡಿದ್ದರು. ಆ ವೇಳೆ ಡಿ. ವಿನೋದ್ ಶಿವಪ್ಪ ಅಜ್ಜಿ ಬಸವೇಶ್ವರ ರಸ್ತೆಯಲ್ಲಿರುವ ಶ್ರೀಮತಿ ದೊಡ್ಡಮನೆ ಸಾಕಮ್ಮ ಮನೆಯಲ್ಲಿ ತಂಗುವುದೆಂದು ನಿರ್ಧರಿಸಲಾಗಿತ್ತು. ಆದರೆ ಇದನ್ನು ತಿಳಿದ ಬ್ರಿಟಿಷರು ಗಾಂಧಿಯನ್ನು ನಿಮ್ಮಲ್ಲಿಗೆ ಬರಮಾಡಿಕೊಂಡರೆ ನಾವು ನಿಮ್ಮ ಕಾಫಿಯನ್ನು‌ ಕೊಳ್ಳುವುದಿಲ್ಲ. ನಿಮ್ಮ ಉದ್ಯಮವನ್ನು ಬೆಂಬಲಿಸುವುದಿಲ್ಲ ಎಂದು ಬೆದರಿಕೆ ಹಾಕಿದರಂತೆ. ಹೀಗಾಗಿ ಸಾಕಮ್ಮ ಅವರು ತಮ್ಮ ಮನೆಗೆ ಗಾಂಧೀಜಿ ಭೇಟಿಯನ್ನು ನಿರಾಕರಿಸಿದ್ದರು ಎನ್ನಲಾಗುತ್ತೆ.

ಆ ಸಮಯದಲ್ಲಿ ಆಯೋಜಕರು ಬೇಳೂರು ಬಾಣೆ ಪಕ್ಕದ ಬಿ. ಬಿ. ಗುರಪ್ಪ ಮನೆಯಲ್ಲಿ ಗಾಂಧೀಜಿಯವರ ಆತಿಥ್ಯಕ್ಕೆ ಏರ್ಪಾಡು ಮಾಡಿದರು. ಆದರೆ, ಗಾಂಧೀಜಿ ಭೇಟಿಯ ಅಭೂತಪೂರ್ವ ಕ್ಷಣಗಳಿಗೆ ಏಕೈಕ ಸಾಕ್ಷಿ ಆಗಿದ್ದ ಗುರಪ್ಪ ಪತ್ನಿ ಗಂಗಮ್ಮ (101) ಶತಾಯುಷಿಗಳಾಗಿ 2015ರಂದು ಅದೇ ಮನೆಯಲ್ಲಿ ನಿಧನರಾದರು. ಗುರಪ್ಪ ಸಕಲೇಶಪುರದ ಶಾಸಕರಾಗಿದ್ದ ಬಿ. ಬಿ. ಶಿವಪ್ಪ ಸಹೋದರ.

ಗುರಪ್ಪನವರ ಮನೆ ಬಳಿಕ ಗಾಂಧೀಜಿ, ಗುಂಡುಕುಟ್ಟಿ ಮಂಜುನಾಥಯ್ಯನವರಲ್ಲಿಗೆ ಹೋದರು. ಆ ಸಂದರ್ಭದಲ್ಲಿ ಗಾಂಧೀಜಿ ಬೇಳೂರಿನ ಗುರಪ್ಪನವರಲ್ಲಿ ಉಳಿದುಕೊಂಡದ್ದನ್ನು ಗುಟ್ಟಾಗಿಯೇ ಇಟ್ಟ ಕಾರಣ ಆ ವಿಚಾರ ಸರ್ಕಾರಿ ದಾಖಲೆಗಳಲ್ಲಿ ದಾಖಲಾಗದೆ ಉಳಿಯಿತು.

ತಾಜಾ ಸುದ್ದಿ
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?
Horoscope:ಈ ರಾಶಿಯವರಿಗೆ ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಗುವರು
Horoscope:ಈ ರಾಶಿಯವರಿಗೆ ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಗುವರು
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ