AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಜಾಬ್ vs ಕುಂಕುಮ; ವಿವಾದ ಸೃಷ್ಟಿಸಿದ ಲೆನ್ಸ್​ಕಾರ್ಟ್ ಪಾಲಿಸಿ ಡಾಕ್ಯುಮೆಂಟ್; ಆನ್​ಲೈನ್​ನಲ್ಲಿ ತಕರಾರು

Lenskart's alleged policy document bars employees from wearing bindi, while allowing Hijab: ಪ್ರಸಿದ್ಧ ಕನ್ನಡಕದ ಕಂಪನಿಯಾದ ಲೆನ್ಸ್ಕಾರ್ಟ್ ತನ್ನ ಉದ್ಯೋಗಿಗಳಿಗೆ ರೂಪಿಸಿರುವ ಸ್ಟೈಲ್​ಗೈಡ್ ಈಗ ವಿವಾದ ಸೃಷ್ಟಿಸಿದೆ. ಈ ಪಾಲಿಸಿ ಡಾಕ್ಯುಮೆಂಟ್​ನಲ್ಲಿ ಉದ್ಯೋಗಿಗಳು ಹಿಜಾಬ್ ಧರಿಸಲು ಅವಕಾಶ ಇದೆ. ಆದರೆ, ಸಿಂದೂರ, ಹಣೆಬೊಟ್ಟು ಇಡುವಂತಿಲ್ಲ ಎಂದು ತಿಳಿಸಲಾಗಿದೆ. ಆನ್​ಲೈನ್​ನಲ್ಲಿ ಈ ದಾಖಲೆ ಬಗ್ಗೆ ಆಕ್ಷೇಪಗಳು ವ್ಯಕ್​ತವಾಗಿವೆ.

ಹಿಜಾಬ್ vs ಕುಂಕುಮ; ವಿವಾದ ಸೃಷ್ಟಿಸಿದ ಲೆನ್ಸ್​ಕಾರ್ಟ್ ಪಾಲಿಸಿ ಡಾಕ್ಯುಮೆಂಟ್; ಆನ್​ಲೈನ್​ನಲ್ಲಿ ತಕರಾರು
ಲೆನ್ಸ್​ಕಾರ್ಟ್ ಶೋರೂಮ್Image Credit source: Saishna96, Wikipedia
ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:Jul 06, 2026 | 10:50 AM

Share

ನವದೆಹಲಿ, ಏಪ್ರಿಲ್ 16: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯಲ್ಲಿ ಲೈಂಗಿಕ ದೌರ್ಜನ್ಯ, ಮತಾಂತರ ಕುಮ್ಮಕ್ಕು ಇತ್ಯಾದಿ ಕರ್ಮಕಾಂಡಗಳು ಬೆಳಕಿಗೆ ಬಂದು ವಿವಾದ ಹುಟ್ಟಿಕೊಂಡಿದೆ. ಇದರ ಬೆನ್ನಲ್ಲೇ ಲೆನ್ಸ್​ಕಾರ್ಟ್ (Lenskart) ಸಂಸ್ಥೆಯ ಉದ್ಯೋಗಿಗಳಿಗೆ ನೀಡಲಾಗಿರುವ ಸ್ಟೈಲ್​ಗೈಡ್​ನ ಕೆಲ ಅಂಶಗಳು ಹೊಸ ವಿವಾದ ಹುಟ್ಟುಹಾಕಿವೆ. ಸ್ಟೈಲ್​ಗೈಡ್​ನಲ್ಲಿ ಧರ್ಮತಾರತಮ್ಯ ಮಾಡಲಾಗಿರುವ ನಿಯಮಗಳನ್ನು ಹಲವರು ಎತ್ತಿ ತೋರಿಸಿದ್ದಾರೆ.

ಲೆನ್ಸ್​ಕಾರ್ಟ್ ಸ್ಟೈಲ್​ಗೈಡ್​ಗೆ ಆನ್​ಲೈನ್​ನಲ್ಲಿ ತಕರಾರು

ಲೆನ್ಸ್​ಕಾರ್ಟ್​ನ ಉದ್ಯೋಗಿಗಳ ಸ್ಟೈಲ್​ಗೈಡ್​ನಲ್ಲಿರುವ ಕೆಲ ನಿಯಮಗಳು, ಅದರಲ್ಲೂ ಧಾರ್ಮಿಕ ಸೂಕ್ಷ್ಮತೆ ಇರುವ ನಿಯಮಗಳ ಬಗ್ಗೆ ಆನ್​ಲೈನ್​ನಲ್ಲಿ ಸಾಕಷ್ಟು ತಕರಾರುಗಳು ಎದ್ದಿವೆ. ‘ಹಿಜಾಬ್​ಗೆ ಅನುಮತಿ ಕೊಡಲಾಗಿದೆ. ಆದರೆ, ಹಿಂದೂ ಉದ್ಯೋಗಿಗಳಿಗೆ ಕುಂಕುಮ, ಹಣೆಬೊಟ್ಟು ಇಡುವ ಅವಕಾಶ ನೀಡಲಾಗಿಲ್ಲ ಯಾಕೆ?’ ಎಂದು ಹಲವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಚೀನಾ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ: ಅಮೆರಿಕ ಹಿಂದಿಕ್ಕಿ ಅಗ್ರಸ್ಥಾನ, ಹೆಚ್ಚಿದ ವ್ಯಾಪಾರ ಕೊರತೆ

‘ಇದು ಮೂರ್ಖತನ. ಲೆನ್ಸ್​ಕಾರ್ಟ್ ಮಾನಗೆಟ್ಟ ಕಂಪನಿ. ಬಿಂದಿಯಲ್ಲಿ ಏನು ತಪ್ಪು ಕಂಡಿದ್ದಾರೆ. ಅವರಿಗೆ ಭಾರತದಲ್ಲಿ ಬ್ಯುಸಿನೆಸ್ ಮಾಡಬೇಕು, ಆದರೆ ಜನರ ಭಾವನೆಗಳಿಗೆ ಬೆಲೆ ಕೊಡುವುದು ಬೇಡ’ ಎಂದು ಒಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೆಫಾಲಿ ವೈದ್ಯ ಟ್ವೀಟ್

‘ನಾನು ಯಾವತ್ತೂ ಲೆನ್ಸ್​ಕಾರ್ಟ್​ನಿಂದ ಕನ್ನಡಕ ಖರೀದಿಸುವುದಿಲ್ಲ. ಇತ್ತೀಚೆಗೆ ನನ್ನ ಕುಟುಂಬದ ಸದಸ್ಯರು ಭಾರತಕ್ಕೆ ಹೋಗಿ ಇಲ್ಲಿ ತಮ್ಮ ಗ್ಲಾಸ್​ಗಳನ್ನು ಪಡೆದಿದ್ದರು. ಈ ಹಿಂದೂ ವಿರೋಧಿ ಸಂಸ್ಥೆಗೆ ಹಣ ವೆಚ್ಚ ಮಾಡಬೇಡಿ ಎಂದು ಅವರಿಗೆ ಈಗ ಹೇಳುತ್ತೇನೆ’ ಎಂದು ಮಗದೊಬ್ಬರು ಕಾಮೆಂಟಿಸಿದ್ದಾರೆ.

ಲೆನ್ಸ್​ಕಾರ್ಟ್ ಸ್ಟೈಲ್​ಗೈಡ್​ನಲ್ಲಿ ವಿವಾದವಾಗಿರುವ ಅಂಶಗಳಿವು…

  • ಕಪ್ಪು ಬಣ್ಣದ ಪೇಟ (sikh turban) ಧರಿಸಬಹುದು.
  • ಕಪ್ಪು ಬಣ್ಣದ ಹಿಜಾಬ್ ಧರಿಸಬಹುದು
  • ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಟ್ಯಾಟೂಗಳನ್ನು ಹಾಕಿಕೊಂಡಿದ್ದರೆ ಅದು ಕಣ್ಣಿಗೆ ಗೋಚರಿಸದಂತಿರಬೇಕು.
  • ಹೆನ್ನಾ (ಗೋರಂಟಿ) ಹಾಕುವಂತಿಲ್ಲ. ವಿಶೇಷ ಸಂದರ್ಭವಿದ್ದರೆ ಮುಂಚಿತವಾಗಿ ಅನುಮತಿ ಪಡೆಯಬೇಕು.
  • ಧಾರ್ಮಿಕ ತಿಲಕ, ಹಣಬೊಟ್ಟು ಹಾಕುವಂತಿಲ್ಲ.

ಇದನ್ನೂ ಓದಿ: ವಿಶ್ವದ ದೊಡ್ಡ ಆರ್ಥಿಕತೆ: 5ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿದ ಭಾರತ; ಕಾರಣ ಏನು ಗೊತ್ತಾ?

ಲೆನ್ಸ್​ಕಾರ್ಟ್ ಸಂಸ್ಥಾಪಕರ ಸ್ಪಷ್ಟನೆ

ಲೆನ್ಸ್​ಕಾರ್ಟ್ ಸ್ಟೈಲ್​ಗೈಡ್ ವಿಚಾರ ಆನ್​ಲೈನ್​ನಲ್ಲಿ ಟ್ರೋಲ್ ಆಗುತ್ತಿರುವಂತೆಯೇ ಸಂಸ್ಥೆಯ ಸಂಸ್ಥಾಪಕ ಪಿಯುಸ್ ಬನ್ಸಾಲ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ವೈರಲ್ ಆಗುತ್ತಿರುವ ದಾಖಲೆಯು ಸರಿಯಿಲ್ಲ. ನಮ್ಮ ಈಗಿನ ಮಾರ್ಗಸೂಚಿಗಳನ್ನು ಇದು ಪ್ರತಿಬಿಂಬಿಸುವುದಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅವರ ಈ ಟ್ವೀಟ್​ಗೂ ತೀಕ್ಷ್ಣ ಪ್ರತಿಕ್ರಿಯೆಗಳು ಬಂದಿವೆ. ಲೆನ್ಸ್​ಕಾರ್ಟ್​ನ ಈ ಪಾಲಿಸಿ ಡಾಕ್ಯುಮೆಂಟ್ 2026ರ ಫೆಬ್ರುವರಿಯದ್ದು. ಈಗ ಬದಲಾಗಿರುವ ಪಾಲಿಸಿ ಡಾಕ್ಯುಮೆಂಟ್ ಇದ್ದರೆ ತೋರಿಸಿ ಎಂದು ಅನೇಕರು ಸವಾಲು ಹಾಕಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:44 pm, Thu, 16 April 26

Follow Us
ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡೋ ಆರೋಪಕ್ಕೆ ಏನಂದ್ರು ಸಚಿವ?
ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡೋ ಆರೋಪಕ್ಕೆ ಏನಂದ್ರು ಸಚಿವ?
ದೆಹಲಿ ಹಿಂಸಾಚಾರದಲ್ಲಿ ಗಾಯಗೊಂಡ ಪೋಲಿಸ್ ಎಸ್ಐ ಮಗಳ ಭಾವುಕ ನುಡಿ
ದೆಹಲಿ ಹಿಂಸಾಚಾರದಲ್ಲಿ ಗಾಯಗೊಂಡ ಪೋಲಿಸ್ ಎಸ್ಐ ಮಗಳ ಭಾವುಕ ನುಡಿ
ವಿನಯ್ ಕುಲಕರ್ಣಿಗೆ ಜಾಮೀನು: ವಕೀಲ ಸುನೀಲ್ ಹೇಳಿದ್ದೇನು ನೋಡಿ
ವಿನಯ್ ಕುಲಕರ್ಣಿಗೆ ಜಾಮೀನು: ವಕೀಲ ಸುನೀಲ್ ಹೇಳಿದ್ದೇನು ನೋಡಿ
ಚಾಮರಾಜನಗರದಲ್ಲಿ ವಿಜಯ್ ಅಭಿನಯದ 'ಜನನಾಯಗನ್' ಸಿನಿಮಾ ಎತ್ತಂಗಡಿ!
ಚಾಮರಾಜನಗರದಲ್ಲಿ ವಿಜಯ್ ಅಭಿನಯದ 'ಜನನಾಯಗನ್' ಸಿನಿಮಾ ಎತ್ತಂಗಡಿ!
ಮೂರನೇ ಆಷಾಢ ಶುಕ್ರವಾರ: ಚಾಮುಂಡೇಶ್ವರಿ ದೇಗುಲಕ್ಕೆ ವಿಶೇಷ ಅಲಂಕಾರ
ಮೂರನೇ ಆಷಾಢ ಶುಕ್ರವಾರ: ಚಾಮುಂಡೇಶ್ವರಿ ದೇಗುಲಕ್ಕೆ ವಿಶೇಷ ಅಲಂಕಾರ
ಚಾಮುಂಡಿಬೆಟ್ಟದಲ್ಲಿ ಯಡಿಯೂರಪ್ಪ ಕುಟುಂಬದಿಂದ ವಿಶೇಷ ಪೂಜೆ
ಚಾಮುಂಡಿಬೆಟ್ಟದಲ್ಲಿ ಯಡಿಯೂರಪ್ಪ ಕುಟುಂಬದಿಂದ ವಿಶೇಷ ಪೂಜೆ
ಚಾಮುಂಡಿ ಸನ್ನಿಧಿಯಲ್ಲಿ ದರ್ಶನ್ ಭಾವಚಿತ್ರ ಹಿಡಿದು ಘೋಷಣೆ ಕೂಗಿದ ಅಭಿಮಾನಿ
ಚಾಮುಂಡಿ ಸನ್ನಿಧಿಯಲ್ಲಿ ದರ್ಶನ್ ಭಾವಚಿತ್ರ ಹಿಡಿದು ಘೋಷಣೆ ಕೂಗಿದ ಅಭಿಮಾನಿ
KRS ಜಲಾಶಯದ ಗೇಟ್ ಮುಂದೆ ಉರುಳು ಸೇವೆ ಮಾಡಿದ ಮಹಿಳಾ ಹೋರಾಟಗಾರರು
KRS ಜಲಾಶಯದ ಗೇಟ್ ಮುಂದೆ ಉರುಳು ಸೇವೆ ಮಾಡಿದ ಮಹಿಳಾ ಹೋರಾಟಗಾರರು
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು