AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಎಸ್​ಟಿ ಕಾಂಪೆನ್ಸೇಶನ್ ಸೆಸ್ ಅಂತ್ಯವಾದರೂ ರಾಜ್ಯಗಳಿಗೆ ತಗ್ಗಲ್ಲ ತೆರಿಗೆ ಸುಗ್ಗಿ; ಸಿಗಲಿದೆ 1.43 ಲಕ್ಷ ಕೋಟಿ ರೂ ಹೆಚ್ಚುವರಿ ಆದಾಯ

States to gain lot taxes despite the end of GST compensation cess: ಜಿಎಸ್​ಟಿ ಕಾಂಪೆನ್ಸೇಶನ್ ಸೆಸ್ ವ್ಯವಸ್ಥೆ ಅಂತ್ಯಗೊಂಡಿದ್ದರೂ ರಾಜ್ಯಗಳಿಗೆ ತೆರಿಗೆ ಗಳಿಕೆಯಲ್ಲಿ ಕುಂದು ಇರೋದಿಲ್ಲ. ಎಸ್​ಬಿಐ ರಿಸರ್ಚ್ ವರದಿ ಪ್ರಕಾರ, ರಾಜ್ಯಗಳಿಗೆ 1.43 ಲಕ್ಷ ಕೋಟಿ ರೂ ಹೆಚ್ಚುವರಿ ಆದಾಯ ಸಿಗುತ್ತದೆ. ಹೆಚ್ಚುವರಿ ಅಬಕಾರಿ ಸುಂಕದಿಂದಾಗಿ ರಾಜ್ಯಗಳಿಗೆ ಹೆಚ್ಚಿನ ತೆರಿಗೆ ಹಂಚಿಕೆ ಇರುತ್ತದೆ.

ಜಿಎಸ್​ಟಿ ಕಾಂಪೆನ್ಸೇಶನ್ ಸೆಸ್ ಅಂತ್ಯವಾದರೂ ರಾಜ್ಯಗಳಿಗೆ ತಗ್ಗಲ್ಲ ತೆರಿಗೆ ಸುಗ್ಗಿ; ಸಿಗಲಿದೆ 1.43 ಲಕ್ಷ ಕೋಟಿ ರೂ ಹೆಚ್ಚುವರಿ ಆದಾಯ
ಜಿಎಸ್‌ಟಿImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 24, 2026 | 8:24 PM

Share

ಮುಖ್ಯಾಂಶಗಳು

  • ಜಿಎಸ್​ಟಿ ಕಾಂಪೆನ್ಸೇಶನ್ ಸೆಸ್ ವ್ಯವಸ್ಥೆ ಅಂತ್ಯಗೊಂಡಿದ್ದರೂ ರಾಜ್ಯಗಳಿಗೆ ತೆರಿಗೆ ಗಳಿಕೆಯಲ್ಲಿ ಕುಂದು ಇರೋದಿಲ್ಲ.
  • ಎಸ್​ಬಿಐ ರಿಸರ್ಚ್ ವರದಿ ಪ್ರಕಾರ, ರಾಜ್ಯಗಳಿಗೆ 1.43 ಲಕ್ಷ ಕೋಟಿ ರೂ ಹೆಚ್ಚುವರಿ ಆದಾಯ ಸಿಗುತ್ತದೆ.
  • ಹೆಚ್ಚುವರಿ ಅಬಕಾರಿ ಸುಂಕದಿಂದಾಗಿ ರಾಜ್ಯಗಳಿಗೆ ಹೆಚ್ಚಿನ ತೆರಿಗೆ ಹಂಚಿಕೆ ಇರುತ್ತದೆ.

ನವದೆಹಲಿ, ಜುಲೈ 24: ಜಿಎಸ್‌ಟಿ ಪರಿಹಾರ ಕರ (GST Compensation Cess) ಮುಕ್ತಾಯಗೊಂಡಿದ್ದರೂ ಮುಂಬರುವ 2026-27ನೇ ಹಣಕಾಸು ವರ್ಷದಲ್ಲಿ (FY27) ಭಾರತದ ರಾಜ್ಯಗಳು ಸುಮಾರು ₹1.43 ಲಕ್ಷ ಕೋಟಿ ಹೆಚ್ಚುವರಿ ಆದಾಯವನ್ನು (Net Gain) ಗಳಿಸಲಿವೆ ಎಂದು ಎಸ್‌ಬಿಐ ರಿಸರ್ಚ್ (SBI Research) ತನ್ನ ‘Ecowrap’ ವರದಿಯಲ್ಲಿ ತಿಳಿಸಿದೆ.

2017ರಲ್ಲಿ ಜಿಎಸ್‌ಟಿ ಜಾರಿಗೆ ಬಂದಾಗ ರಾಜ್ಯಗಳಿಗಾಗುವ ಆದಾಯ ನಷ್ಟವನ್ನು ಸರಿದೂಗಿಸಲು ಜಿಎಸ್‌ಟಿ ಪರಿಹಾರ ಕರವನ್ನು (ವಿಶೇಷವಾಗಿ ತಂಬಾಕು, ಪಾನ್ ಮಸಾಲಾ ಮುಂತಾದ ವಸ್ತುಗಳ ಮೇಲೆ) ಜಾರಿಗೊಳಿಸಲಾಗಿತ್ತು. ಈ ಕಾಂಪೆನ್ಸೇಶನ್ ಸೆಸ್ ಫೆಬ್ರವರಿ 1, 2026 ರಂದು ಅಧಿಕೃತವಾಗಿ ಅಂತ್ಯಗೊಂಡಿತು. ಪರಿಹಾರ ಕರ ರದ್ದಾದ ಕಾರಣ ರಾಜ್ಯಗಳಿಗೆ ವರ್ಷಕ್ಕೆ ₹15,000 ದಿಂದ ₹20,000 ಕೋಟಿ ನಷ್ಟವಾಗಬಹುದು ಎಂಬ ಆತಂಕ ಕೆಲ ಆರ್ಥಿಕ ತಜ್ಞರಲ್ಲಿ ಮೂಡಿತ್ತು.

ಎಸ್‌ಬಿಐ ರಿಸರ್ಚ್ ಭಿನ್ನ ಅಭಿಪ್ರಾಯ

ಕೇಂದ್ರೀಯ ಅಬಕಾರಿ ಕಾಯ್ದೆಯಡಿ (Central Excise Act) ಹೆಚ್ಚುವರಿ ಅಬಕಾರಿ ಸುಂಕವನ್ನು (AED) ತಂದಿರುವುದರಿಂದ ಮತ್ತು ಜಿಎಸ್‌ಟಿ ಸಂಗ್ರಹ ಹೆಚ್ಚಿರುವುದರಿಂದ ರಾಜ್ಯಗಳಿಗೆ ನಷ್ಟವಾಗುವುದಿಲ್ಲ, ಬದಲಿಗೆ ಲಾಭವಾಗಲಿದೆ ಎಂದು ಎಸ್‌ಬಿಐ ಹೇಳಿದೆ.

ಇದನ್ನೂ ಓದಿ: ಇನಾಪರೇಟಿವ್ ಇಪಿಎಫ್ ಅಕೌಂಟ್​ಗಳಲ್ಲಿ ಕೊಳೆಯುತ್ತಿದೆ 9,330 ಕೋಟಿ ರೂ.; ಏನು ಮಾಡಬೇಕು?

FY27 ರಲ್ಲಿ ಜಿಎಸ್‌ಟಿ ಮತ್ತು ಅಬಕಾರಿ ಸುಂಕದಿಂದ ರಾಜ್ಯಗಳಿಗೆ ಸಿಗುವ ಒಟ್ಟು ಪಾಲು ₹19.1 ಲಕ್ಷ ಕೋಟಿಗೆ ಏರಿಕೆಯಾಗುವ ನಿರೀಕ್ಷೆ ಇದೆ (FY26 ರಲ್ಲಿ ಇದು ₹17.7 ಲಕ್ಷ ಕೋಟಿಯಷ್ಟಿತ್ತು). ಇದು ನಿವ್ವಳ ₹1.43 ಲಕ್ಷ ಕೋಟಿಯಷ್ಟು ಹೆಚ್ಚಳವಾಗಿದೆ.

ಆದಾಯ ಹೆಚ್ಚಳಕ್ಕೆ ಮುಖ್ಯ ಕಾರಣಗಳು

ಕೆಲವು ವಿಶೇಷ ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಶೇ. 28 ರಿಂದ ಶೇ. 40 ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ರಾಜ್ಯಗಳ ಆದಾಯದ ಪಾಲು (SGST) ಹೆಚ್ಚಾಗಿದೆ. ಉದಾಹರಣೆಗೆ, ಮೊದಲು ₹100 ಮೌಲ್ಯದ ವಹಿವಾಟಿನಲ್ಲಿ ರಾಜ್ಯಕ್ಕೆ ₹19.74 ಸಿಗುತ್ತಿದ್ದರೆ, ಹೊಸ ತೆರಿಗೆ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ₹28.20 ದೊರೆಯುತ್ತದೆ.

ಸುಸ್ಥಿರ ಆದಾಯ ಬೆಳವಣಿಗೆ

ಜಿಎಸ್‌ಟಿ ಜಾರಿಯಾದ ನಂತರದ ಅವಧಿಯಲ್ಲಿ ರಾಜ್ಯಗಳ ಎಸ್‌ಜಿಎಸ್‌ಟಿ (SGST) ಆದಾಯವು ಸರಾಸರಿ ಶೇ. 13 ರಷ್ಟು ಸತತ ಬೆಳವಣಿಗೆ ಕಾಣುತ್ತಿದೆ (ಜಿಎಸ್‌ಟಿ ಜೂನ್‌ಗೆ 9 ವರ್ಷ ಪೂರೈಸಿದೆ). ಹೀಗಾಗಿ ಪರಿಹಾರ ಕರದ ಬೆಂಬಲವಿಲ್ಲದೆಯೂ ರಾಜ್ಯಗಳು ದೃಢವಾದ ಆದಾಯ ಬೆಳವಣಿಗೆ ಸಾಧಿಸಲು ಶಕ್ತವಾಗಿವೆ ಎಂದು ಎಸ್‌ಬಿಐ ವರದಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಶೇರುಪೇಟೆಗೆ ಈ ವಾರ ರಕ್ತದೋಕುಳಿ; ಸೆನ್ಸೆಕ್ಸ್​ನಿಂದ 2,092, ನಿಫ್ಟಿಯಿಂದ 567 ಅಂಕಗಳು ಕುಸಿತ

ಒಟ್ಟಾರೆ, ಜಿಎಸ್‌ಟಿ ಪರಿಹಾರ ಕರ ಕೊನೆಗೊಂಡಿದ್ದರೂ, ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿನ ಸತತ ಏರಿಕೆ ಮತ್ತು ಪರಿಷ್ಕೃತ ಹಂಚಿಕೆ ವ್ಯವಸ್ಥೆಯಿಂದಾಗಿ ರಾಜ್ಯಗಳ ಖಜಾನೆಗೆ ನಷ್ಟವಾಗುವ ಬದಲು ಬೃಹತ್ ಪ್ರಮಾಣದ ಲಾಭವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:22 pm, Fri, 24 July 26

Follow Us
ದೇವೇಗೌಡ್ರು ನಿವಾಸಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ
ದೇವೇಗೌಡ್ರು ನಿವಾಸಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ
ಸಿಜೆಪಿ ಪ್ರತಿಭಟನೆ: ಮುಂಜಾಗ್ರತಾ ಕ್ರಮವಾಗಿ ಪೊಲೀಸರ ರಜೆ ರದ್ದು
ಸಿಜೆಪಿ ಪ್ರತಿಭಟನೆ: ಮುಂಜಾಗ್ರತಾ ಕ್ರಮವಾಗಿ ಪೊಲೀಸರ ರಜೆ ರದ್ದು
ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ 8 ಸೇತುವೆಗಳು ಜಲಾವೃತ
ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ 8 ಸೇತುವೆಗಳು ಜಲಾವೃತ
ಬಿಪಿಎಲ್ ಕಾರ್ಡುದಾರರಿಗೆ ಗುಡ್​ ನ್ಯೂಸ್ ನೀಡಿದ ಆಹಾರ ಸಚಿವ ಮುನಿಯಪ್ಪ
ಬಿಪಿಎಲ್ ಕಾರ್ಡುದಾರರಿಗೆ ಗುಡ್​ ನ್ಯೂಸ್ ನೀಡಿದ ಆಹಾರ ಸಚಿವ ಮುನಿಯಪ್ಪ
ಬಿಡಾಡಿ ವಾಹನಗಳ ಟೋಯಿಂಗ್: ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳು ಜಪ್ತಿ
ಬಿಡಾಡಿ ವಾಹನಗಳ ಟೋಯಿಂಗ್: ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳು ಜಪ್ತಿ
‘ಸ್ವಾರ್ಥ ಬಿಡಿ’: ಚಿತ್ರರಂಗದವರ ಬಗ್ಗೆ ಸಾಧುಕೋಕಿಲ ಬೇಸರ
‘ಸ್ವಾರ್ಥ ಬಿಡಿ’: ಚಿತ್ರರಂಗದವರ ಬಗ್ಗೆ ಸಾಧುಕೋಕಿಲ ಬೇಸರ
ಕಾಕ್ರೋಚ್ ಹೋರಾಟಗಾರರಿಗೆ ಮುಲ್ಲಾಗಳು ಬಿರಿಯಾನಿ ತಿನ್ನಿಸ್ತಾವಸ್ರೆ: ಸಿಂಹ
ಕಾಕ್ರೋಚ್ ಹೋರಾಟಗಾರರಿಗೆ ಮುಲ್ಲಾಗಳು ಬಿರಿಯಾನಿ ತಿನ್ನಿಸ್ತಾವಸ್ರೆ: ಸಿಂಹ
ಸಾರಿಗೆ ಸಚಿವರ ಕ್ಷೇತ್ರದಲ್ಲೇ ಗೋದಾಮಾಗಿ ಮಾರ್ಪಟ್ಟಿರುವ ಬಸ್​​ ನಿಲ್ದಾಣ!
ಸಾರಿಗೆ ಸಚಿವರ ಕ್ಷೇತ್ರದಲ್ಲೇ ಗೋದಾಮಾಗಿ ಮಾರ್ಪಟ್ಟಿರುವ ಬಸ್​​ ನಿಲ್ದಾಣ!
ಚಾಲಕನ ಜೀವಕ್ಕಿಂತ ಬಿಯರ್ ಬಾಟಲಿಯೇ ಮುಖ್ಯವಾಯಿತೇ?
ಚಾಲಕನ ಜೀವಕ್ಕಿಂತ ಬಿಯರ್ ಬಾಟಲಿಯೇ ಮುಖ್ಯವಾಯಿತೇ?
ನೀಟ್ ಪ್ರತಿಭಟನೆ, ಮೋದಿ ಹೇಳಿಕೆ ಬಗ್ಗೆ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ
ನೀಟ್ ಪ್ರತಿಭಟನೆ, ಮೋದಿ ಹೇಳಿಕೆ ಬಗ್ಗೆ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ