AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐರೋಪ್ಯ ರಾಷ್ಟ್ರಗಳ ನಿಷೇಧದ ಹಿನ್ನೆಲೆಯಲ್ಲಿ ರಷ್ಯಾ ಕಚ್ಚಾ ತೈಲವನ್ನು ಭಾರತ ಮತ್ತು ಚೀನಾಗೆ ಮಾರಲು ಬಯಸುತ್ತಿದೆ

ಆದರೆ ಭಾರತ ಮತ್ತು ಚೀನಾನಲ್ಲಿ ಯುರಲ್ ಸಂಸ್ಕರಣೆ ಮಾಡುವ ರಿಫೈನರಿಗಳಿರುವುದರಿಂದ ಅವು ಇನ್ನೂ ಹೆಚ್ಚಿನ ಬ್ಯಾರೆಲ್ ಗಳನ್ನು ಖರೀದಿಸುವ ಕ್ಷಮತೆ ಹೊಂದಿವೆ.

ಐರೋಪ್ಯ ರಾಷ್ಟ್ರಗಳ ನಿಷೇಧದ ಹಿನ್ನೆಲೆಯಲ್ಲಿ ರಷ್ಯಾ ಕಚ್ಚಾ ತೈಲವನ್ನು ಭಾರತ ಮತ್ತು ಚೀನಾಗೆ ಮಾರಲು ಬಯಸುತ್ತಿದೆ
ವ್ಲಾದಿಮಿರ್ ಪುಟಿನ್
TV9 Web
| Edited By: |

Updated on: Jun 01, 2022 | 8:25 AM

Share

ರಷ್ಯಾದ ಕಚ್ಚಾ ತೈಲದ ಮೇಲೆ ಯುರೋಪಿಯನ್ ರಾಷ್ಟ್ರಗಳು (European Countries) ಸಂಪೂರ್ಣವಾಗಿ ನಿಷೇಧ ಹೇರಿದರೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರು ಅದನ್ನು ಮಾರಲು ಭಾರತ, ಚೀನಾ ಮತ್ತು ಐರೋಪ್ಯ ರಾಷ್ಟ್ರಗಳ ಹಾಗೆ ಕಚ್ಚಾ ತೈಲವನ್ನು (crude oil) ಖರೀದಿಸಿ ಸಂಸ್ಕರಣ ಮಾಡುವುದನ್ನು ಗೊತ್ತಿರುವ ಕೆಲ ದೇಶಗಳ ಮೊರೆ ಹೋಗಬೇಕಾಗುತ್ತದೆ. ಹಡಗಿನ ಮೂಲಕ ರಫ್ತಾಗುವ ರಷ್ಯಾದ ಕಚ್ಚಾ ತೈಲವನ್ನು ನಿಷೇಧಿಸಲು ಯುರೋಪಿಯನ್ ಯೂನಿಯನ್ ನಾಯಕರು ಸಮ್ಮತಿಸಿದ್ದು, ಇದರಿಂದ ರಷ್ಯಾಗೆ ತನ್ನ ರಫ್ತುಗಳ ಮೇಲೆ 10 ಬಿಲಿಯನ್ ಡಾಲರ್ಗಳಷ್ಟು ನಷ್ಟವಾಗಲಿದೆ.

ಅಂತಿಮವಾಗಿ ಇದು ರಷ್ಯಾದ ಪ್ರಮುಖ ಯುರಲ್ಸ್ ಕಚ್ಚಾ-ಯುರೋಪ್ನಲ್ಲಿ ಜನಪ್ರಿಯವಾಗಿರುವ ತೈಲ ಬ್ರಾಂಡ್ ಮೇಲೆ ಹೊಡೆತ ಬೀಳುವಂತೆ ಮಾಡಲಿದ್ದು ಪುಟಿನ್, ವ್ಯಾಪಾರಕ್ಕೆ ಹೊಸ ದೇಶಗಳನ್ನು ಹುಡುಕುವ ಅವಶ್ಯಕತೆಯಿದೆ. ಆದರೆ ಏಷ್ಯಾದಲ್ಲಿ ಖರೀದಿದಾರ ದೇಶಗಳ ಸಂಖ್ಯೆ ಕಡಿಮೆ. ಏಕೆಂದರೆ ಹೆಚ್ಚಿನ ಸಲ್ಫ್ಯೂರಿಕ್ ತೈಲವನ್ನು ನಿರ್ವಹಿಸಲು ಅತ್ಯಾಧುನಿಕ ಸಂಸ್ಕರಣೆ ಮತ್ತು ಮಿಶ್ರಣ ಸಾಮರ್ಥ್ಯಗಳನ್ನು ಹೊಂದಿರದ ಶ್ರೀಲಂಕಾ ಮತ್ತು ಇಂಡೋನೇಷ್ಯಾದಂತಹ ದೇಶಗಳಲ್ಲಿ ಗ್ರೇಡ್ ಅನ್ನು ದೊಡ್ಡ ಪ್ರಮಾಣದಲ್ಲಿ ಸುಲಭವಾಗಿ ಸಂಸ್ಕರಿಸಲಾಗುವುದಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಆದರೆ ಭಾರತ ಮತ್ತು ಚೀನಾನಲ್ಲಿ ಯುರಲ್ ಸಂಸ್ಕರಣೆ ಮಾಡುವ ರಿಫೈನರಿಗಳಿರುವುದರಿಂದ ಅವು ಇನ್ನೂ ಹೆಚ್ಚಿನ ಬ್ಯಾರೆಲ್ ಗಳನ್ನು ಖರೀದಿಸುವ ಕ್ಷಮತೆ ಹೊಂದಿವೆ. ಕಳೆದ ಕೆಲ ತಿಂಗಳುಗಳಿಂದ ಲಾಕ್ ಡೌನ್ ಗೆ ಒಳಗಾಗಿದ್ದ ಶಾಂಘೈ ನಗರದ ಸರ್ಕಾರೀ ಮತ್ತು ಖಾಸಗಿ ರಿಫೈನರಿಗಳಲ್ಲಿ ತೈಲ ಕೊಳ್ಳುವ ಬಗ್ಗೆ ಇಂಗದ ದಾಹ ಸೃಷ್ಟಿಯಾಗಿದೆ. ಹಾಗಾಗಿ, ಹೆಚ್ಚಿನ ಪ್ರಮಾಣದ ಕಚ್ಚಾ ತೈಲಕ್ಕಾಗಿ ಚೀನಾದ ರಿಫೈನರಿಗಳು ರಷ್ಯಾದತ್ತ ಮುಖ ಮಾಡಿದ್ದರೆ ಆಶ್ಚರ್ಯವಿಲ್ಲ.

ಆದರೆ ಗಮನಿಸಬೇಕಾದ ಸಂಗತಿಯೇನೆಂದರೆ, ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಬಳಿಕ ಐರೋಪ್ಯ ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದ ಮೇಲೆ ಭಾರತ ಮತ್ತು ಚೀನಾ ಅಲ್ಲಿಗೆ ಹೋಗುತ್ತಿದ್ದ ತೈಲಲನ್ನು ಖರೀದಿಸಲಾರಂಭಿಸಿದ್ದರಿಂದ ಈ ಎರಡು ದೇಶಗಳು ಹೊಸ ಸ್ಟಾಕ್ ಖರೀದಿಸಲು ಮುಂದಾದರೂ ಒಂದು ಸೀಮಿತ ಪ್ರಮಾಣದಲ್ಲಿ ಮಾತ್ರ ಖರೀದಿಸಲು ಶಕ್ಯವಾಗುತ್ತವೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ