AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ಮೊಸಳೆ ಮರಿ ಎಷ್ಟು ಚಾಲಾಕಿ! ಹೇಗೆ ಪಲ್ಟಿ ಹೊಡೆದು ಬೇಟೆ ಆಡ್ತು ನೋಡಿ

ಪ್ರಾಣಿಗಳು ಮನುಷ್ಯರಂತಲ್ಲ. ಅವುಗಳಿಗೆ ನಮ್ಮ ಹಾಗೆ ಪ್ರತಿಯೊಂದನ್ನು ಕೈ ಹಿಡಿದು ಕಲಿಸಬೇಕಾದಂತಹ ಅವಶ್ಯಕತೆ ಇರುವುದಿಲ್ಲ. ಭೂಮಿಗೆ ಬಂದ ಕೂಡಲೇ ಅವುಗಳ ಜೊತೆ ಯಾರು ಇರಲಿ ಬಿಡಲಿ, ತಾವಾಗಿಯೇ ಬದುಕುವುದನ್ನು ಕಲಿತು ಬಿಡುತ್ತದೆ. ತಾನೇ ಆಹಾರ ಹುಡುಕಿಕೊಂಡು, ತನ್ನನ್ನು ತಾನೇ ರಕ್ಷಿಸಿಕೊಂಡು ಬದುಕಿಬಿಡುತ್ತದೆ. ಇದಕ್ಕೆ ಸಾಕ್ಷಿಯಾಗಿ ಮೊಸಳೆ ಮರಿಯೊಂದು ಪಲ್ಟಿ ಹೊಡೆಯುತ್ತಾ ಬೇಟೆ ಹಿಡಿದು ತಿನ್ನುವ ದೃಶ್ಯವೊಂದು ವೈರಲ್ ಆಗುತ್ತಿದ್ದು, ಇದರ ಚಾಲಾಕಿತನವನ್ನು ನಿವೊಮ್ಮೆ ನೋಡಲೇಬೇಕು.

Viral Video: ಈ ಮೊಸಳೆ ಮರಿ ಎಷ್ಟು ಚಾಲಾಕಿ! ಹೇಗೆ ಪಲ್ಟಿ ಹೊಡೆದು ಬೇಟೆ ಆಡ್ತು ನೋಡಿ
Baby Alligator's Death Roll
ಪ್ರೀತಿ ಭಟ್​, ಗುಣವಂತೆ
|

Updated on: Jun 14, 2025 | 7:50 PM

Share

ಪ್ರಕೃತಿಯಲ್ಲಿ ನಡೆಯುವಂತಹ ಕೆಲವು ವಿಷಯಗಳು ಎಷ್ಟು ವಿಚಿತ್ರವಾಗಿರುತ್ತದೆ ಎಂದರೆ ನಂಬುವುದಕ್ಕೆ ಕಷ್ಟವಾಗುತ್ತದೆ. ಮನುಷ್ಯ ಮಾತ್ರ ತನ್ನ ಮಕ್ಕಳನ್ನು ತನಗೆ ಬೇಕಾದಂತೆ ಬೆಳೆಸುತ್ತಾನೆ ಆದರೆ ನಮ್ಮ ಸುತ್ತಮುತ್ತಲಿನ ಜೀವರಾಶಿಗಳು ಅಂದರೆ ಪ್ರಾಣಿ, ಪಕ್ಷಿಗಳು ತಮಗೆ ಏನು ಬೇಕೋ ಅದನ್ನು ತಾವಾಗಿಯೇ ಕಲಿತುಕೊಳ್ಳುತ್ತದೆ. ನಮ್ಮ ಹಾಗೆ ಅವುಗಳಿಗೆ ತರಬೇತಿ ನೀಡಲು ಶಾಲೆ, ಮನೆ ಯಾವುದು ಇರುವುದಿಲ್ಲ ಆದರೂ ಕೂಡ ಅವು ಬದುಕುವುದನ್ನು, ತಾನೇ ಆಹಾರ ಹುಡುಕುವುದನ್ನ, ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ಹೀಗೆ ಪ್ರತಿಯೊಂದನ್ನು ಹುಟ್ಟಿನಿಂದಲೇ ಕಲಿತು ಬಿಡುತ್ತದೆ. ಇದಕ್ಕೆ ಹೇಳೋದು ಪ್ರಕೃತಿಯ ವಿಸ್ಮಯದ ನಡುವೆ ನಾವು ಕಲಿಯುವುದು ತುಂಬಾ ಇದೆ. ಇದಕ್ಕೆ ಪೂರಕವೆಂಬಂತೆ ನೇಚರ್ ಈಸ್ ಅಮೇಜಿಂಗ್ (Nature is Amazing) ಎಂಬ X ಖಾತೆಯಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಪ್ರಕೃತಿಯ ವಿಸ್ಮಯ ಹೇಗಿರುತ್ತೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮೊಸಳೆ ಮರಿಯೊಂದು (Baby Alligator’s Death Roll) ಮಾಂಸ ತಿನ್ನಲು ಯಾವ ರೀತಿ ತನ್ನ ಬುದ್ದಿವಂತಿಕೆ ಉಪಯೋಗಿಸಿದೆ ಎಂಬುದನ್ನು ನೀವು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ಡೆತ್ ರೋಲ್ ತುಂಬಾ ಡೇಂಜರ್

ನಿಮಗೆ ಗೊತ್ತಿರಬಹುದು, ಮೊಸಳೆ ಅಥವಾ ಹೆಬ್ಬಾವು ಅಥವಾ ದೊಡ್ಡ ದೊಡ್ಡ ಸರೀಸೃಪಗಳು ತಮ್ಮ ಬೇಟೆ ಹಿಡಿದ ಮೇಲೆ ತಿರುಗುತ್ತವೆ. ಇದು ಅವುಗಳ ತಂತ್ರಗಾರಿಕೆಯಾಗಿದ್ದು ಬೇಟೆಯಾಡಿದ ಜೀವವನ್ನು ಕೊಲ್ಲಲು ಅಥವಾ ಅದನ್ನು ಚಾಕಚಕ್ಯತೆಯಿಂದ ಬೇಟೆಯಾಡಲು ಅಥವಾ ಅದು ತಪ್ಪಿಸಿಕೊಳ್ಳದಿರಲು ಇದು ಸಹಾಯ ಮಾಡುತ್ತದೆ. ಅದೇ ರೀತಿ, ನೇಚರ್ ಈಸ್ ಅಮೇಜಿಂಗ್ ಎಂಬ X ಖಾತೆಯಲ್ಲಿ ಹಂಚಿಕೊಂಡಿರುವ ಒಂದು ಕ್ಲಿಪ್ನಲ್ಲಿ ಮೊಸಳೆಯ ಚಿಕ್ಕ ಮರಿ ತನಗೆ ನೀಡಿರುವ ಮಾಂಸದ ತುಂಡನ್ನು ತಿನ್ನುವುದಕ್ಕೆ ಪಲ್ಟಿ ಹೊಡೆಯಲು ಆರಂಭ ಮಾಡುತ್ತದೆ. ಸರೀಸೃಪಗಳು ತಮ್ಮ ಬೇಟೆಯನ್ನು ತಿನ್ನಲು ಈ ರೀತಿ ಡೆತ್ ರೋಲ್ ಪ್ರದರ್ಶಿಸುತ್ತವೆ, ಆದರೆ ಇಷ್ಟು ಚಿಕ್ಕ ಮರಿ ಬೇಟೆಯಾಡಲು ಆ ರೀತಿ ಮಾಡಿದ್ದು ನೋಡಿ, ಯಾರೂ ಹೇಳಿಕೊಡದೆ ತನ್ನಿಂದ ತಾನಾಗಿಯೇ ಪ್ರಕೃತಿದತ್ತವಾಗಿ ಬಂದಿರುವ ಆ ಕಲೆಯನ್ನು ಜನ ಮೆಚ್ಚುಕೊಂಡಿದ್ದಾರೆ.

ಇದನ್ನೂ ಓದಿ
Image
ಅಹಮದಾಬಾದ್ ವಿಮಾನ ಅಪಘಾತಕ್ಕೆ ಸ್ವಲ್ಪ ಮುಂಚಿನ ವಿಡಿಯೋ?
Image
ವಿಮಾನ ಪತನಕ್ಕೂ ಮೊದಲು ಫ್ಲೈಟ್‌ ಒಳಗೆ ಏನಾಯ್ತು ನೋಡಿ
Image
ವಿಮಾನದ ಅವಶೇಷದ ಅಡಿಯಲ್ಲಿ ಸುರಕ್ಷಿತವಾಗಿ ಪತ್ತೆಯಾದ ಭಗವದ್ಗೀತೆ
Image
ವ್ಯಕ್ತಿಗೆ ಚಾಟ್‌ಜಿಪಿಟಿ ನೀಡಿದ ಸಲಹೆ ನೋಡಿದ್ರೆ ನೀವು ಶಾಕ್ ಆಗ್ತೀರಾ?

ಇದನ್ನೂ ಓದಿ: Video: ಹಾರಾಟದ ವೇಳೆ ಅಡ್ಡ ಸಿಕ್ಕ ಹಕ್ಕಿ; ಪ್ರಯಾಣಿಕರ ಪ್ರಾಣ ಉಳಿಸಲು ಪೈಲೆಟ್ ಸಾಹಸ ಹೇಗಿತ್ತು ನೋಡಿ!

ವೈರಲ್‌ ವಿಡಿಯೋ ಇಲ್ಲಿದೆ ನೋಡಿ:

ಬಹಳ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 650,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ಐಕಾನಿಕ್ ಡೆತ್ ರೋಲ್ ಪ್ರದರ್ಶಿಸಿದ ಮೊಸಳೆ ಮರಿಯ ನೈಪುಣ್ಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ಮರಿ ಮೊಸಳೆ ವಿಡಿಯೋ ನೋಡಿ ಆಶ್ಚರ್ಯವ್ಯಕ್ತ ಪಡಿಸಿದ್ದು ‘ಹುಟ್ಟಿನಿಂದಲೇ ಎಲ್ಲವನ್ನು ಕಲಿತುಕೊಂಡು ಬಂದಿರುವ ಹಾಗೆ ಕಾಣಿಸುತ್ತದೆ’ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಅವುಗಳಿಗೆ ಹುಟ್ಟಿನಿಂದಲೇ ಅದನ್ನು ಹೇಗೆ ಮಾಡಬೇಕೆಂದು ತಿಳಿದಿರುತ್ತದೆ. ಪ್ರಕೃತಿ ವಯಸ್ಸಿಗೆ ಕಾಯುವುದಿಲ್ಲ ಮೊದಲ ದಿನದಿಂದಲೇ ಅವುಗಳ ವೃತ್ತಿ ಪ್ರಾರಂಭವಾಗುತ್ತದೆ’ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ