AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾ ಗಜಪಡೆಯ ತಾಲೀಮಿನ ಆಕರ್ಷಕ ಚಿತ್ರಗಳು ಇಲ್ಲಿವೆ!

ಮೈಸೂರು ದಸರಾ ಮಹೋತ್ಸವಕ್ಕೆ ಗಜಪಡೆಯ ತೂಕದ ತಾಲೀಮು ಇಂದಿನಿಂದ ಶುರುವಾಗಿದೆ. ಅರಮನೆಯಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ, ಮಹೇಂದ್ರ ಆನೆಗೆ 350 ಕೆಜಿ ಭಾರ ಹೊರಿಸಿ ಬನ್ನಿಮಂಟಪದವರೆಗೆ ಮೊದಲ ದಿನದ ತಾಲೀಮು ನಡೆಸಲಾಯಿತು. ಮುಂಬರುವ ದಿನಗಳಲ್ಲಿ ಇನ್ನುಳಿದ ಆನೆಗಳಿಗೂ ಹಂತ ಹಂತವಾಗಿ ಭಾರ ಹೊರುವ ತಾಲೀಮು ಮುಂದುವರಿಯಲಿದೆ. ಗಜನಪಡೆ ತಾಲೀಮಿನ ಆಕರ್ಷಕ ಫೋಟೋಗಳು ಇಲ್ಲಿವೆ.

ರಾಮ್​, ಮೈಸೂರು
| Edited By: |

Updated on: Sep 07, 2026 | 8:00 AM

Share
ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದ್ದು, ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಗಳ ತಾಲೀಮು ಅತ್ಯಂತ ಜೋರಾಗಿ ಸಾಗಿದೆ. ಅರಮನೆ ಅಂಗಳದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಿದ ಬಳಿಕ, ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಪ್ರಮುಖ ಆನೆಗಳಿಗೆ ಮೊದಲ ದಿನದ ಭಾರ ಹೊರಿಸುವ ತೂಕದ ತಾಲೀಮನ್ನು ಅಧಿಕೃತವಾಗಿ ಆರಂಭಿಸಲಾಗಿದೆ.

ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದ್ದು, ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಗಳ ತಾಲೀಮು ಅತ್ಯಂತ ಜೋರಾಗಿ ಸಾಗಿದೆ. ಅರಮನೆ ಅಂಗಳದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಿದ ಬಳಿಕ, ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಪ್ರಮುಖ ಆನೆಗಳಿಗೆ ಮೊದಲ ದಿನದ ಭಾರ ಹೊರಿಸುವ ತೂಕದ ತಾಲೀಮನ್ನು ಅಧಿಕೃತವಾಗಿ ಆರಂಭಿಸಲಾಗಿದೆ.

1 / 7
ಮೊದಲ ದಿನದ ಭಾರ ಹೊರುವ ತಾಲೀಮಿಗಾಗಿ ಗಜಪಡೆಯ ಪ್ರಮುಖ ಆನೆಯಾದ ಮಹೇಂದ್ರನನ್ನು ಅರಣ್ಯಾಧಿಕಾರಿಗಳು ಆಯ್ಕೆ ಮಾಡಿದ್ದರು. ಮಹೇಂದ್ರ ಆನೆಯ ಬೆನ್ನಿನ ಮೇಲೆ ಸುಮಾರು 350 ಕೆಜಿ ತೂಕದ ಮರಳ ಮೂಟೆಗಳನ್ನು ಭದ್ರವಾಗಿ ಕಟ್ಟಿ, ಅರಮನೆಯ ಪ್ರಮುಖ ಅಂಗಳದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಯಶಸ್ವಿಯಾಗಿ ತೂಕದ ತಾಲೀಮು ನಡೆಸಲಾಯಿತು.

ಮೊದಲ ದಿನದ ಭಾರ ಹೊರುವ ತಾಲೀಮಿಗಾಗಿ ಗಜಪಡೆಯ ಪ್ರಮುಖ ಆನೆಯಾದ ಮಹೇಂದ್ರನನ್ನು ಅರಣ್ಯಾಧಿಕಾರಿಗಳು ಆಯ್ಕೆ ಮಾಡಿದ್ದರು. ಮಹೇಂದ್ರ ಆನೆಯ ಬೆನ್ನಿನ ಮೇಲೆ ಸುಮಾರು 350 ಕೆಜಿ ತೂಕದ ಮರಳ ಮೂಟೆಗಳನ್ನು ಭದ್ರವಾಗಿ ಕಟ್ಟಿ, ಅರಮನೆಯ ಪ್ರಮುಖ ಅಂಗಳದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಯಶಸ್ವಿಯಾಗಿ ತೂಕದ ತಾಲೀಮು ನಡೆಸಲಾಯಿತು.

2 / 7
ತೂಕ ಹೊತ್ತ ಮಹೇಂದ್ರ ಆನೆ ಸೇರಿದಂತೆ ಗಜಪಡೆಯ ಎಲ್ಲಾ ಆನೆಗಳು ಮೊದಲ ದಿನದ ಹಂತದ ತಾಲೀಮಿನಲ್ಲಿ ಅತ್ಯಂತ ಶಿಸ್ತಿನಿಂದ ಭಾಗವಹಿಸಿದ್ದವು. ಅರಮನೆ ಅಂಗಳದಿಂದ ಹೊರಟು ಬನ್ನಿಮಂಟಪದವರೆಗೆ ರಾಜಗಾಂಭೀರ್ಯದ ನಡಿಗೆಯ ಮೂಲಕ ಯಶಸ್ವಿಯಾಗಿ ಹೆಜ್ಜೆ ಹಾಕಿ ಸೈ ಎನಿಸಿಕೊಂಡವು. ಮುಂಬರುವ ದಿನಗಳಲ್ಲಿ ಇನ್ನುಳಿದ ಆನೆಗಳಿಗೂ ಹಂತ ಹಂತವಾಗಿ ಭಾರ ಹೊರುವ ತಾಲೀಮು ಮುಂದುವರಿಯಲಿದೆ.

ತೂಕ ಹೊತ್ತ ಮಹೇಂದ್ರ ಆನೆ ಸೇರಿದಂತೆ ಗಜಪಡೆಯ ಎಲ್ಲಾ ಆನೆಗಳು ಮೊದಲ ದಿನದ ಹಂತದ ತಾಲೀಮಿನಲ್ಲಿ ಅತ್ಯಂತ ಶಿಸ್ತಿನಿಂದ ಭಾಗವಹಿಸಿದ್ದವು. ಅರಮನೆ ಅಂಗಳದಿಂದ ಹೊರಟು ಬನ್ನಿಮಂಟಪದವರೆಗೆ ರಾಜಗಾಂಭೀರ್ಯದ ನಡಿಗೆಯ ಮೂಲಕ ಯಶಸ್ವಿಯಾಗಿ ಹೆಜ್ಜೆ ಹಾಕಿ ಸೈ ಎನಿಸಿಕೊಂಡವು. ಮುಂಬರುವ ದಿನಗಳಲ್ಲಿ ಇನ್ನುಳಿದ ಆನೆಗಳಿಗೂ ಹಂತ ಹಂತವಾಗಿ ಭಾರ ಹೊರುವ ತಾಲೀಮು ಮುಂದುವರಿಯಲಿದೆ.

3 / 7
ದಸರಾ ಜಂಬೂಸವಾರಿಯ ಮೆರವಣಿಗೆಯಲ್ಲಿ ಆನೆಗಳು ಭಾರ ಹೊರುವ ಸಾಮರ್ಥ್ಯ, ಅವುಗಳ ದೈಹಿಕ ಕ್ಷಮತೆ ಹಾಗೂ ಮಾವುತರ ಸೂಚನೆಗೆ ತಾಲೀಮಿನಲ್ಲಿ ಸ್ಪಂದಿಸುವ ರೀತಿಯನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಈ ತೂಕದ ತಾಲೀಮು ಅತ್ಯಂತ ಮಹತ್ವ ಪಡೆದುಕೊಂಡಿದೆ. ಮೊದಲ ದಿನವೇ ಮಹೇಂದ್ರ ಆನೆಯು ಯಾವುದೇ ಗಲಿಬಿಲಿ ಇಲ್ಲದೆ ಅತ್ಯಂತ ಗಂಭೀರವಾಗಿ ಹೆಜ್ಜೆ ಹಾಕಿ ಯಶಸ್ವಿಯಾಗಿದೆ.

ದಸರಾ ಜಂಬೂಸವಾರಿಯ ಮೆರವಣಿಗೆಯಲ್ಲಿ ಆನೆಗಳು ಭಾರ ಹೊರುವ ಸಾಮರ್ಥ್ಯ, ಅವುಗಳ ದೈಹಿಕ ಕ್ಷಮತೆ ಹಾಗೂ ಮಾವುತರ ಸೂಚನೆಗೆ ತಾಲೀಮಿನಲ್ಲಿ ಸ್ಪಂದಿಸುವ ರೀತಿಯನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಈ ತೂಕದ ತಾಲೀಮು ಅತ್ಯಂತ ಮಹತ್ವ ಪಡೆದುಕೊಂಡಿದೆ. ಮೊದಲ ದಿನವೇ ಮಹೇಂದ್ರ ಆನೆಯು ಯಾವುದೇ ಗಲಿಬಿಲಿ ಇಲ್ಲದೆ ಅತ್ಯಂತ ಗಂಭೀರವಾಗಿ ಹೆಜ್ಜೆ ಹಾಕಿ ಯಶಸ್ವಿಯಾಗಿದೆ.

4 / 7
ಪ್ರಮುಖ ಆನೆ ಮಹೇಂದ್ರ ತೂಕದ ತಾಲೀಮಿನಲ್ಲಿ ಭಾಗವಹಿಸಿದರೆ, ಉಳಿದಂತೆ ಧನಂಜಯ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ, ಲಕ್ಷ್ಮೀ ಹಾಗೂ ಕಾವೇರಿ ಆನೆಗಳು ಸಹ ಸಾಲಾಗಿ ಹೆಜ್ಜೆ ಹಾಕುವ ಮೂಲಕ ತಾಲೀಮಿನಲ್ಲಿ ಸಕ್ರಿಯವಾಗಿ ಭಾಗವಹಿಸಿದವು. ಸಾಂಪ್ರದಾಯಿಕ ಮಾರ್ಗದಲ್ಲಿ ಸಾಗಿದ ಈ ಆನೆಗಳು ಮೊದಲ ದಿನವೇ ನೆರೆದಿದ್ದ ಜನರ ಗಮನ ಸೆಳೆದವು.

ಪ್ರಮುಖ ಆನೆ ಮಹೇಂದ್ರ ತೂಕದ ತಾಲೀಮಿನಲ್ಲಿ ಭಾಗವಹಿಸಿದರೆ, ಉಳಿದಂತೆ ಧನಂಜಯ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ, ಲಕ್ಷ್ಮೀ ಹಾಗೂ ಕಾವೇರಿ ಆನೆಗಳು ಸಹ ಸಾಲಾಗಿ ಹೆಜ್ಜೆ ಹಾಕುವ ಮೂಲಕ ತಾಲೀಮಿನಲ್ಲಿ ಸಕ್ರಿಯವಾಗಿ ಭಾಗವಹಿಸಿದವು. ಸಾಂಪ್ರದಾಯಿಕ ಮಾರ್ಗದಲ್ಲಿ ಸಾಗಿದ ಈ ಆನೆಗಳು ಮೊದಲ ದಿನವೇ ನೆರೆದಿದ್ದ ಜನರ ಗಮನ ಸೆಳೆದವು.

5 / 7
ಅರಣ್ಯ ಇಲಾಖೆಯ ಡಿಸಿಎಫ್ ಡಾ. ಪ್ರಭುಗೌಡ ಅವರ ನೇರ ಮಾರ್ಗದರ್ಶನದಲ್ಲಿ ಸಂಪೂರ್ಣ ತಾಲೀಮು ಪ್ರಕ್ರಿಯೆಯು ಅತ್ಯಂತ ಯಶಸ್ವಿಯಾಗಿ ನಡೆಯಿತು. ಆನೆಗಳ ಆರೋಗ್ಯ, ಆಹಾರಕ್ರಮ ಮತ್ತು ಮಾನಸಿಕ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಮುಂಬರುವ ಜಂಬೂಸವಾರಿಗೆ ಗಜಪಡೆಯನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲು ಅರಣ್ಯ ಇಲಾಖೆಯು ಎಲ್ಲ ರೀತಿಯ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಅರಣ್ಯ ಇಲಾಖೆಯ ಡಿಸಿಎಫ್ ಡಾ. ಪ್ರಭುಗೌಡ ಅವರ ನೇರ ಮಾರ್ಗದರ್ಶನದಲ್ಲಿ ಸಂಪೂರ್ಣ ತಾಲೀಮು ಪ್ರಕ್ರಿಯೆಯು ಅತ್ಯಂತ ಯಶಸ್ವಿಯಾಗಿ ನಡೆಯಿತು. ಆನೆಗಳ ಆರೋಗ್ಯ, ಆಹಾರಕ್ರಮ ಮತ್ತು ಮಾನಸಿಕ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಮುಂಬರುವ ಜಂಬೂಸವಾರಿಗೆ ಗಜಪಡೆಯನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲು ಅರಣ್ಯ ಇಲಾಖೆಯು ಎಲ್ಲ ರೀತಿಯ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

6 / 7
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಹಿರಿಯ ಆನೆ ಅಭಿಮನ್ಯುವಿನ ನಂತರ ಚಿನ್ನದ ಅಂಬಾರಿಯನ್ನು ಯಾರು ಹೊರಲಿದ್ದಾರೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಗಜಪಡೆಯಲ್ಲಿರುವ ಎಲ್ಲಾ ಆನೆಗಳ ತಾಲೀಮು ಮತ್ತು ದೈಹಿಕ ಸಾಮರ್ಥ್ಯದ ಪರೀಕ್ಷೆ ಪೂರ್ಣಗೊಂಡ ನಂತರವೇ ಅಂಬಾರಿ ಹೊರುವ ಆನೆಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಹಿರಿಯ ಆನೆ ಅಭಿಮನ್ಯುವಿನ ನಂತರ ಚಿನ್ನದ ಅಂಬಾರಿಯನ್ನು ಯಾರು ಹೊರಲಿದ್ದಾರೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಗಜಪಡೆಯಲ್ಲಿರುವ ಎಲ್ಲಾ ಆನೆಗಳ ತಾಲೀಮು ಮತ್ತು ದೈಹಿಕ ಸಾಮರ್ಥ್ಯದ ಪರೀಕ್ಷೆ ಪೂರ್ಣಗೊಂಡ ನಂತರವೇ ಅಂಬಾರಿ ಹೊರುವ ಆನೆಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

7 / 7
Follow Us