AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paytm: ಪೇಟಿಎಂಗೆ ನಿಲ್ಲದ ತಲೆನೋವು; ಚೀನಾದ ಜಾಡು ಹುಡುಕುತ್ತಿರುವ ಸರ್ಕಾರ

Chinese Investment In Paytm: ಪೇಟಿಎಂ ಪೇಮೆಂಟ್ಸ್ ಸರ್ವಿಸಸ್ (ಪಿಪಿಎಸ್​ಎಲ್) ಸಂಸ್ಥೆಯಲ್ಲಿ ವಿದೇಶೀ ಹೂಡಿಕೆಗಳು ಇವೆಯಾ ಎಂಬುದನ್ನು ಸರ್ಕಾರ ಪರಿಶೀಲಿಸುತ್ತಿದೆ. ಪಿಪಿಎಸ್​ಎಲ್​ನ ಮಾತೃ ಸಂಸ್ಥೆ ಒನ್97 ಕಮ್ಯೂನಿಕೇಶನ್ಸ್​ನಲ್ಲಿ ಚೀನಾದ ಆ್ಯಂಟ್ ಗ್ರೂಪ್​ನ ಹೂಡಿಕೆ ಇದೆ. ಪೇಮೆಂಟ್ಸ್ ಸರ್ವಿಸಸ್ ಲಿಯಲ್ಲೂ ಚೀನೀ ಸಂಸ್ಥೆಯ ನೇರ ಹೂಡಿಕೆ ಇದೆಯಾ ಎಂದು ನೋಡಲಾಗುತ್ತಿದೆ. ಗಡಿಭಾಗದ ದೇಶಗಳಿಂದ ಭಾರತೀಯ ಸಂಸ್ಥೆಗಳು ಎಫ್​ಡಿಐ ಪಡೆಯುವ ಮುನ್ನ ಸರ್ಕಾರದ ಅನುಮತಿ ಪಡೆಯಬೇಕು ಎನ್ನುವ ನಿಯಮ ಇದೆ.

Paytm: ಪೇಟಿಎಂಗೆ ನಿಲ್ಲದ ತಲೆನೋವು; ಚೀನಾದ ಜಾಡು ಹುಡುಕುತ್ತಿರುವ ಸರ್ಕಾರ
ಪೇಟಿಎಂ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 11, 2024 | 6:26 PM

Share

ನವದೆಹಲಿ, ಫೆಬ್ರುವರಿ 11: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ನಿರ್ಬಂಧಿಸಿದ್ದು ಆಯಿತು, ಈಗ ಪೇಟಿಎಂ ಆ್ಯಪ್ ಅನ್ನು ನಿರ್ವಹಿಸುವ ಪೇಟಿಎಂ ಪೇಮೆಂಟ್ಸ್ ಸರ್ವಿಸಸ್ ಸಂಸ್ಥೆಯ (PPSL- Paytm Payments Services Ltd) ಬುಡ ಜಾಲಾಡಲು ಸರ್ಕಾರ ಹೊರಟಂತಿದೆ. ಪಿಪಿಎಸ್​ಎಲ್​ನಲ್ಲಿ ಚೀನಾದ ನೇರ ಹೂಡಿಕೆ ಇದೆಯಾ ಎಂಬುದನ್ನು ಸರ್ಕಾರ ಪರಿಶೀಲಿಸುತ್ತಿದೆ. ಪೇಟಿಎಂ ಪೇಮೆಂಟ್ಸ್ ಸರ್ವಿಸಸ್​ನ ಮಾಲಕ ಸಂಸ್ಥೆಯಾದ ಒನ್97 ಕಮ್ಯೂನಿಕೇಶನ್ಸ್​ನಲ್ಲಿ ಚೀನಾದ ಆ್ಯಂಟ್ ಗ್ರೂಪ್​ನ (Ant Group) ಹೂಡಿಕೆ ಇದೆ. ಈ ಮೂಲಕ ಪರೋಕ್ಷವಾಗಿ ಪೇಟಿಎಂ ಪೇಮೆಂಟ್ಸ್ ಸರ್ವಿಸಸ್ ಮೇಲೆ ಆ್ಯಂಟ್ ಗ್ರೂಪ್ ಅಧಿಕಾರ ಇರಬಹುದು. ಆದರೆ, ಪಿಪಿಎಸ್​ಎಲ್​ನಲ್ಲಿ ಚೀನಾದ ನೇರ ಹೂಡಿಕೆ ಇದೆಯಾ ಎನ್ನುವನ್ನು ಗಮನಿಸಲಾಗುತ್ತಿದೆ.

ಹಿಂದೆ 2022ರ ನವೆಂಬರ್​ನಲ್ಲಿ ಪೇಟಿಎಂ ಪೇಮೆಂಟ್ಸ್ ಸರ್ವಿಸಸ್ ಸಂಸ್ಥೆ ಪೇಮೆಂಟ್ ಅಗ್ರಿಗೇಟರ್ ಆಗಿ ಕಾರ್ಯವಹಿಸಲು ಪರವಾನಿಗೆಗಾಗಿ ಆರ್​​ಬಿಐ ಬಳಿ ಅರ್ಜಿ ಸಲ್ಲಿಸಿತ್ತು. ಆದರೆ, ಒನ್97 ಕಮ್ಯೂನಿಕೇಶನ್ಸ್​ನಲ್ಲಿ ಚೀನಾದ ಸಂಸ್ಥೆಯ ಎಫ್​ಡಿಐ ಇದ್ದರಿಂದ ನಿಯಮಾನುಸಾರ ಪಿಪಿಎಸ್​ಎಲ್​ನ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಮರುತಿಂಗಳಲ್ಲಿ, ಅಂದರೆ 2022ರ ಡಿಸೆಂಬರ್ 14ರಂದು ಪಿಪಿಎಸ್​ಎಲ್ ನಿಯಮಾನುಸಾರ ಅರ್ಜಿ ಹಾಕಿತು. ಒನ್97 ಕಮ್ಯೂನಿಕೇಶನ್ಸ್​ನಲ್ಲಿ ಮಾತ್ರವೇ ಚೀನಾದ ಆ್ಯಂಟ್ ಗ್ರೂಪ್ ಹೂಡಿಕೆ ಇರುವುದನ್ನು ನಮೂದಿಸಿತ್ತು. ಇದು ವಿದೇಶೀ ನೇರ ಹೂಡಿಕೆಯ ಪ್ರೆಸ್ ನೋಟ್ ನಿಯಮ.

ಇದನ್ನೂ ಓದಿ: ನಿರ್ಬಂಧ ಇರೋದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ; ಆದ್ರೆ ವ್ಯಾಲಟ್​ಗೆ ಯಾಕೆ ತೊಂದರೆ? ತಿಳಿಯಬೇಕಾದ ಅಂಶಗಳು

ಚೀನಾದ ಹೂಡಿಕೆಗೆ ಯಾಕೆ ತಕರಾರು?

ಭಾರತದ ಸಂಸ್ಥೆಗಳಲ್ಲಿ ಚೀನಾದ ಸಂಸ್ಥೆಗಳು ಹೂಡಿಕೆ ಮಾಡಬಹುದು. ಸರ್ಕಾರ ಈ ಹೂಡಿಕೆಗಳಿಗೆ ಆಕ್ಷೇಪಿಸುತ್ತಿಲ್ಲ. ಆದರೆ, ಭಾರತೀಯ ಸಂಸ್ಥೆಯೊಂದು ಚೀನಾದಿಂದ ಹೂಡಿಕೆ ಪಡೆಯಬೇಕಾದರೆ ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮ ಇದೆ. ಚೀನಾ ಮಾತ್ರವಲ್ಲ, ಭಾರತದ ಜೊತೆ ಗಡಿ ಹಂಚಿಕೊಂಡಿರುವ ಯಾವುದೇ ದೇಶಗಳಿಗೂ ಇದು ಅನ್ವಯ ಆಗುತ್ತದೆ.

ಈ ಪ್ರೆಸ್ ನೋಟ್ ರೂಲ್ ನಂಬರ್ 3 ಪ್ರಕಾರ, ಭಾರತದ ಜೊತೆ ಗಡಿ ಹಂಚಿಕೊಂಡಿರುವ ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ, ಭೂತಾನ್, ನೇಪಾಳ, ಮಯನ್ಮಾರ್ ಮತ್ತು ಆಫ್ಘಾನಿಸ್ತಾನ ದೇಶಗಳಿಂದ ಭಾರತಕ್ಕೆ ಎಫ್​ಡಿಐ ಬರಲು ಸರ್ಕಾರದಿಂದ ಅನುಮತಿ ಪಡೆಯಬೇಕು. ಭದ್ರತೆಯ ದೃಷ್ಟಿಯಿಂದ ಈ ನಿಯಮ ಇದೆ. ಗಡಿಭಾಗದ ದೇಶಗಳು ಭಾರತದ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆ ತಡೆಯಲು ಈ ನಿಯಮ ರೂಪಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ