ಭಾರತದ ಅತಿದೊಡ್ಡ ಎಂಜಿನಿಯರಿಂಗ್ ಸವಾಲಾದ ಚೆನಾಬ್ ಸೇತುವೆಯ ವಿಶೇಷತೆಯೇನು?
ಇಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಯಾದ ಚೆನಾಬ್ ರೈಲ್ವೆ ಸೇತುವೆಯು ಉಧಮ್ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕದ ಭಾಗವಾಗಿದೆ. ಇದು ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾಗಿದೆ. ಈ ಅದ್ಭುತವನ್ನು ನಿರ್ಮಿಸಲು ಭಾರತೀಯ ಸಂಸ್ಥೆಗಳು ಮತ್ತು ಕಂಪನಿಗಳು ಹೇಗೆ ಕೈಜೋಡಿಸಿವೆ ಎಂಬುದರ ಮಾಹಿತಿ ಇಲ್ಲಿದೆ. 1.31 ಕಿಮೀ ಉದ್ದದ ಚೆನಾಬ್ ಸೇತುವೆ ಯೋಜನೆಯನ್ನು 2003ರಲ್ಲಿ ಅನುಮೋದಿಸಲಾಯಿತು. ಅದರ ನಿರ್ಮಾಣವು ಪೂರ್ಣಗೊಳ್ಳಲು 2 ದಶಕಗಳನ್ನು ತೆಗೆದುಕೊಂಡಿತು. ಈ ಸೇತುವೆಯ ವಿಶೇಷತೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಶ್ರೀನಗರ, ಜೂನ್ 6: ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಉಧಮ್ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗವನ್ನು ಉದ್ಘಾಟಿಸಿದರು. ಇದು ಕಾಶ್ಮೀರ ಕಣಿವೆಯನ್ನು ಭಾರತದ ಉಳಿದ ರಾಷ್ಟ್ರೀಯ ರೈಲ್ವೆ ವ್ಯವಸ್ಥೆಗೆ ಸಂಪರ್ಕಿಸುವ ಯೋಜನೆಯಾಗಿದೆ. ಈ ಯೋಜನೆಯ ಪ್ರಮುಖ ಮುಖ್ಯಾಂಶಗಳಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾದ ಚೆನಾಬ್ ರೈಲ್ವೆ ಸೇತುವೆಯೂ ಸೇರಿದೆ. ಚೆನಾಬ್ ನದಿಯಿಂದ 359 ಮೀಟರ್ ಎತ್ತರದಲ್ಲಿ ನಿರ್ಮಿಸಲಾದ ಇದು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾಗಿದೆ. ಇದು ಐಫೆಲ್ ಟವರ್ಗಿಂತ 35 ಮೀಟರ್ ಎತ್ತರವಾಗಿದೆ. ಈ ಸೇತುವೆ ನದಿಪಾತ್ರದಿಂದ ರೈಲು ಮಟ್ಟಕ್ಕೆ ದೆಹಲಿಯ ಕುತುಬ್ ಮಿನಾರ್ಗಿಂತ ಸುಮಾರು 5 ಪಟ್ಟು ಎತ್ತರವಾಗಿದೆ. ಈ ಸೇತುವೆಯು ವಂದೇ ಭಾರತ್ ಎಕ್ಸ್ಪ್ರೆಸ್ ಮೂಲಕ ಕತ್ರಾ ಮತ್ತು ಶ್ರೀನಗರ ನಡುವಿನ ಪ್ರಯಾಣದ ಸಮಯವನ್ನು ಸುಮಾರು 3 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ. ಇದು ಪ್ರಸ್ತುತ ಪ್ರಯಾಣದ ಸಮಯವನ್ನು 2-3 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆಯೂ ಒಂದು. ಇದು ಭಾರತೀಯ ಎಂಜಿನಿಯರಿಂಗ್ಗೆ ಪ್ರಮುಖ ಮೈಲಿಗಲ್ಲನ್ನು ಗುರುತಿಸುವ 272 ಕಿ.ಮೀ. ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್ (USBRL) ನ ಭಾಗವಾಗಿದೆ. ಈ ಯೋಜನೆಯು ಅಂಜಿ ಖಾದ್ನಲ್ಲಿರುವ ಭಾರತದ ಮೊದಲ ಕೇಬಲ್-ಸ್ಟೇಡ್ ರೈಲು ಸೇತುವೆಯನ್ನು ಸಹ ಒಳಗೊಂಡಿದೆ.
#WATCH | J&K: Prime Minister Narendra Modi waves the Tiranga as he inaugurates Chenab bridge – the world’s highest railway arch bridge.#KashmirOnTrack
ಇದನ್ನೂ ಓದಿ(Video: DD) pic.twitter.com/xfBnSRUQV5
— ANI (@ANI) June 6, 2025
ಇದನ್ನೂ ಓದಿ: Video: ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ವೈಭವ ಕಣ್ತುಂಬಿಕೊಂಡ ಮೋದಿ
ಚೆನಾಬ್ ಸೇತುವೆ ಉಧಮ್ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕದ ಭಾಗವಾಗಿದೆ. ಈ ಸೇತುವೆಯು ಸಲಾಲ್ ಅಣೆಕಟ್ಟಿನ ಬಳಿ ಚೆನಾಬ್ ನದಿಗೆ ಅಡ್ಡಲಾಗಿ 1,315 ಮೀಟರ್ ಉದ್ದವನ್ನು ವ್ಯಾಪಿಸಿದೆ. ಇದನ್ನು ತೀವ್ರ ಭೂಕಂಪನ ಚಟುವಟಿಕೆ ಮತ್ತು ಹೆಚ್ಚಿನ ಗಾಳಿಯ ವೇಗವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ದೇಶದ ಕಠಿಣ ಮತ್ತು ಪ್ರತ್ಯೇಕ ಭೂಪ್ರದೇಶಗಳಲ್ಲಿ ಈ ಅದ್ಭುತ ಸೇತುವೆಯನ್ನು ನಿರ್ಮಿಸಲು ಹಲವಾರು ಕಂಪನಿಗಳು ಮತ್ತು ಭಾರತೀಯ ಸಂಸ್ಥೆಗಳು ಕೈಜೋಡಿಸಿವೆ. ಈ ಸೇತುವೆಯ ವಿನ್ಯಾಸ ಮತ್ತು ನಿರ್ಮಾಣವನ್ನು ವಿಎಸ್ಎಲ್ ಇಂಡಿಯಾ ಮತ್ತು ದಕ್ಷಿಣ ಕೊರಿಯಾ ಮೂಲದ ಅಲ್ಟ್ರಾ ಕನ್ಸ್ಟ್ರಕ್ಷನ್ ಆ್ಯಂಡ್ ಎಂಜಿನಿಯರಿಂಗ್ ಕಂಪನಿಯಾದ ಆಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ಗೆ ನೀಡಲಾಯಿತು. ಇದರ ಅಡಿಪಾಯ ರಕ್ಷಣೆಯ ವಿನ್ಯಾಸವನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ ನೀಡಲಾಯಿತು.
PM @narendramodi Ji inaugurated the world’s highest railway arch bridge – Chenab bridge & India’s first cable stayed railway bridge-Anji bridge.
📍Jammu & Kashmir pic.twitter.com/DdI3khkVdL
— Ashwini Vaishnaw (@AshwiniVaishnaw) June 6, 2025
ಪ್ರಧಾನಿ ಮೋದಿ ಅವರು ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲು ಸೇವೆಗಳನ್ನು ಪ್ರಾರಂಭಿಸಿದರು, ಇದು ಕಾಶ್ಮೀರದ ಪ್ರವಾಸೋದ್ಯಮಕ್ಕೆ ಒಂದು ದಿಕ್ಕನ್ನೇ ಬದಲಾಯಿಸುವ ಸಾಧ್ಯತೆಯಿದೆ. ರೈಲುಗಳು ಸುರಕ್ಷತೆ ಮತ್ತು ಪ್ರಯಾಣಿಕರ ಸೌಕರ್ಯವನ್ನು ಖಚಿತಪಡಿಸಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿವೆ.
PM @narendramodi at the Chenab Bridge.
The state-of-the-art bridge will improve connectivity between Jammu and Srinagar. pic.twitter.com/YhTZGoMFzD
— PMO India (@PMOIndia) June 6, 2025
ಇದನ್ನೂ ಓದಿ: ವಿಶ್ವದ ಅತಿ ಎತ್ತರದ ಚೆನಾಬ್ ಸೇತುವೆ ನಿರ್ಮಾಣದ ಹಿಂದಿದೆ ಬೆಂಗಳೂರು ಐಐಎಸ್ಸಿ ಪ್ರೊಫೆಸರ್ 17 ವರ್ಷದ ಶ್ರಮ!
ಚೆನಾಬ್ ರೈಲ್ವೆ ಸೇತುವೆಯ ವಿಶೇಷತೆಯ ಬಗ್ಗೆ ಮಾಹಿತಿ ಇಲ್ಲಿದೆ.
- 1.31 ಕಿ.ಮೀ. ಉದ್ದದ ಚೆನಾಬ್ ಸೇತುವೆ ಯೋಜನೆಯನ್ನು 2003ರಲ್ಲಿ ಅನುಮೋದಿಸಲಾಯಿತು. ಅದರ ನಿರ್ಮಾಣವು ಪೂರ್ಣಗೊಳ್ಳಲು ಎರಡು ದಶಕಗಳನ್ನು ತೆಗೆದುಕೊಂಡಿತು.
- 1,486 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾಗಿದೆ.
- ಎಂಜಿನಿಯರಿಂಗ್ ಅದ್ಭುತವಾದ ಈ ಸೇತುವೆಯನ್ನು 28,660 ಮೆಗಾ ಟನ್ ಉಕ್ಕಿನಿಂದ ತಯಾರಿಸಲಾಗಿದ್ದು, ಇದು ಶೂನ್ಯಕ್ಕಿಂತ ಕಡಿಮೆ ತಾಪಮಾನವನ್ನು ಹಾಗೂ 40 ಡಿಗ್ರಿಗಳವರೆಗೆ ತಡೆದುಕೊಳ್ಳಬಲ್ಲದು.
- 359 ಮೀಟರ್ ಎತ್ತರದಲ್ಲಿ ಇದು ಪ್ಯಾರಿಸ್ನಲ್ಲಿರುವ ಐಫೆಲ್ ಟವರ್ಗಿಂತ 35 ಮೀಟರ್ ಎತ್ತರವಾಗಿದೆ ಮತ್ತು ಕುತುಬ್ ಮಿನಾರ್ಗಿಂತ ಕನಿಷ್ಠ 5 ಪಟ್ಟು ಎತ್ತರವಾಗಿದೆ.
- ಭಾರತ ಸರ್ಕಾರ ಚೆನಾಬ್ ಸೇತುವೆಯನ್ನು “ಇತ್ತೀಚಿನ ಇತಿಹಾಸದಲ್ಲಿ ಭಾರತದ ಯಾವುದೇ ರೈಲ್ವೆ ಯೋಜನೆ ಎದುರಿಸುತ್ತಿರುವ ಅತಿದೊಡ್ಡ ಸಿವಿಲ್-ಎಂಜಿನಿಯರಿಂಗ್ ಸವಾಲು” ಎಂದು ಬಣ್ಣಿಸಿದೆ.
- ವಾಸ್ತುಶಿಲ್ಪದ ಅದ್ಭುತ ಚೆನಾಬ್ ರೈಲು ಸೇತುವೆಯು ಭೂಕಂಪ ಮತ್ತು ಗಾಳಿಯ ಪರಿಸ್ಥಿತಿಗಳನ್ನು ತಡೆದುಕೊಳ್ಳಲು ವಿನ್ಯಾಸಗೊಳಿಸಲಾದ 1,315 ಮೀಟರ್ ಉದ್ದದ ಉಕ್ಕಿನ ಕಮಾನು ಸೇತುವೆಯಾಗಿದೆ.
- ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಬಕ್ಕಲ್ ಮತ್ತು ಕೌರಿ ನಡುವಿನ ಕಮಾನು ಸೇತುವೆಯು ನದಿಪಾತ್ರದಿಂದ 1,178 ಅಡಿ ಎತ್ತರದಲ್ಲಿದೆ, ಇದು ಕತ್ರಾದಿಂದ ಬನಿಹಾಲ್ಗೆ ನಿರ್ಣಾಯಕ ಸಂಪರ್ಕವನ್ನು ರೂಪಿಸುತ್ತದೆ.
- ಈ ಸೇತುವೆಯ ನಿರ್ಮಾಣಕ್ಕೆ ದೊಡ್ಡ ಅಡಚಣೆಯೆಂದರೆ ಪ್ರದೇಶದ ಸವಾಲಿನ ಸ್ಥಳಾಕೃತಿ ಮತ್ತು ದೂರದ ಸ್ಥಳ. ಬೃಹತ್ ಯಂತ್ರೋಪಕರಣಗಳು ಮತ್ತು ಇತರ ಸಂಪನ್ಮೂಲಗಳನ್ನು ಸಾಗಿಸುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಹಿಮಾಲಯ ಪ್ರದೇಶದಲ್ಲಿ ಇದನ್ನು ನಿರ್ಮಿಸಲಾಯಿತು.
- ಈ ಸೇತುವೆಯು ಗಂಟೆಗೆ 266 ಕಿಮೀ ವೇಗದ ಗಾಳಿಯ ವೇಗ ಮತ್ತು ಬಲವಾದ ಭೂಕಂಪಗಳನ್ನು ತಡೆದುಕೊಳ್ಳಬಲ್ಲದು.
- ಸೇತುವೆಯ ಮೇಲೆ ಚಲಿಸುವ ವಂದೇ ಭಾರತ್ ರೈಲಿನ ಮೂಲಕ, ಕತ್ರಾ ಮತ್ತು ಶ್ರೀನಗರ ನಡುವೆ ಪ್ರಯಾಣಿಸಲು ಪ್ರಸ್ತುತ ರಸ್ತೆಯ ಮೂಲಕ 6-7 ಗಂಟೆಗಳಿಗೆ ಹೋಲಿಸಿದರೆ ಕೇವಲ 3 ಗಂಟೆಗಳು ಬೇಕಾಗುತ್ತದೆ.
- ಚೆನಾಬ್ ಸೇತುವೆಯನ್ನು ಬೆಂಬಲಿಸುವ ಪಿಯರ್ ಹಾನಿಗೊಳಗಾದರೂ ರೈಲುಗಳು ಕಡಿಮೆ ವೇಗದಲ್ಲಿ ಹಾದುಹೋಗಲು ಅನುವು ಮಾಡಿಕೊಡುವ ರೀತಿಯಲ್ಲಿ ಸೇತುವೆಯನ್ನು ವಿನ್ಯಾಸಗೊಳಿಸಲಾಗಿದೆ.
- ಈ ಸೇತುವೆಯ ಮೇಲೆ ರೈಲುಗಳು ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿಯೂ ಚಲಿಸಬಹುದು. ಇದರ ವಿಶೇಷ ವೈಶಿಷ್ಟ್ಯಗಳು ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಶೀತ ಪ್ರದೇಶಗಳಲ್ಲಿ ಸುಗಮ ಕಾರ್ಯಾಚರಣೆಗೆ ಅನುವು ಮಾಡಿಕೊಡುತ್ತದೆ. ನೀರು ಘನೀಕರಿಸುವುದನ್ನು ತಡೆಯಲು ಅವು ಸಿಲಿಕಾನ್ ಹೀಟಿಂಗ್ ಪ್ಯಾಡ್ಗಳು ಮತ್ತು ಬಯೋ-ಟಾಯ್ಲೆಟ್ ಟ್ಯಾಂಕ್ಗಳನ್ನು ಹೊಂದಿವೆ.
- ಚೆನಾಬ್ ಸೇತುವೆಯು ಗಂಟೆಗೆ 260 ಕಿ.ಮೀ. ವೇಗದ ಗಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು 120 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ