AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gadag: ಕಲ್ಲು ಗಣಿಗಾರಿಕೆ, ಕ್ರಷರ್ ಘಟಕಗಳ ಮಾಲೀಕರಿಂದ ಅನಿರ್ಧಿಷ್ಟಾವಧಿ ಹೋರಾಟ; ಅರ್ಧಕ್ಕೆ ನಿಂತ ಮೂರು ಜಿಲ್ಲೆಯ ಕಾಮಗಾರಿಗಳು

Stone mining and crusher units closed: ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ, ಕ್ರಷರ್ ಘಟಕಗಳ ಮಾಲೀಕರು ಅನಿರ್ಧಿಷ್ಟಾವಧಿ ಹೋರಾಟ ನಡೆಸಿದ್ದು, ಮೂರು ಜಿಲ್ಲೆಯಲ್ಲಿ ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳು ನಿಂತು ಹೋಗಿವೆ. ಅಷ್ಟೇ ಅಲ್ಲ ಖಾಸಗಿ ಕಟ್ಟಡಗಳ ಕಾಮಗಾರಿ ಬಂದ ಆಗಿದ್ದು, ಕಟ್ಟಡ ಕಾರ್ಮಿಕರೂ ಗೋಳಾಡುವಂತಾಗಿದೆ.

Gadag: ಕಲ್ಲು ಗಣಿಗಾರಿಕೆ, ಕ್ರಷರ್ ಘಟಕಗಳ ಮಾಲೀಕರಿಂದ ಅನಿರ್ಧಿಷ್ಟಾವಧಿ ಹೋರಾಟ; ಅರ್ಧಕ್ಕೆ ನಿಂತ ಮೂರು ಜಿಲ್ಲೆಯ ಕಾಮಗಾರಿಗಳು
ಗದಗ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jan 07, 2023 | 4:10 PM

Share

ಗದಗ: ಜಿಲ್ಲೆಯಲ್ಲಿ ನಿತ್ಯವೂ ನೂರಾರು ಟಿಪ್ಪರ್​ಗಳ ಓಡಾಟಕ್ಕೆ ಇದೀಗ ಬ್ರೇಕ್ ಬಿದ್ದಿದೆ. ಕ್ರಷರ್​ ಮಾಲೀಕರಿಂದಲೂ ಹಾಗೂ ಗುತ್ತಿಗೆದಾರರ ಬಿಲ್​ನಲ್ಲೂ ಎರಡು ಕಡೆಗಳಿಂದಲೂ ಸರ್ಕಾರ ಜಿಎಸ್ಟಿ ಹಣ ಕಟ್ ಮಾಡುತ್ತಿದೆಯಂತೆ. ಸರ್ಕಾರದ ಈ ಅವೈಜ್ಞಾನಿಕ ನಿಯಮದಿಂದ ಎರಡು ಕಡೆಗಳಲ್ಲಿ ಜಿಎಸ್ಟಿ(GST) ಭರಿಸುವಂತಾಗಿದೆ. ಹೀಗಾಗಿ ನಮಗೂ ಗ್ರಾಹಕರಿಗೂ ತೊಂದರೆಯಾಗುತ್ತಿದೆ. ಇದನ್ನು ಕೂಡಲೇ ಬದಲಾಯಿಸಬೇಕು ಎಂದು ಗಣಿಗಾರಿಕೆ ಹಾಗೂ ಕ್ರಷರ್ ಮಾಲೀಕರು ಸರ್ಕಾರಕ್ಕೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದಾರೆ.

ಇನ್ನು ಈ ಕುರಿತು ಈಗಾಗಲೇ ಸರ್ಕಾರಕ್ಕೆ ಸಾಕಷ್ಟು ಮನವಿ ಮಾಡಿದ್ದರು ಸ್ಪಂದಿಸುತ್ತಿಲ್ಲ. ರಾಯಲ್ಟಿ ದ್ವಂದ್ವ ನೀತಿಯಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಹೀಗಾಗಿ ಅನಿರ್ಧಿಷ್ಟಾವಧಿ ಕಲ್ಲು ಕ್ವಾರಿ ಹಾಗೂ ಕ್ರಷರ್ ಘಟಗಳು ಬಂದ್​ ಮಾಡಿ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಶೀಘ್ರ ಈ ಗೊಂದಲ ನಿವಾರಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್ ಘಟಕಗಳ ಸ್ಥಗಿತದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹೊಡೆತ

ಸರ್ಕಾರಿ ಕಟ್ಟಡಗಳು, ಕಾಂಕ್ರಿಟ್ ರಸ್ತೆಗಳ ಕಾಮಗಾರಿ ಅರ್ಧಮರ್ಧಕ್ಕೆ ನಿಂತಿವೆ. ಮನೆ ನಿರ್ಮಾಣ, ಖಾಸಗಿ ಕಟ್ಟಡಗಳ ನಿರ್ಮಾಣಕ್ಕೆ ಬೇಕಾಗುವ ಜಲ್ಲಿ, ಎಂ ಸ್ಯಾಂಡ್ ಪೂರೈಕೆ ಇಲ್ಲದೇ ಕೆಲಸಗಳು ನಿಂತು ಹೋಗಿವೆ. ಅಷ್ಟೇ ಅಲ್ಲದೇ ಕಟ್ಟಡ ಕಾರ್ಮಿಕರಿಗೂ ಹೋರಾಟದ ಬಿಸಿ ತಟ್ಟಿದೆ. ಗದಗ ಜಿಲ್ಲೆಯ ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್ ಘಟಕಗಳಿಂದ ಜಿಲ್ಲೆಗೆ ಮಾತ್ರವಲ್ಲ ಹುಬ್ಬಳ್ಳಿ, ಧಾರವಾಡ, ಹಾವೇರಿ ಜಿಲ್ಲೆಗಳಿಗೂ ಸಾಕಷ್ಟು ಸಮಸ್ಯೆಯಾಗಿವೆ. ಈ ಮೂರು ನಗರಗಳಿಗೆ ಗದಗ ಜಿಲ್ಲೆಯಿಂದಲೇ ಜಲ್ಲಿ, ಎಂ ಸ್ಯಾಂಡ್ ಪೂರೈಕೆ ಮಾಡಲಾಗುತ್ತದೆ.

ಇನ್ನು ಕಳೆದ 11 ದಿನಗಳಿಂದ ಹೋರಾಟ ನಡೆದಿದ್ದು, ಹೋರಾಟದಿಂದ ಸರ್ಕಾರಕ್ಕೂ ಸಾಕಷ್ಟು ನಷ್ಟವಾಗುತ್ತಿದೆ. ಜಿಲ್ಲೆಯಲ್ಲಿ ಜಲ್ಲಿ, ಕ್ರಷರ್ ಘಟಕಗಳಿಂದ ತಿಂಗಳಿಗೆ ಅಂದಾಜು 2 ಕೋಟಿ ರೂ. ರಾಜಧನ ಸಂಗ್ರಹವಾಗುತ್ತದೆ. ಘಟಕಗಳು ಬಂದ ಮಾಡಿದ್ದರಿಂದ ಸರ್ಕಾರದ ಆದಾಯಕ್ಕೂ ಕೊಕ್ಕೆ ಬಿದ್ದಿದೆ. ಸರ್ಕಾರದ ತೆರಿಗೆ ತುಂಬಲು ನಮಗೆ ಅಭ್ಯಂತರವಿಲ್ಲ. ಆದರೆ ಒಂದೇ ಬಿಲ್​ಗೆ ನಮ್ಮ ಕಡೆಯಿಂದಲೂ ಜಿಎಸ್ಟಿ ಭರಿಸಬೇಕು ಹಾಗೂ ಆ ಕಡೆ ಖರೀದಿ ಮಾಡಿದ ಗುತ್ತಿಗೆದಾರನಿಂದಲೂ ಜಿಎಸ್ಟಿ ಭರಿಸಬೇಕಾಗುತ್ತಿದೆ. ಸರ್ಕಾರ ಈ ಗೊಂದಲಕ್ಕೆ ಶೀಘ್ರ ತೆರೆ ಎಳೆಯಬೇಕು ಎನ್ನುತ್ತಿದ್ದಾರೆ.

ಇದನ್ನೂ ಓದಿ:ಗಡಿ ಜಿಲ್ಲೆ ಬೀದರ್​ ಮತ್ತೊಂದು ಬಳ್ಳಾರಿಯಾಗುವತ್ತ ಸಾಗುತಿದೆ, ಇಲ್ಲಿ ಜೋರಾಗಿ ನಡೆಯುತ್ತಿದೆ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ

ಜಿಲ್ಲೆಯಲ್ಲಿ 50 ಕಲ್ಲು ಗಣಿಗಾರಿಕೆ ಕ್ವಾರಿಗಳು ಮತ್ತು 50 ಕ್ರಷರ್ ಘಟಕಗಳು ಇವೆ. ಇವುಗಳಿಂದ ತಿಂಗಳಿಗೆ ಸುಮಾರು 2 ಕೋಟಿ ರಾಜಧನ ಸಂಗ್ರಹವಾಗುತ್ತದೆ ಎನ್ನುವುದು ಗಣಿ ಇಲಾಖೆ ಅಧಿಕಾರಿಗಳ ಮಾಹಿತಿ. ಆದರೆ ಹೋರಾಟದ ಬಗ್ಗೆ ಕೇಳಿದರೆ ಇದು ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಬೇಕಾದ ವಿಷಯ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ. ಏನೇ ಇರಲಿ ಸರ್ಕಾರ, ಉದ್ಯಮಿಗಳ ಗುದ್ದಾಟದಲ್ಲಿ ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳ ಜೊತೆ ಖಾಸಗಿ ಕಟ್ಟಡ ನಿರ್ಮಾಣ ಮಾಡುವ ಜನಸಾಮಾನ್ಯರಿಗೂ ಹೋರಾಟದ ಬಿಸಿ ತಟ್ಟಿದೆ.

ವರದಿ: ಸಂಜೀವ ಪಾಂಡ್ರೆ ಟಿವಿ9 ಗದಗ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ