AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pet Health: ಸಾಕು ಪ್ರಾಣಿಗಳು ನಿಮ್ಮ ಒತ್ತಡ ಗ್ರಹಿಸಬಲ್ಲವು; ಅಧ್ಯಯನದಿಂದ ಬಹಿರಂಗ

ನೀವು ಸಾಕು ಪ್ರಾಣಿಗಳ ಪ್ರೀಯರಾಗಿದ್ದರೆ ನಿಮ್ಮ ಮನೆಯಲ್ಲಿಯೂ ನಾಯಿ, ಬೆಕ್ಕು ಅಥವಾ ಬಗೆ ಬಗೆಯ ಪಕ್ಷಿಗಳು ಇದ್ದರೆ, ನಿಮ್ಮ ಮಾನಸಿಕ ಸ್ಥಿತಿ ನಿಮ್ಮ ಆರೋಗ್ಯದ ಮೇಲೆ ಮಾತ್ರವಲ್ಲದೆ ನೀವು ಪ್ರೀತಿಯಿಂದ ಸಾಕಿರುವ ಪ್ರಾಣಿಗಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಇದು ನಿಮಗೆ ಆಶ್ಚರ್ಯ ಎನಿಸಿದರೂ ಸತ್ಯ. ಅಲ್ಲದೆ ಇದು ಇತ್ತೀಚಿನ ಸಂಶೋಧನೆಯಿಂದ ಬಹಿರಂಗಗೊಂಡಿದೆ. ಸೈಂಟಿಫಿಕ್ ರಿಪೋರ್ಟ್ಸ್ ಜರ್ನಲ್ ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದಲ್ಲಿ ತಿಳಿದು ಬಂದಿರುವ ಪ್ರಕಾರ ನೀವು ಒತ್ತಡದಲ್ಲಿದ್ದಾಗ ನಿಮ್ಮ ಸಾಕು ಪ್ರಾಣಿಗಳು ಅದನ್ನು ಗ್ರಹಿಸಬಹುದು ಎಂದು ಹೇಳುತ್ತದೆ.

Pet Health: ಸಾಕು ಪ್ರಾಣಿಗಳು ನಿಮ್ಮ ಒತ್ತಡ ಗ್ರಹಿಸಬಲ್ಲವು; ಅಧ್ಯಯನದಿಂದ ಬಹಿರಂಗ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 02, 2024 | 2:28 PM

Share

ಇತ್ತೀಚಿನ ದಿನಗಳಲ್ಲಿ ಒತ್ತಡ ಜೀವನಶೈಲಿಯಿಂದಾಗಿ ಅನೇಕ ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಆದರೆ ನೀವು ಸಾಕು ಪ್ರಾಣಿಗಳ ಪ್ರೀಯರಾಗಿದ್ದರೆ ನಿಮ್ಮ ಮನೆಯಲ್ಲಿಯೂ ನಾಯಿ, ಬೆಕ್ಕು ಅಥವಾ ಬಗೆ ಬಗೆಯ ಪಕ್ಷಿಗಳು ಇದ್ದರೆ, ನಿಮ್ಮ ಮಾನಸಿಕ ಸ್ಥಿತಿ ನಿಮ್ಮ ಆರೋಗ್ಯದ ಮೇಲೆ ಮಾತ್ರವಲ್ಲದೆ ನೀವು ಪ್ರೀತಿಯಿಂದ ಸಾಕಿರುವ ಪ್ರಾಣಿಗಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಇದು ನಿಮಗೆ ಆಶ್ಚರ್ಯ ಎನಿಸಿದರೂ ಸತ್ಯ. ಅಲ್ಲದೆ ಇದು ಇತ್ತೀಚಿನ ಸಂಶೋಧನೆಯಿಂದ ಬಹಿರಂಗಗೊಂಡಿದೆ. ಸೈಂಟಿಫಿಕ್ ರಿಪೋರ್ಟ್ಸ್ ಜರ್ನಲ್ ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದಲ್ಲಿ ತಿಳಿದು ಬಂದಿರುವ ಪ್ರಕಾರ ನೀವು ಒತ್ತಡದಲ್ಲಿದ್ದಾಗ ನಿಮ್ಮ ಸಾಕು ಪ್ರಾಣಿಗಳು ಅದನ್ನು ಗ್ರಹಿಸಬಹುದು ಎಂದು ಹೇಳುತ್ತದೆ. ಬ್ರಿಸ್ಟಲ್ ವಿಶ್ವವಿದ್ಯಾಲಯ, ಕಾರ್ಡಿಫ್ ವಿಶ್ವವಿದ್ಯಾಲಯ ಮತ್ತು ಬ್ರಿಟಿಷ್ ಚಾರಿಟಿ ಮೆಡಿಕಲ್ ಡಿಟೆಕ್ಷನ್ ಡಾಗ್ಸ್ ನಡೆಸಿದ ಜಂಟಿ ಸಂಶೋಧನೆಯಲ್ಲಿ ಈ ವಿಷಯ ಬಹಿರಂಗವಾಗಿದೆ.

ಅಧ್ಯಯನ ಹೇಳುವುದೇನು?

ಈ ಅಧ್ಯಯನವನ್ನು ನಡೆಸಲು ವಿಜ್ಞಾನಿಗಳು 18 ಜೋಡಿ ನಾಯಿಗಳು ಮತ್ತು ಅವುಗಳ ಮಾಲಕರನ್ನು ಆಯ್ಕೆ ಮಾಡಿಕೊಂಡಿತ್ತು. ಸಾಕು ಪ್ರಾಣಿಗಳನ್ನು ಸ್ವಲ್ಪ ಸಮಯ ಸಾಕಿದವರೊಂದಿಗೆ ಬಿಡದೆಯೇ ಅವರನ್ನು ಪ್ರತ್ಯೇಕವಾಗಿ ಇರಿಸಿ, ಅಲ್ಲಿ ಅವುಗಳಿಗೆ ಆಟ ಆಡಲು ಅಗತ್ಯವಿರುವ ಸಲಕರಣೆಗಳನ್ನು ಒದಗಿಸಲಾಗಿತ್ತು. ಇದರಿಂದ ಪ್ರಾಣಿಗಳು ಒತ್ತಡ ಮುಕ್ತರಾಗಿ ಆಟವಾಡುತ್ತಿತ್ತು. ಇತ್ತ ಸಂಶೋಧಕರು ನಾಯಿಯ ಮಾಲಕರಿಗೆ ಒತ್ತಡ ನೀಡಿದ್ದರು. ಬಳಿಕ ಅವರ ಬೆವರಿನ ಬಟ್ಟೆ ಮತ್ತು ಅವರು ಊಟ, ತಿಂಡಿ ಮಾಡಿದಂತಹ ಪಾತ್ರೆಗಳನ್ನು ಅವರ ನಾಯಿಗಳ ಮುಂದೆ ಇಡಲಾಗಿತ್ತು. ಅವು, ಮಾಲಕರ ಬಟ್ಟೆಯಿಂದ ಬಂದ ಬೆವರಿನ ವಾಸನೆಯಿಂದ ಮತ್ತು ಅವರು ಬಳಸಿದ ಪಾತ್ರೆಗಳ ಮೂಲಕ ತಮ್ಮ ಮಾಲಕರ ಆತಂಕವನ್ನು ಗ್ರಹಿಸಿದವು. ಜೊತೆಗೆ ಅಲ್ಲಿಯವರೆಗೆ ಇದ್ದ ಶಾಂತತೆ ನಾಯಿಗಳಲ್ಲಿ ಕಣ್ಮರೆಯಾಯಿತು.

ಇದನ್ನೂ ಓದಿ; ಮೆಣಸಿನಕಾಯಿ ತಿನ್ನುವುದರಿಂದ ದೇಹಕ್ಕೆ ಆಗುವ ಲಾಭಗಳೇನು?

ಯಾವ ರೀತಿ ಪರಿಣಾಮ ಬೀರುತ್ತದೆ?

ಹಾಗಾಗಿ, ವಿಜ್ಞಾನಿಗಳು ಹೇಳುವ ಪ್ರಕಾರ ನಾಯಿಗಳು ಮಾನವ ನಡವಳಿಕೆಯಲ್ಲಿ ಆಗುವ ಚಿಕ್ಕ ಬದಲಾವಣೆಯನ್ನು ಕೂಡ ಗ್ರಹಿಸಬಲ್ಲವು. ಇದು ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಬಳಿಕ ಅವು ಶಾಂತವಾಗುತ್ತವೆ. ಯಾವುದಕ್ಕೂ ಹೆಚ್ಚಿನ ಆಸಕ್ತಿ ತೋರಿಸುವುದಿಲ್ಲ ಎಂದು ಅವರು ಹೇಳುತ್ತಾರೆ. ನಾಯಿಗಳು ಅನಾರೋಗ್ಯದಿಂದ ಬಳಲುತ್ತಿರುವಾಗ ಅಥವಾ ಸಾಯುವ ಪರಿಸ್ಥಿತಿಯಲ್ಲಿರುವಾಗ ಮಾಲಕರು ನೊಂದುಕೊಳ್ಳುತ್ತಾರೆ. ಅದೇ ರೀತಿ ಸಾಕು ಪ್ರಾಣಿಗಳು ಕೂಡ ನಿಮ್ಮ ಆತಂಕ ಮತ್ತು ಒತ್ತಡಕ್ಕೆ ಮಿಡಿಯುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು