AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೂಟೌಟ್​​​​​​ಗೆ ಪ್ರತೀಕಾರ: ಅರಣ್ಯಾಧಿಕಾರಿಗಳ ಹತ್ಯೆಗೆ ಶಿಬಿರ ಸ್ಫೋಟ ಬಳಿಕ ಸೋಲಾರ್ ಫೆನ್ಸಿಂಗ್ ಪುಡಿ-ಪುಡಿ

ಚಾಮರಾಜನಗದ ಹಾನೂರು ಅರಣ್ಯ ಅಧಿಕಾರಿಗಳ ಎನ್ ಕೌಂಟರ್ ಗೆ ಮೂವರು ಸಾವನ್ನಪ್ಪಿರುವ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಇದರ ನಡುವೆ ಪ್ರಕರಣದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಹೌದು.. ಎನ್ ಕೌಂಟರ್ ಬಳಿಕ ಅರಣ್ಯ ಇಲಾಖೆಯನ್ನೇ ಕಾಡುಗಳ್ಳರು ಟಾರ್ಗೆಟ್ ಮಾಡಿದ್ದು, ತನಿಖೆ ವೇಳೆ ರಿವೀಲ್ ಆಗಿದೆ. ಆಗಸ್ಟ್ 15 ರ ಬಳಿಕ ನಡೆದ ಪ್ರತಿಭಟನೆಯ ದೊಡ್ಡ ಷಡ್ಯಂತ್ರವನ್ನ ಟಿವಿ9 ದಾಖಲೆ ನಮೇತ ಬಟಾಬಯಲು ಮಾಡಿದೆ.

ಶೂಟೌಟ್​​​​​​ಗೆ ಪ್ರತೀಕಾರ: ಅರಣ್ಯಾಧಿಕಾರಿಗಳ ಹತ್ಯೆಗೆ ಶಿಬಿರ ಸ್ಫೋಟ ಬಳಿಕ ಸೋಲಾರ್ ಫೆನ್ಸಿಂಗ್ ಪುಡಿ-ಪುಡಿ
Hanur Shoot Out
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on:Aug 22, 2026 | 6:02 PM

Share

ಚಾಮರಾಜನಗರ, (ಆಗಸ್ಟ್ 22): ಹಾನೂರು ಎನ್ ಕೌಂಟರ್ ಪ್ರಕರಣ (Hanur Shootout Case) ಬಳಿಕ ಕಾಡುಗಳ್ಳರು, ಅರಣ್ಯ ಇಲಾಖೆಯನ್ನೇ (Forest Department)  ಟಾರ್ಗೆಟ್ ಮಾಡಿದ್ದು, ತನಿಖೆಯಲ್ಲಿ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ಆಗಸ್ಟ್ 15ರ ಬಳಿಕ ನಡೆದ ಪ್ರತಿಭಟನೆಯ ದೊಡ್ಡ ಷಡ್ಯಂತ್ರವನ್ನ ಟಿವಿ9 ದಾಖಲೆ ನಮೇತ ಬಟಾಬಯಲು ಮಾಡಿದೆ. ಯಾವಾಗ ಅರಣ್ಯ ಅಧಿಕಾರಿಗಳ ಎನ್ ಕೌಂಟರ್ ಗೆ ಮೂವರು ಬಲಿಯಾದ್ರೋ ಅಂದಿನಿಂದ ಪಕ್ಕಾ ಪ್ರಿ ಪ್ಲಾನ್ ಮಾಡಿದ ದುಷ್ಕರ್ಮಿಗಳು, ಈಗ ಅರಣ್ಯ ಇಲಾಖೆಯನ್ನ ಟಾರ್ಗೆಟ್ ಮಾಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕಾಡಿನಿಂದ ನಾಡಿಗೆ ಕಾಡಾನೆ ಬರಬಾರದು ಎಂದು ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ಹಾಗೂ ತೋಮಿಯರ್ ಪಾಳ್ಯದಲ್ಲಿದ್ದ ಹಾಕಲಾಗಿದ್ದ ಸೋಲಾರ್ ಗೇಟ್ ಸೋಲಾರ್ ಫೆನ್ಸಿಂಗ್ ಹಾಗೂ ಸೋಲಾರ್ ತಂತಿಯನ್ನ ಧ್ವಂಸ ಮಾಡಿದ್ದಾರೆ.

ಎನ್ ಕೌಂಟರ್ ಆದ ಬಳಿಕ ಮೃತನ ಕುಟುಂಬಸ್ಥರು ಗ್ರಾಮಸ್ಥರು ಎಲ್ಲ ಹನೂರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸ್ಥಯಿದ್ರು ಈ ವೇಳೆ ಅರಣ್ಯ ಇಲಾಖೆಯನ್ನ ಟಾರ್ಗೆಟ್ ಮಾಡಿದ್ದ 30 ಕ್ಕೂ ಹೆಚ್ಚು ಕಾಡುಗಳ್ಳರು 5 ಲೋಕೇಷನ್ ನಲ್ಲಿ ಪ್ರತಿಭಟನಾಕಾರರನ್ನ ಕುಮ್ಮಕ್ಕು ನೀಡಿ. ಅರಣ್ಯ ಇಲಾಖೆ ವಿರುದ್ದ ತಿರುಗಿ ಬೀಳುವಂತೆ ಮಾಡಿದ್ರು. ಪಚ್ಚೆದೊಡ್ಡಿ ಗ್ರಾಮದ ಗೋವಿಂದ ಅಲಿಯಾಸ್ ಮರಿ ವೀರಪ್ಪನ್ ಅರಣ್ಯ ಇಲಾಖೆ ಕಚೇರಿಗೆ ನುಗ್ಗೋಣ ಬನ್ನಿ ಅಂತ ರೊಚ್ಚಿಗೆಬ್ಬಿಸಿದ್ರೆ ರಾಬರ್ಟ್ ಪಿಂಟೊ ಪೆರಿಯನಾಯಗನ್ ರೈತ ಸಂಘಟನೆಯವರ ಜೊತೆಗೂಡಿ ಅರಣ್ಯ ಇಲಾಖೆ ವಿರುದ್ದ ಷಡ್ಯಂತ್ರ ಮಾಡಿದ್ದು ಈಗ ತನಿಖೆ ವೇಳೆ ರಿವೀಲ್ ಆಗಿದೆ.

ಇದನ್ನೂ ಓದಿ: ಹನೂರು ಫೈರಿಂಗ್​​ ಪ್ರಕರಣ: ಧರಣಿ ನಿರತರಿಗೆ ಪ್ರಚೋದನೆ ನೀಡಿದ್ದು ಮರಿ ವೀರಪ್ಪನ್​​!; ವಿಡಿಯೋ ವೈರಲ್​​

ಈ ರಾರ್ಬಟ್ ಪಿಂಟೊ ಮೇಲೆ ಕೇವಲ ಕರ್ನಾಟಕ ಅಷ್ಟೇ ಅಲ್ಲದೆ ತಮಿಳುನಾಡಿನ ಅರಣ್ಯ ಇಲಾಖೆಯಲ್ಲು ಈ ದುಷ್ಕರ್ಮಿಯ ವಿರುದ್ದ ಪ್ರಕರಣಗಳು ಇರುವುದು ಈ ರಿವೀಲ್ ಆಗಿದೆ. ಅದೇನೆ ಹೇಳಿ ಆಫ್ಟರ್ ಎನ್ ಕೌಂಟರ್ ಅರಣ್ಯ ಇಲಾಖೆ ಸಿಬ್ಬಂದಿ ಕಚೇರಿ ಹಾಗೂ ಕಳ್ಳಬೇಟೆ ತಡೆ ಶಿಬಿರಗಳೇ ಟಾರ್ಗೆಟ್ ಆಗಿರುವುದು ಈಗ ಬಟಾ ಬಯಲಾಗಿದೆ. ಇವರನ್ನ ಹೀಗೆ ಬಿಟ್ರೆ ಮುಂದೆ ದೊಡ್ಡ ಅನಾಹುತವಂತು ಕಟ್ಟಿಟ್ಟ ಬುತ್ತಿಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:01 pm, Sat, 22 August 26

Follow Us
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ