AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yash Dayal: ಯಶ್ ದಯಾಳ್ ಮಾಡಿದ 20ನೇ ಓವರ್ ಹೇಗಿತ್ತು?: ಇಲ್ಲಿದೆ ಬಾಲ್-ಬೈ-ಬಾಲ್ ಸ್ಟೋರಿ

RCB vs CSK, IPL 2025: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ 5 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಸಿಎಸ್‌ಕೆ 5 ವಿಕೆಟ್‌ಗೆ 211 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೆಯ ಓವರ್‌ನಲ್ಲಿ ಚೆನ್ನೈ ಗೆಲುವಿಗೆ 15 ರನ್‌ಗಳು ಬೇಕಾಗಿದ್ದವು. ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ಸ್ಟ್ರೈಕ್‌ನಲ್ಲಿದ್ದರು.

Yash Dayal: ಯಶ್ ದಯಾಳ್ ಮಾಡಿದ 20ನೇ ಓವರ್ ಹೇಗಿತ್ತು?: ಇಲ್ಲಿದೆ ಬಾಲ್-ಬೈ-ಬಾಲ್ ಸ್ಟೋರಿ
Rcb Vs Csk 20th Over
Vinay Bhat
|

Updated on: May 04, 2025 | 9:51 AM

Share

ಬೆಂಗಳೂರು (ಮೇ. 04): ಇಂಡಿಯನ್ ಪ್ರೀಮಿಯರ್ ಲೀಗ್ 2025 ರ 52 ನೇ ಪಂದ್ಯವು ರಣರೋಚಕವಾಗಿತ್ತು. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ (Royal Challengers Bengaluru vs Chennai Super Kings) ವಿರುದ್ಧ ಕೇವಲ 2 ರನ್‌ಗಳಿಂದ ಜಯಗಳಿಸಿತು. ಇದರೊಂದಿಗೆ, ಆರ್‌ಸಿಬಿ 16 ಅಂಕಗಳನ್ನು ಹೊಂದಿದ್ದು, ಪ್ಲೇಆಫ್‌ಗೆ ಅರ್ಹತೆ ಪಡೆಯುವ ಹಾದಿಯಲ್ಲಿದೆ. ಅತ್ತ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಈಗಗಲೇ ಟೂರ್ನಿಯಿಂದ ಹೊರಬಿದ್ದಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ 5 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಸಿಎಸ್‌ಕೆ 5 ವಿಕೆಟ್‌ಗೆ 211 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೆಯ ಓವರ್‌ನಲ್ಲಿ ಚೆನ್ನೈ ಗೆಲುವಿಗೆ 15 ರನ್‌ಗಳು ಬೇಕಾಗಿದ್ದವು. ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ಸ್ಟ್ರೈಕ್‌ನಲ್ಲಿದ್ದರು. ಅದರ ಹೊರತಾಗಿಯೂ, ಆರ್‌ಸಿಬಿ ವೇಗಿ ಯಶ್ ದಯಾಳ್ ಚೆನ್ನೈ ತಂಡದ ತೆಕ್ಕೆಯಿಂದ ಗೆಲುವನ್ನು ಕಸಿದುಕೊಂಡರು. ಕೊನೆಯ ಓವರ್‌ನಲ್ಲಿ ಏನಾಯಿತು ಎಂಬುದನ್ನು ಇಲ್ಲಿ ನೋಡಿ.

ಇದನ್ನೂ ಓದಿ
Image
ಸೋಲಿಗೆ ನಾನೇ ಕಾರಣ: ಆರ್‌ಸಿಬಿ ವಿರುದ್ಧ ಸೋತ ನಂತರ ಧೋನಿ ಶಾಕಿಂಗ್ ಹೇಳಿಕೆ
Image
ಮೈದಾನದಲ್ಲೇ ಹುಚ್ಚೆದ್ದು ಕುಣಿದ ಆರ್​ಸಿಬಿ ಆಟಗಾರರು; ವಿಡಿಯೋ
Image
ಒಂದೇ ಓವರ್​ನಲ್ಲಿ 33 ರನ್; ರೊಮಾರಿಯೊ ರೌದ್ರಾವತಾರ
Image
ಸಿಎಸ್​ಕೆ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದ ಆರ್​ಸಿಬಿ

19.1- ಯಶ್ ದಯಾಳ್ ಎಂಎಸ್ ಧೋನಿಗೆ ಲೋ ಫುಲ್ ಟಾಸ್ ಎಸೆದರು, ಇದರಿಂದ ಕೇವಲ ಒಂದು ರನ್ ಗಳಿಸಲಷ್ಟೆ ಶಕ್ತವಾಯಿತು. ಈಗ ಸಂಪೂರ್ಣವಾಗಿ ಸೆಟ್ ಆಗಿರುವ ಬ್ಯಾಟ್ಸ್‌ಮನ್ ರವೀಂದ್ರ ಜಡೇಜಾ ಸ್ಟ್ರೈಕ್‌ನಲ್ಲಿದ್ದರು.

19.2- ಯಶ್ ದಯಾಳ್ ರವೀಂದ್ರ ಜಡೇಜಾಗೆ ಕೂಡ ಕಡಿಮೆ ಫುಲ್ ಟಾಸ್ ಎಸೆದರು, ಇದು ಕೂಡ ಸಿಂಗಲ್ ರನ್ ಬಂತು.

19.3- ಈ ಎಸೆತದಲ್ಲಿ, ಯಶ್ ದಯಾಳ್ ಸ್ಟ್ರೈಕ್‌ನಲ್ಲಿದ್ದ ಎಂಎಸ್ ಧೋನಿಯನ್ನು ಎಲ್ಬಿಡಬ್ಲ್ಯೂ ಮೂಲಕ ಔಟ್ ಮಾಡಿದರು. ಲೋ ಫುಲ್ ಟಾಸ್ ಚೆಂಡನ್ನು ಹೊಡೆಯಲು ಹೋಗಿ ಔಟ್ ಆದರು. ಧೋನಿ 12 ರನ್ ಗಳಿಸಿ ನಿರ್ಗಮಿಸಿದರು.

RCB vs CSK, IPL 2025: ಸೋಲಿಗೆ ನಾನೇ ಕಾರಣ: ಆರ್‌ಸಿಬಿ ವಿರುದ್ಧ ಸೋತ ನಂತರ ಧೋನಿ ಶಾಕಿಂಗ್ ಹೇಳಿಕೆ

19.4- ಯಶ್ ದಯಾಳ್ ಅವರು ಶಿವಂ ದುಬೆಗೆ ನೋ ಬಾಲ್ ಎಸೆದರು, ಅದರಲ್ಲಿ ದುಬೆ ಅದ್ಭುತ ಸಿಕ್ಸರ್ ಬಾರಿಸಿದರು. ಮುಂದಿನ ಚೆಂಡು ಫ್ರೀ ಹಿಟ್ ಆಗಿತ್ತು.

ಈಗ ಇಲ್ಲಿಂದ ಚೆನ್ನೈ ಗೆಲುವಿಗೆ 3 ಎಸೆತಗಳಲ್ಲಿ 6 ರನ್ ಗಳ ಅಗತ್ಯವಿತ್ತು.

19.4- ಯಶ್ ದಯಾಳ್ ಶಿವಂ ದುಬೆಗೆ ಮತ್ತೆ ಲೋ ಫುಲ್ ಟಾಸ್ ಎಸೆದರು, ಆ ಬೌಲ್​ನಲ್ಲಿ ಕೇವಲ 1 ರನ್ ಬಂತು ಅಷ್ಟೆ.

19.5- ಯಶ್ ದಯಾಳ್ ರವೀಂದ್ರ ಜಡೇಜಾಗೆ ಸ್ಟಂಪ್ ಮೇಲೆ ಫುಲ್ ಬಾಲ್ ಎಸೆದರು, ಇದು ಕೂಡ ಒಂದು ರನ್ ಗಳಿಸಲು ಕಾರಣವಾಯಿತು.

19.6- ಯಶ್ ದಯಾಳ್ ಶಿವಂ ದುಬೆಗೆ ಲೋ ಫುಲ್ ಟಾಸ್ ಎಸೆದರು, ಮತ್ತೆ ಕೇವಲ 1 ರನ್ ಮಾತ್ರ ಬಂತು ಮತ್ತು ಆರ್‌ಸಿಬಿ ಪಂದ್ಯವನ್ನು 2 ರನ್‌ಗಳಿಂದ ಗೆದ್ದಿತು.

ವಿಶೇಷ ಎಂದರೆ, 18 ವರ್ಷಗಳ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತವರು ಮತ್ತು ಚೆಪಾಕ್​ನಲ್ಲಿ ಸೋಲಿಸಿದ್ದು ಇದೇ ಮೊದಲು. ಈ ಮೂಲಕ ನೂತನ ದಾಖಲೆ ಕೂಡ ನಿರ್ಮಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್