AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ಕು ಐರೋಪ್ಯ ದೇಶಗಳ ಗುಂಪಿನೊಂದಿಗೆ ಭಾರತದಿಂದ ವ್ಯಾಪಾರ ಒಪ್ಪಂದ; 15 ವರ್ಷಗಳ ಬಳಿಕ ಯಶಸ್ವಿ; 100 ಬಿಲಿಯನ್ ಡಾಲರ್ ಹೂಡಿಕೆ ನಿರೀಕ್ಷೆ

India and EFTA Free Trade Agreement: ಸ್ವಿಟ್ಜರ್​ಲ್ಯಾಂಡ್ ಸೇರಿದಂತೆ ನಾಲ್ಕು ಯೂರೋಪಿಯನ್ ದೇಶಗಳ ಸಂಘಟನೆಯೊಂದಿಗೆ ಭಾರತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುತ್ತಿದೆ. ಸ್ವಿಟ್ಜರ್​ಲ್ಯಾಂಡ್, ಐಸ್​ಲ್ಯಾಂಡ್, ನಾರ್ವೇ ಮತ್ತು ಲೇಶ್ಟೆನ್​ಸ್ಟೀನ್ ಈ ನಾಲ್ಕು ದೇಶಗಳು ಯೂರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಶನ್​ನಲ್ಲಿ ಇವೆ. ಈ ಗುಂಪಿನೊಂದಿಗೆ ಭಾರತದ ಆಮದು ಮತ್ತು ರಫ್ತು ಬಹುತೇಕ ಅನಿರ್ಬಂಧಿತವಾಗಿ ನಡೆಯಲಿದೆ.

ನಾಲ್ಕು ಐರೋಪ್ಯ ದೇಶಗಳ ಗುಂಪಿನೊಂದಿಗೆ ಭಾರತದಿಂದ ವ್ಯಾಪಾರ ಒಪ್ಪಂದ; 15 ವರ್ಷಗಳ ಬಳಿಕ ಯಶಸ್ವಿ; 100 ಬಿಲಿಯನ್ ಡಾಲರ್ ಹೂಡಿಕೆ ನಿರೀಕ್ಷೆ
ಮುಕ್ತ ವ್ಯಾಪಾರ ಒಪ್ಪಂದ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 10, 2024 | 11:43 AM

Share

ನವದೆಹಲಿ, ಮಾರ್ಚ್ 10: ನಾಲ್ಕು ಐರೋಪ್ಯ ದೇಶಗಳ ಜೊತೆ ಭಾರತ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದೆ. ಯೂರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಶನ್ (EFTA- European Free Trade Association) ಮತ್ತು ಭಾರತದ ಮಧ್ಯೆ ಒಪ್ಪಂದ ಆಗಲಿದೆ. ವ್ಯಾಪಾರ ಮತ್ತು ಆರ್ಥಿಕ ಸಹಭಾಗಿತ್ವ ಒಪ್ಪಂದ (TEPA- Trand and Economic Partnership Agreement) ಎಂದು ಕರೆಯಲಾಗುವ ಈ ಒಪ್ಪಂದಕ್ಕೆ ಇಎಫ್​ಟಿಎನ ನಾಲ್ಕು ದೇಶಗಳು ಮತ್ತು ಭಾರತ ಇಂದು (ಮಾ. 10) ಭಾನುವಾರ ಸಹಿ ಹಾಕಲಿವೆ. ಕೇಂದ್ರ ಸಂಪುಟ ಮಾರ್ಚ್ 7ರಂದು ಇದಕ್ಕೆ ಸಮ್ಮತಿ ನೀಡಿತ್ತು. ಈ ಒಪ್ಪಂದದಿಂದ ಭಾರತಕ್ಕೆ ಮುಂದಿನ 15 ವರ್ಷದಲ್ಲಿ 100 ಬಿಲಿಯನ್ ಡಾಲರ್ ಬಂಡವಾಳ ಹರಿದುಬರುವ ನಿರೀಕ್ಷೆ ಇದೆ. ಹಾಗೆಯೇ, 10 ಲಕ್ಷ ಉದ್ಯೋಗಾವಕಾಶ ಸೃಷ್ಟಿಯಾಗುವ ಸಾಧ್ಯತೆ ಇದೆ.

ಐಸ್​ಲ್ಯಾಂಡ್, ಸ್ವಿಟ್ಜರ್​ಲ್ಯಾಂಡ್, ನಾರ್ವೇ ಮತ್ತು ಲೇಶ್​ಟೆನ್​ಸ್ಟೀನ್ ಈ 4 ದೇಶಗಳು ಯೂರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಶನ್​ನ ಗುಂಪಿನಲ್ಲಿವೆ. ಇದರ ಪ್ರತಿನಿಧಿಗಳಿರುವ ನಿಯೋಗವೊಂದು ಬಂದಿದ್ದು, ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದೆ. ಅದರಂತೆ, ಭಾರತದಿಂದ ಈ ದೇಶಗಳಿಗೆ ಮುಕ್ತವಾಗಿ ಸರಕು ರಫ್ತು ಮಾಡುವ ಅವಕಾಶ ಸಿಗಲಿದೆ.

ಇದನ್ನೂ ಓದಿ: ಬುಡಕಟ್ಟು ಭಾಷೆಗಳು ಸೇರಿದಂತೆ ಅನುಸೂಚಿತವಲ್ಲದ ಭಾಷೆಗಳ 52 ಕಿರು ಪಠ್ಯಪುಸ್ತಕ ಬಿಡುಗಡೆ

ಇಎಫ್​ಟಿಎ ಸಂಘಟನೆಯು ಈಗಾಗಲೇ 40 ದೇಶಗಳ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ಚೀನಾ, ಕೆನಡಾ, ಚಿಲಿ, ದಕ್ಷಿಣ ಕೊರಿಯಾ ಮೊದಲಾದ ದೇಶಗಳೂ ಸೇರಿವೆ. ಭಾರತದ ಜೊತೆಗೂ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನವನ್ನು ಇಎಫ್​ಟಿಎ 2008ರಿಂದಲೂ ಮಾಡುತ್ತಿತ್ತು. ಇದೀಗ ಫಲಪ್ರದವಾಗಿದೆ.

ಸದ್ಯ ಈ ನಾಲ್ಕು ಇಎಫ್​ಟಿಎ ದೇಶಗಳೊಂದಿಗೆ ಭಾರತ 14.8 ಬಿಲಿಯನ್ ಡಾಲರ್​ನಷ್ಟು ವ್ಯಾಪಾರ ಕೊರತೆ ಹೊಂದಿದೆ. 2021-22ರಲ್ಲಿ ಭಾರತ ಈ 4 ದೇಶಗಳಿಂದ 25.5 ಬಿಲಿಯನ್ ಡಾಲರ್ ಆಮದು ಮಾಡಿಕೊಂಡಿದೆ. ರಫ್ತಾಗಿದ್ದು ಮಾತ್ರ 1.74 ಬಿಲಿಯನ್ ಡಾಲರ್. ಮರು ವರ್ಷ, ಅಂದರೆ 2022-23ರಲ್ಲಿ ಆಮದು ಪ್ರಮಾಣವು 16.74 ಬಿಲಿಯನ್ ಡಾಲರ್​ಗೆ ಇಳಿದಿತ್ತು. ರಫ್ತು 1.92 ಬಿಲಿಯನ್ ಡಾಲರ್​ಗೆ ಏರಿತ್ತು. 2021-22ಕ್ಕೆ ಹೋಲಿಸಿದರೆ 2022-23ರಲ್ಲಿ ವ್ಯಾಪಾರ ಕೊರತೆ ಬಹಳಷ್ಟು ಕಡಿಮೆ ಆಗಿದೆ.

ಇದನ್ನೂ ಓದಿ: ಇ200 ಪ್ಲೇನ್; ಈ ವರ್ಷದೊಳಗೆ ಭಾರತದಲ್ಲಿ ನೋಡುತ್ತೀರಿ ಫ್ಲೈಯಿಂಗ್ ಟ್ಯಾಕ್ಸಿ; ರೈಡಿಂಗ್ ಕೂಡ ದುಬಾರಿ ಇಲ್ಲ

ಮುಕ್ತ ವ್ಯಾಪಾರ ಒಪ್ಪಂದದಿಂದ ಏನು ಲಾಭ?

ಮುಕ್ತ ವ್ಯಾಪಾರ ಒಪ್ಪಂದದ ಪ್ರಕಾರ, ಕೆಲ ನಿರ್ದಿಷ್ಟ ಸರಕುಗಳನ್ನು ಹೊರತುಪಡಿಸಿ ಹೆಚ್ಚಿನ ವಸ್ತುಗಳ ಆಮದು ಮತ್ತು ರಫ್ತಿನಲ್ಲಿ ಸುಂಕದಲ್ಲಿ ವಿನಾಯಿತಿ ಅಥವಾ ರಿಯಾಯಿತಿ ಸಿಗುತ್ತದೆ. ಅಂದರೆ, ಅನಿರ್ಬಂಧಿತವಾಗಿ ಆಮದು ಮತ್ತು ರಫ್ತು ಮಾಡಬಹುದು. ಈಗ ಉತ್ಪಾದನೆ ಕಡೆ ಭಾರತ ಹೆಚ್ಚು ಗಮನ ಹರಿಸುತ್ತಿರುವುದರಿಂದ ಈ ವ್ಯಾಪಾರ ಒಪ್ಪಂದ ಸಕಾಲಿಕವಾಗಿದ್ದು, ಭಾರತಕ್ಕೆ ಅನುಕೂಲವಾಗುವ ನಿರೀಕ್ಷೆ ಇದೆ. ನಾಲ್ಕು ಐರೋಪ್ಯ ದೇಶಗಳ ಮಾರುಕಟ್ಟೆ ಅವಕಾಶ ಮುಕ್ತವಾಗಿ ಸಿಗಲಿದೆ. ರಫ್ತು ಪ್ರಮಾಣ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.

ಇನ್ನು, ಈಗ ಭಾರತ ಸಹಿ ಹಾಕುತ್ತಿರುವ ಈ ಒಪ್ಪಂದದ ಪ್ರಕಾರ ಭಾರತಕ್ಕೆ ಈ ನಾಲ್ಕು ದೇಶಗಳಿಂದ ಮುಂದಿನ 15 ವರ್ಷದಲ್ಲಿ 100 ಬಿಲಿಯನ್ ಡಾಲರ್​ನಷ್ಟು ಬಂಡವಾಳ ಹೂಡಿಕೆ ಆಗಬೇಕೆನ್ನುವ ಒಂದು ಅಂಶವೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?