AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಮದ್ವೆಯಲ್ಲಿ ಪಾಲ್ಗೊಂಡರೂ ಹಾಲಿ-ಮಾಜಿ ಸಿಎಂಗಳು ದೂರ ದೂರಾ! ಏಕೆ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಣ್ಣಳತೆಯಲ್ಲೇ ಇದ್ದರೂ ಮಾಜಿ ಸಿಎಂ ಜಗದೀಶ ಶೆಟ್ಟರ್ ಅತ್ತ ತಿರುಗಿಯೂ ನೋಡಲಿಲ್ಲ. ಇದರೊಂದಿಗೆ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ‌ ಜಗದೀಶ ಶೆಟ್ಟರ್ ನಡುವಣ ಮುನಿಸು ಜಾರಿಯಲ್ಲಿದೆ ಎಂಬಂತಾಗಿದೆ.

ಒಂದೇ ಮದ್ವೆಯಲ್ಲಿ ಪಾಲ್ಗೊಂಡರೂ ಹಾಲಿ-ಮಾಜಿ ಸಿಎಂಗಳು ದೂರ ದೂರಾ! ಏಕೆ?
ಒಂದೇ ಮದ್ವೆಯಲ್ಲಿ ಪಾಲ್ಗೊಂಡರೂ ಹಾಲಿ-ಮಾಜಿ ಸಿಎಂಗಳು ದೂರ ದೂರಾ! ಏಕೆ?
TV9 Web
| Updated By: ಸಾಧು ಶ್ರೀನಾಥ್​|

Updated on:Jun 16, 2022 | 7:28 PM

Share

ದಾವಣಗೆರೆ: ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ (Jagadish Shettar) ಅವರು ಸಂಬಂಧಿಕರು. ಕರ್ನಾಟಕದ ಒಂದೇ ಭಾಗದವರು. ಹೀಗಿರುವಾಗ ಅನ್ಯೋನ್ಯತೆ ತುಸು ಹೆಚ್ಚೇ ಇರುತ್ತದೆ; ಆದರೆ ಇಲ್ಲಿ ತುಸು ಹೆಚ್ಚೇ ಅನಿಸುವಷ್ಟು ಈರ್ವರ ನಡುವೆ ಸಿಟ್ಟು ಸೆಡವು ಮನೆ ಮಾಡಿದೆ (animosity). ಬಹುಶಃ ಇದು ಬಸವರಾಜ ಬೊಮ್ಮಾಯಿ ಅವರು ನಾಡಿನ ಮುಖ್ಯಮಂತ್ರಿಯಾದ ಮೇಲೆ ತುಸು ಹೆಚ್ಚಾಗಿದೆ. ಹೀಗಿರುವಾಗ ಇಬ್ಬರೂ ಒಂದೇ ಮದ್ವೆಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಆ ಮದುವೆ ಸಮಾರಂಭವೂ ನಾಡಿನ ಪ್ರತಿಷ್ಠಿತ ರಾಜಕಾರಣಿಯ ಕುಟುಂಬದ್ದೇ. ಅದು ಕಾಂಗ್ರೆಸ್ ಶಾಸಕ ಶಾಮನೂರ ಶಿವಶಂಕರಪ್ಪ (Shamanur Shivashankarappa) ಮೊಮ್ಮಗಳ ಮದ್ವೆ ಸಮಾರಂಭ. ಇವರಿಬ್ಬರು ಸಹ ಶಾಮನೂರ ಶಿವಶಂಕರಪ್ಪ ಸಂಬಂಧಿಕರು ಎಂಬುದು ಇನ್ನೂ ಮಹತ್ವದ ವಿಚಾರ. ಏನೇ ಆದರೂ ಈ ಹಾಲಿ ಮತ್ತು ಮಾಜಿ ಸಿಎಂಗಳಿಬ್ಬರೂ ದೂರ… ದೂರಾ ಎಂದಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಣ್ಣಳತೆಯಲ್ಲೇ ಇದ್ದರೂ ಮಾಜಿ ಸಿಎಂ ಜಗದೀಶ ಶೆಟ್ಟರ್ ಅತ್ತ ತಿರುಗಿಯೂ ನೋಡಲಿಲ್ಲ. ಇದರೊಂದಿಗೆ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ‌ ಜಗದೀಶ ಶೆಟ್ಟರ್ ನಡುವಣ ಮುನಿಸು ಜಾರಿಯಲ್ಲಿದೆ ಎಂಬಂತಾಗಿದೆ.

ದಾವಣಗೆರೆಯಲ್ಲಿ ನಡೆದ ಈ ಮದುವೆಯಲ್ಲಿ ಶೆಟ್ಟರ್ ಅವರಿಗಿಂತ ಮೊದಲು ಮದ್ವೆಗೆ ಬಂದವರು ಸಿಎಂ ಬೊಮ್ಮಾಯಿ. ಬಂದವರೆ… ವಧು- ವರರಿಗೆ ಶುಭ ಹಾರೈಸಿ ಕೆಳಗೆ ಬಂದು ನಿಂತುಬಿಟ್ಟರು. ಅದಾದ ಸ್ವಲ್ಪ ಹೊತ್ತಿನಲ್ಲಿಯೇ ಸೊಸೆ ಮತ್ತು ಮಗನ ಸಹಿತ ವೇದಿಕೆಗೆ ಬಂದ ಮಾಜಿ ಸಿಎಂ ಶೆಟ್ಟರು ವಧು-ವರರಿಗೆ ಶುಭ ಹಾರೈಸಿ ಮೌನಕ್ಕೆ ಶರಣಾದರು. ಅಪ್ಪಿತಪ್ಪಿಯೂ ಅಲ್ಲಿಯೇ ಸಿಎಂ ಬೊಮ್ಮಾಯಿ ಇದ್ದರೂ ಮಾತಾಡುವ ಗೋಜಿಗೆ ಹೋಗಲಿಲ್ಲ ಶೆಟ್ಟರ್. ಇನ್ನು ಸಿಎಂ ಬೊಮ್ಮಾಯಿ ಸಾಹೇಬರೂ ಸಹ ಶೆಟ್ಟರ್ ಬಂದಿದ್ದು ನೋಡಿಯೂ ಸುಮ್ಮನಿದ್ದುಬಿಟ್ಟರು.

ಗಮನಾರ್ಹ ಸಂಗತಿಗಳೆಂದರೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಇದೇ ದಾವಣಗೆರೆಗೆ ಬಂದಿದ್ದಾಗ 2021 ಸೆಪ್ಟೆಂಬರ್​​ನಲ್ಲಿ ಬಿಜೆಪಿ ದೃಷ್ಟಿಯಿಂದ ಒಂದು ಮಹತ್ವದ ಘೋಷಣೆ ಮಾಡಿದ್ದರು. ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿಯೆ ನಡೆಯಲಿದೆ ಎಂದಿದ್ದರು.

ಅದಕ್ಕೂ ಮುನ್ನ, ಬಸವರಾಜ ಬೊಮ್ಮಾಯಿ ಅವರು ಅನಾಯಾಸವಾಗಿ ಒದಗಿಬಂದ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ ಬಳಿಕ ತಮ್ಮ ಊರಿನವರೇ ಆದ, ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್​ ಅವರಿಗೆ ಕ್ಯಾಬಿನೆಟ್​ ಮಿನಿಸ್ಟರ್​ ಆಫರ್​ ಕೊಟ್ಟರು. ಆದರೆ ‘ಇಲ್ಲಾ ನಾ ಸೀನಿಯರ್ ಅದೀನಿ’ ಎಂದು ಜಗದೀಶ್ ಶೆಟ್ಟರ್ಆ ಹ್ವಾನವನ್ನು ತಿರಸ್ಕರಿಸಿದ್ದರು.

ಇನ್ನು ಇಂದು 92ನೇ ವಸಂತಕ್ಕೆ ಕಾಲಿಟ್ಟ ಹಿರಿಯ ರಾಜಕಾರಣಿ, ಉದ್ಯಮಿ ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಸಿಹಿ ತಿನಿಸುವ ಮೂಲಕ ಅವರಿಗೆ ಸಿಎಂ ಬೊಮ್ಮಾಯಿ ಜನ್ಮದಿನದ ಶುಭಾಶಯ ಕೋರಿದರು.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:23 pm, Thu, 16 June 22

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ