AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಾಥಾಶ್ರಮದ ಪುಟ್ಟ ಅಭಿಮಾನಿಯ ಆಸೆ ನೆರವೇರಿಸಿ, ನಗು ಮೂಡಿಸಿದ ಅಲ್ಲು ಅರ್ಜುನ್​

ಆ ಪುಟ್ಟ ಹುಡುಗನಂತೂ ನೆಚ್ಚಿನ ನಟನ ಆಟೋಗ್ರಾಫ್ ಕೈಯಲ್ಲಿ ಹಿಡಿದು ಭಾವುಕನಾದ. ಕೆಂಪುಬಣ್ಣದ ಡ್ರೆಸ್ ತೊಟ್ಟಿದ್ದ ಚಿಣ್ಣರ ಮೊಗದಲ್ಲಿ ಫುಲ್ ಖುಷಿ ಮಿನುಗುತ್ತಿತ್ತು.

ಅನಾಥಾಶ್ರಮದ ಪುಟ್ಟ ಅಭಿಮಾನಿಯ ಆಸೆ ನೆರವೇರಿಸಿ, ನಗು ಮೂಡಿಸಿದ ಅಲ್ಲು ಅರ್ಜುನ್​
ಅಲ್ಲು ಅರ್ಜುನ್​ (ಎಡ)-ಪುಟ್ಟ ಅಭಿಮಾನಿ (ಬಲ)
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 25, 2020 | 4:28 PM

ಟಾಲಿವುಡ್​ನ ‘ಸ್ಟೈಲಿಶ್​ ಸ್ಟಾರ್’ ಅಲ್ಲು ಅರ್ಜುನ್ ತಮ್ಮ ಬಾಲ ಅಭಿಮಾನಿಯೊಬ್ಬನ ಆಸೆಯೊಂದನ್ನು ನೆರವೇರಿಸುವ ಮೂಲಕ, ಆ ಪುಟ್ಟ ಹುಡುಗನ ಮುಖದಲ್ಲಿ ಸಂತೋಷ ಮೂಡಿಸಿದ್ದಾರೆ.

ಡಿ.17ರಂದು ನಟಿ ವಿತಿಕಾ ಶೆರು ಟ್ವಿಟರ್​ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದರು. ಅದರಲ್ಲಿ ಈ ಹುಡುಗ ಬಗ್ಗೆ ನಟ ಅಲ್ಲು ಅರ್ಜುನ್​ಗೆ ತಿಳಿಸಿದ್ದರು. ವಿಡಿಯೋ ಸಾರಾಂಶ ಹೀಗಿತ್ತು..: ‘ಹೆಲೋ..ಅರ್ಜುನ್, ನಾನು ಕ್ರಿಸ್ಮಸ್​ ಪ್ರಯುಕ್ತ ಅನಾಥಾಶ್ರಮವೊಂದರಲ್ಲಿ ಸೀಕ್ರೆಟ್ ಸಂತ ವಿಡಿಯೋ ಮಾಡುತ್ತಿದ್ದೇನೆ. ಈ ಬಾರಿ ಸಂತ ಕ್ಲಾಸ್ ನಿಮ್ಮ ಯಾವ ಆಸೆಯನ್ನು ಈಡೇರಿಸಬೇಕು ಎಂದು ಪುಟ್ಟ ಮಕ್ಕಳ ಬಳಿ ಕೇಳಿದೆ. ಅದಕ್ಕೆ ಒಬ್ಬೊಬ್ಬರೂ ಒಂದೊಂದು ಆಸೆಯನ್ನು ಬರೆದಿದ್ದಾರೆ. ಅವರಲ್ಲಿ ಈ ಪುಟ್ಟ ಹುಡುಗನ ಆಸೆಯನ್ನು ನೀವು ಮಾತ್ರ ನೆರವೇರಿಸಬಲ್ಲಿರಿ. ನಿಮ್ಮ ಅಭಿಮಾನಿ ಬಾಲಕ ದೊಡ್ಡದನ್ನೇನೂ ಬಯಸುತ್ತಿಲ್ಲ. ಅವನಿಗೆ ನಿಮ್ಮದೊಂದು ಆಟೋಗ್ರಾಫ್ ಬೇಕಾಗಿದೆ. ಅದನ್ನು ನೀವು ಈಡೇರಿಸುತ್ತೀರಿ ಎಂದು ನಂಬಿದ್ದೇನೆ. ಈ ಕ್ರಿಸ್ಮಸ್​ಗೆ ಹುಡುಗನ ಪಾಲಿನ ಸಂತ ಕ್ಲಾಸ್ ನೀವಾಗಿ, ಜೀವನಪರ್ಯಂತ ಅದೊಂದು ಸುಂದರ ನೆನಪಾಗಿರುವಂತೆ ಮಾಡಿ’ ಎಂದು ಮನವಿ ಮಾಡಿದ್ದರು.

ಅದನ್ನೀಗ ಅಲ್ಲು ಅರ್ಜುನ್​ ನೆರವೇರಿಸಿದ್ದಾರೆ. ಅನಾಥಾಶ್ರಮದ ಬಾಲ ಅಭಿಮಾನಿಗೆ ತನ್ನ ಸಂಬಂಧಿ ಅಯಾನ್​ ಮೂಲಕ ಆಟೋಗ್ರಾಫ್​ ಕಳಿಸಿಕೊಟ್ಟಿದ್ದಾರೆ. ಅಯಾನ್​, ವಿತಿಕಾ ಇಂದು ಮಕ್ಕಳೊಂದಿಗೆ ಸಂಭ್ರಮದಿಂದ ಕ್ರಿಸ್ಮಸ್​ ಹಬ್ಬ ಆಚರಣೆ ಮಾಡಿದ್ದಾರೆ. ಆ ಪುಟ್ಟ ಹುಡುಗನಂತೂ ನೆಚ್ಚಿನ ನಟನ ಆಟೋಗ್ರಾಫ್ ಕೈಯಲ್ಲಿ ಹಿಡಿದು ಭಾವುಕನಾದ. ಕೆಂಪುಬಣ್ಣದ ಡ್ರೆಸ್ ತೊಟ್ಟಿದ್ದ ಚಿಣ್ಣರ ಮೊಗದಲ್ಲಿ ಫುಲ್ ಖುಷಿ ಮಿನುಗುತ್ತಿತ್ತು.

ಅನಾಥಾಶ್ರಮದಲ್ಲಿ ನಡೆದ ಕ್ರಿಸ್ಮಸ್​ ಸಂಭ್ರಮದ ವಿಡಿಯೋವನ್ನು ಶೇರ್​ ಮಾಡಿಕೊಂಡ ವಿತಿಕಾ, ಅಲ್ಲು ಅರ್ಜುನ್​ಗೆ ಧನ್ಯವಾದ ತಿಳಿಸಿದ್ದಾರೆ. ನೀವು ನಿಮ್ಮ ಅಭಿಮಾನಿಗಳ ಬಗ್ಗೆ ಹೊಂದಿರುವ ಪ್ರೀತಿ, ಕರುಣೆಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲದು ಎಂದು ಟ್ವೀಟ್​ ಮಾಡಿದ್ದಾರೆ.

ಅನಾಥಾಶ್ರಮದಲ್ಲಿ ಇಂದಿನ ಸಂಭ್ರಮದ ವಿಡಿಯೋ

ಅಂದು ವಿತಿಕಾ ಮಾಡಿದ್ದ ಮನವಿಯ ವಿಡಿಯೋ

ವಿಜಯಪುರಕ್ಕೆ ಯತ್ನಾಳ್ ನೀಡಿರುವ ಕೊಡುಗೆ ಏನು? ಶಿವಾನಂದ ಪುತ್ರ
ವಿಜಯಪುರಕ್ಕೆ ಯತ್ನಾಳ್ ನೀಡಿರುವ ಕೊಡುಗೆ ಏನು? ಶಿವಾನಂದ ಪುತ್ರ
ಉಗ್ರರು ಎಲ್ಲೇ ಅಡಗಿ ಕೂತರೂ ಅವರಿಗೆ ಉಳಿಗಾಲವಿಲ್ಲ
ಉಗ್ರರು ಎಲ್ಲೇ ಅಡಗಿ ಕೂತರೂ ಅವರಿಗೆ ಉಳಿಗಾಲವಿಲ್ಲ
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ