AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಲ್ಲಿ ಸಿಖ್ ಟ್ರಕ್ ಚಾಲಕನಿಗೆ 17 ಬಾರಿ ಇರಿದು ಬರ್ಬರ ಹಲ್ಲೆ: ಹೋಮ್‌ಲ್ಯಾಂಡ್ ಸೆಕ್ಯುರಿಟಿಯ ‘ಮಿಸ್ಟರ್ ಸಿಂಗ್’ ಪೋಸ್ಟ್ ಬೆನ್ನಲ್ಲೇ ಜನಾಂಗೀಯ ದಾಳಿ

ಅಮೆರಿಕದ ವ್ಯೋಮಿಂಗ್‌ನಲ್ಲಿ 28 ವರ್ಷದ ಸಿಖ್ ಟ್ರಕ್ ಚಾಲಕನಿಗೆ ದುಷ್ಕರ್ಮಿಯೊಬ್ಬ 17 ಬಾರಿ ಇರಿದು ಬರ್ಬರ ಹಲ್ಲೆ ನಡೆಸಿದ್ದಾನೆ. ಹೋಮ್‌ಲ್ಯಾಂಡ್ ಸೆಕ್ಯುರಿಟಿಯ 'ಮಿಸ್ಟರ್ ಸಿಂಗ್' ಪೋಸ್ಟ್ ಬಳಿಕ ನಡೆದ ಈ ಘಟನೆ ಜನಾಂಗೀಯ ದ್ವೇಷದ ಕೃತ್ಯ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲಕ ಸಿಂಗ್ ಪ್ರಾಣಾಪಾಯದಿಂದ ಪಾರಾಗಿದ್ದು, ಹಲ್ಲೆಕೋರನನ್ನು ಬಂಧಿಸಲಾಗಿದೆ. ಇಂತಹ ದ್ವೇಷದ ಅಪರಾಧಗಳಿಗೆ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.

ಅಮೆರಿಕದಲ್ಲಿ ಸಿಖ್ ಟ್ರಕ್ ಚಾಲಕನಿಗೆ 17 ಬಾರಿ ಇರಿದು ಬರ್ಬರ ಹಲ್ಲೆ: ಹೋಮ್‌ಲ್ಯಾಂಡ್ ಸೆಕ್ಯುರಿಟಿಯ ‘ಮಿಸ್ಟರ್ ಸಿಂಗ್’ ಪೋಸ್ಟ್ ಬೆನ್ನಲ್ಲೇ ಜನಾಂಗೀಯ ದಾಳಿ
ಸಿಖ್ ಡ್ರೈವರ್Image Credit source: Mike Thompson
ನಯನಾ ರಾಜೀವ್
|

Updated on: Sep 18, 2026 | 12:01 PM

Share

ವಾಷಿಂಗ್ಟನ್, ಸೆಪ್ಟೆಂಬರ್ 18: ಅಮೆರಿಕದ ವ್ಯೋಮಿಂಗ್ ರಾಜ್ಯದಲ್ಲಿ ಪಂಜಾಬಿ ಮೂಲದ 28 ವರ್ಷದ ಸಿಖ್ ಟ್ರಕ್ ಚಾಲಕನ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಬರೋಬ್ಬರಿ 17 ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಇಂಟರ್‌ಸ್ಟೇಟ್-80 ಹೆದ್ದಾರಿಯ ಬಿಟರ್ ಕ್ರೀಕ್ ರೆಸ್ಟ್ ಏರಿಯಾದ ಶೌಚಾಲಯದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಕುತ್ತಿಗೆ, ಎದೆ, ಪಕ್ಕೆಲುಬು ಹಾಗೂ ಕೈಗಳಿಗೆ ಗಂಭೀರ ಗಾಯಗಳಾಗಿರುವ ಚಾಲಕ ಸಿಂಗ್ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟ್ರಂಪ್ ಆಡಳಿತದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು ಸಿಖ್ ಚಾಲಕರನ್ನು ಗುರಿಯಾಗಿಸಿ ‘ಮಿಸ್ಟರ್ ಸಿಂಗ್’ ಎಂಬ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಶೌಚಾಲಯಕ್ಕೆ ನುಗ್ಗಿ ಮಾರಣಾಂತಿಕ ಇರಿತ: ಪೆನ್ಸಿಲ್ವೇನಿಯಾ ಕಡೆಗೆ ಟ್ರಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಸಿಂಗ್, ಮುಂಜಾನೆ ವಿಶ್ರಾಂತಿ ಕೊಠಡಿ ಬಳಸಲು ನಿಂತಿದ್ದರು. ಅವರನ್ನು ಹಿಂಬಾಲಿಸಿಕೊಂಡು ಒಳನುಗ್ಗಿದ ದುಷ್ಕರ್ಮಿ, ಯಾವುದೇ ಮಾತಿನ ಚಕಮಕಿಯಿಲ್ಲದೆ ಏಕಾಏಕಿ ಚಾಕು ತೆಗೆದು 17 ಬಾರಿ ದೇಹದ ಹಲವು ಭಾಗಗಳಿಗೆ ಇರಿದು ಪರಾರಿಯಾಗಿದ್ದಾನೆ.

ದೇವದೂತರಂತೆ ಬಂದ ಹಿಸ್ಪಾನಿಕ್ ಕುಟುಂಬ: ದಾಳಿಯ ನಂತರ ರಕ್ತದ ಮಡುವಿನಲ್ಲಿ ಹೊರಬಂದು ಪಾದಚಾರಿ ಮಾರ್ಗದಲ್ಲಿ ಕುಸಿದುಬಿದ್ದ ಸಿಂಗ್ ಅವರಿಗೆ ಸ್ಥಳದಲ್ಲಿದ್ದ ಹಿಸ್ಪಾನಿಕ್ ಕುಟುಂಬವೊಂದು ತಕ್ಷಣ ಪ್ರಥಮ ಚಿಕಿತ್ಸೆ ನೀಡಿ, ತುರ್ತು ರಕ್ಷಣಾ ವಾಹನ ಬರುವವರೆಗೂ ರಕ್ತಸ್ರಾವ ತಡೆದು ಅವರ ಜೀವ ಉಳಿಸಿದೆ. “ಅವರು ನನಗೆ ಮರು ಜನ್ಮ ನೀಡಿದರು” ಎಂದು ಸಿಂಗ್ ಆಸ್ಪತ್ರೆಯ ಹಾಸಿಗೆಯಿಂದ ಭಾವುಕರಾಗಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಯುವತಿಯ ಕಿಡ್ನಾಪ್​ಗೆ ಯತ್ನ, ಪೊಲೀಸ್-ಜಡ್ಜ್ ಕಾರು ಸೇರಿ ನೂರಾರು ವಾಹನಗಳಿಗೆ ಡಿಕ್ಕಿ!

ದಾಳಿಗೆ ಸಂಬಂಧಿಸಿದಂತೆ 45 ವರ್ಷದ ಆಂಡ್ರ್ಯೂ ಕ್ರಿಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಕೊಲೆ ಯತ್ನದ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಭಾರತೀಯ-ಅಮೆರಿಕನ್ ಕಾಂಗ್ರೆಸ್‌ಮನ್ ರಾಜಾ ಕೃಷ್ಣಮೂರ್ತಿ ಮತ್ತು ಕ್ಯಾಲಿಫೋರ್ನಿಯಾದ ಸಂಸದ ಮೈಕ್ ಥಾಂಪ್ಸನ್ ಈ ಭೀಕರ ದಾಳಿಯನ್ನು ಕಟುವಾಗಿ ಖಂಡಿಸಿದ್ದಾರೆ. ಸರ್ಕಾರದ ಉನ್ನತ ಇಲಾಖೆಗಳೇ ಜನಾಂಗೀಯ ವ್ಯಂಗ್ಯಚಿತ್ರಗಳ ಮೂಲಕ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಬಿತ್ತುವುದನ್ನು ನಿಲ್ಲಿಸಬೇಕು ಮತ್ತು ಇಂತಹ ದ್ವೇಷದ ಅಪರಾಧಗಳನ್ನು ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಯುಎಸ್‌ನಲ್ಲಿ ಸಿಖ್ ಸಮುದಾಯದ ಪಾತ್ರ: ಅಮೆರಿಕದ ಸರಕು ಸಾಗಣೆ ವಲಯದಲ್ಲಿ ಪಂಜಾಬಿ ಮತ್ತು ಸಿಖ್ ಸಮುದಾಯದ ಪಾಲುದಾರಿಕೆ ಅಪಾರವಾಗಿದೆ. ಕ್ಯಾಲಿಫೋರ್ನಿಯಾ, ವಾಷಿಂಗ್ಟನ್ ಹಾಗೂ ಟೆಕ್ಸಾಸ್ ಭಾಗಗಳಲ್ಲಿ ಸಾವಿರಾರು ಸಿಖ್ ಯುವಕರು ದೀರ್ಘಾವಧಿ ಟ್ರಕ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ದೇಶದ ಆರ್ಥಿಕತೆಗೆ ದೊಡ್ಡ ಮಟ್ಟದಲ್ಲಿ ನೆರವಾಗುತ್ತಿದ್ದಾರೆ.

ಹೆಚ್ಚುತ್ತಿರುವ ಜನಾಂಗೀಯ ದಾಳಿಗಳು: ಟರ್ಬನ್ ಮತ್ತು ಗಡ್ಡ ಧರಿಸುವ ಕಾರಣಕ್ಕೆ ಸಿಖ್ಖರನ್ನು ಗುರುತು ತಪ್ಪಾಗಿ ಭಾವಿಸಿ ಅಥವಾ ಜನಾಂಗೀಯ ದ್ವೇಷದಿಂದ ಗುರಿಯಾಗಿಸಿ ಇತ್ತೀಚಿನ ವರ್ಷಗಳಲ್ಲಿ ಅಮೆರಿಕದ ವಿವಿಧ ನಗರಗಳಲ್ಲಿ ಅವರ ಮೇಲೆ ಹಲ್ಲೆಗಳು ನಡೆಯುತ್ತಿರುವುದು ಅಲ್ಲಿನ ಭಾರತೀಯ ಸಮುದಾಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಣೆ ಸಲ್ಲ: ಬಿಜೆಪಿ ಕಿಡಿ
ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಣೆ ಸಲ್ಲ: ಬಿಜೆಪಿ ಕಿಡಿ
ಶಿಷ್ಟಾಚಾರ ಉಲ್ಲಂಘನೆ: ಬೀದರ್ ಡಿಹೆಚ್ಒ, ಬಸವಕಲ್ಯಾಣ ಟಿಹೆಚ್ಒ ಅಮಾನತು
ಶಿಷ್ಟಾಚಾರ ಉಲ್ಲಂಘನೆ: ಬೀದರ್ ಡಿಹೆಚ್ಒ, ಬಸವಕಲ್ಯಾಣ ಟಿಹೆಚ್ಒ ಅಮಾನತು
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್
ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು
ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು
ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ
ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ
ಸಿದ್ದರಾಮಯ್ಯ ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ
ಸಿದ್ದರಾಮಯ್ಯ ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ
ಕರ್ಕಾಟಕ ರಾಶಿಗೆ ಕುಜ ಗ್ರಹ ಪ್ರವೇಶ ಇಂದು: ದ್ವಾದಶ ರಾಶಿಗಳ ದಿನ ಭವಿಷ್ಯ
ಕರ್ಕಾಟಕ ರಾಶಿಗೆ ಕುಜ ಗ್ರಹ ಪ್ರವೇಶ ಇಂದು: ದ್ವಾದಶ ರಾಶಿಗಳ ದಿನ ಭವಿಷ್ಯ
ಪ್ರಧಾನಿ ಮೋದಿ ಜನ್ಮದಿನಕ್ಕೆ ಸಿಎಂ ಧಾಮಿಯಿಂದ ಯಮುನಾ ಆರತಿ
ಪ್ರಧಾನಿ ಮೋದಿ ಜನ್ಮದಿನಕ್ಕೆ ಸಿಎಂ ಧಾಮಿಯಿಂದ ಯಮುನಾ ಆರತಿ
ಶಿಪ್ರಾ ನದಿ ದಂಡೆಯಲ್ಲಿ ದೀಪಗಳಿಂದಲೇ ಮೂಡಿದ ಪ್ರಧಾನಿ ಮೋದಿಯವರ ಬೃ
ಶಿಪ್ರಾ ನದಿ ದಂಡೆಯಲ್ಲಿ ದೀಪಗಳಿಂದಲೇ ಮೂಡಿದ ಪ್ರಧಾನಿ ಮೋದಿಯವರ ಬೃ
ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಪ್ರಲ್ಹಾದ್​​ ಜೋಶಿ
ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಪ್ರಲ್ಹಾದ್​​ ಜೋಶಿ