AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಡೂತಿ ದೇಹ, 85 ಕೆಜಿ ತೂಕ; ವೈರಲ್​ ಆಯ್ತು ಫರ್ಹಾನ್​ ಅಖ್ತರ್​ ಫೋಟೋ

ಸಿನಿಮಾಗಳಲ್ಲಿ ಫಿಟ್​ ಆಗಿರುವ ವ್ಯಕ್ತಿ ದಡೂತಿ ದೇಹ ಹೊಂದುವ ಪರಿಸ್ಥಿತಿ ಬಂದರೆ ವಿಎಫ್​ಎಕ್ಸ್​ ಬಳಕೆ ಮಾಡಲಾಗುತ್ತದೆ. ಆದರೆ, ಫರ್ಹಾನ್​ ಸ್ವತಃ ತೂಕ ಹೆಚ್ಚಿಸಿಕೊಂಡಿದ್ದಾರೆ.

ದಡೂತಿ ದೇಹ, 85 ಕೆಜಿ ತೂಕ; ವೈರಲ್​ ಆಯ್ತು ಫರ್ಹಾನ್​ ಅಖ್ತರ್​ ಫೋಟೋ
ದಡೂತಿ ದೇಹ, 85 ಕೆಜಿ ತೂಕ; ವೈರಲ್​ ಆಯ್ತು ಫರ್ಹಾನ್​ ಅಖ್ತರ್​ ಫೋಟೋ
TV9 Web
| Edited By: |

Updated on: Jul 19, 2021 | 5:56 PM

Share

ನಟ ಫರ್ಹಾನ್​ ಅಖ್ತರ್​ ಬಾಲಿವುಡ್​ನಲ್ಲಿ ಸಾಕಷ್ಟು ಚಾಲೆಂಜಿಂಗ್​ ಪಾತ್ರಗಳನ್ನು ಮಾಡಿದ್ದಾರೆ. ಪ್ರತಿ ಪಾತ್ರಕ್ಕೆ ಜೀವ ತುಂಬುವುದಕ್ಕೂ ಮೊದಲು ಸಾಕಷ್ಟು ತಯಾರಿ ನಡೆಸುತ್ತಾರೆ ಅವರು. ಬಾಕ್ಸಿಂಗ್​ ಆಧರಿಸಿ ಸಿದ್ಧಗೊಂಡಿರುವ ‘ತೂಫಾನ್’​ ಚಿತ್ರಕ್ಕಾಗಿ ಫರ್ಹಾನ್​ ಅಖ್ತರ್ ತೆಗೆದುಕೊಂಡ ಚಾಲೆಂಜ್​ ಅಂತಿತಹದ್ದಲ್ಲ. ಈ ಚಿತ್ರಕ್ಕಾಗಿ ಎದುರಿಸಿದ ಕಷ್ಟದ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

ಫರ್ಹಾನ್​ ಅಖ್ತರ್​ ತೂಫಾನ್​ ಚಿತ್ರದಲ್ಲಿ ಬಾಕ್ಸರ್​ ಅಜೀಜ್​​ ಅಲಿ ಆಗಿ ಕಾಣಿಸಿಕೊಂಡಿದ್ದಾರೆ. ಬಾಕ್ಸರ್​ ಆಗುವುದಕ್ಕೂ ಮೊದಲು ಅಜೀಜ್​ ಪುಡಿ ರೌಡಿ ಆಗಿರುತ್ತಾನೆ. ನಂತರ ಬಾಕ್ಸಿಂಗ್ ಕಲಿಯುತ್ತಾನೆ. ಈ ಮಧ್ಯೆ ಬಾಕ್ಸಿಂಗ್​ ತೊರೆಯುವ ಸಂದರ್ಭ ಬರುತ್ತದೆ. ಈ ವೇಳೆ ಅಜೀಜ್​ ಫಿಟ್​ನೆಸ್​ ಕಳೆದುಕೊಳ್ಳುತ್ತಾನೆ. ಈ ಪಾತ್ರಕ್ಕಾಗಿ ದೊಡ್ಡ ಹೊಟ್ಟೆ ಹೊಂದುವ ಹಾಗೂ ತೂಕ ಹೆಚ್ಚಿಸಿಕೊಳ್ಳುವ ಅಗತ್ಯವಿತ್ತು.

ಸಿನಿಮಾಗಳಲ್ಲಿ ಫಿಟ್​ ಆಗಿರುವ ವ್ಯಕ್ತಿ ದಡೂತಿ ದೇಹ ಹೊಂದುವ ಪರಿಸ್ಥಿತಿ ಬಂದರೆ ವಿಎಫ್​ಎಕ್ಸ್​ ಬಳಕೆ ಮಾಡಲಾಗುತ್ತದೆ. ಆದರೆ, ಫರ್ಹಾನ್​ ಸ್ವತಃ ತೂಕ ಹೆಚ್ಚಿಸಿಕೊಂಡಿದ್ದಾರೆ. 69.9 ಕೆಜಿ ಇದ್ದ ಫರ್ಹಾನ್​ ಈ ಪಾತ್ರಕ್ಕಾಗಿ 85 ಕೆಜಿ ಆಗಿದ್ದಾರೆ. ದಡೂತಿ ದೇಹ ಕೂಡ ಬಂದಿದೆ. ನಂತರ ತೂಕ ಇಳಿಸಿಕೊಂಡು ಮತ್ತೆ ಸಿಕ್ಸ್​ ಪ್ಯಾಕ್​ ಮಾಡಿದ್ದಾರೆ. ಕೆಲವೇ ನಿಮಿಷಗಳ ದೃಶ್ಯಕ್ಕಾಗಿ ಫರ್ಹಾನ್​ ಇಷ್ಟು ತೂಕ ಏರಿಸಿಕೊಂಡಿದ್ದರು ಎಂಬುದು ವಿಶೇಷ.

ಈ ಫೋಟೋವನ್ನು ಸ್ವತಃ ಫರ್ಹಾನ್​ ಹಂಚಿಕೊಂಡಿದ್ದಾರೆ. ಅಲ್ಲದೆ, ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದಾರೆ.

‘ತೂಫಾನ್’​ ಚಿತ್ರಕ್ಕೆ ರಾಕೇಶ್​ ಓಂಪ್ರಕಾಶ್​ ಮೆಹ್ರಾ ನಿರ್ದೇಶನವಿದೆ. ಅಮೇಜಾನ್​ ಪ್ರೈಮ್​ನಲ್ಲಿ ಈ ಚಿತ್ರ ಜುಲೈ 16ರಂದು ಪ್ರೀಮಿಯರ್​ ಆಗಿದೆ. ಮಿಲ್ಖಾ ಸಿಂಗ್​ ಜೀವನವನ್ನು ಆಧರಿಸಿ ‘ಭಾಗ್​ ಮಿಲ್ಖಾ ಭಾಗ್​’ ಸಿನಿಮಾ ತಯಾರಾಗಿತ್ತು. 2013ರಲ್ಲಿ ಬಂದ ಆ ಸಿನಿಮಾದಲ್ಲಿ ಮಿಲ್ಖಾ ಸಿಂಗ್​ ಪಾತ್ರವನ್ನು ಫರ್ಹಾನ್​ ಅಖ್ತರ್​ ಮಾಡಿದ್ದರು. ಆ ಚಿತ್ರಕ್ಕೆ ರಾಕೇಶ್​ ಓಂಪ್ರಕಾಶ್​ ಮೆಹ್ರಾ ಅವರೇ ನಿರ್ದೇಶನ ಮಾಡಿದ್ದರು. ಬಾಕ್ಸ್​ ಆಫೀಸ್​ನಲ್ಲಿ ಆ ಸಿನಿಮಾ ಗೆದ್ದಿತ್ತು. ಆ ಚಿತ್ರದ ಮೂಲಕ ಮಿಲ್ಖಾ ಸಿಂಗ್ ಬದುಕಿನ ಸ್ಫೂರ್ತಿದಾಯಕ ಕಥೆ ಅನೇಕರಿಗೆ ತಿಳಿಯುವಂತಾಗಿತ್ತು. ನಂತರ ಇಬ್ಬರೂ ‘ತೂಫಾನ್​’ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ.

ಇದನ್ನೂ ಓದಿ: Milkha Singh Death: ‘ನೀವು ಸದಾ ಜೀವಂತವಾಗಿರುತ್ತೀರಿ’; ಮಿಲ್ಖಾ ಸಿಂಗ್​ ನಿಧನಕ್ಕೆ ಫರ್ಹಾನ್​ ಅಖ್ತರ್​ ಸಂತಾಪ

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ