AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿದೆ ಬೆಟ್ಟದಷ್ಟು ಬಂಗಾರ! ಸೌದಿಗಿಂತ ನಮ್ಮಲ್ಲಿ ಚಿನ್ನದ ಮೀಸಲು ಅಧಿಕ! ಇದು ದೇಶದ ಆರ್ಥಿಕ ಸ್ಥಿರತೆಯ ದ್ಯೋತಕ, ಹೇಗೆ?

Businesswise Gold Reserves: ಭಾರತೀಯರಿಗೆ ಚಿನ್ನದ ಮೇಲೆ ವಿಪರೀತ ವ್ಯಾಮೋಹ. ಆದರೆ ಆಪದ್ಬಾಂಧವ ಎನಿಸುವ ಈ ಚಿನ್ನದಿಂದ ಜೀವಭಯವನ್ನು ದೂರ ಮಾಡುವ ಆಶ್ವಾಸನೆ/ ಬೆಟ್ಟದಷ್ಟು ಭರವಸೆ ಇದೆ. ಇಡೀ ದೇಶದಲ್ಲಿ ಜನರ ಬಳಿ ಇರುವ ಬಂಗಾರದ ಲೆಕ್ಕ ನೋಡಿದರೆ ನೀವು ಹೌಹಾರುವುದು ಗ್ಯಾರಂಟಿ. ಅದೆಷ್ಟು ಬಂಗಾರ ದೇಶದಲ್ಲಿದೆ ಎಂಬುದು ನಿಮಗೆ ತಿಳಿದಿದೆಯೇ? ಜಸ್ಟ್​ 2 ಕೋಟಿ ಕೆಜಿಗೂ ಅಧಿಕ ಚಿನ್ನ ಭಾರತದ ಸುಪರ್ದಿಯಲ್ಲಿದೆ!

ಭಾರತದಲ್ಲಿದೆ ಬೆಟ್ಟದಷ್ಟು ಬಂಗಾರ! ಸೌದಿಗಿಂತ ನಮ್ಮಲ್ಲಿ ಚಿನ್ನದ ಮೀಸಲು ಅಧಿಕ! ಇದು ದೇಶದ ಆರ್ಥಿಕ ಸ್ಥಿರತೆಯ ದ್ಯೋತಕ, ಹೇಗೆ?
ಸೌದಿ ಅರೇಬಿಯಾಗಿಂತ ನಮ್ಮಲ್ಲಿ ಚಿನ್ನದ ಮೀಸಲು ಅಧಿಕವಾಗಿದೆ!
ಸಾಧು ಶ್ರೀನಾಥ್​
|

Updated on:Jun 21, 2024 | 9:44 AM

Share

ಭಾರತೀಯರಿಗೆ ಚಿನ್ನದ (Gold) ಮೇಲೆ ವಿಪರೀತ ಎನಿಸುವಷ್ಟು ವ್ಯಾಮೋಹ. ಆದರೆ ಆಪದ್ಬಾಂಧವ ಎನಿಸುವ ಈ ಚಿನ್ನದಿಂದ ಜೀವಭಯವನ್ನು ದೂರ ಮಾಡುವ ಆಶ್ವಾಸನೆ/ ಬೆಟ್ಟದಷ್ಟು ಭರವಸೆ ಇದೆ. ಮಕ್ಕಳ ವಿದ್ಯಾಭ್ಯಾಸ, ಕೃಷಿಗೆ ಸಹಾಯ, ಹೆಣ್ಣುಮಗುವಿನ ಮದುವೆ, ಉದ್ಯಮ ಆರಂಭಿಸುವುದು (Business), ಮನೆ ಕೊಳ್ಳುವುದು ಅದಕ್ಕೆಲ್ಲಾ ಚಿನ್ನ ಶ್ರೀರಾಮ ರಕ್ಷೆಯಾಗಿ ಕೆಲಸ ಮಾಡುತ್ತದೆ. ಬೆಳೆ ಚೆನ್ನಾಗಿ ಕೈಹಿಡಿದರೆ ರೈತ ಖರೀದಿಸುವುದು ಚಿನ್ನವನ್ನೇ (Personal Finance). ಅದೇ ಚಿನ್ನವನ್ನು ಅಡವಿಟ್ಟು ಬೆಳೆ ಬೆಳೆಯಬಲ್ಲ ಚತುರಮತಿ ನಮ್ಮ ರೈತರು. ಇನ್ನು ಇಡೀ ದೇಶದಲ್ಲಿ ಜನರ ಬಳಿ ಇರುವ ಬಂಗಾರದ ಲೆಕ್ಕ ನೋಡಿದರೆ ನೀವು ಹೌಹಾರುವುದು ಗ್ಯಾರಂಟಿ. ಅದೆಷ್ಟು ಬಂಗಾರ ದೇಶದಲ್ಲಿದೆ ಎಂಬುದು ನಿಮಗೆ ತಿಳಿದಿದೆಯೇ? 2 ಕೋಟಿ ಕೆಜಿಗೂ ಅಧಿಕ ಚಿನ್ನ ಭಾರತದ ಸುಪರ್ದಿಯಲ್ಲಿದೆ! ಪ್ರಪಂಚದಲ್ಲಿರುವ ಚಿನ್ನದ ಪೈಕಿ ಅಂದಾಜು ಶೇ.11 ರಷ್ಟು ಚಿನ್ನ ಭಾರತದಲ್ಲಿದೆ! ಈಗೀಗ ದೇಶದಲ್ಲಿ ಉದ್ಯೋಗ ಭದ್ರತೆ ಎಂಬುದು ಸಮಾಧಾನಕರವಾಗಿದೆ. ಆದರೆ 20 ಅಥವಾ 30 ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಯುವಜನತೆಗೆ ಅದು ತುಂಬಾ ಶೋಚನೀಯ ದಿನಗಳು. ಯಾವಾಗ ನೌಕರಿ ಕಳೆದುಕೊಂಡು ಬದುಕು ತಲೆಕೆಳಗಾಗುತ್ತದೋ ಎಂದು ಆತಂಕದಿಂದ ದಿನ ದೂಡುವ ಪರಿಸ್ಥಿತಿ ನೆಲೆಸಿತ್ತು ಆಗ. ಅಂತಹ ಶೋಚನೀಯ ಪರಿಸ್ಥಿತಿಗಳಲ್ಲಿ ಬೇರೊಬ್ಬರ ಬಳಿ ಕೈ ಚಾಚುವ ಬದಲು ಅಷ್ಟೋ ಇಷ್ಟೋ ಚಿನ್ನ ಖರೀದಿಸಿಟ್ಟುಕೊಂಡು ದುರ್ದಿನಗಳಲ್ಲಿ ಅನೇಕ ಭಾರತೀಯರು ಬಚಾವಾಗುತ್ತಿದ್ದರು. ಕೆಲವು ಅಂಕಿಅಂಶಗಳ ಪ್ರಕಾರ 2021 ರಲ್ಲಿ ಚಿನ್ನದ ಅಡ ಇಟ್ಟು ಸಾಲ ಮಾಡುವುದು ವಿಪರೀತವಾಗಿ ಹೆಚ್ಚಾದವು. ಯಾಕೆ ಗೊತ್ತಾ? ಕೊರೊನಾ ಮಹಾಮಾರಿಯಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದರು...

Published On - 4:54 pm, Wed, 12 June 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ