Paytm: ಪೇಟಿಎಂಗೆ ನಿಲ್ಲದ ತಲೆನೋವು; ಚೀನಾದ ಜಾಡು ಹುಡುಕುತ್ತಿರುವ ಸರ್ಕಾರ

Chinese Investment In Paytm: ಪೇಟಿಎಂ ಪೇಮೆಂಟ್ಸ್ ಸರ್ವಿಸಸ್ (ಪಿಪಿಎಸ್​ಎಲ್) ಸಂಸ್ಥೆಯಲ್ಲಿ ವಿದೇಶೀ ಹೂಡಿಕೆಗಳು ಇವೆಯಾ ಎಂಬುದನ್ನು ಸರ್ಕಾರ ಪರಿಶೀಲಿಸುತ್ತಿದೆ. ಪಿಪಿಎಸ್​ಎಲ್​ನ ಮಾತೃ ಸಂಸ್ಥೆ ಒನ್97 ಕಮ್ಯೂನಿಕೇಶನ್ಸ್​ನಲ್ಲಿ ಚೀನಾದ ಆ್ಯಂಟ್ ಗ್ರೂಪ್​ನ ಹೂಡಿಕೆ ಇದೆ. ಪೇಮೆಂಟ್ಸ್ ಸರ್ವಿಸಸ್ ಲಿಯಲ್ಲೂ ಚೀನೀ ಸಂಸ್ಥೆಯ ನೇರ ಹೂಡಿಕೆ ಇದೆಯಾ ಎಂದು ನೋಡಲಾಗುತ್ತಿದೆ. ಗಡಿಭಾಗದ ದೇಶಗಳಿಂದ ಭಾರತೀಯ ಸಂಸ್ಥೆಗಳು ಎಫ್​ಡಿಐ ಪಡೆಯುವ ಮುನ್ನ ಸರ್ಕಾರದ ಅನುಮತಿ ಪಡೆಯಬೇಕು ಎನ್ನುವ ನಿಯಮ ಇದೆ.

Paytm: ಪೇಟಿಎಂಗೆ ನಿಲ್ಲದ ತಲೆನೋವು; ಚೀನಾದ ಜಾಡು ಹುಡುಕುತ್ತಿರುವ ಸರ್ಕಾರ
ಪೇಟಿಎಂ
Follow us
|

Updated on: Feb 11, 2024 | 6:26 PM

ನವದೆಹಲಿ, ಫೆಬ್ರುವರಿ 11: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ನಿರ್ಬಂಧಿಸಿದ್ದು ಆಯಿತು, ಈಗ ಪೇಟಿಎಂ ಆ್ಯಪ್ ಅನ್ನು ನಿರ್ವಹಿಸುವ ಪೇಟಿಎಂ ಪೇಮೆಂಟ್ಸ್ ಸರ್ವಿಸಸ್ ಸಂಸ್ಥೆಯ (PPSL- Paytm Payments Services Ltd) ಬುಡ ಜಾಲಾಡಲು ಸರ್ಕಾರ ಹೊರಟಂತಿದೆ. ಪಿಪಿಎಸ್​ಎಲ್​ನಲ್ಲಿ ಚೀನಾದ ನೇರ ಹೂಡಿಕೆ ಇದೆಯಾ ಎಂಬುದನ್ನು ಸರ್ಕಾರ ಪರಿಶೀಲಿಸುತ್ತಿದೆ. ಪೇಟಿಎಂ ಪೇಮೆಂಟ್ಸ್ ಸರ್ವಿಸಸ್​ನ ಮಾಲಕ ಸಂಸ್ಥೆಯಾದ ಒನ್97 ಕಮ್ಯೂನಿಕೇಶನ್ಸ್​ನಲ್ಲಿ ಚೀನಾದ ಆ್ಯಂಟ್ ಗ್ರೂಪ್​ನ (Ant Group) ಹೂಡಿಕೆ ಇದೆ. ಈ ಮೂಲಕ ಪರೋಕ್ಷವಾಗಿ ಪೇಟಿಎಂ ಪೇಮೆಂಟ್ಸ್ ಸರ್ವಿಸಸ್ ಮೇಲೆ ಆ್ಯಂಟ್ ಗ್ರೂಪ್ ಅಧಿಕಾರ ಇರಬಹುದು. ಆದರೆ, ಪಿಪಿಎಸ್​ಎಲ್​ನಲ್ಲಿ ಚೀನಾದ ನೇರ ಹೂಡಿಕೆ ಇದೆಯಾ ಎನ್ನುವನ್ನು ಗಮನಿಸಲಾಗುತ್ತಿದೆ.

ಹಿಂದೆ 2022ರ ನವೆಂಬರ್​ನಲ್ಲಿ ಪೇಟಿಎಂ ಪೇಮೆಂಟ್ಸ್ ಸರ್ವಿಸಸ್ ಸಂಸ್ಥೆ ಪೇಮೆಂಟ್ ಅಗ್ರಿಗೇಟರ್ ಆಗಿ ಕಾರ್ಯವಹಿಸಲು ಪರವಾನಿಗೆಗಾಗಿ ಆರ್​​ಬಿಐ ಬಳಿ ಅರ್ಜಿ ಸಲ್ಲಿಸಿತ್ತು. ಆದರೆ, ಒನ್97 ಕಮ್ಯೂನಿಕೇಶನ್ಸ್​ನಲ್ಲಿ ಚೀನಾದ ಸಂಸ್ಥೆಯ ಎಫ್​ಡಿಐ ಇದ್ದರಿಂದ ನಿಯಮಾನುಸಾರ ಪಿಪಿಎಸ್​ಎಲ್​ನ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಮರುತಿಂಗಳಲ್ಲಿ, ಅಂದರೆ 2022ರ ಡಿಸೆಂಬರ್ 14ರಂದು ಪಿಪಿಎಸ್​ಎಲ್ ನಿಯಮಾನುಸಾರ ಅರ್ಜಿ ಹಾಕಿತು. ಒನ್97 ಕಮ್ಯೂನಿಕೇಶನ್ಸ್​ನಲ್ಲಿ ಮಾತ್ರವೇ ಚೀನಾದ ಆ್ಯಂಟ್ ಗ್ರೂಪ್ ಹೂಡಿಕೆ ಇರುವುದನ್ನು ನಮೂದಿಸಿತ್ತು. ಇದು ವಿದೇಶೀ ನೇರ ಹೂಡಿಕೆಯ ಪ್ರೆಸ್ ನೋಟ್ ನಿಯಮ.

ಇದನ್ನೂ ಓದಿ: ನಿರ್ಬಂಧ ಇರೋದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ; ಆದ್ರೆ ವ್ಯಾಲಟ್​ಗೆ ಯಾಕೆ ತೊಂದರೆ? ತಿಳಿಯಬೇಕಾದ ಅಂಶಗಳು

ಚೀನಾದ ಹೂಡಿಕೆಗೆ ಯಾಕೆ ತಕರಾರು?

ಭಾರತದ ಸಂಸ್ಥೆಗಳಲ್ಲಿ ಚೀನಾದ ಸಂಸ್ಥೆಗಳು ಹೂಡಿಕೆ ಮಾಡಬಹುದು. ಸರ್ಕಾರ ಈ ಹೂಡಿಕೆಗಳಿಗೆ ಆಕ್ಷೇಪಿಸುತ್ತಿಲ್ಲ. ಆದರೆ, ಭಾರತೀಯ ಸಂಸ್ಥೆಯೊಂದು ಚೀನಾದಿಂದ ಹೂಡಿಕೆ ಪಡೆಯಬೇಕಾದರೆ ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮ ಇದೆ. ಚೀನಾ ಮಾತ್ರವಲ್ಲ, ಭಾರತದ ಜೊತೆ ಗಡಿ ಹಂಚಿಕೊಂಡಿರುವ ಯಾವುದೇ ದೇಶಗಳಿಗೂ ಇದು ಅನ್ವಯ ಆಗುತ್ತದೆ.

ಈ ಪ್ರೆಸ್ ನೋಟ್ ರೂಲ್ ನಂಬರ್ 3 ಪ್ರಕಾರ, ಭಾರತದ ಜೊತೆ ಗಡಿ ಹಂಚಿಕೊಂಡಿರುವ ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ, ಭೂತಾನ್, ನೇಪಾಳ, ಮಯನ್ಮಾರ್ ಮತ್ತು ಆಫ್ಘಾನಿಸ್ತಾನ ದೇಶಗಳಿಂದ ಭಾರತಕ್ಕೆ ಎಫ್​ಡಿಐ ಬರಲು ಸರ್ಕಾರದಿಂದ ಅನುಮತಿ ಪಡೆಯಬೇಕು. ಭದ್ರತೆಯ ದೃಷ್ಟಿಯಿಂದ ಈ ನಿಯಮ ಇದೆ. ಗಡಿಭಾಗದ ದೇಶಗಳು ಭಾರತದ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆ ತಡೆಯಲು ಈ ನಿಯಮ ರೂಪಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್