AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ತೆಯಾಯ್ತು ನರಭಕ್ಷಕ ಹುಲಿಯ ಹೆಜ್ಜೆ ಗುರುತು, ಹುಲಿಯೆಲ್ಲಿ?

ಚಾಮರಾಜನಗರ: ಈಗಾಗಲೆ ಇಬ್ಬರು ರೈತರನ್ನು ಬಲಿ ಪಡೆದ ನರಭಕ್ಷಕ ಹುಲಿಗಾಗಿ ಗೋಪಾಲಸ್ವಾಮಿ ಬೆಟ್ಟದ ಬಳಿಯಿರುವ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಡುಕಾಟ ಜೋರಾಗಿದೆ. ದಸರಾದ ಗಜಪಡೆ ಅಭಿಮನ್ಯು ನೇತೃತ್ವದಲ್ಲಿ ಸತತ 2 ದಿನಗಳಿಂದ ನಡೆಯುತ್ತಿರುವ ಕಿಲ್ಲರ್ ಟೈಗರ್ ಆಪರೇಷನ್ ನಲ್ಲಿ ಅರಣ್ಯಾಧಿಕಾರಿಗಳು ಹಗಲು ರಾತ್ರಿ ಕೈಯಲ್ಲಿ ಗನ್ ಹಿಡಿದು ಕಣ್ಣಿಗೆ ಕಣ್ಣಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ.  ಆಕ್ಟೋಬರ್ 8 ರಂದು ಚೌಡಳ್ಳಿ ಗ್ರಾಮಕ್ಕೆ ಸೈಲೆಂಟಾಗಿ ಎಂಟ್ರಿ ಕೊಟ್ಟಿದ್ದ ಹುಲಿ ರೈತ ಶಿವಲಿಂಗಪ್ಪನನ್ನ ಬಲಿ ಪಡೆದಿತ್ತು. ಚಾಮರಾಜನಗರ ಜಿಲ್ಲೆ […]

ಪತ್ತೆಯಾಯ್ತು ನರಭಕ್ಷಕ ಹುಲಿಯ ಹೆಜ್ಜೆ ಗುರುತು, ಹುಲಿಯೆಲ್ಲಿ?
ಸಾಧು ಶ್ರೀನಾಥ್​
|

Updated on:Oct 11, 2019 | 3:16 PM

Share

ಚಾಮರಾಜನಗರ: ಈಗಾಗಲೆ ಇಬ್ಬರು ರೈತರನ್ನು ಬಲಿ ಪಡೆದ ನರಭಕ್ಷಕ ಹುಲಿಗಾಗಿ ಗೋಪಾಲಸ್ವಾಮಿ ಬೆಟ್ಟದ ಬಳಿಯಿರುವ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಡುಕಾಟ ಜೋರಾಗಿದೆ. ದಸರಾದ ಗಜಪಡೆ ಅಭಿಮನ್ಯು ನೇತೃತ್ವದಲ್ಲಿ ಸತತ 2 ದಿನಗಳಿಂದ ನಡೆಯುತ್ತಿರುವ ಕಿಲ್ಲರ್ ಟೈಗರ್ ಆಪರೇಷನ್ ನಲ್ಲಿ ಅರಣ್ಯಾಧಿಕಾರಿಗಳು ಹಗಲು ರಾತ್ರಿ ಕೈಯಲ್ಲಿ ಗನ್ ಹಿಡಿದು ಕಣ್ಣಿಗೆ ಕಣ್ಣಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ.

 ಆಕ್ಟೋಬರ್ 8 ರಂದು ಚೌಡಳ್ಳಿ ಗ್ರಾಮಕ್ಕೆ ಸೈಲೆಂಟಾಗಿ ಎಂಟ್ರಿ ಕೊಟ್ಟಿದ್ದ ಹುಲಿ ರೈತ ಶಿವಲಿಂಗಪ್ಪನನ್ನ ಬಲಿ ಪಡೆದಿತ್ತು. ಚಾಮರಾಜನಗರ ಜಿಲ್ಲೆ ಬಂಡೀಪು ಹುಲಿ ಸಂರಕ್ಷಿತ ಪ್ರದೇಶದ ಜಿಎಸ್ ಬೆಟ್ಟ ವಲಯದ ಚೌಡಹಳ್ಳಿ ಗ್ರಾಮದ ಬಳಿ ಕಳೆದ 2 ದಿನಗಳಿಂದ ಟೈಗರ್ ಆಪರೇಷನ್ ನಡೀತಿದೆ. ಆದರೆ ಅರಣ್ಯಾಧಿಕಾರಿಗಳು, ಹುಲಿ ವಿಭಾಗದ ಎಪಿಸಿಸಿಎಪ್ ಅದೇನ್ ಪ್ರಯತ್ನ ಮಾಡಿದ್ರೂ ಹುಲಿ ಮಾತ್ರ ಸೆರೆಸಿಕ್ಕಿಲ್ಲ. ಕೇವಲ 48 ಗಂಟೆಯೊಳಗೆ ಹುಲಿ ಸೆರೆ ಹಿಡಿತೀವಿ ಎಂದು ಅರಣ್ಯಾಧಿಕಾರಿಗಳು ಹೇಳಿದ್ದರು ಆದ್ರೆ ಇನ್ನೂ ಆಪರೇಷನ್ ಸಕ್ಸಸ್ ಆಗಿಲ್ಲ.

 ಚೌಡಹಳ್ಳಿ ಗ್ರಾಮದ ಕಾಡಂಚಿನ ಗ್ರಾಮದಲ್ಲಿ ಹುಲಿ ಸೆರೆ ಕಾರ್ಯಚರಣೆ ಎಕ್ಸ್​ಪರ್ಟ್ ಆಗಿರೋ ದಸರಾದ ಆನೆ ಅಭಿಮಾನ್ಯು ನೇತೃತ್ವದಲ್ಲಿ ಆಪರೇಷನ್ ನಡೀತಿದೆ. ಗೋಪಾಲಸ್ವಾಮಿ, ಕೃಷ್ಣ, ಗಂಜೇಂದ್ರ, ರೋಹಿತ್ ಪಾರ್ಥ ಸಾರಥಿ ಮತ್ತು ಗಣೇಶ್ ಆನೆಗಳು ಕೂಡ ಕಾರ್ಯಾಚರಣಡಯಲ್ಲಿ ಭಾಗಿಯಾಗಿದ್ದು, ಮೊದಲನೇ ದಿನ 100ಕ್ಕೂ ಹೆಚ್ಚು ಕ್ಯಾಮಾರಾ ಟ್ರ್ಯಾಬ್, ಡ್ರೋನ್ ಬಳಸಿ 75ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಆಪರೇಷನ್​​ ಟೈಗರ್​ ಅಖಾಡಕ್ಕೆ ಇಳಿದಿದ್ರು. ನಿನ್ನೆಯಷ್ಟೇ ತೋಟವೊಂದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಆದ್ರೆ ಹುಲಿಯನ್ನ ಕೊಲ್ಲದೇ ಜೀವಂತಾಗಿ ಸೆರೆ ಹಿಡಿಯೋಕೆ ಪ್ರಾಣಿ ಪ್ರಿಯರು ಆಗ್ರಹಿಸಿದ್ದಾರೆ.

Published On - 3:10 pm, Fri, 11 October 19

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?