AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Facebook Live: ಗುರು ರಾಘವೇಂದ್ರ ಬ್ಯಾಂಕ್​ ಠೇವಣಿದಾರರು ಇನ್​ಕಮ್​ ಟ್ಯಾಕ್ಸ್​ ಸಮಸ್ಯೆ ಹೀಗೆ ಬಗೆಹರಿಸಿಕೊಳ್ಳಿ

ಗುರು ರಾಘವೇಂದ್ರ ಬ್ಯಾಂಕ್​ನ ಹೂಡಿಕೆದಾರರ ಸಮಸ್ಯೆಗೆ ಟಿವಿ9 ಕನ್ನಡ ಫೇಸ್​ಬುಕ್​ ಲೈವ್ ಕಾರ್ಯಕ್ರಮದಲ್ಲಿ ಬಂದ ಅತ್ಯುಪಯುಕ್ತ ಸಲಹೆ ನಿಮ್ಮೆದು ಇಡಲಾಗಿದೆ.

TV9 Facebook Live: ಗುರು ರಾಘವೇಂದ್ರ ಬ್ಯಾಂಕ್​ ಠೇವಣಿದಾರರು ಇನ್​ಕಮ್​ ಟ್ಯಾಕ್ಸ್​ ಸಮಸ್ಯೆ ಹೀಗೆ ಬಗೆಹರಿಸಿಕೊಳ್ಳಿ
ಪ್ರಾತಿನಿಧಿಕ ಚಿತ್ರ
TV9 Web
| Updated By: Srinivas Mata|

Updated on: Sep 21, 2021 | 5:23 PM

Share

ಬೆಂಗಳೂರಿನ ಎನ್​.ಆರ್​. ಕಾಲೋನಿಯಲ್ಲಿನ ಗುರು ರಾಘವೇಂದ್ರ ಬ್ಯಾಂಕ್​ ಠೇವಣಿದಾರರಿಗೆ ಇದೀಗ ವಿಚಿತ್ರ ಸಂಕಟ. ಒಂದು ಕಡೆ ತಾವು ಮಾಡಿದ್ದ ಠೇವಣಿ ಪೂರ್ತಿ ಹಣ ಸಿಗುತ್ತದೋ ಇಲ್ಲವೋ ಎಂಬ ಚಿಂತೆ ಒಂದು ಕಡೆ, ಇನ್ನು ಅಲ್ಲಿ ಠೇವಣಿ ಮಾಡಿದ್ದ ಹಣಕ್ಕೆ ಬ್ಯಾಂಕ್​ನಿಂದ ಬಡ್ಡಿಯನ್ನು ಖಾತೆ ಪುಸ್ತಕದಲ್ಲಿ ತೋರಿಸಲಾಗಿದೆ. ಆದರೆ ಆ ಬಡ್ಡಿ ಕೈ ತಲುಪಿಲ್ಲ. ಆದರೂ ಟಿಡಿಎಸ್​ ಕಡಿತ ಎಂದು ತೋರಿಸಲಾಗಿದೆ. ತೆರಿಗೆ ವಿನಾಯಿತಿ ವ್ಯಾಪ್ತಿಗಿಂತ ಆಚೆಗೆ ಬಡ್ಡಿ ಆದಾಯ ಇದ್ದಲ್ಲಿ ಅಂಥವರಿಗೆ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಈಗ ಠೇವಣಿದಾರರು ತಮ್ಮ ಆಕ್ರೋಶ ಹಾಗೂ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೆ.21ರ ಮಂಗಳವಾರ ಟಿವಿ9 ಕನ್ನಡ ಡಿಜಿಟಲ್ ಫೇಸ್​ಬುಕ್ ಲೈವ್ ಆಯೋಜಿಸಲಾಗಿತ್ತು. ಅದರಲ್ಲಿ ಬ್ಯಾಂಕ್​ನ ಠೇವಣಿದಾರರಾದ ಮುರಳಿ, ಉದಯ್​ ಕುಮಾರ್​ ರಾವ್, ಸತೀಶ್​ ಕಾರಂತ್ ಹಾಗೂ ಬ್ಯಾಂಕ್​ನ ಆಡಳಿತ ಮಂಡಳಿ ವಸೂಲಾತಿ ಅಧಿಕಾರಿ ಆಗಿದ್ದ ಮೋಹನ್ ಭಾಗವಹಿಸಿದ್ದರು. ಚರ್ಚೆಯಾದ ಪ್ರಮುಖ ಸಂಗತಿಗಳು ಹೀಗಿವೆ.

ಮುರಳಿ ಅವರು ತಿಳಿಸಿದಂತೆ, ಬ್ಯಾಂಕ್​ನ ಬಹುತೇಕ ಠೇವಣಿದಾರರಿಗೆ ತೆರಿಗೆ ಕಟ್ಟುವಂತೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಲೆಕ್ಕ ಪರಿಶೋಧಕರ ಜತೆಗೆ ಮಾತುಕತೆ ನಡೆಸಿದ್ದು, ಆ ಬಡ್ಡಿಯ ಮೇಲೆ ತೆರಿಗೆ ಕಟ್ಟಿ ಅಂತ ಹೇಳುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಮತ್ತೊಬ್ಬ ಹೂಡಿಕೆದಾರರಾದ ಉದಯ್​ಕುಮಾರ್ ರಾವ್ ಅವರು ಮಾತನಾಡಿ, ತಮಗೆ ಹಾಗೂ ತಮ್ಮ ತಾಯಿಗೆ ಇಬ್ಬರದೂ ಸೇರಿ 60 ಲಕ್ಷ ರೂಪಾಯಿ ತನಕ ಹಣ ಬರಬೇಕು ಎಂದು ಹೇಳಿದರು. ಈಗ ಬಡ್ಡಿಯೂ ನೀಡದೆ ಅದಕ್ಕೆ ತೆರಿಗೆ ಹಾಕಬೇಕು ಎಂದು ನೋಟಿಸ್ ನೀಡಲಾಗಿದೆ. ಬ್ಯಾಂಕ್​ 1400 ಕೋಟಿ ನಷ್ಟ ಅನುಭವಿಸಿದ ಅನ್ನುತ್ತಿದ್ದಾರೆ. ಆದರೆ ಬ್ಯಾಂಕ್​ ಬಳಿ ಅದಕ್ಕಿಂತ ಹೆಚ್ಚು ಮೊತ್ತ ಇತ್ತು. ಉಳಿದ ಮೊತ್ತ ಇರುವುದರಲ್ಲಿ ಅಸಲನ್ನಾದರೂ ನೀಡಲಿ ಎಂದರು.

ಎರಡು ಸಂಸ್ಥೆಗಳ ನಿಗಾ ಇತ್ತು ಮತ್ತೊಬ್ಬ ಹೂಡಿಕೆದಾರರಾದ ಸತೀಶ್ ಕಾರಂತ್ ಮಾತನಾಡಿ, ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಮೇಲೆ ಆರ್​ಬಿಐ ಹಾಗೂ ರಿಜಿಸ್ಟ್ರಾರ್ ಕೋ ಆಪರೇಟಿವ್ ಬ್ಯಾಂಕ್ ಹೀಗೆ ಎರಡು ಸಂಸ್ಥೆಗಳ ನಿಗಾ ಇತ್ತು. ಎನ್​ಪಿಎ ಬಹಳ ಕಡಿಮೆ (ಶೇ 0.5) ತೋರಿಸಿದ್ದರು. ಆದರೆ ಇವರ ಉದ್ದೇಶವೇ ಮೋಸ ಮಾಡುವುದೇ ಆಗಿತ್ತು. ಇಲ್ಲಿ ಶೇ 8.5ರಿಂದ 9.75ರಷ್ಟು ಬಡ್ಡಿ ನೀಡಲಾಗಿತ್ತು. ಅದೇನೂ ದೊಡ್ಡ ಮೊತ್ತ ಏನಲ್ಲ. ಆದರೆ ಬ್ಯಾಂಕ್​ನ ಅಧಿಕಾರಿಗಳು, ಈ ಹಿಂದೆ ಆಡಿಟ್​ ಮಾಡಿದವರು ತಪ್ಪು ಲೆಕ್ಕಾಚಾರ ನೀಡುವುದರಲ್ಲಿ ಭಾಗಿ ಆಗಿದ್ದಾರೆ. ಆರ್​ಬಿಐ ಕೂಡ ಎರಡು ವರ್ಷಕ್ಕೊಮ್ಮೆ ಪರಿಶೀಲನೆ ನಡೆಸುತ್ತದೆ. ಅವರು ಮೇಲ್ನೋಟಕ್ಕೆ ಚಾರ್ಟರ್ಡ್ ಅಕೌಂಟೆಂಟ್​ಗಳ ವರದಿ ಮೇಲೆ ಅದನ್ನು ಒಪ್ಪಿಕೊಂಡಿದ್ದಾರೆ ಎಂದು ಆರೋಪಿಸಿದರು.

ಸಾವು ಮತ್ತು ತೆರಿಗೆ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಬ್ಯಾಂಕ್​ನ ಟಿಡಿಎಸ್ 10 ಪರ್ಸೆಂಟ್ ಹಿಡಿಯುತ್ತಾರೆ. ಕೊರೊನಾ ಬಿಕ್ಕಟ್ಟು ಇದ್ದಿದ್ದರಿಂದ ಶೇ 7.5 ಹಿಡಿದಿದ್ದಾರೆ. ಈಗ ಆರ್​ಬಿಐ 35A ನಿರ್ಬಂಧ ಹೇರಿರುವುದರಿಂದ 1 ಲಕ್ಷ ರೂಪಾಯಿಗಿಂತ ಹೆಚ್ಚು ಡ್ರಾ ಮಾಡುವುದಕ್ಕೆ ಸಾಧ್ಯವಿಲ್ಲ. 1410 ಕೋಟಿ ರೂ. ಸಾಲ ಅಷ್ಟೂ ಎನ್​ಪಿಎ ಎನ್ನುತ್ತಿದ್ದಾರೆ. ಹಾಗೆ ಆಗುವುದಕ್ಕೆ ಸಾಧ್ಯವಿಲ್ಲ. ಈ ಬಗ್ಗೆ ಸರಿಯಾದ ಲೆಕ್ಕಾಚಾರ ಆಗಬೇಕು ಎಂದಿದ್ದಾರೆ.

ಆದಾಯ ತೆರಿಗೆ ವಿನಾಯಿತಿಗೆ ಯತ್ನಿಸಬಹುದು ವಸೂಲಾತಿ ಮೇಲ್ವಿಚಾರಕರು ಮೋಹನ್ ಮಾತನಾಡಿ, ಆರ್​ಬಿಐ ನೇಮಿಸಿರುವ ಅಶೋಕನ್​ ಮೂಲಕ ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆಸಿ, ಹೂಡಿಕೆದಾರರಿಗೆ ಆದಾಯ ತೆರಿಗೆ ರಿಯಾಯಿತಿ ದೊರೆಯುವಂತೆ ಮಾಡಬಹುದು. ಈ ಹಿಂದೆ 100 ಕೋಟಿ ರೂಪಾಯಿಗೂ ಹೆಚ್ಚಿಗೆ ಕಟ್ಟಿದ್ದೆವು. ಅದನ್ನು ವಾಪಸ್​ ಕೊಡಿಸಬೇಕು ಎಂದು ಕೇಳಿದ್ದೆವು. ಅದಕ್ಕೆ ಒಪ್ಪಿದ್ದರು. ಆದ್ದರಿಂದ ಅಶೋಕನ್ ಮೂಲಕ ಪತ್ರವನ್ನು ಆರ್​ಬಿಐಗೆ ಬರೆಸಿ, ಆ ಮೂಲಕ ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆಸಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರು.

ಸತೀಶ್ ಕಾರಂತ್ ಮಾತು ಮುಂದುವರಿಸಿ, ಈ ಆದಾಯವನ್ನು ಹೊರತುಪಡಿಸಿ ಐ.ಟಿ. ರಿಟರ್ನ್ಸ್ ಫೈಲ್ ಮಾಡುವುದಕ್ಕೆ ಅವಕಾಶ ಇದೆ. ಬ್ಯಾಂಕ್​ನಲ್ಲಿ ತೋರಿಸಿರುವ ಆದಾಯ ಮತ್ತು ಟಿಡಿಎಸ್​ ಎರಡನ್ನೂ ಲೆಕ್ಕ ತೋರಿಸುವ ಅಗತ್ಯ ಇಲ್ಲ. ಬ್ಯಾಂಕ್​ ಮೇಲೆ ನಿರ್ಬಂಧ ತೆಗೆದ ನಂತರ ಆ ಆದಾಯ ಬಂದ ಮೇಲೆ ತೆರಿಗೆ ಕಟ್ಟಬಹುದು. ಈ ಬಗ್ಗೆ ಹಿರಿಯ ಆಡಿಟರ್​ ತಿಳಿಸಿದ್ದಾರೆ ಎಂದು ಅವರು ಹೇಳಿದರು. ಆದರೆ ಉದಯ್​ ಕುಮಾರ್​ ರಾವ್ ತಮ್ಮ ತಾಯಿ ಅದಾಗಲೇ ತೆರಿಗೆ ಕಟ್ಟಿಯಾಗಿದೆ ಎಂದು ಹೇಳಿದರು.

ಬ್ಯಾಂಕ್​ನಿಂದ ಸಾಲ ವಸೂಲಾದರೆ ಹಣ ವಾಪಸ್ ಸತೀಶ್​ ಕಾರಂತ್ ಅವರು ಹೇಳಿದಂತೆ ಮಾಡುವ ಅವಕಾಶ ಇದೆ. ಅದಕ್ಕೆ ಆರ್​ಬಿಐ ಮೂಲಕ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಹೋಗಬೇಕು. ಅದು ಅಶೋಕನ್ ಮೂಲಕವೇ ಮಾಹಿತಿ ಹೋಗಬೇಕು ಎಂದು ಮೋಹನ್ ಹೇಳಿದರು. ಡಿಐಸಿಜಿಸಿಯಿಂದ ಸದ್ಯದಲ್ಲೇ ಇನ್ಷೂರೆನ್ಸ್ ಬಿಡುಗಡೆ ಮಾಡುವ ಬಗ್ಗೆ ತಿಳಿಸಿದರು. 5 ಲಕ್ಷ ರೂಪಾಯಿ ತನಕದ ಮೊತ್ತ ಹಿಂತಿರುಗುವ ಕುರಿತು ಮಾಹಿತಿ ನೀಡಿದರು. 5 ಲಕ್ಷ ಮೇಲ್ಪಟ್ಟ ಮೊತ್ತದ ಠೇವಣಿ ಮಾಡಿದವರಿಗೆ ಬ್ಯಾಂಕ್​ನಿಂದ ಸಾಲ ವಸೂಲಿ ಮಾಡಿದ ಮೇಲೆ ಹಣ ವಾಪಸ್​ ಬರುತ್ತದೆ ಎಂದು ಹೇಳಿದರು.

ಮುರಳಿ ಅವರು ಮಾತನಾಡಿ, ಸತೀಶ್​ ಕಾರಂತ್ ಮತ್ತು ಮೋಹನ್ ಅವರ ಸಲಹೆಯಿಂದ ಸಾವಿರಾರು ಮಂದಿಗೆ ಅನುಕೂಲ ಆಗುತ್ತದೆ ಎಂದರು. “ಈ ಬ್ಯಾಂಕ್​ ಬೇರೆ ಯಾವುದಾದರೂ ಬ್ಯಾಂಕ್​ ಜತೆ ವಿಲೀನವಾದಲ್ಲಿ ಸಮಸ್ಯೆಗೆ ಪರಿಹಾರ ಸಿಗುತ್ತದೆ,” ಎಂದು ಮೋಜಮ್ ತಿಳಿಸಿದರು. ಈ ಸಮಸ್ಯೆ ಪರಿಹರಿಸುವುದು ಆರ್​ಬಿಐ, ಕೇಂದ್ರ ಹಣಕಾಸು ಸಚಿವರ ಕೈಲಿದೆ. ಈ ಬ್ಯಾಂಕ್​ ವಿಲೀನ ಆಗುವುದು ಕಷ್ಟ. ಯಾರಾದರೂ ಇದರ ಖರೀದಿಗೆ ಬರಬೇಕು. ಬ್ಯಾಂಕಿಂಗ್​ ಲೈಸೆನ್ಸ್​ ಇರುವುದರಿಂದ ಮುಂದೆ ಬರಬೇಕಿದೆ. ಇದರಲ್ಲಿ ಆರ್​ಬಿಐ ಜವಾಬ್ದಾರಿಯೂ ಇದೆ. ಅದನ್ನು ನಿರ್ವಹಿಸಬೇಕು. ಅದಕ್ಕಾಗಿ ಕಾದು ನೋಡಬೇಕಾಗಿದೆ ಎಂದು ಸತೀಶ್​ ಕಾರಂತ್ ಅಭಿಪ್ರಾಯ ಪಟ್ಟರು.

ಇದನ್ನೂ ಓದಿ: ಗುರು ರಾಘವೇಂದ್ರ ಬ್ಯಾಂಕ್​ನಲ್ಲಿ 5 ಲಕ್ಷಕ್ಕೂ ಹೆಚ್ಚಿನ ಠೇವಣಿ ಇರುವ ಆ 10 ಸಾವಿರ ಮಂದಿಯ ಗತಿ ಏನು?

ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ಶುಭಸುದ್ದಿ; ನವೆಂಬರ್​ ಒಳಗೆ ಠೇವಣಿ ಮೇಲಿನ ವಿಮಾ ಹಣ ಗ್ರಾಹಕರಿಗೆ ಲಭ್ಯ

(How To Deal With Income Tax And TDS Of Guru Raghavendra Co Operative Bank Investors Here Is An Explainer )

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ