ಹಬ್ಬದ ಸೀಸನ್ನಲ್ಲಿ ಸಕ್ಕರೆ ಲಭ್ಯತೆ ಖಚಿತಪಡಿಸಲು ಮತ್ತು ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರ ಕೈಗೊಂಡ ವಿವಿಧ ಕ್ರಮಗಳೇನು?
Sugar Price Control – Govt Steps to Stabilize Rising Costs & Ensure Festival Supply: ದೇಶದಲ್ಲಿ ಹೆಚ್ಚುತ್ತಿರುವ ಸಕ್ಕರೆ ಬೆಲೆಗಳನ್ನು ನಿಯಂತ್ರಿಸಲು ಮತ್ತು ಹಬ್ಬದ ಹಂಗಾಮಿನಲ್ಲಿ ಪೂರೈಕೆ ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಬೆಳೆ ಹಾನಿ ಮತ್ತು ಉತ್ಪಾದನೆ ಇಳಿಕೆಯಿಂದ ಬೆಲೆ ಏರಿಕೆಯಾಗಿದೆ. ದಾಸ್ತಾನು ಮಿತಿ ವಿಧಿಸಿ, ಕೃತಕ ಅಭಾವ ತಡೆಯಲು ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ, 10 ಲಕ್ಷ ಟನ್ ಕಚ್ಚಾ ಸಕ್ಕರೆ ಆಮದಿಗೆ ಅನುಮತಿ ನೀಡಿದ್ದು, ಉತ್ಪಾದನೆ ಹೆಚ್ಚಿಸಲು ಅಕ್ಟೋಬರ್ನಿಂದಲೇ ಕಬ್ಬು ನುರಿಸುವಂತೆ ಕಾರ್ಖಾನೆಗಳಿಗೆ ಸೂಚಿಸಲಾಗಿದೆ.

ನವದೆಹಲಿ, ಆಗಸ್ಟ್ 21: ದೇಶದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಸಕ್ಕರೆ ಬೆಲೆಗಳನ್ನು (Sugar Price) ನಿಯಂತ್ರಿಸಲು ಮತ್ತು ಮುಂಬರುವ ಹಬ್ಬದ ಹಂಗಾಮಿನಲ್ಲಿ (festival season) ಸಕ್ಕರೆಯ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಲು ಕೇಂದ್ರ ಸರ್ಕಾರವು ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಸಕ್ಕರೆ ಬೆಲೆ ನಿಯಂತ್ರಣ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸರ್ಕಾರವು, ಬೆಲೆ ಏರಿಕೆಯಾಗಲು ಏನು ಕಾರಣ ಎಂಬುದನ್ನೂ ತಿಳಿಸಿದೆ.
ಜುಲೈ 20ರಂದು ಒಂದು ಕಿಲೋಗೆ 48.18 ರೂ ಇದ್ದ ಸಕ್ಕರೆ ಬೆಲೆ ಆಗಸ್ಟ್ 20ಕ್ಕೆ 55.70 ರೂಗೆ ಏರಿಕೆ ಆಗಿದೆ. ಕೀಟಬಾಧೆ (ರೆಡ್ ರಾಟ್ ಮತ್ತು ಟಾಪ್ ಬೋರರ್), ಅತಿಮಳೆಯಿಂದ ಬೆಳೆ ಹಾನಿ ಹಾಗೂ ನಿರೀಕ್ಷಿತ 343 LMT ಬದಲು ಅಂದಾಜು 306 LMT ಮಾತ್ರ ಉತ್ಪಾದನೆಯಾಗುತ್ತಿರುವುದು ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ವಿಕಸಿತ ಭಾರತದ ಗುರಿ ತಲುಪಲು 23 ಅಂಶಗಳ ಕಾರ್ಯಯೋಜನೆ; ಕ್ರಮ ಕೈಗೊಳ್ಳಲು ಎಲ್ಲಾ ಸಚಿವಾಲಯಗಳಿಗೆ ನಿರ್ದೇಶನ
ಎಥೆನಾಲ್ ಕಾರಣವಲ್ಲ: ಸಕ್ಕರೆ ಬೆಲೆ ಏರಿಕೆಗೆ ಎಥೆನಾಲ್ ಉತ್ಪಾದನೆ ಕಾರಣವಲ್ಲ. ಎಥೆನಾಲ್ಗಾಗಿ ಸಕ್ಕರೆ ಬಳಕೆಯು 2022-23 ರಲ್ಲಿದ್ದ ಶೇ. 12 ರಿಂದ 2025-26 ರಲ್ಲಿ ಶೇ. 9 ಕ್ಕೆ ಇಳಿದಿದ್ದು, ಪ್ರಸ್ತುತ ಶೇ. ಮೂರರಷ್ಟು ಭಾಗ ಧಾನ್ಯಗಳನ್ನು (ಮುಖ್ಯವಾಗಿ ಜೋಳ) ಬಳಸಿ ಎಥೆನಾಲ್ ತಯಾರಿಸಲಾಗುತ್ತಿದೆ.
ಜಾಗತಿಕ ಮಾರುಕಟ್ಟೆಯ ಪ್ರಭಾವ: ಈ ಪೂರೈಕೆ ಬಿಕ್ಕಟ್ಟು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಜಾಗತಿಕವಾಗಿ ಸಕ್ಕರೆ ಕೊರತೆ ಎದುರಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ಶೇ. 16 ಕ್ಕಿಂತ ಹೆಚ್ಚು ಏರಿಕೆಯಾಗಿ ಪ್ರತಿ ಟನ್ಗೆ $552 ತಲುಪಿವೆ.
ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳು ಮತ್ತು ದಾಸ್ತಾನು ನಿಯಂತ್ರಣ
ಆಗಸ್ಟ್ 1 ರಿಂದ ನವೆಂಬರ್ 30 ರವರೆಗೆ ದೇಶಾದ್ಯಂತ ಸಕ್ಕರೆ ಡೀಲರ್ಗಳಿಗೆ 400 ಟನ್ಗಳ ದಾಸ್ತಾನು ಮಿತಿ ವಿಧಿಸಲಾಗಿದೆ. ಸೆಪ್ಟೆಂಬರ್ 1 ರಿಂದ ಬೃಹತ್ ಗ್ರಾಹಕರು 15 ದಿನಗಳ ಬಳಕೆಗಿಂತ ಹೆಚ್ಚಿನ ಸಕ್ಕರೆ ದಾಸ್ತಾನು ಇಟ್ಟುಕೊಳ್ಳುವಂತಿಲ್ಲ ಎಂದು ನಿರ್ದೇಶನ ಕೊಡಲಾಗಿದೆ.
ಇದನ್ನೂ ಓದಿ: ಕೃಷಿ, ಪರಿಸರ ಇತ್ಯಾದಿ ಬೇರೆ ಬೇರೆ ಕ್ಷೇತ್ರಗಳಿಗೂ ವಿಸ್ತರಿಸಿ: ಸ್ಪೇಸ್ ಸ್ಟಾರ್ಟಪ್ಗಳಿಗೆ ಪ್ರಧಾನಿ ಮೋದಿ ಕರೆ
ಕೃತಕ ಅಭಾವ ಮತ್ತು ದಾಸ್ತಾನು ಸಂಗ್ರಹಣೆಯನ್ನು (hoarding) ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ಜಂಟಿ ತಂಡಗಳು ಸಕ್ಕರೆ ಮಿಲ್ಗಳಲ್ಲಿ ಭೌತಿಕ ಪರಿಶೀಲನೆ ನಡೆಸುತ್ತಿವೆ.
ಆಮದು ಮತ್ತು ಉತ್ಪಾದನೆ ಹೆಚ್ಚಳ: ದೇಶೀಯ ಲಭ್ಯತೆಯನ್ನು ಮತ್ತಷ್ಟು ಹೆಚ್ಚಿಸಲು 10 ಲಕ್ಷ ಟನ್ (10 LMT) ಕಚ್ಚಾ ಸಕ್ಕರೆಯನ್ನು ಸುಂಕ-ಮುಕ್ತವಾಗಿ ಆಮದು ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಅಲ್ಲದೆ, 2026ರ ಅಕ್ಟೋಬರ್ 15 ರಿಂದಲೇ ಕಬ್ಬು ನುರಿಸುವ ಕಾರ್ಯವನ್ನು ಆರಂಭಿಸುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಲಾಗಿದ್ದು, ಇದರಿಂದ ಹಬ್ಬದ ಸಮಯದಲ್ಲಿ ಸಕ್ಕರೆ ಲಭ್ಯತೆ ಸುಲಭವಾಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




