Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದಲ್ಲಿ ಹೊಸ ಸಂವಿಧಾನ ತರುವ ಸಂಚು ನಡೆಯುತ್ತಿದೆ: ಸ್ವಾಮೀಜಿ

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಭಾರತದಲ್ಲಿ ಹೊಸ ಸಂವಿಧಾನ ರಚನೆಯ ಸಂಚು ನಡೆಯುತ್ತಿದೆ ಎಂದು ಹೇಳಿದ್ದಾರೆ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ತಿರಸ್ಕರಿಸಿ ಹಿಂದೂ ರಾಷ್ಟ್ರಕ್ಕೆ ಹೊಸ ಸಂವಿಧಾನ ತರುವ ಯತ್ನಿಸಲಾಗುತ್ತಿದೆ. ಈ ಸಂಚಿನಿಂದ ದೇಶಕ್ಕೆ ಅಪಾಯವಿದೆ ಎಂದು ಹೇಳಿ ಜನರಲ್ಲಿ ಜಾಗೃತಿ ಮೂಡಿಸಬೇಕು.ವೇದ ಅಧ್ಯಯನ ಮಾಡಿದವರು ಮಾತ್ರ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂದು ಹೇಳಿದರು.

ದೇಶದಲ್ಲಿ ಹೊಸ ಸಂವಿಧಾನ ತರುವ ಸಂಚು ನಡೆಯುತ್ತಿದೆ: ಸ್ವಾಮೀಜಿ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ವಿವೇಕ ಬಿರಾದಾರ

Updated on: Jan 29, 2025 | 10:30 AM

ಚಿತ್ರದುರ್ಗ, ಜನವರಿ 29: ನಮ್ಮ ದೇಶದಲ್ಲಿ ಹೊಸ ಸಂವಿಧಾನ (Constitution) ತರುವ ಸಂಚು ನಡೆಯುತ್ತಿದೆ. ಡಾ. ಬಿಆರ್​ ಅಂಬೇಡ್ಕರ್ (BR Ambedkar) ಸಂವಿಧಾನವನ್ನು ಹಿಂದೆ ಹಾಕಿ ಹೊಸ ಸಂವಿಧಾನ ತರುವ ಸಂಚು ರೂಪಿಸಲಾಗುತ್ತಿದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ (Panditaradhya Shivacharya Swamiji) ಹೇಳಿದರು. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ನಡೆದ ನಮ್ಮ ನಡೆ ಸರ್ವೋದಯದೆಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಚು ಜಾರಿಗೆ ಬರುವ ಮುನ್ನ ನಾವೆಲ್ಲರೂ ಜಾಗೃತರಾಗಬೇಕಿದೆ. ಜಾಗೃತರಾಗದಿದ್ದರೆ ನಾಳೆ ನಮ್ಮ ನಾಡಿಗೆ ಖಂಡಿತ ಉಳಿಗಾಲವಿಲ್ಲ ಎಂದರು.

ಹಿಂದೂ ರಾಷ್ಟ್ರಕ್ಕೆ ಸಂವಿಧಾನ ಸಿದ್ಧ ಎಂದು ಪತ್ರಿಕೆಯಲ್ಲಿ ಬರೆಯಲಾಗಿದೆ. ಹಾಗಾದರೆ ಈಗಿರುವ ಸಂವಿಧಾನ ಏನು ಮಾಡ್ತೀರಿ. ಹೊಸ ಸಂವಿಧಾನ ತರೋದಾದರೇ ಹಳೇ ಸಂವಿಧಾನ ಸುಟ್ಟು ಹಾಕಬೇಕಾ? ನಾಶಪಡಿಸಿ ಬಹಿಷ್ಕಾರ ಹಾಕಬೇಕಾ ಎಂದು ಗಂಭೀರವಾಗಿ ಯೋಚಿಸಬೇಕಿದೆ. ಆ ಸಂವಿಧಾನದ ಸತ್ವ ಇದರಲ್ಲಿ ಇದೆಯಾ ಎಂದು ನೋಡಿದ್ರೆ ಖಂಡಿತ ಇಲ್ಲ ಎಂದು ಹೇಳಿದರು.

ಸನಾತನ ಪರಂಪರೆಯನ್ನು ಉಳಿಸಬೇಕು ಎಂದು ತಿಳಿಸಲಾಗಿದೆ. ವೇದ ಅಧ್ಯಯನ ಮಾಡಿದವರು ಮಾತ್ರ ಚುನಾವಣೆಗೆ ಬರಬೇಕು ಎಂದಿದೆ. ನಾವು ಯಾರೂ ವೇದ ಓದಿಲ್ಲ. ಲಿಂಗಾಯತ, ಬಸವ ಧರ್ಮದವರು ಸನಾತನ ಪರಂಪರೆ ವಿರೋಧಿಸಿದ್ದವರು. ಹಾಗಾದರೆ ನಾವು ಯಾರೂ ಚುನಾವಣೆಯಲ್ಲಿ ಭಾಗವಹಿಸುವ ಹಾಗಿಲ್ವಾ? ಎಂದು ಪ್ರಶ್ನಿಸಿದರು.

ಮನುಸ್ಮೃತಿಯನ್ನು ಅಂಬೇಡ್ಕರ್​ ಸುಟ್ಟು ಹಾಕಿದ್ದು ನಿಮಗೆ ಗೊತ್ತಿದೆ. ಪೀಠಾಧಿಪತಿಗಳ ಒಪ್ಪಿಗೆ ಬಳಿಕ ಸಂವಿಧಾನ ರಚಿಸಲು ಹೇಳಿದ್ದಾರೆ. ಹಾಗಾದರೆ ನಾಲ್ಕು ಪೀಠಗಳು ಯಾವವು? ನಾವು ಯಾರು ಅಲ್ವಾ? ಜಗತ್ತಿನಲ್ಲಿ ಅವು ನಾಲ್ಕು ಪೀಠಗಳು ಮಾತ್ರ ಇರೋದಾ? ಸರಿಯಾಗಿ ಯೋಚಿಸದಿದ್ರೆ ನಾಳೆ ತಲೆ ಬೋಳಿಸಿಕೊಳ್ಳಬೇಕಾಗುತ್ತೆ. ನಮ್ಮ ಬದುಕು ನರಕವಾಗಿ ಬಿಡುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲಿಂಗಾಯತ, ಇಸ್ಲಾಂ ಈ ವಿಷಯಗಳಲ್ಲಿ ಒಂದೇ ಎಂದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ!

ಬಸವಣ್ಣನವರು ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂದಿದ್ದಾರೆ. ಆದರೆ ಇಲ್ಲಿ ಜ್ಞಾನಕ್ಕೆ ಅವಕಾಶವೇ ಇಲ್ಲದಂತಾಗಿದೆ. ಹಿಂದೂ ರಾಷ್ಟ್ರಕ್ಕೆ ಹೊಸ ಸಂವಿಧಾನ ತರುವ ಸಿದ್ಧತೆ ನಡೆದಿದೆ. ಇಡೀ ರಾಷ್ಟ್ರದಲ್ಲಿ ಇದರ ವಿರುದ್ಧ ಒಂದು ಹೋರಾಟ ನಡೆಯಬೇಕಿದೆ. ದಯೆ ಇಲ್ಲದ ಧರ್ಮ ಯಾವುದಯ್ಯ ಎಂದು ಒಂದುಕಡೆ ಹೇಳುತ್ತೀರಿ. ಆದರೆ ದಯೆ ಹೀನರಾಗಿ ಇಂತಹ ಸಂವಿಧಾನ ರಚನೆ ಮಾಡುತ್ತೀರಿ. ಇದರ ಬಗ್ಗೆ ನಮ್ಮ ಜನ ಧ್ವನಿ ಎತ್ತಬೇಕಿದೆ. ಚಿಂತಕರು ಧ್ವನಿ ಎತ್ತದಿದ್ದರೆ ನಿಮ್ಮ ಧ್ವನಿ ಅಡಗುವ ಸ್ಥಿತಿ ಬರಲಿದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್​ಎನ್​ಎಲ್;ಜ್ಯೋತಿರಾದಿತ್ಯ ಸಿಂಧಿಯಾ
2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್​ಎನ್​ಎಲ್;ಜ್ಯೋತಿರಾದಿತ್ಯ ಸಿಂಧಿಯಾ
ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ
ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ
ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ
ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ
ಡಾಕ್ಟ್ರಮ್ಮ ತಂಗಿಯಾಗಿ ಸಿಕ್ಕಿರೋದು ಬಹಳ ಖುಷಿಯಾಗ್ತಿದೆ: ಧನಂಜಯ ಅತ್ತಿಗೆ
ಡಾಕ್ಟ್ರಮ್ಮ ತಂಗಿಯಾಗಿ ಸಿಕ್ಕಿರೋದು ಬಹಳ ಖುಷಿಯಾಗ್ತಿದೆ: ಧನಂಜಯ ಅತ್ತಿಗೆ
ಪಾಕಿಸ್ತಾನದಲ್ಲಿ ಕಿಂಗ್ ಕೊಹ್ಲಿ ಕ್ರೇಝ್: ಕರಾಚಿಯಲ್ಲಿ ಮೊಳಗಿದ RCB ಹರ್ಷೋದ್
ಪಾಕಿಸ್ತಾನದಲ್ಲಿ ಕಿಂಗ್ ಕೊಹ್ಲಿ ಕ್ರೇಝ್: ಕರಾಚಿಯಲ್ಲಿ ಮೊಳಗಿದ RCB ಹರ್ಷೋದ್
ಬೆಂಗಳೂರಿನಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿ ಲೈವ್
ಬೆಂಗಳೂರಿನಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿ ಲೈವ್
ಮತ್ತೊಮ್ಮೆ ನಾಲಗೆ ಮೇಲೆ ಹಿಡಿತ ತಪ್ಪಿದ ಸಹಕಾರ ಸಚಿವ ಕೆಎನ್ ರಾಜಣ್ಣ
ಮತ್ತೊಮ್ಮೆ ನಾಲಗೆ ಮೇಲೆ ಹಿಡಿತ ತಪ್ಪಿದ ಸಹಕಾರ ಸಚಿವ ಕೆಎನ್ ರಾಜಣ್ಣ
ಈ ಸರ್ಕಾರ ತನ್ನನೇನೂ ಮಾಡಲಾಗಲ್ಲ: ಕುಮಾರಸ್ವಾಮಿ, ಕೇಂದ್ರ ಸಚಿವ
ಈ ಸರ್ಕಾರ ತನ್ನನೇನೂ ಮಾಡಲಾಗಲ್ಲ: ಕುಮಾರಸ್ವಾಮಿ, ಕೇಂದ್ರ ಸಚಿವ
ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ ಆರೋಪ, ಎಸ್​ಪಿ ಹೇಳಿದ್ದೇನು?
ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ ಆರೋಪ, ಎಸ್​ಪಿ ಹೇಳಿದ್ದೇನು?
ಮೋದಿ ಬುದ್ಧಿವಂತಿಕೆ, ಚಾಣಾಕ್ಷತನವನ್ನ ಕೊಂಡಾಡಿದ ವಿದೇಶಿ ಮಾಧ್ಯಮಗಳು
ಮೋದಿ ಬುದ್ಧಿವಂತಿಕೆ, ಚಾಣಾಕ್ಷತನವನ್ನ ಕೊಂಡಾಡಿದ ವಿದೇಶಿ ಮಾಧ್ಯಮಗಳು