AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿದೆ ಬೆಟ್ಟದಷ್ಟು ಬಂಗಾರ! ಸೌದಿಗಿಂತ ನಮ್ಮಲ್ಲಿ ಚಿನ್ನದ ಮೀಸಲು ಅಧಿಕ! ಇದು ದೇಶದ ಆರ್ಥಿಕ ಸ್ಥಿರತೆಯ ದ್ಯೋತಕ, ಹೇಗೆ?

Businesswise Gold Reserves: ಭಾರತೀಯರಿಗೆ ಚಿನ್ನದ ಮೇಲೆ ವಿಪರೀತ ವ್ಯಾಮೋಹ. ಆದರೆ ಆಪದ್ಬಾಂಧವ ಎನಿಸುವ ಈ ಚಿನ್ನದಿಂದ ಜೀವಭಯವನ್ನು ದೂರ ಮಾಡುವ ಆಶ್ವಾಸನೆ/ ಬೆಟ್ಟದಷ್ಟು ಭರವಸೆ ಇದೆ. ಇಡೀ ದೇಶದಲ್ಲಿ ಜನರ ಬಳಿ ಇರುವ ಬಂಗಾರದ ಲೆಕ್ಕ ನೋಡಿದರೆ ನೀವು ಹೌಹಾರುವುದು ಗ್ಯಾರಂಟಿ. ಅದೆಷ್ಟು ಬಂಗಾರ ದೇಶದಲ್ಲಿದೆ ಎಂಬುದು ನಿಮಗೆ ತಿಳಿದಿದೆಯೇ? ಜಸ್ಟ್​ 2 ಕೋಟಿ ಕೆಜಿಗೂ ಅಧಿಕ ಚಿನ್ನ ಭಾರತದ ಸುಪರ್ದಿಯಲ್ಲಿದೆ!

ಭಾರತದಲ್ಲಿದೆ ಬೆಟ್ಟದಷ್ಟು ಬಂಗಾರ! ಸೌದಿಗಿಂತ ನಮ್ಮಲ್ಲಿ ಚಿನ್ನದ ಮೀಸಲು ಅಧಿಕ! ಇದು ದೇಶದ ಆರ್ಥಿಕ ಸ್ಥಿರತೆಯ ದ್ಯೋತಕ, ಹೇಗೆ?
ಸೌದಿ ಅರೇಬಿಯಾಗಿಂತ ನಮ್ಮಲ್ಲಿ ಚಿನ್ನದ ಮೀಸಲು ಅಧಿಕವಾಗಿದೆ!
ಸಾಧು ಶ್ರೀನಾಥ್​
|

Updated on:Jun 21, 2024 | 9:44 AM

Share

ಭಾರತೀಯರಿಗೆ ಚಿನ್ನದ (Gold) ಮೇಲೆ ವಿಪರೀತ ಎನಿಸುವಷ್ಟು ವ್ಯಾಮೋಹ. ಆದರೆ ಆಪದ್ಬಾಂಧವ ಎನಿಸುವ ಈ ಚಿನ್ನದಿಂದ ಜೀವಭಯವನ್ನು ದೂರ ಮಾಡುವ ಆಶ್ವಾಸನೆ/ ಬೆಟ್ಟದಷ್ಟು ಭರವಸೆ ಇದೆ. ಮಕ್ಕಳ ವಿದ್ಯಾಭ್ಯಾಸ, ಕೃಷಿಗೆ ಸಹಾಯ, ಹೆಣ್ಣುಮಗುವಿನ ಮದುವೆ, ಉದ್ಯಮ ಆರಂಭಿಸುವುದು (Business), ಮನೆ ಕೊಳ್ಳುವುದು ಅದಕ್ಕೆಲ್ಲಾ ಚಿನ್ನ ಶ್ರೀರಾಮ ರಕ್ಷೆಯಾಗಿ ಕೆಲಸ ಮಾಡುತ್ತದೆ. ಬೆಳೆ ಚೆನ್ನಾಗಿ ಕೈಹಿಡಿದರೆ ರೈತ ಖರೀದಿಸುವುದು ಚಿನ್ನವನ್ನೇ (Personal Finance). ಅದೇ ಚಿನ್ನವನ್ನು ಅಡವಿಟ್ಟು ಬೆಳೆ ಬೆಳೆಯಬಲ್ಲ ಚತುರಮತಿ ನಮ್ಮ ರೈತರು. ಇನ್ನು ಇಡೀ ದೇಶದಲ್ಲಿ ಜನರ ಬಳಿ ಇರುವ ಬಂಗಾರದ ಲೆಕ್ಕ ನೋಡಿದರೆ ನೀವು ಹೌಹಾರುವುದು ಗ್ಯಾರಂಟಿ. ಅದೆಷ್ಟು ಬಂಗಾರ ದೇಶದಲ್ಲಿದೆ ಎಂಬುದು ನಿಮಗೆ ತಿಳಿದಿದೆಯೇ? 2 ಕೋಟಿ ಕೆಜಿಗೂ ಅಧಿಕ ಚಿನ್ನ ಭಾರತದ ಸುಪರ್ದಿಯಲ್ಲಿದೆ! ಪ್ರಪಂಚದಲ್ಲಿರುವ ಚಿನ್ನದ ಪೈಕಿ ಅಂದಾಜು ಶೇ.11 ರಷ್ಟು ಚಿನ್ನ ಭಾರತದಲ್ಲಿದೆ! ಈಗೀಗ ದೇಶದಲ್ಲಿ ಉದ್ಯೋಗ ಭದ್ರತೆ ಎಂಬುದು ಸಮಾಧಾನಕರವಾಗಿದೆ. ಆದರೆ 20 ಅಥವಾ 30 ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಯುವಜನತೆಗೆ ಅದು ತುಂಬಾ ಶೋಚನೀಯ ದಿನಗಳು. ಯಾವಾಗ ನೌಕರಿ ಕಳೆದುಕೊಂಡು ಬದುಕು ತಲೆಕೆಳಗಾಗುತ್ತದೋ ಎಂದು ಆತಂಕದಿಂದ ದಿನ ದೂಡುವ ಪರಿಸ್ಥಿತಿ ನೆಲೆಸಿತ್ತು ಆಗ. ಅಂತಹ ಶೋಚನೀಯ ಪರಿಸ್ಥಿತಿಗಳಲ್ಲಿ ಬೇರೊಬ್ಬರ ಬಳಿ ಕೈ ಚಾಚುವ ಬದಲು ಅಷ್ಟೋ ಇಷ್ಟೋ ಚಿನ್ನ ಖರೀದಿಸಿಟ್ಟುಕೊಂಡು ದುರ್ದಿನಗಳಲ್ಲಿ ಅನೇಕ ಭಾರತೀಯರು ಬಚಾವಾಗುತ್ತಿದ್ದರು. ಕೆಲವು ಅಂಕಿಅಂಶಗಳ ಪ್ರಕಾರ 2021 ರಲ್ಲಿ ಚಿನ್ನದ ಅಡ ಇಟ್ಟು ಸಾಲ ಮಾಡುವುದು ವಿಪರೀತವಾಗಿ ಹೆಚ್ಚಾದವು. ಯಾಕೆ ಗೊತ್ತಾ? ಕೊರೊನಾ ಮಹಾಮಾರಿಯಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದರು...

Published On - 4:54 pm, Wed, 12 June 24

Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ