AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷಿ ಆದಾಯ 10 ಲಕ್ಷ ಮೀರಿದರೆ ಕಟ್ಟುನಿಟ್ಟಿನ ಪರಿಶೀಲನೆ: ತೆರಿಗೆ ನಿಯಮ ಬಿಗಿಗೊಳಿಸಲು ಮುಂದಾದ ಸರ್ಕಾರ

ಕೃಷಿ ಆದಾಯದ ಮೇಲೆ ತೆರಿಗೆ ವಿಧಿಸುವ ಪ್ರಸ್ತಾಪವು ಬಹುತೇಕ ರಾಜಕಾರಿಣಿಗಳಲ್ಲಿ ಆತಂಕ ಉಂಟು ಮಾಡಿದೆ. ಬಹುಸಂಖ್ಯೆಯ ರಾಜಕಾರಿಣಿಗಳ ತಮ್ಮ ಆದಾಯವನ್ನು ಕೃಷಿ ಆದಾಯ ಎಂದು ಘೋಷಿಸಿ, ತೆರಿಗೆ ವಂಚಿಸುತ್ತಿದ್ದಾರೆ.

ಕೃಷಿ ಆದಾಯ 10 ಲಕ್ಷ ಮೀರಿದರೆ ಕಟ್ಟುನಿಟ್ಟಿನ ಪರಿಶೀಲನೆ: ತೆರಿಗೆ ನಿಯಮ ಬಿಗಿಗೊಳಿಸಲು ಮುಂದಾದ ಸರ್ಕಾರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 08, 2022 | 7:12 AM

ದೆಹಲಿ: ಇತರ ಮೂಲಗಳಿಂದ ಗಳಿಸಿದ ಆದಾಯವನ್ನು ಕೃಷಿ ಆದಾಯ (Agriculture Income) ಎಂದು ಘೋಷಿಸಿಕೊಳ್ಳುವ ಮೂಲಕ ಆದಾಯ ತೆರಿಗೆ (Income Tax) ವಂಚಿಸುತ್ತಿದ್ದವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ ದಿನಗಳಲ್ಲಿ ಅತಿಶ್ರೀಮಂತ ಕೃಷಿಕರು ತೆರಿಗೆ ಅಧಿಕಾರಿಗಳಿಂದ ಕಟ್ಟುನಿಟ್ಟಿನ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ. ಹಾಲಿ ಜಾರಿಯಲ್ಲಿರುವ ನಿಯಮಗಳು ಕೃಷಿ ಆದಾಯದ ಮೇಲೆ ಸಾಕಷ್ಟು ವಿನಾಯ್ತಿಗಳನ್ನು ಘೋಷಿಸುತ್ತವೆ. ಈ ವಿನಾಯ್ತಿಗಳನ್ನು ಹಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಅತಿ ಶ್ರೀಮಂತ ರೈತರ ಆದಾಯ ಮೂಲಗಳನ್ನು ಕಟ್ಟುನಿಟ್ಟಾಗಿ ತಪಾಸಣೆಗೆ ಒಳಪಡಿಸಲು ಸರ್ಕಾರ ತೀರ್ಮಾನಿಸಿದೆ. ₹ 10ಕ್ಕೂ ಹೆಚ್ಚುಉ ಕೃಷಿ ಆದಾಯ ಹೊಂದಿರುವವರಿಂದ ಆದಾಯ ತೆರಿಗೆ ಇಲಾಖೆಯು ಹಲು ದಾಖಲೆಗಳನ್ನು ಕೇಳಲಿದೆ ಎಂದು ಕೇಂದ್ರ ಸರ್ಕಾರವು ಹಣಕಾಸು ವಿಚಾರಗಳಿಗೆ ಸಂಬಂಧಿಸಿದ ಸಂಸದೀಯ ಸಮಿತಿಗೆ ತಿಳಿಸಿದೆ.

ಆದಾಯ ತೆರಿಗೆ ಇಲಾಖೆಯು ಅಗೀಕರಿಸಲು ತೆರಿಗೆ ವಿನಾಯ್ತಿ ಕ್ಲೇಮ್​ಗಳ ಪೈಕಿ ಶೇ 22.5ರಷ್ಟು ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಪರಿಶೀಲನೆ ನಡೆಯುತ್ತಿಲ್ಲ. ಇದನ್ನು ದುರುಪಯೋಗ ಪಡೆಸಿಕೊಳ್ಳುತ್ತಿರುವ ಕೆಲವರು ತೆರಿಗೆ ವಂಚಿಸುತ್ತಿದ್ದಾರೆ ಎಂದು ಸಂಸದೀಯ ಸಮಿತಿಯು ತನ್ನ 49ನೇ ವರದಿಯಲ್ಲಿ ಹೇಳಿದೆ. ಭಾರತದ ಮಹಾಲೇಖಪಾಲರ (Auditor and Comptroller General – ACG) ವರದಿಯನ್ನು ಆಧರಿಸಿದ ಸಂಸದೀಯ ಸಮಿತಿಯು ಈ ಶಿಫಾರಸುಗಳನ್ನು ಮಾಡಿದೆ. ಚಂಡೀಗಡದಲ್ಲಿ ಭೂಮಿ ಮಾರಾಟದಿಂದ ಸಿಕ್ಕಿರುವ ₹ 1.09 ಕೋಟಿ ಮೊತ್ತವನ್ನು ಕೃಷಿ ಆದಾಯ ಎಂದು ತೋರಿಸಿ ತೆರಿಗೆ ವಂಚಿಸಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಐಟಿ ರಿಟರ್ನ್ಸ್​ ಅನುಮೋದಿಸುವ ಸಂದರ್ಭದಲ್ಲಿ ಸಂಸದೀಯ ಸಮಿತಿಯು ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸಿಲ್ಲ. ಐಟಿ ರಿಟರ್ನ್ಸ್ ಸಲ್ಲಿಸುವವರು ಸಹ ತಮ್ಮ ಆದಾಯದ ದಾಖಲೆ ಸಲ್ಲಿಸುವಾಗ ಲೋಪಗಳನ್ನು ಮಾಡಿದ್ದಾರೆ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ. ಆದಾಯ ತೆರಿಗೆ ಕಾಯ್ದೆ (1961)ರ 10 (1) ಪರಿಚ್ಛೇದದ ಅನ್ವಯ ಕೃಷಿ ಆದಾಯವು ತೆರಿಗೆ ವಿನಾಯ್ತಿ ಅರ್ಹವಾಗಿದೆ. ಕೃಷಿ ಭೂಮಿಯನ್ನು ಬಾಡಿಗೆಗೆ ಕೊಡುವುದು, ಕೃಷಿ ಭೂಮಿಯಿಂದ ಆದಾಯ ಗಳಿಸುವುದು ಅಥವಾ ಹಸ್ತಾಂತರಿಸುವುದರಿಂದ ಬರುವ ಆದಾಯವನ್ನು ಸಹ ಕೃಷಿ ಆದಾಯ ಎಂದೇ ಈ ಕಾಯ್ದೆಯ ಅನ್ವಯ ಪರಿಗಣಿಸಲಾಗುತ್ತದೆ.

ಕೃಷಿ ಆದಾಯವೂ ಸೇರಿದಂತೆ ಐಟಿ ರಿಟರ್ನ್ಸ್​ ಸಲ್ಲಿಕೆ ಮತ್ತು ಪ್ರಕ್ರಿಯೆಯ ವಿವಿಧ ಹಂತಗಳನ್ನು ಸಮರ್ಪಕವಾಗಿ ನಿರ್ವಹಿಸಲು ಬೇಕಿರುವಷ್ಟು ಮಾನವ ಸಂಪನ್ಮೂಲ ನಮ್ಮ ಕಮಿಷನರೇಟ್​ಗಳಲ್ಲಿ ಲಭ್ಯವಿಲ್ಲ ಎಂದು ತೆರಿಗೆ ಇಲಾಖೆ ಹೇಳಿತ್ತು. ಉದ್ಯೋಗಿಗಳ ಕೊರತೆಯಿಂದ ಜನರಿಗೆ ಅಗುವ ತೊಂದರೆ ನಿವಾರಿಸಲೆಂದು ಆದಾಯ ತೆರಿಗೆ ಇಲಾಖೆಯು ಕೃಷಿ ಆದಾಯವು ₹ 10 ಲಕ್ಷ ಮೀರುವ ಪ್ರಕರಣಗಳಲ್ಲಿ ಸ್ವಯಂ ಅಸೆಸ್​ಮೆಂಟ್ ಸಾಧ್ಯವಾಗುವ ವ್ಯವಸ್ಥೆಯೊಂದನ್ನು ರೂಪಿಸಿದೆ ಎಂದು ಸಂಸದೀಯ ಸಮಿತಿಗೆ ಹಣಕಾಸು ಇಲಾಖೆ ತಿಳಿಸಿತ್ತು.

ಕೃಷಿ ಆದಾಯದ ಮೇಲೆ ತೆರಿಗೆ ವಿಧಿಸುವ ಪ್ರಸ್ತಾಪವು ಬಹುತೇಕ ರಾಜಕಾರಿಣಿಗಳಲ್ಲಿ ಆತಂಕ ಉಂಟು ಮಾಡಿದೆ. ಬಹುಸಂಖ್ಯೆಯ ರಾಜಕಾರಿಣಿಗಳ ತಮ್ಮ ಅಕ್ರಮ ಆದಾಯವನ್ನು ಕೃಷಿ ಆದಾಯ ಎಂದು ಘೋಷಿಸಿ, ತೆರಿಗೆ ವಂಚಿಸುತ್ತಿದ್ದಾರೆ. ಭಾರತದ ಬಹುತೇಕ ರೈತರು ಬಡವರೇ ಆಗಿದ್ದು, ತೆರಿಗೆ ವಿನಾಯ್ತಿಗೆ ಅರ್ಹರಿದ್ದಾರೆ. ಆದರೆ ಶ್ರೀಮಂತ ರೈತರಿಗೆ ಏಕೆ ಈ ವಿನಾಯ್ತಿ ಸಿಗಬೇಕು ಎನ್ನುವುದು ಸಂಸದೀಯ ಸಮಿತಿ ಕೇಳುತ್ತಿರುವ ಪ್ರಶ್ನೆ. ಕೇವಲ ಶೇ 0.04ರಷ್ಟು ಶ್ರೀಮಂತ ರೈತ ಕುಟುಂಬಗಳು ಮತ್ತು ಕಂಪನಿಗಳ ಮೇಲೆ (ಶೇ 30ರ ನಿಯಮದ) ತೆರಿಗೆ ವಿಧಿಸಿದರೂ ದೇಶಕ್ಕೆ ₹ 50,000 ಕೋಟಿ ಆದಾಯ ಸಿಗುತ್ತದೆ ಎಂದು ಸಂಸದೀಯ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಮತ್ತು ಮೈಸೂರಿನ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ; ಲಕ್ಷ ಲಕ್ಷ ನಗದು, ಚಿನ್ನಾಭರಣ ಪತ್ತೆ

ಇದನ್ನೂ ಓದಿ: ಇವರೆಲ್ಲಾ ಕೃಷಿಯಿಂದಲೇ ಆದಾಯ ಗಳಿಸಿದ್ದಾರಂತೆ, ಆದರೆ ಅದನ್ನು ಪರಿಶೀಲಿಸಲು ಆದಾಯ ತೆರಿಗೆ ಇಲಾಖೆಯಲ್ಲಿ ಜನ ಇಲ್ಲ!

ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ