AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

32 ವರ್ಷ ನಂತರ ಸಿಕ್ಕ ಷೇರು ಸರ್ಟಿಫಿಕೇಟ್​ನ ಬೆಲೆ ಕೇಳಿ ಹೌಹಾರುತ್ತೀರಿ; 200 ರೂಗಳ ಈ ಷೇರುಬೆಲೆ ಈಗ 2.5 ಲಕ್ಷ ರೂ

Burroughs Wellcome India Ltd's share certificate: 1993ರಲ್ಲಿ 200 ರೂಗಳಿಗೆ ಬರೋಸ್ ವೆಲ್​ಕಮ್ ಇಂಡಿಯಾದ 20 ಷೇರುಗಳನ್ನು ಖರೀದಿಸಿದ್ದ ವ್ಯಕ್ತಿಯೊಬ್ಬರು, ಆ ಹೂಡಿಕೆಯನ್ನು ಮರೆತೇ ಬಿಟ್ಟಿದ್ದರು. ಇದೀಗ ಅದರ ಷೇರು ಸರ್ಟಿಫಿಕೇಟ್ ಸಿಕ್ಕಿದ್ದು, ಈಗ ಆ 20 ಷೇರುಗಳ ಮೌಲ್ಯ ಎರಡೂವರೆ ಲಕ್ಷ ರೂ ಆಗಿದೆ. ಹಾಗೇ ಸುಮ್ಮನೆ ಬಿಟ್ಟ 20 ಷೇರುಗಳು ಲಕ್ಷಾಧೀಶ್ವರರಾಗಲು ಕಾರಣವಾಗಿದೆ.

32 ವರ್ಷ ನಂತರ ಸಿಕ್ಕ ಷೇರು ಸರ್ಟಿಫಿಕೇಟ್​ನ ಬೆಲೆ ಕೇಳಿ ಹೌಹಾರುತ್ತೀರಿ; 200 ರೂಗಳ ಈ ಷೇರುಬೆಲೆ ಈಗ 2.5 ಲಕ್ಷ ರೂ
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 16, 2025 | 8:06 PM

Share

ನವದೆಹಲಿ, ಡಿಸೆಂಬರ್ 16: ಅಪ್ಪನ ಅಥವಾ ತಾತನ ಹಳೆಯ ಕಡತಗಳನ್ನು (Old documents) ನೋಡುವಾಗ ಜೋಪಾನವಾಗಿರಿ. ಅದರಲ್ಲಿ ನೀವು ನಿರೀಕ್ಷಿಸದ, ಹಾಗೂ ಅವರೇ ಮರೆತುಹೋಗಿರುವ ದಾಖಲೆಗಳಿದ್ದೀತು. ಅವು ಇವತ್ತಿನ ಕಾಲಕ್ಕೆ ಲಕ್ಷ, ಕೋಟಿ ರೂಗಳ ಬೆಲೆ ಬಾಳುತ್ತಿರಬಹುದು. ಇಂಥ ಹಲವು ಘಟನೆಗಳು ಸೋಷಿಯಲ್ ಮೀಡಿಯಾದಲ್ಲಿ ಬೆಳಕಿಗೆ ಬಂದು ಶೇರ್ ಆಗುತ್ತಿರುತ್ತವೆ. ದಿ ಚಾರ್ಟಿಯನ್ಸ್ ಹೆಸರಿನ ಎಕ್ಸ್ ಬಳಕೆದಾರರೊಬ್ಬರು ಇಂಥದ್ದೊಂದು ಘಟನೆಯನ್ನು ಹಂಚಿಕೊಂಡಿದ್ದಾರೆ.

ಮೂವತ್ತು ವರ್ಷಗಳ ಹಿಂದೆ ಒಬ್ಬ ವ್ಯಕ್ತಿ ಒಂದು ಕಂಪನಿಯ 20 ಷೇರುಗಳನ್ನು 200 ರೂಗೆ ಖರೀದಿಸಿದ್ದಾರೆ. ಹಾಗೆ ಖರೀದಿಸಿದವರು ಮರೆತೇ ಬಿಟ್ಟಿದ್ದಾರೆ. ಈಗ ಆ 20 ಷೇರುಗಳ ಸರ್ಟಿಫಿಕೇಟ್ ದಾಖಲೆಯು ಅವರ ಸಂಬಂಧಿಗೆ ಸಿಕ್ಕಿದೆ. ಆ ಷೇರುಗಳ ಮೌಲ್ಯ 30 ವರ್ಷದಲ್ಲಿ ಶೇ. 89,900 ರಷ್ಟು ಹೆಚ್ಚಾಗಿದೆ. 200 ರೂಪಾಯಿಯ ಷೇರುಗಳ ಮೌಲ್ಯ ಇವತ್ತು ಎರಡೂವರೆ ಲಕ್ಷ ರೂ ಆಗಿ ಹೋಗಿದೆ.

ಇದನ್ನೂ ಓದಿ: ಎಫ್​ಡಿ, ಸಾಲ, ಷೇರು, ಚಿನ್ನ, ವಿಮೆ, ಸೇವಿಂಗ್ಸ್ ಕುರಿತು ಈ ತಪ್ಪು ಅಭಿಪ್ರಾಯ ನಿಮಗಿದೆಯಾ? ಈಗಲೇ ಸರಿಪಡಿಸಿಕೊಳ್ಳಿ

ಬರೋಸ್ ವೆಲ್​ಕಮ್ ಇಂಡಿಯಾದ 20 ಷೇರುಗಳು…

ಎಕ್ಸ್​ನಲ್ಲಿ ಪೋಸ್ಟ್ ಮಾಡಲಾಗಿರುವ ಮಾಹಿತಿ ಪ್ರಕಾರ 1993ರಲ್ಲಿ ಬರೋಸ್ ವೆಲ್​ಕಮ್ ಇಂಡಿಯಾ (Burroughs Wellcome India Ltd) ಎನ್ನುವ ಕಂಪನಿಯ 20 ಷೇರುಗಳನ್ನು ಖರೀದಿಸಲಾಗಿದೆ. ಪ್ರತೀ ಷೇರಿಗೆ 10 ರೂನಂತೆ ಅವನ್ನು ಪಡೆಯಲಾಗಿದೆ. ಈ ಕಂಪನಿ ಈಗ ಅಸ್ತಿತ್ವದಲ್ಲಿ ಇಲ್ಲ. ಕಾಲಾನಂತರದಲ್ಲಿ ಅದು ಗ್ಲ್ಯಾಕ್ಸೋಸ್ಮಿತ್​ಕ್ಲೈನ್ (GlaxoSmithKline India) ಎನ್ನುವ ಔಷಧ ತಯಾರಕ ಸಂಸ್ಥೆ ಜೊತೆ ವಿಲೀನಗೊಂಡಿದೆ.

ಚಾರ್ಟಿಯನ್ಸ್ ಅವರ ಎಕ್ಸ್ ಪೋಸ್ಟ್

ವಿಲೀನಗೊಂಡ ಬಳಿಕ ಬರೋಸ್​ನ ಷೇರುಗಳು ಗ್ಲ್ಯಾಕ್ಸೋಗೆ ವರ್ಗಾವಣೆ ಆಗಿದೆ. ಆ ಬಳಿಕ ಬೋನಸ್ ಷೇರುಗಳೂ ಬಿಡುಗಡೆ ಆಗಿವೆ. ಷೇರುಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಬಂದಿದೆ. ಇದರ ಷೇರು ಬೆಲೆ ಇವತ್ತು 2,592.50 ರೂ ಇದೆ. ಜೂನ್ 6ರಂದು ಇದರ ಷೇರುಬೆಲೆ 3,438 ರೂ ಕೂಡ ಮುಟ್ಟಿತ್ತು.

ಅಂದು 10 ರೂಗೆ ಖರೀದಿಸಲಾಗಿದ್ದ ಆ 20 ಷೇರುಗಳ ಬೆಲೆ ಇವತ್ತು 2,59,250 ರೂ ಆಗಿದೆ. ಅಂದರೆ 32 ವರ್ಷದಲ್ಲಿ ಷೇರುಬೆಲೆ ಯದ್ವಾತದ್ವಾ ಏರಿದೆ.

ಇದನ್ನೂ ಓದಿ: ಮಲ್ಟಿಬ್ಯಾಗರ್ ಷೇರುಗಳನ್ನು ಗುರುತಿಸಲು ಪಳಗಿರುವ ರಾಮದೇವ್ ಅಗರ್ವಾಲ್ ಅವರ ಟ್ರಿಕ್ಸ್​ಗಳಿವು…

ಈ ಘಟನೆಯಿಂದ ಕಲಿಯುವ ಪಾಠವೇನು?

ಈ ಹಳೆಯ ಷೇರುಗಳು ಸಿಕ್ಕಿರುವುದು ಯಾವಾಗಲೂ ಸಂಭವಿಸುವಂಥದ್ದಲ್ಲ. ಆ ಷೇರುಗಳನ್ನು ವಾರಸುದಾರರು ತಮ್ಮ ಅಕೌಂಟ್​ಗೆ ಟ್ರಾನ್ಸ್​ಫರ್ ಮಾಡಿಕೊಳ್ಳಲು ಹರಸಾಹಸ ಮಾಡಬೇಕಾಗಬಹುದು. ಅದೇನೇ ಇದ್ದರೂ, ಈ ಘಟನೆಯಿಂದ ಒಂದು ಒಳ್ಳೆಯ ಹಣಕಾಸು ಪಾಠವನ್ನು ಕಲಿಯಲು ಸಾಧ್ಯ. ಅದು ದೀರ್ಘಾವಧಿ ಹೂಡಿಕೆಯ ಪಾಠ. ಒಂದು ಒಳ್ಳೆಯ ಕಂಪನಿಯಲ್ಲಿ ನೀವು ದೀರ್ಘಾವಧಿ ಹೂಡಿಕೆ ಮಾಡಿದರೆ ಅದ್ಭುತ ಎನಿಸುವ ರಿಟರ್ನ್ ಗಳಿಸುವ ಸಾಧ್ಯತೆ ಬಹಳ ಅಧಿಕ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!