AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Emma Chamberlain: ಭಾರತದ ರಾಜರಿಗೆ ಸೇರಿದ ನೆಕ್ಲೇಸ್ ಧರಿಸಿ ಹೆಜ್ಜೆ ಹಾಕಿದ್ರಾ ಖ್ಯಾತ ತಾರೆ? ಏನಿದರ ಇತಿಹಾಸ?

Met Gala 2022: ಎಮ್ಮಾ ಚೇಂಬರ್ಲೀನ್ ಧರಿಸಿದ್ದ ನೆಕ್ಲೆಸ್​ ಭಾರತದ ಪಂಜಾಬ್‌ನ ಪಟಿಯಾಲಾದ ಮಹಾರಾಜರಾಗಿದ್ದ ಭೂಪಿಂದರ್ ಸಿಂಗ್‌ಗೆ ಸೇರಿದ್ದು ಎನ್ನಲಾಗಿದೆ. ಕಾರ್ಟಿಯರ್ ವಿನ್ಯಾಸ ಮಾಡಿರುವ ಆ ನೆಕ್ಲೇಸ್ ಧರಿಸಿರುವ ಎಮ್ಮಾ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ.

Emma Chamberlain: ಭಾರತದ ರಾಜರಿಗೆ ಸೇರಿದ ನೆಕ್ಲೇಸ್ ಧರಿಸಿ ಹೆಜ್ಜೆ ಹಾಕಿದ್ರಾ ಖ್ಯಾತ ತಾರೆ? ಏನಿದರ ಇತಿಹಾಸ?
ಮಹಾರಾಜ ಭೂಪಿಂದರ್ ಸಿಂಗ್ (ಎಡ ಚಿತ್ರ), ಎಮ್ಮಾ ಚೇಂಬರ್ಲೇನ್ (ಬಲ ಚಿತ್ರ)
TV9 Web
| Edited By: |

Updated on:May 10, 2022 | 5:37 PM

Share

ಅಮೇರಿಕದ ಜನಪ್ರಿಯ ಯುಟ್ಯೂಬ್ ತಾರೆಯಾಗಿರುವ ಎಮ್ಮಾ ಚೇಂಬರ್ಲೇನ್ (Emma Chamberlain) ಪ್ರಸ್ತುತ ಭಾರತದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರು ಇತ್ತೀಚೆಗೆ ಧರಿಸಿದ್ದ ನೆಕ್ಲೆಸ್. ಹೌದು, ಪ್ರಖ್ಯಾತ ಫ್ಯಾಶನ್​ ಕಾರ್ಯಕ್ರಮವಾದ ‘ಮೆಟ್ ಗಾಲಾ 2022’ದಲ್ಲಿ (Met Gala 2022) ಮೊದಲ ಬಾರಿಗೆ ಕಾಣಿಸಿಕೊಂಡ ಎಮ್ಮಾ ವಿಶೇಷ ಬಗೆಯ ದಿರಿಸನ್ನು ಧರಿಸಿದ್ದರು. ಆದರೆ ಅದಕ್ಕಿಂತ ಅವರು ಹೆಚ್ಚು ಸುದ್ದಿಯಾಗಿದ್ದು ತಮ್ಮ ನೆಕ್ಲೇಸ್ ಮೂಲಕ. ಎಮ್ಮಾ ಚೇಂಬರ್ಲೀನ್ ಧರಿಸಿದ್ದ ಆಭರಣ​ ಭಾರತದ ಪಂಜಾಬ್‌ನ ಪಟಿಯಾಲಾದ ಮಹಾರಾಜರಾಗಿದ್ದ ಭೂಪಿಂದರ್ ಸಿಂಗ್‌ಗೆ ಸೇರಿದ್ದು ಎನ್ನಲಾಗಿದೆ. ಕಾರ್ಟಿಯರ್ ವಿನ್ಯಾಸ ಮಾಡಿರುವ ಆ ನೆಕ್ಲೇಸನ್ನು ಧರಿಸಿರುವ ಎಮ್ಮಾ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿರೋದೇಕೆ? ಏನಿದರ ಇತಿಹಾಸ? ಈ ಕುರಿತ ಮಾಹಿತಿ ಇಲ್ಲಿದೆ.

ಆಭರಣದ​ ಬಗ್ಗೆ ಇತಿಹಾಸ ಏನು ಹೇಳುತ್ತದೆ?

ಇದನ್ನೂ ಓದಿ
Image
Alia Bhatt: ಜನಸಾಮಾನ್ಯರ ಹಾದಿ ತಪ್ಪಿಸುತ್ತಿದ್ದಾರಾ ಆಲಿಯಾ ಭಟ್? ಸಾಕ್ಷಿ ಸಮೇತ ವಿವರಿಸಿದ ನೆಟ್ಟಿಗರು
Image
ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಟ್ರೇಲರ್ ರಿಲೀಸ್ ಡೇಟ್​ ಅನೌನ್ಸ್​; ಇಲ್ಲಿದೆ ಮಾಹಿತಿ
Image
ಹಿಂದಿ ಚಿತ್ರರಂಗದ ಎಂಟ್ರಿ ಬಗ್ಗೆ ಮಹೇಶ್​ ಬಾಬುಗೆ ಪದೇಪದೇ ಪ್ರಶ್ನೆ; ಅವರು ಕೊಟ್ಟ ಖಡಕ್ ಉತ್ತರ ಹೇಗಿತ್ತು ನೋಡಿ

ವರದಿಗಳ ಪ್ರಕಾರ, ಪಟಿಯಾಲದ ಮಹಾರಾಜರಾಗಿದ್ದ ಭೂಪಿಂದರ್ ಸಿಂಗ್ ಡಿ-ಬೀರ್ಸ್ ವಜ್ರಗಳನ್ನು ಹೊಂದಿದ್ದರು. ಅದನ್ನಿಟ್ಟುಕೊಂಡು ನೆಕ್ಲೇಸ್ ತಯಾರಿಸಲು ಅವರು ಕಾರ್ಟಿಯರ್​ಗೆ (ಪ್ರಖ್ಯಾತ ವಿನ್ಯಾಸ ಸಂಸ್ಥೆ) ನೀಡಿದ್ದರು. ನೆಕ್ಲೇಸ್ ಅನ್ನು 1928ರಲ್ಲಿ ತಯಾರಿಸಲಾಯಿತು. ಅದನ್ನು ಪಟಿಯಾಲಾ ನೆಕ್ಲೇಸ್ ಎಂದು ಕರೆಯಲಾಗುತ್ತಿತ್ತು.

ಈ ನೆಕ್ಲೇಸ್​ನ ವಿಶೇಷವೆಂದರೆ ಇದು 2930 ವಜ್ರಗಳು ಮತ್ತು ಕೆಲವು ಬರ್ಮೀಸ್ ಮಾಣಿಕ್ಯಗಳಿಂದ ಅಲಂಕರಿಸಲ್ಪಟ್ಟ ಐದು ಸಾಲುಗಳ ಪ್ಲಾಟಿನಂ ಚೈನ್​ಗಳನ್ನು ಹೊಂದಿದೆ. ತುಸು ಹಳದಿ ಬಣ್ಣದ ಡಿ-ಬೀರ್ಸ್ ವಜ್ರವನ್ನು ಮಧ್ಯದಲ್ಲಿ ಇರಿಸಲಾಗಿದೆ. ಇತಿಹಾಸದಲ್ಲೇ ಅತ್ಯಂತ ದುಬಾರಿ ವೆಚ್ಚದಲ್ಲಿ ತಯಾರಾದ ಆಭರಣ ಇದು ಎನ್ನಲಾಗಿದ್ದು, ಇದರ ತಯಾರಿಕೆಗೆ ಇಂದಿನ ಲೆಕ್ಕದಲ್ಲಿ ಸುಮಾರು 30 ಮಿಲಿಯನ್ ಡಾಲರ್ ವೆಚ್ಚವಾಗಿತ್ತು ಎಂದು ಹೇಳಲಾಗಿದೆ.

1888 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಣಿಗಾರಿಕೆಯ ಮೂಲಕ ತೆಗೆಯಲಾದ ಈ ವಜ್ರವನ್ನು ಭೂಪಿಂದರ್ ಸಿಂಗ್ 1889ರಲ್ಲಿ ಖರೀದಿಸಿದ್ದರು ಎಂದು ವರದಿಯಾಗಿದೆ. ಆದರೆ 1948 ರಲ್ಲಿ ಪಟಿಯಾಲಾ ರಾಜಮನೆತನದ ಖಜಾನೆಯಿಂದ ಪ್ರಸಿದ್ಧ ಹಾರ ಕಾಣೆಯಾಗಿತ್ತು. 32 ವರ್ಷಗಳವರೆಗೆ ಈ ಹಾರದ ಯಾವುದೇ ಕುರುಹು ಇರಲಿಲ್ಲ.

1982ರಲ್ಲಿ ಸೋಥೆಬಿ ಹರಾಜಿನ ಸಮಯದಲ್ಲಿ ಹಾರವು ನಿಗೂಢವಾಗಿ ಪತ್ತೆಯಾಯಿತು. ಅಚ್ಚರಿಯೆಂದರೆ ಹಾರವು ಅದರ ಮೊದಲಿನ ರೂಪದಲ್ಲಿ ಪತ್ತೆಯಾಗಿರಲಿಲ್ಲ. ಬದಲಾಗಿ ಕೇವಲ ಡಿ-ಬಿಯರ್ಸ್ ವಜ್ರ ಮಾತ್ರ ಹರಾಜಿಗೆ ಲಭ್ಯವಾಗಿತ್ತು. ಕಾರ್ಟಿಯರ್ ಹರಾಜಿನಲ್ಲಿ ವಜ್ರವನ್ನು ಖರೀದಿಸಿತ್ತು. ಲಂಡನ್‌ನ ಪುರಾತನ ವಸ್ತುಗಳ ಅಂಗಡಿಯೊಂದರಲ್ಲಿ ನೆಕ್ಲೇಸ್‌ನ ಒಂದು ಭಾಗ ಪತ್ತೆಯಾಗಿತ್ತು. ಕಾರ್ಟಿಯರ್ ನಂತರ ಹಾರವನ್ನು ಖರೀದಿಸಿ, ಅದರಲ್ಲಿ ನಾಪತ್ತೆಯಾಗಿದ್ದನ್ನು ಪ್ರತಿಕೃತಿಯೊಂದಿಗೆ ಬದಲಾಯಿಸಿತ್ತು.

ಈಗ ವಿವಾದವೇಕೆ?

‘‘ಮೆಟ್​ ಗಾಲಾದಲ್ಲಿ ಪ್ರದರ್ಶಿತವಾದ ನೆಕ್ಲೇಸ್​ನ ಮೂಲವು ಭಾರತದಲ್ಲಿದೆ. ಅದು ಅಚಾನಕ್ಕಾಗಿ ನಾಪತ್ತೆಯಾಗಿ ಹೇಗೇಗೋ ಕಾರ್ಟಿಯರ್​ಗೆ ಸೇರಿದೆ. ದುರದೃಷ್ಟವಶಾತ್ ಜನರಿಗೆ ಇದರ ಬಗ್ಗೆ ಅರಿವಿಲ್ಲ’’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ ನೆಟ್ಟಿಗರು. ಹಳೆಯ ನೆಕ್ಲೇಸ್ ಹಾಗೂ ಈಗಿನ ಹೊಸ ವಿನ್ಯಾಸದ ನೆಕ್ಲೇಸ್​ಗಳ ಚಿತ್ರಗಳನ್ನು ತುಲನೆ ಮಾಡಿ ಚರ್ಚೆಗಳು ನಡೆಯುತ್ತಿವೆ.

‘‘ಭಾರತದ ಅನೇಕ ಆಭರಣಗಳು ಹಾಗೂ ಅಮೂಲ್ಯ ವಸ್ತುಗಳು ಅನಿವಾರ್ಯ ಕಾರಣಗಳಿಂದ ಬೇರೆಯವರಲ್ಲಿದೆ. ಕೊಹಿನೂರ್ ವಜ್ರವೂ ಸೇರಿದಂತೆ ಅನೇಕ ಅಮೂಲ್ಯ ವಸ್ತುಗಳನ್ನು ಈಗಲೂ ಅದರ ಮೂಲ ಮಾಲಿಕರಿಗೆ ಹಿಂತಿರುಗಿಸಲಾಗಿಲ್ಲ’’ ಎಂದು ಹಲವರು ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತು ನೆಟ್ಟಿಗರ ಕೆಲವು ಅಭಿಪ್ರಾಯಗಳು ಇಲ್ಲಿವೆ:

ಭಾರತದ ಪರಂಪರೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದೂ ಹಲವರು ಟ್ವಿಟರ್​ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮತ್ತಷ್ಟು ಕುತೂಹಲಕರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:48 pm, Tue, 10 May 22

Follow Us
TV9 Web
TV9 Web

TV9 Kannada

Read More
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ವಿಜಯ್ ನೋಡಲು ಟಿವಿಕೆ ಬಾವುಟ ಹಿಡಿದು ಕಾಯುತ್ತಿರುವ ಫ್ಯಾನ್ಸ್
ವಿಜಯ್ ನೋಡಲು ಟಿವಿಕೆ ಬಾವುಟ ಹಿಡಿದು ಕಾಯುತ್ತಿರುವ ಫ್ಯಾನ್ಸ್
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು