ಗೊತ್ತಿಲ್ಲದೆ ತಪ್ಪು ಮಾಡಿದ ಜನಪ್ರಿಯ ಕಿರುತೆರೆ ನಟಿಗೆ ಬರುತ್ತಿದೆ ಸಾಲುಸಾಲು ಅಶ್ಲೀಲ ನಿಂದನೆ

TV9 Digital Desk

| Edited By: Rajesh Duggumane

Updated on: Sep 09, 2021 | 9:29 PM

ಕೇರಳದ ದೇವಸ್ಥಾನದವರು ಪಂಬಾ ನದಿಯಲ್ಲಿ ಹಾವಿನ ಆಕಾರದ ದೋಣಿ ನಿರ್ಮಾಣ ಮಾಡಿದ್ದರು. ಸಂಪ್ರದಾಯದ ಪ್ರಕಾರ ಮಹಿಳೆಯರು ಈ ದೋಣಿ ಏರುವಂತಿಲ್ಲ.

ಗೊತ್ತಿಲ್ಲದೆ ತಪ್ಪು ಮಾಡಿದ ಜನಪ್ರಿಯ ಕಿರುತೆರೆ ನಟಿಗೆ ಬರುತ್ತಿದೆ ಸಾಲುಸಾಲು ಅಶ್ಲೀಲ ನಿಂದನೆ
ಗೊತ್ತಿಲ್ಲದೆ ತಪ್ಪು ಮಾಡಿದ ಜನಪ್ರಿಯ ಕಿರುತೆರೆ ನಟಿಗೆ ಬರುತ್ತಿದೆ ಸಾಲುಸಾಲು ಅಶ್ಲೀಲ ನಿಂದನೆ
Follow us

ಸೆಲೆಬ್ರಿಟಿ ಆದ ನಂತರದಲ್ಲಿ ಅಭಿಮಾನಿಗಳು ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇರುತ್ತಾರೆ. ಮಾಡುವ ಸಣ್ಣ ತಪ್ಪಿಗೆ ಕೆಲವೊಮ್ಮೆ ಅವರು ದೊಡ್ಡ ಮೊತ್ತದ ದಂಡ ತೆರಬೇಕಾಗುತ್ತದೆ. ಈಗ ಮಲಯಾಳಂನ ಜನಪ್ರಿಯ ಕಿರುತೆರೆ ನಟಿ ನಿಮಿಷಾಗೆ ಸಂಕಷ್ಟ ಎದುರಾಗಿದೆ. ದೇವಸ್ಥಾನವೊಂದರ ಸಂಪ್ರದಾಯ ಮುರಿದ ಆರೋಪ ಈ ನಟಿಯ ವಿರುದ್ಧ ಕೇಳಿ ಬಂದಿದೆ. ಈ ಬೆನ್ನಲ್ಲೇ ಅವರಿಗೆ ದೂರವಾಣಿ ಕರೆಗಳು ಬರೋಕೆ ಆರಂಭವಾಗಿದ್ದು, ಸಾಕಷ್ಟು ಜನರು ನಿಂದಿಸುತ್ತಿದ್ದಾರೆ.

ಕೇರಳದ ದೇವಸ್ಥಾನದವರು ಪಂಬಾ ನದಿಯಲ್ಲಿ ಹಾವಿನ ಆಕಾರದ ದೋಣಿ ನಿರ್ಮಾಣ ಮಾಡಿದ್ದರು. ಸಂಪ್ರದಾಯದ ಪ್ರಕಾರ ಮಹಿಳೆಯರು ಈ ದೋಣಿ ಏರುವಂತಿಲ್ಲ. ಅದರಲ್ಲೂ ಈ ದೋಣಿ ಸಮೀಪ ಚಪ್ಪಲಿ ಹಾಕಿಕೊಂಡು ಬರುವುದು ಅಥವಾ ಚಪ್ಪಲಿ ಹಾಕಿಕೊಂಡು ದೋಣಿ ಏರುವುದು ಎಲ್ಲರಿಗೂ ನಿಷಿದ್ಧ. ಆದಾಗ್ಯೂ ನಿಮಿಷಾ ಈ ದೋಣಿ ಬಳಿ ಚಪ್ಪಲಿ ಧರಿಸಿ ಹೋಗಿದ್ದಾರೆ. ಜತೆಗೆ ಚಪ್ಪಲಿ ಹಾಕಿಕೊಂಡೇ ದೋಣಿ ಏರಿದ್ದಾರೆ.

ಈ ಫೋಟೋಗಳನ್ನು ಕೆಲವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯಾವುದೇ ಒಪ್ಪಿಗೆ ಇಲ್ಲದೆ ಅವರು ದೋಣಿ ಹೇಗೆ ಏರಿದರು? ದೋಣಿ ಏರುವಾಗ ಚಪ್ಪಲಿ ಹಾಕಿಕೊಂಡಿದ್ದೇಕೆ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ವಿಚಾರವಾಗಿ ನಿಮಿಷಾ ಮಾಧ್ಯಮಗಳ ಜತೆ ಮಾತನಾಡಿದ್ದಾರೆ. ‘ದೋಣಿ ಒಳಗೆ ಮಹಿಳೆಯರು ಹೋಗಬಾರದು, ಅಲ್ಲಿ ಚಪ್ಪಲಿ ಧರಿಸಬಾರದು ಎಂಬುದು ನನಗೆ ಗೊತ್ತಿರಲಿಲ್ಲ. ಹೀಗಾಗಿ, ಫೋಟೋ ಅಪ್​ಲೋಡ್​ ಮಾಡಿ ನಂತರ ಡಿಲೀಟ್​ ಮಾಡಿದೆ. ಈ ಫೋಟೋ ಪೋಸ್ಟ್​ ಮಾಡಿದ ನಂತರದಲ್ಲಿ ನನಗೆ ಬೆದರಿಕೆ ಹಾಗೂ ಅಶ್ಲೀಲ ನಿಂದನೆಗಳು ಬರುತ್ತಿವೆ. ನಿತ್ಯ ಹಲವು ಕರೆಗಳು ಬರುತ್ತಿವೆ. ಅವರೆಲ್ಲ ಯಾರು ಎಂಬುದೇ ನನಗೆ ಗೊತ್ತಿಲ್ಲ. ಇದು ಈಗ ನನ್ನ ಕುಟುಂಬವನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ’ ಎಂದಿದ್ದಾರೆ.

ಇದನ್ನೂ ಓದಿ: ‘ನಾನು ಎಲ್ಲೂ ಹಾರಿ ಹೋಗಿಲ್ಲ, ಮುಂಬೈಗೆ ಹೋಗಿದ್ದು ವೈಯಕ್ತಿಕ ಕೆಲಸಕ್ಕಾಗಿ‘; ಆ್ಯಂಕರ್​ ಅನುಶ್ರೀ ಸ್ಪಷ್ಟನೆ 

‘ನಾನಿರೋದು ಬಾಡಿಗೆ ಮನೆಯಲ್ಲಿ’; ಪ್ರಶಾಂತ್​ ಸಂಬರಗಿಗೆ ತಿರುಗೇಟು ನೀಡಿದ ಅನುಶ್ರೀ

ತಾಜಾ ಸುದ್ದಿ

Related Stories

Click on your DTH Provider to Add TV9 Kannada