Dasara 2024: ದಸರಾ ಯಾವಾಗ? ಆಯುಧಪೂಜೆ, ರಾವಣ ದಹನ ಮುಹೂರ್ತ ಯಾವಾಗ? ಪಠಿಸಬೇಕಾದ ಮಂತ್ರಗಳು ಇವು

ದಸರಾ ಹಬ್ಬದ ಸಂಭ್ರಮ ನಾಡಿನಲ್ಲಿ ಎಲ್ಲ ಕಡೆ ಮನೆ ಮಾಡಿದೆ. ಇನ್ನು ದುರ್ಗಾ ದೇವಿಯು ಮಹಿಷಾಸುರನನ್ನು ಕೊಂದ ದಿನವನ್ನು ವಿಜಯ ದಶಮಿ ಎಂದು ಕರೆಯುತ್ತಾರೆ. ಆಶ್ವಯುಜ ಮಾಸದ ಶುಕ್ಲ ಪಕ್ಷದ ಹತ್ತನೇ ದಿನದಂದು ಪ್ರತಿ ವರ್ಷ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಸದ್ಗುಣದ ಮತ್ತು ಕೆಡುಕಿನ ಮೇಲೆ ಒಳಿತಿನ ವಿಜಯವೆಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷ ವಿಜಯದಶಮಿ ಯಾವಾಗ ಬರುತ್ತದೆ? ರಾವಣನ ದಹನ ಯಾವಾಗ ನಡೆಯಲಿದೆ ಎಂದು ತಿಳಿಯೋಣ..

Dasara 2024: ದಸರಾ ಯಾವಾಗ? ಆಯುಧಪೂಜೆ, ರಾವಣ ದಹನ ಮುಹೂರ್ತ ಯಾವಾಗ? ಪಠಿಸಬೇಕಾದ ಮಂತ್ರಗಳು ಇವು
Spiritual Dasara 2024
Follow us
|

Updated on: Oct 11, 2024 | 3:00 AM

Dasara 2024, Ravana Dahan: ದಸರಾ ಹಬ್ಬದ ಸಂಭ್ರಮ ನಾಡಿನಲ್ಲಿ ಎಲ್ಲ ಕಡೆ ಮನೆ ಮಾಡಿದೆ. ಇನ್ನು ದುರ್ಗಾ ದೇವಿಯು ಮಹಿಷಾಸುರನನ್ನು ಕೊಂದ ದಿನವನ್ನು ವಿಜಯ ದಶಮಿ ಎಂದು ಕರೆಯುತ್ತಾರೆ. ಆಶ್ವಯುಜ ಮಾಸದ ಶುಕ್ಲ ಪಕ್ಷದ ಹತ್ತನೇ ದಿನದಂದು ಪ್ರತಿ ವರ್ಷ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಸದ್ಗುಣದ ಮತ್ತು ಕೆಡುಕಿನ ಮೇಲೆ ಒಳಿತಿನ ವಿಜಯವೆಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷ ವಿಜಯದಶಮಿ ಯಾವಾಗ ಬರುತ್ತದೆ? ರಾವಣನ ದಹನ ಯಾವಾಗ ನಡೆಯಲಿದೆ ಎಂದು ತಿಳಿಯೋಣ..

ಈ ವರ್ಷ ದಸರಾ ಯಾವಾಗ? ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ಆಶ್ವಯುಜ ಮಾಸದ ದಶಮಿ ತಿಥಿ ಅಕ್ಟೋಬರ್ 12 ರಂದು ಬೆಳಿಗ್ಗೆ 10:58 ಕ್ಕೆ ಪ್ರಾರಂಭವಾಗುತ್ತದೆ. ಅಕ್ಟೋಬರ್ 13 ಬೆಳಿಗ್ಗೆ 9:08 ರವರೆಗೆ ಮುಂದುವರಿಯುತ್ತದೆ. ಈ ವರ್ಷದ ಉದಯ ತಿಥಿಯಂತೆ ಅಕ್ಟೋಬರ್ 12 ಶನಿವಾರದಂದು ದಸರಾ ಹಬ್ಬವನ್ನು ಆಚರಿಸಲಾಗುವುದು.

ಇದನ್ನೂ ಓದಿ:  Significance of Kalasha Pooja – ಕಲಶದೊಳಗೆ ಮಾವಿನ ಸೊಪ್ಪನ್ನು ಏಕೆ ಹಾಕುತ್ತೇವೆ? ಕುಂಭದ ಮೇಲೆ ತೆಂಗಿನ ಕಾಯಿ ಇಡುವ ಉದ್ದೇಶವೇನು ?

ರಾವಣ ದಹನ ಕಾರ್ಯಕ್ರಮ- ಅದು ಮಂಗಳಕರ ಸಮಯ ಹಿಂದೂ ನಂಬಿಕೆಗಳ ಪ್ರಕಾರ ಪ್ರದೋಷ ಕಾಲದಲ್ಲಿ ರಾವಣನನ್ನು ದಹನ ಮಾಡಲಾಗುತ್ತದೆ. ಪಂಚಾಂಗದ ಪ್ರಕಾರ ಅಕ್ಟೋಬರ್ 12 ರಂದು ಸಂಜೆ 5:53 ರಿಂದ 7:27 ರವರೆಗೆ ರಾವಣ ದಹನಕ್ಕೆ ಶುಭ ಮುಹೂರ್ತ.

ದಸರಾ ಶಾಸ್ತ್ರ ಪೂಜೆ ಅಥವಾ ಆಯುಧಪೂಜೆ ಶುಭ ಮುಹೂರ್ತ ಅಕ್ಟೋಬರ್ 12 ಶನಿವಾರದಂದು 2:03 PM ರಿಂದ 2:49 PM ವರೆಗೆ ದಸರಾ ದಿನದಂದು ಶಾಸ್ತ್ರಪೂಜೆ ಅಥವಾ ಆಯುಧ ಪೂಜೆಯನ್ನು ಮಾಡಲು ಮಂಗಳಕರ ಸಮಯ. ಈ ವರ್ಷದ ಪ್ರಕಾರ ಆಯುಧ ಪೂಜೆಗೆ 46 ನಿಮಿಷ ಸಮಯ ಸಿಗುತ್ತದೆ.

ದಸರಾ ದಿನದಂದು ಈ ಮಂತ್ರಗಳನ್ನು ಪಠಿಸಿ:

ರಾಮ ಧ್ಯಾನ ಮಂತ್ರ – ಅಪದಾಮಪ ಹರ್ತಾರಂ ದಾತಾರಂ ಸರ್ವ ಸಂಪದ ಲೋಕಾಭಿರಾಮಂ ಶ್ರೀರಾಮ ಭೂಯೋ ಭೂಯೋ ನಮಾಮ್ಯಹಮ್ ॥

ಶ್ರೀ ರಾಮ ಗಾಯತ್ರಿ ಮಂತ್ರ – ಓಂ ದಶರಥಾಯ ವಿದ್ಮಹೇ ಸೀತಾ ವಲ್ಲಭಾಯ ಧೀಮಹಿ

ಇದನ್ನೂ ಓದಿ: October 2024 festivals list – ಅಕ್ಟೋಬರ್ ತಿಂಗಳ ಪ್ರಮುಖ ಹಬ್ಬಗಳು, ಧಾರ್ಮಿಕ ಆಚರಣೆಗಳು, ರಾಷ್ಟ್ರೀಯ ದಿನಾಚರಣೆಗಳ ಸಂಪೂರ್ಣ ಪಟ್ಟಿ

ರಾಮ ಮೂಲ ಮಂತ್ರ – ಓಂ ಹ್ರಾಂ ಹ್ರೀಂ ರಾಮ ರಾಮಾಯ ನಮಃ

ದಸರಾ ಮಹತ್ವ ಹಿಂದೂ ಧರ್ಮದಲ್ಲಿ ದಸರಾಗೆ ವಿಶೇಷ ಮಹತ್ವವಿದೆ. ಈ ದಿನವನ್ನು ಅಸತ್ಯದ ಮೇಲೆ ಸತ್ಯದ ವಿಜಯವನ್ನು ಗುರುತಿಸಲು ಆಚರಿಸಲಾಗುತ್ತದೆ, ಅಂದರೆ ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯ. ಈ ದಿನ, ಹೊಸ ಉದ್ಯೋಗವನ್ನು ಪ್ರಾರಂಭಿಸುವುದು, ವಾಹನ, ಆಭರಣಗಳನ್ನು ಖರೀದಿಸುವುದು ಮುಂತಾದ ಶುಭ ಕಾರ್ಯಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು