AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

50 ವರ್ಷಗಳಿಂದ ಮಸೀದಿಯನ್ನು ಕಾಳಜಿ ವಹಿಸಿ ನೋಡಿಕೊಳ್ಳುತ್ತಿದೆ ಪಶ್ಚಿಮ ಬಂಗಾಳದ ಈ ಹಿಂದೂ ಕುಟುಂಬ

1964 ರಲ್ಲಿ ಬೋಸ್ ಕುಟುಂಬವು ಖುಲ್ನಾದಲ್ಲಿ (ಈಗ ಬಾಂಗ್ಲಾದೇಶ) ಹೊಂದಿದ್ದ ಆಸ್ತಿಯನ್ನು ನಾರ್ಥ್ 24 ಪರಗಣದಲ್ಲಿನ ಭೂಮಿಯೊಂದಿಗೆ ವಿನಿಮಯ ಮಾಡಿಕೊಂಡಿತು. ಆ ಜಮೀನಿನಲ್ಲಿ ಒಂದು ಚಿಕ್ಕ ಮಸೀದಿ ಇರುವುದನ್ನು ಅವರು ಕಂಡುಕೊಂಡರು.

50 ವರ್ಷಗಳಿಂದ ಮಸೀದಿಯನ್ನು ಕಾಳಜಿ ವಹಿಸಿ ನೋಡಿಕೊಳ್ಳುತ್ತಿದೆ ಪಶ್ಚಿಮ ಬಂಗಾಳದ ಈ ಹಿಂದೂ ಕುಟುಂಬ
ಮಸೀದಿಯ ಉಸ್ತುವಾರಿ ವಹಿಸಿರುವ ಹಿಂದೂ ಕುಟುಂಬ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Feb 20, 2022 | 12:35 PM

Share

ನಾರ್ಥ್ 24 ಪರಗಣಾಸ್: ಪಶ್ಚಿಮ ಬಂಗಾಳದಲ್ಲಿ (West Bengal) ಕೋಮು ಸೌಹಾರ್ದತೆಯ(communal harmony) ಕಥೆ ಇದು. ಇಲ್ಲಿನ ನಾರ್ಥ್ 24 ಪರಗಣಾಸ್​​ನಲ್ಲಿ ಹಿಂದೂ ಕುಟುಂಬವೊಂದು ಕಳೆದ 50 ವರ್ಷಗಳಿಂದ ಬರಾಸತ್‌ನಲ್ಲಿರುವ ಅಮಾನತಿ ಮಸೀದಿಯನ್ನು(Amanati Masjid)  ಕಾಳಜಿಯಿಂದ ನೋಡಿಕೊಳ್ಳುತ್ತಿದೆ. ನಾರ್ಥ್ 24 ಪರಗಣದ ಬರಾಸತ್‌ನ ಹಿರಿಯ ನಾಗರಿಕರಾದ ದೀಪಕ್ ಕುಮಾರ್ ಬೋಸ್ ಮತ್ತು ಅವರ ಪುತ್ರ ಪಾರ್ಥ ಸಾರಥಿ ಬೋಸ್ ಅವರು ಇಂದಿನ ಜಗತ್ತಿನಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಗೆ ಉದಾಹರಣೆಯಾಗಿದ್ದಾರೆ. ಬೋಸ್ ಕುಟುಂಬವು ಅಮಾನತಿ ಮಸೀದಿಯನ್ನು ನವೀಕರಿಸಿದೆ. ಕಳೆದ 50 ವರ್ಷಗಳಿಂದ, ದೀಪಕ್ ಬೋಸ್ ಅವರು ಉಸ್ತುವಾರಿಯಾಗಿ ಪ್ರತಿದಿನ ಮಸೀದಿಗೆ ಭೇಟಿ ನೀಡುತ್ತಾರೆ. ಮುಸ್ಲಿಂ ಸಮುದಾಯದ ಜನರು ತಮ್ಮ ಪ್ರಾರ್ಥನೆಯ ಸಮಯದಲ್ಲಿ ಆರಾಮವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅದರ ಕಾರಿಡಾರ್‌ಗಳನ್ನು ಸ್ವಚ್ಛಗೊಳಿಸುತ್ತಾರೆ. ಅಮಾನತಿ ಮಸೀದಿಯು ಹಿಂದೂಗಳ ಪ್ರಾಬಲ್ಯವಿರುವ ನಾಬೋಪಲ್ಲಿ ಪ್ರದೇಶದಲ್ಲಿದೆ ಎಂಬುದು ಉಲ್ಲೇಖನೀಯ. 1964 ರಲ್ಲಿ ಬೋಸ್ ಕುಟುಂಬವು ಖುಲ್ನಾದಲ್ಲಿ (ಈಗ ಬಾಂಗ್ಲಾದೇಶ) ಹೊಂದಿದ್ದ ಆಸ್ತಿಯನ್ನು ನಾರ್ಥ್ 24 ಪರಗಣದಲ್ಲಿನ ಭೂಮಿಯೊಂದಿಗೆ ವಿನಿಮಯ ಮಾಡಿಕೊಂಡಿತು. ಆ ಜಮೀನಿನಲ್ಲಿ ಒಂದು ಚಿಕ್ಕ ಮಸೀದಿ ಇರುವುದನ್ನು ಅವರು ಕಂಡುಕೊಂಡರು. ಅನೇಕರು ಆ ಜಾಗವನ್ನು ಒಡೆದು ಕಟ್ಟಡವನ್ನು ನಿರ್ಮಿಸಲು ಸಲಹೆ ನೀಡಿದರೆ, ಬೋಸ್ ಕುಟುಂಬವು ಅದನ್ನು ವಿರೋಧಿಸಿತು. ನಾವು ಅದನ್ನು ನವೀಕರಿಸಲು ನಿರ್ಧರಿಸಿದ್ದೇವೆ ಮತ್ತು ಅಂದಿನಿಂದ ನಾವು ಈ ಮಸೀದಿಯನ್ನು ನೋಡಿಕೊಳ್ಳುತ್ತಿದ್ದೇವೆ. ವಿವಿಧ ಪ್ರದೇಶಗಳಿಂದ ಮುಸ್ಲಿಂ ಸಮುದಾಯದವರು ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ನಾವು ದೈನಂದಿನ ಆಜಾನ್‌ಗೆ ಇಮಾಮ್ ಅನ್ನು ನೇಮಿಸಿದ್ದೇವೆ ”ಎಂದು ಮಸೀದಿಯ ಉಸ್ತುವಾರಿ ದೀಪಕ್ ಕುಮಾರ್ ಬೋಸ್ ಎಎನ್‌ಐಗೆ ತಿಳಿಸಿದರು.

ದೀಪಕ್ ಅವರ ಪುತ್ರ ಪಾರ್ಥ ಸಾರಥಿ ಬೋಸ್, “ಹಿಂದೂಗಳು ಮಸೀದಿಯನ್ನು ನೋಡಿಕೊಳ್ಳುವುದನ್ನು ಇಲ್ಲಿಯವರೆಗೆ ಯಾರೂ ವಿರೋಧಿಸಿಲ್ಲ. ವರ್ಷಗಳಿಂದ ಮಸೀದಿಯನ್ನು ನೋಡಿಕೊಳ್ಳುತ್ತಿದ್ದೇವೆ. ವಾಸ್ತವವಾಗಿ, ಪ್ರದೇಶದ 2 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಮಸೀದಿಗಳಿಲ್ಲ, ಆದ್ದರಿಂದ ವಿವಿಧ ಪ್ರದೇಶಗಳಿಂದ ಮುಸ್ಲಿಮರು ಇಲ್ಲಿ ಪ್ರಾರ್ಥನೆ ಮಾಡಲು ಬರುತ್ತಾರೆ ಎಂದು ಹೇಳಿದ್ದಾರೆ.

“ನಾನು ಸ್ಥಳೀಯ ಜನರಿಂದ ಯಾವುದೇ ಬೆದರಿಕೆಯನ್ನು ಅನುಭವಿಸಿಲ್ಲ. 1992 ರಿಂದ ನಾನು ನಿರಂತರವಾಗಿ ಆಜಾನ್‌ಗೆ ಬರುವಂತೆ ಜನರನ್ನು ಕೇಳುತ್ತಿದ್ದೇನೆ. ನಾವು ಏಕತೆ ಮತ್ತು ಶಾಂತಿಯನ್ನು ನಂಬುತ್ತೇವೆ ಎಂದು ಇಮಾಮ್ ಸರಾಫತ್ ಅಲಿ ಹೇಳಿದ್ದಾರೆ.

ಇದನ್ನೂ ಓದಿ: ಮದುವೆ ಮನೆಗೆ ಆಹ್ವಾನಿಸದೆ ಬಂದ ಅತಿಥಿಗಳು ಯಾರು ಗೊತ್ತಾ..! ಇಲ್ಲಿದೆ ವೈರಲ್ ವಿಡಿಯೋ

Published On - 12:30 pm, Sun, 20 February 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ